ETV Bharat / state

ನರೇಗಾ ಕಾಮಗಾರಿ ವೀಕ್ಷಿಸಿದ ರಾಜ್ಯ ಕಂದಾಯ ಸಚಿವ - undefined

ರಾಜ್ಯದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಮುಜರಾಯಿ ಇಲಾಖೆ ಸಚಿವ ಪಿ.ಟಿ.ಪರಮೇಶ್ವರ್​​ ನಾಯ್ಕ ಗದಗ ಜಿಲ್ಲಾದ್ಯಂತ ಬರ ವೀಕ್ಷಣೆ ನಡೆಸಿದರು.

ಆರ್.ವಿ.ದೇಶಪಾಂಡೆ
author img

By

Published : May 20, 2019, 7:27 AM IST

ಗದಗ: ಜಿಲ್ಲೆಯಲ್ಲಿ ಬರ ವೀಕ್ಷಣೆಗೆ ರಾಜ್ಯ ಸಚಿವರ ತಂಡ ಆಗಮಿಸಿತ್ತು. ಎರಡು ಗಂಟೆ ತಡವಾಗಿ ಆಗಮಿಸಿದ ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಮುಜರಾಯಿ ಇಲಾಖೆ ಸಚಿವ ಪಿ.ಟಿ.ಪರಮೇಶ್ವರ್​​ ನಾಯ್ಕ ಜಿಲ್ಲೆಯ ಬಿಂಕದಕಟ್ಟಿ ಗ್ರಾಮದ ಮೇವುಬ್ಯಾಂಕ್ ಹಾಗೂ ನರೇಗಾ ಕಾಮಗಾರಿ ವೀಕ್ಷಿಸಿದರು.

ತಡವಾಗಿ ಬಂದಿದ್ದಲ್ಲದೇ ಕೇವಲ ಕಾಟಾಚಾರಕ್ಕೆ ಬರ ವೀಕ್ಷಣೆ ಮಾಡಿದ ಸಚಿವರು ಅವಸರವಸರವಾಗಿ ಹೀಗೆ ಬಂದು ಹಾಗೇ ಹೋದಂತಿತ್ತು.

ಸಚಿವರಿಂದ ಬರ ವಿಕ್ಷಣೆ

ಇನ್ನು ಈ ವೇಳೆ ಮಾತನಾಡಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಚಿಂಚೋಳಿ, ಕುಂದಗೋಳ ಉಪ ಚುನಾವಣೆಯಲ್ಲಿ ಯಾರು ಗೆಲ್ಲಬೇಕು, ಸೋಲಬೇಕು ಎಂದು ಜನ ನಿರ್ಣಯ ಮಾಡ್ತಾರೆ. ನಾ ಹೇಳಿದ್ರೂ ಆಗಲ್ಲ, ಯಡಿಯೂರಪ್ಪ ಹೇಳಿದ್ರೂ ಬದಲಾಗಲ್ಲ. ರಾಜಕಾರಣದಲ್ಲಿ ಯಾರು ಏನು ಮಾತನಾಡಬೇಕು ಅಷ್ಟೇ ಮಾತನಾಡಬೇಕು. ಅವರವರ ಜವಾಬ್ದಾರಿಗೆ ತಕ್ಕಂತೆ ಮಾತನಾಡಿದ್ರೆ ಯಾವ ಸಮಸ್ಯೆ ಆಗಲ್ಲ ಎಂದು ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿಗೆ ಕಿವಿಮಾತು ಹೇಳಿದ್ರು.

ಗದಗ: ಜಿಲ್ಲೆಯಲ್ಲಿ ಬರ ವೀಕ್ಷಣೆಗೆ ರಾಜ್ಯ ಸಚಿವರ ತಂಡ ಆಗಮಿಸಿತ್ತು. ಎರಡು ಗಂಟೆ ತಡವಾಗಿ ಆಗಮಿಸಿದ ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಮುಜರಾಯಿ ಇಲಾಖೆ ಸಚಿವ ಪಿ.ಟಿ.ಪರಮೇಶ್ವರ್​​ ನಾಯ್ಕ ಜಿಲ್ಲೆಯ ಬಿಂಕದಕಟ್ಟಿ ಗ್ರಾಮದ ಮೇವುಬ್ಯಾಂಕ್ ಹಾಗೂ ನರೇಗಾ ಕಾಮಗಾರಿ ವೀಕ್ಷಿಸಿದರು.

ತಡವಾಗಿ ಬಂದಿದ್ದಲ್ಲದೇ ಕೇವಲ ಕಾಟಾಚಾರಕ್ಕೆ ಬರ ವೀಕ್ಷಣೆ ಮಾಡಿದ ಸಚಿವರು ಅವಸರವಸರವಾಗಿ ಹೀಗೆ ಬಂದು ಹಾಗೇ ಹೋದಂತಿತ್ತು.

ಸಚಿವರಿಂದ ಬರ ವಿಕ್ಷಣೆ

ಇನ್ನು ಈ ವೇಳೆ ಮಾತನಾಡಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಚಿಂಚೋಳಿ, ಕುಂದಗೋಳ ಉಪ ಚುನಾವಣೆಯಲ್ಲಿ ಯಾರು ಗೆಲ್ಲಬೇಕು, ಸೋಲಬೇಕು ಎಂದು ಜನ ನಿರ್ಣಯ ಮಾಡ್ತಾರೆ. ನಾ ಹೇಳಿದ್ರೂ ಆಗಲ್ಲ, ಯಡಿಯೂರಪ್ಪ ಹೇಳಿದ್ರೂ ಬದಲಾಗಲ್ಲ. ರಾಜಕಾರಣದಲ್ಲಿ ಯಾರು ಏನು ಮಾತನಾಡಬೇಕು ಅಷ್ಟೇ ಮಾತನಾಡಬೇಕು. ಅವರವರ ಜವಾಬ್ದಾರಿಗೆ ತಕ್ಕಂತೆ ಮಾತನಾಡಿದ್ರೆ ಯಾವ ಸಮಸ್ಯೆ ಆಗಲ್ಲ ಎಂದು ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿಗೆ ಕಿವಿಮಾತು ಹೇಳಿದ್ರು.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.