ETV Bharat / state

ಸಚಿವ ಸಂಪುಟ ವಿಸ್ತರಣೆ ವಿಚಾರ: ಸಚಿವ ಸಿ.ಸಿ. ಪಾಟೀಲ್ ಹೇಳಿದ್ದೇನು?

ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಯಾರನ್ನು ಕೈಬಿಡಬೇಕು ಎಂಬುದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಟ್ಟಿದ್ದು ಎಂದು ಸಚಿವ ಸಿ.ಸಿ. ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

author img

By

Published : Jan 26, 2020, 4:42 PM IST

c-c-patil-statement
ಸಚಿವ ಸಿ.ಸಿ. ಪಾಟೀಲ್

ಗದಗ: ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನ ಕೈಬಿಡಬೇಕು ಎಂಬುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಟ್ಟಿದ್ದು ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಮತ್ತು ಸಚಿವ ಸಂಪುಟ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇನ್ನು, ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ಜೀನ್ಸ್ ಬಗ್ಗೆ ಟ್ವೀಟ್ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರ ವರ್ತನೆಯನ್ನು ನೋಡಿದರೆ, ಯಾರ ಜೀನ್ಸ್ ಎಲ್ಲಿದೆ ಎಂಬುದು ಗೊತ್ತಾಗುತ್ತೆ. ಅವರ ಹೇಳಿಕೆ, ವೋಲೈಕೆ ರಾಜಕಾರಣ, ತುಷ್ಠೀಕರಣದ ರಾಜಕಾರಣ ನೋಡಿದರೆ ಕುಮಾರಸ್ವಾಮಿ ಜೀನ್ಸ್ ಎಲ್ಲಿದೆ ಎಂಬುದು ಗೊತ್ತಾಗುತ್ತದೆ ಎಂದರು. ಅವರಂತೆ ಕೆಳಮಟ್ಟಕ್ಕಿಳಿದು ಟೀಕೆ ಮಾಡೋದಿಲ್ಲ ಎಂದು ಸಚಿವ ಪಾಟೀಲ್​ ಟಾಂಗ್​ ಕೊಟ್ಟರು.

ಸಚಿವ ಸಿ.ಸಿ. ಪಾಟೀಲ್

ಇನ್ನು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಸಿಬ್ಬಂದಿಗೆ ಡ್ರೆಸ್ ಕೋಡ್ ಬರಲಿದೆ. ಪೊಲೀಸ್, ಫಾರೆಸ್ಟ್‌ ಇಲಾಖೆ ಮಾದರಿಯಲ್ಲಿ ಇಲಾಖೆಯ ಸಿಬ್ಬಂದಿಗೂ ಯುನಿಫಾರ್ಮ್ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು. ದಾಳಿಗೆ ಹೋದ ಸಂದರ್ಭದಲ್ಲಿ ಅವರದ್ದೇ ಆದ ಡ್ರೆಸ್​​ಕೋಡ್ ಇದ್ದರೆ ಹೆದರುತ್ತಾರೆ. ಇಲ್ಲವೆಂದ್ರೆ ಅದೆಷ್ಟೋ ಸಮಸ್ಯೆಗಳಾಗಿವೆ. ಈ ನಿಟ್ಟಿನಲ್ಲಿ ಸಿಎಂ ಗಮನಕ್ಕೆ ತಂದು ಯೋಜನೆ ಜಾರಿಗೊಳಿಸುತ್ತೇವೆ. ಮರಳು ನೀತಿ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ, ಅಕ್ರಮ‌ ಮರಳು ಗಣಿಗಾರಿಕೆಗೆ ಆದಷ್ಟು ಬೇಗ ಇತಿಶ್ರೀ ಹಾಡುತ್ತೇವೆ ಎಂದು ಸಚಿವ ಸಿ ಸಿ ಪಾಟೀಲ್​ ತಿಳಿಸಿದರು.

ಗದಗ: ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನ ಕೈಬಿಡಬೇಕು ಎಂಬುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಟ್ಟಿದ್ದು ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಮತ್ತು ಸಚಿವ ಸಂಪುಟ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇನ್ನು, ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ಜೀನ್ಸ್ ಬಗ್ಗೆ ಟ್ವೀಟ್ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರ ವರ್ತನೆಯನ್ನು ನೋಡಿದರೆ, ಯಾರ ಜೀನ್ಸ್ ಎಲ್ಲಿದೆ ಎಂಬುದು ಗೊತ್ತಾಗುತ್ತೆ. ಅವರ ಹೇಳಿಕೆ, ವೋಲೈಕೆ ರಾಜಕಾರಣ, ತುಷ್ಠೀಕರಣದ ರಾಜಕಾರಣ ನೋಡಿದರೆ ಕುಮಾರಸ್ವಾಮಿ ಜೀನ್ಸ್ ಎಲ್ಲಿದೆ ಎಂಬುದು ಗೊತ್ತಾಗುತ್ತದೆ ಎಂದರು. ಅವರಂತೆ ಕೆಳಮಟ್ಟಕ್ಕಿಳಿದು ಟೀಕೆ ಮಾಡೋದಿಲ್ಲ ಎಂದು ಸಚಿವ ಪಾಟೀಲ್​ ಟಾಂಗ್​ ಕೊಟ್ಟರು.

ಸಚಿವ ಸಿ.ಸಿ. ಪಾಟೀಲ್

ಇನ್ನು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಸಿಬ್ಬಂದಿಗೆ ಡ್ರೆಸ್ ಕೋಡ್ ಬರಲಿದೆ. ಪೊಲೀಸ್, ಫಾರೆಸ್ಟ್‌ ಇಲಾಖೆ ಮಾದರಿಯಲ್ಲಿ ಇಲಾಖೆಯ ಸಿಬ್ಬಂದಿಗೂ ಯುನಿಫಾರ್ಮ್ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು. ದಾಳಿಗೆ ಹೋದ ಸಂದರ್ಭದಲ್ಲಿ ಅವರದ್ದೇ ಆದ ಡ್ರೆಸ್​​ಕೋಡ್ ಇದ್ದರೆ ಹೆದರುತ್ತಾರೆ. ಇಲ್ಲವೆಂದ್ರೆ ಅದೆಷ್ಟೋ ಸಮಸ್ಯೆಗಳಾಗಿವೆ. ಈ ನಿಟ್ಟಿನಲ್ಲಿ ಸಿಎಂ ಗಮನಕ್ಕೆ ತಂದು ಯೋಜನೆ ಜಾರಿಗೊಳಿಸುತ್ತೇವೆ. ಮರಳು ನೀತಿ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ, ಅಕ್ರಮ‌ ಮರಳು ಗಣಿಗಾರಿಕೆಗೆ ಆದಷ್ಟು ಬೇಗ ಇತಿಶ್ರೀ ಹಾಡುತ್ತೇವೆ ಎಂದು ಸಚಿವ ಸಿ ಸಿ ಪಾಟೀಲ್​ ತಿಳಿಸಿದರು.

Intro:ಕುಮಾರಸ್ವಾಮಿ ಅವರ ವರ್ತನೆಯನ್ನು ನೋಡಿದರೆ, ಯಾರ ಜೀನ್ಸ್ ಎಲ್ಲಿದೆ ಎಂಬುದು ಗೊತ್ತಾಗುತ್ತೆ : ಸಚಿವ ಸಿ.ಸಿ. ಪಾಟೀಲ್

ಆಂಕರ್: ಸಚಿವ ಸಂಪುಟ ಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಯಾರನ್ನ ಕೈ ಬೀಡಬೇಕು ಎಂಬುದು ಸಿ.ಎಂ ಗೆ ಬಿಟ್ಟಿದ್ದು, ಸಿ.ಎಂ ಯಡಿಯೂರಪ್ಪ ನವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೇಲ್ಲಾ ಬದ್ಧ ಎಂದು ಸಚಿವ ಸಿ.ಸಿ‌. ಪಾಟೀಲ್ ಹೇಳಿದರು. ಗದಗನಲ್ಲಿ‌ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಸಂಪುಟದ ನಿರ್ಧಾರಕ್ಕೆ ಬಿಜೆಪಿ‌‌ ಎಲ್ಲಾ ನಾಯಕರೂ ಬದ್ಧರಾಗಿರುತ್ತಾರೆ ಎಂದರು. ನಂತರ ಮಾಜಿ ಸಿ.ಎಂ ಕುಮಾರಸ್ವಾಮಿ ಬಿಜೆಪಿ ಜೀನ್ಸ್ ಬಗ್ಗೆ ಟ್ವಿಟ್ಟ್ ಮಾಡಿರೋ ವಿಚಾರಕ್ಕೆ ತಿರಗೇಟು ನೀಡಿದ ಅವರು ಕುಮಾರಸ್ವಾಮಿ ಅವರ ವರ್ತನೆಯನ್ನು ನೋಡಿದರೆ, ಯಾರ ಜೀನ್ಸ್ ಎಲ್ಲಿದೆ ಎಂಬುದು ಗೊತ್ತಾಗುತ್ತೆ. ಕುಮಾರಸ್ವಾಮಿ ಹೇಳಿಕೆ, ಅವರ ಓಲೈಕೆ ರಾಜಕಾರಣ, ತುಷ್ಠಿಕರಣ ರಾಜಕಾರಣ ನೋಡಿದರೆ ಬಿಜೆಪಿ ಜೀನ್ಸ್, ಕುಮಾರಸ್ವಾಮಿ ಜೀನ್ಸ್ ಎಲ್ಲಿದೆ ಎಂಬುದು ಗೊತ್ತಾಗುತ್ತದೆ. ಅವರಂತೆ ಕೆಳಮಟ್ಟಕ್ಕಿಳಿದು ಟೀಕೆ ಮಾಡೋದಿಲ್ಲಾ ಎಂದರು. ಇನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಸಿಬ್ಬಂದಿಗಳಿಗೆ ಡ್ರೆಸ್ ಕೋಡ್ ಬರಲಿದೆ. ಪೊಲೀಸ್, ಫಾರೆಸ್ಟ್‌ ಮಾದರಿಯ ಗಣಿ‌ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿಗೂ ಯುನಿಫಾರ್ಮ್ ಬಗ್ಗೆ ಚರ್ಚೆ ನಡೆಸಿದ್ದೆವೆ. ರೇಡ್ ಗೆ ಹೋದ ಸಂದರ್ಭದಲ್ಲಿ ಅವರದ್ದೇ ಆದ ಡ್ರೆಸ್ ಕೋಡ್ ಇದ್ದರೆ ಹೆದರುತ್ತಾರೆ. ಇಲ್ಲಾ ಅಂದ್ರೆ ಅದೆಷ್ಟೋ ಸಮಸ್ಯೆಗಳಾಗಿವೆ. ಈ ನಿಟ್ಟಿನಲ್ಲಿ ಸಿಎಂ ಗಮನಕ್ಕೆ ತಂದು ಯೋಜನೆ ಜಾರಿಗೊಳಿಸುತ್ತೆವೆ ಎಂದರು. ಇನ್ನು ಮರಳು ನೀತಿ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೆವೆ. ಅಕ್ರಮ‌ ಮರಳು ಗಣಿಗಾರಿಕೆಗೆ ಆದಷ್ಟು ಬೇಗ ಇತಿಶ್ರೀ ಹಾಡುತ್ತೆವೆ ಎಂದು ಬರವಸೆ ನೀಡಿದರು.

ಬೈಟ್,೦೧: ಸಿ.ಸಿ ಪಾಟೀಲ್-ಗಣಿ‌ ಮತ್ತು ಭೂವಿಜ್ಞಾನ ಇಲಾಖೆBody:GConclusion:G
ETV Bharat Logo

Copyright © 2024 Ushodaya Enterprises Pvt. Ltd., All Rights Reserved.