ETV Bharat / state

ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ವ್ಯಕ್ತಿ ಇಂದು ಸಾವು

author img

By

Published : Dec 15, 2020, 3:26 PM IST

ಡಿಸೆಂಬರ್ 11ರಂದು ಅಪರಿಚಿತರಿಂದ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಇಂದು ಹುಬ್ಬಳ್ಳಿಯ ಕಿಮ್ಸ್​​ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಈ ಕುರಿತು ಹುಬ್ಬಳ್ಳಿ ಶರಹ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The death of the man who was assaulted
ಮೃತ ವ್ಯಕ್ತಿ ಇಲಿಯಾಸ್

ಹುಬ್ಬಳ್ಳಿ: ಅಪರಿಚಿತ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಇಲಿಯಾಸ್​ (44) ಎಂಬಾತ ವ್ಯಕ್ತಿಯಿಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ...ಕರ್ತವ್ಯ ನಿರತ‌ ಗ್ರಾಪಂ ಸಹಾಯಕ‌ ಚುನಾವಣಾ ಅಧಿಕಾರಿ ನಿಧನ

ಹಲವು ವರ್ಷಗಳಿಂದ ನಗರದ ಸಿಬಿಟಿ ಬಳಿ ಎಗ್​​ರೈಸ್ ಅಂಗಡಿ ಇಟ್ಟುಕೊಂಡು ಇಲಿಯಾಸ್ ಜೀವನ ಸಾಗಿಸುತ್ತಿದ್ದ. ಆದರೆ, ಕಾರ್ಪೊರೇಷನ್​​​​ನಿಂದ ಚೀಟಿ ತೆಗೆಯುವವರಿಂದ ಹಲ್ಲೆ ನಡೆದಿದೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

ಮೃತನ ಸಂಬಂಧಿಕರಿಂದ ಆರೋಪ

ಇಲಿಯಾಸ್ ಅವರ ಮೇಲೆ ಡಿ.11ರಂದು ಇಬ್ಬರು ಅಪರಿಚಿತರು ಹಲ್ಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡ ಪರಿಣಾಮ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.‌ ಈ ಕುರಿತು ಹುಬ್ಬಳ್ಳಿ ಶರಹ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ: ಅಪರಿಚಿತ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಇಲಿಯಾಸ್​ (44) ಎಂಬಾತ ವ್ಯಕ್ತಿಯಿಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ...ಕರ್ತವ್ಯ ನಿರತ‌ ಗ್ರಾಪಂ ಸಹಾಯಕ‌ ಚುನಾವಣಾ ಅಧಿಕಾರಿ ನಿಧನ

ಹಲವು ವರ್ಷಗಳಿಂದ ನಗರದ ಸಿಬಿಟಿ ಬಳಿ ಎಗ್​​ರೈಸ್ ಅಂಗಡಿ ಇಟ್ಟುಕೊಂಡು ಇಲಿಯಾಸ್ ಜೀವನ ಸಾಗಿಸುತ್ತಿದ್ದ. ಆದರೆ, ಕಾರ್ಪೊರೇಷನ್​​​​ನಿಂದ ಚೀಟಿ ತೆಗೆಯುವವರಿಂದ ಹಲ್ಲೆ ನಡೆದಿದೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

ಮೃತನ ಸಂಬಂಧಿಕರಿಂದ ಆರೋಪ

ಇಲಿಯಾಸ್ ಅವರ ಮೇಲೆ ಡಿ.11ರಂದು ಇಬ್ಬರು ಅಪರಿಚಿತರು ಹಲ್ಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡ ಪರಿಣಾಮ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.‌ ಈ ಕುರಿತು ಹುಬ್ಬಳ್ಳಿ ಶರಹ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.