ETV Bharat / state

ಮಧ್ಯಂತರ ಚುನಾವಣೆ ಕುರಿತು ದೇವೇಗೌಡರ ಹೇಳಿಕೆ: ಸಿದ್ದರಾಮಯ್ಯ ಪ್ರತಿಕ್ರಿಯೆ ಏನ್​ ಗೊತ್ತಾ?

ಮಧ್ಯಂತರ ಚುನಾವಣೆ ಖಚಿತ ಎಂದು ದೇವೇಗೌಡರು ಹೇಳಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ಏನೇ ಹೇಳಿದ್ರು, ಸಮ್ಮಿಶ್ರ ಸರ್ಕಾರ ಸ್ಥಿರವಾಗಿರುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ.

author img

By

Published : Jun 21, 2019, 6:46 PM IST

ಯಾರೆ ಏನೇ ಹೇಳಿದ್ರು, ಸಮ್ಮಿಶ್ರ ಸರ್ಕಾರ ಸ್ಥಿರವಾಗಿದೆ

ಹುಬ್ಬಳ್ಳಿ: ಯಾರು ಏನೇ ಹೇಳಿದ್ರು ಸಹ ಸಮ್ಮಿಶ್ರ ಸರ್ಕಾರಕ್ಕೆ ಏನೂ ತೊಂದರೆ ಇಲ್ಲ. ಸರ್ಕಾರ ಸ್ಥಿರವಾಗಿದ್ದು, ಇನ್ನೂ ನಾಲ್ಕು ವರ್ಷ ಮುಂದುವರೆಯಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ವರ್ಷವೆಲ್ಲಾ ಪಕ್ಷ ಸಂಘಟನೆ ಮಾಡ್ತಾನೆ ಇರ್ತೀವಿ. ಕುಂದಗೋಳಕ್ಕೆ ಹೋಗಲು ಹುಬ್ಬಳ್ಳಿಗೆ ಬಂದಿದ್ದೇನೆ ಎಂದರು. ಇನ್ನು ಮಧ್ಯಂತರ ಚುನಾವಣೆ ಕುರಿತು ಜೆಡಿಎಸ್​ ವರಿಷ್ಠ ದೇವೇಗೌಡರು ನೀಡಿರುವ ಹೇಳಿಕೆ ಇದೇ ವೇಳೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಲೋಕಸಭಾ ಚುನಾವಣೆ ವೇಳೆ ಮೈಸೂರು ಕ್ಷೇತ್ರ ನಮಗೆ ಬೇಕು ಅಂದಿದ್ದು ನಿಜ, ಆದರೆ ಒತ್ತಾಯದಿಂದ ಪಡೆದಿರಲಿಲ್ಲ. ತುಮಕೂರು ಕ್ಷೇತ್ರವನ್ನೂ ಕೇಳಿದ್ದು ಜೆಡಿಎಸ್​ನವರೇ ಎಂದು ಹೇಳಿದ್ರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ದೂರು ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಊಹಾಪೋಹಗಳಿಗೆ ಉತ್ತರ‌ ಕೊಡಲ್ಲ. ನಾನು ಹಾಗೂ ರಾಹುಲ್ ಗಾಂಧಿ ಮಾತ್ರ ಮೀಟಿಂಗ್​ ಮಾಡಿದ್ದು, ಅವರು ಯಾರಿಗೂ ಏನು ಹೇಳಿಲ್ಲ, ನಾನು ಏನು ಹೇಳಿಲ್ಲ ಅಂತಾ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ರು.

ಯಾರು ಏನೇ ಹೇಳಿದ್ರು, ಸಮ್ಮಿಶ್ರ ಸರ್ಕಾರ ಸ್ಥಿರ: ಸಿದ್ದರಾಮಯ್ಯ

ದೇವೇಗೌಡರು ಈ ರೀತಿ ಹೇಳಿರಬಹುದು, ರಾಹುಲ್ ಗಾಂಧಿ ಹಾಗೇ‌ ಹೇಳಿರಬಹುದು ಎಂಬ ಊಹೆ ಬೇಡ. ನಾನು ಎಲ್ಲಾದ್ರು ಹೀಗೆ ಹೇಳಿದ್ದೀನಾ ಎಂದು ಮಾಧ್ಯಮದವರಿಗೆ ಸಿದ್ದರಾಮಯ್ಯ ಪ್ರಶ್ನಿಸಿದರು. ಕುಮಾರಸ್ವಾಮಿ ಅವರು ಹಿಂದೆಯೂ ಗ್ರಾಮ ‌ವಾಸ್ತವ್ಯ ಮಾಡಿದ್ರು, ಈಗಲೂ ಮಾಡ್ತಾ ಇದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಇದರಿಂದ ‌ಲಾಭ ಆಗಲಿದೆ ಮಾಜಿ ಸಿಎಂ ಅಭಿಪ್ರಾಯಪಟ್ಟರು.

ಹುಬ್ಬಳ್ಳಿ: ಯಾರು ಏನೇ ಹೇಳಿದ್ರು ಸಹ ಸಮ್ಮಿಶ್ರ ಸರ್ಕಾರಕ್ಕೆ ಏನೂ ತೊಂದರೆ ಇಲ್ಲ. ಸರ್ಕಾರ ಸ್ಥಿರವಾಗಿದ್ದು, ಇನ್ನೂ ನಾಲ್ಕು ವರ್ಷ ಮುಂದುವರೆಯಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ವರ್ಷವೆಲ್ಲಾ ಪಕ್ಷ ಸಂಘಟನೆ ಮಾಡ್ತಾನೆ ಇರ್ತೀವಿ. ಕುಂದಗೋಳಕ್ಕೆ ಹೋಗಲು ಹುಬ್ಬಳ್ಳಿಗೆ ಬಂದಿದ್ದೇನೆ ಎಂದರು. ಇನ್ನು ಮಧ್ಯಂತರ ಚುನಾವಣೆ ಕುರಿತು ಜೆಡಿಎಸ್​ ವರಿಷ್ಠ ದೇವೇಗೌಡರು ನೀಡಿರುವ ಹೇಳಿಕೆ ಇದೇ ವೇಳೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಲೋಕಸಭಾ ಚುನಾವಣೆ ವೇಳೆ ಮೈಸೂರು ಕ್ಷೇತ್ರ ನಮಗೆ ಬೇಕು ಅಂದಿದ್ದು ನಿಜ, ಆದರೆ ಒತ್ತಾಯದಿಂದ ಪಡೆದಿರಲಿಲ್ಲ. ತುಮಕೂರು ಕ್ಷೇತ್ರವನ್ನೂ ಕೇಳಿದ್ದು ಜೆಡಿಎಸ್​ನವರೇ ಎಂದು ಹೇಳಿದ್ರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ದೂರು ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಊಹಾಪೋಹಗಳಿಗೆ ಉತ್ತರ‌ ಕೊಡಲ್ಲ. ನಾನು ಹಾಗೂ ರಾಹುಲ್ ಗಾಂಧಿ ಮಾತ್ರ ಮೀಟಿಂಗ್​ ಮಾಡಿದ್ದು, ಅವರು ಯಾರಿಗೂ ಏನು ಹೇಳಿಲ್ಲ, ನಾನು ಏನು ಹೇಳಿಲ್ಲ ಅಂತಾ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ರು.

ಯಾರು ಏನೇ ಹೇಳಿದ್ರು, ಸಮ್ಮಿಶ್ರ ಸರ್ಕಾರ ಸ್ಥಿರ: ಸಿದ್ದರಾಮಯ್ಯ

ದೇವೇಗೌಡರು ಈ ರೀತಿ ಹೇಳಿರಬಹುದು, ರಾಹುಲ್ ಗಾಂಧಿ ಹಾಗೇ‌ ಹೇಳಿರಬಹುದು ಎಂಬ ಊಹೆ ಬೇಡ. ನಾನು ಎಲ್ಲಾದ್ರು ಹೀಗೆ ಹೇಳಿದ್ದೀನಾ ಎಂದು ಮಾಧ್ಯಮದವರಿಗೆ ಸಿದ್ದರಾಮಯ್ಯ ಪ್ರಶ್ನಿಸಿದರು. ಕುಮಾರಸ್ವಾಮಿ ಅವರು ಹಿಂದೆಯೂ ಗ್ರಾಮ ‌ವಾಸ್ತವ್ಯ ಮಾಡಿದ್ರು, ಈಗಲೂ ಮಾಡ್ತಾ ಇದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಇದರಿಂದ ‌ಲಾಭ ಆಗಲಿದೆ ಮಾಜಿ ಸಿಎಂ ಅಭಿಪ್ರಾಯಪಟ್ಟರು.

Intro:ಹುಬ್ಬಳ್ಳಿ-07

ಯಾರೆ ಏನೆ ಹೇಳಿದ್ರು, ರಾಜ್ಯ ಸಮ್ಮಿಶ್ರ ಸರ್ಕಾರ ಸ್ಥಿರವಾಗಿದೆ ಹಾಗೂ ಮುಂದುವರೆಯಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,
ಪಕ್ಷ ಸಂಘಟನೆ ಮಾಡ್ತಾನೆ ಇರ್ತೆವೆ. ಕುಂದಗೋಳ ಹೋಗೊಕೆ ಹುಬ್ಬಳ್ಳಿಗೆ ಬಂದಿದ್ದೇನೆ. ಮದ್ಯಂತರ ಚುನಾವಣೆ ಹೇಳಿಕೆಗೆ
ದೇವೇಗೌಡರು ಈಗಾಗಲೇ ಕ್ಲೆರಿಪೈ ಮಾಡಿದ್ದಾರೆ.
ಮೈಸೂರ ನಮಗೆ ಬೇಕು ಅಂದಿದ್ದು ನಿಜ, ಆದರೆ ಒತ್ತಾಯ ಪೂರ್ವಕ ಕೊಟ್ಟಿಲ್ಲ.
ತುಮಕೂರು ಅವರು ಕೇಳಿದ್ರು ಎಂದು ಸ್ಪಷ್ಟಪಡಿಸಿದರು.
ರಾಹುಲ್ ಗಾಂಧಿಗೆ ದೂರು ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಊಹಾಪೋಹಗಳಿಗೆ ಉತ್ತರ‌ಕೊಡಲ್ಲ, ನಾನು ಅದಕ್ಕೆ ಏನು ಉತ್ತರ ಕೊಡಲಿ ಹೇಳಿ.
ಊಹೆ ಜರ್ನಾಲಿಸಂ ಇಟ್ ಇಸ್ ನಾಟ್ ‌ಗುಡ್. ನಾನು ಹಾಗೂ ರಾಹುಲ್ ಗಾಂಧಿ ಮಾತ್ರ ಮಿಟಿಂಗ್ ಮಾಡಿದ್ದು, ಅವರು ಯಾರಿಗೂ ಏನು ಹೇಳಿಲ್ಲ, ನಾನು ಏನು ಹೇಳಿಲ್ಲ.
ದೇವೇಗೌಡರು ಈ ರೀತಿ ಹೇಳಿರಬಹುದು, ರಾಹುಲ್ ಗಾಂಧಿ ಹಾಗೇ‌ ಹೇಳಿರಬಹುದು ಎಂಬ ಉಹೇ ಬೇಡ.
ನಾನು ಎಲ್ಲಾದ್ರು ಹೀಗೆ ಹೇಳಿದ್ದೆನಾ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರು ಗ್ರಾಮ ‌ವಾಸ್ತವ್ಯ ಮಾಡಿದ್ರು, ಈಗಲೂ ಮಾಡ್ತಾ ಇದ್ದಾರೆ.ಸಮ್ಮಿಶ್ತ ಸರ್ಕಾಕ್ಕೆ ಇದರ ‌ಲಾಭ ಆಗಲಿದೆ ಎಂದರು.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.