ETV Bharat / state

ಮಾನವೀಯತೆ ಮರೆತ ದುರುಳರು : ಬೀದಿ ನಾಯಿಗಳಿಗೆ ವಿಷ ಆಹಾರ ನೀಡಿ ಕೊಂದ ದುಷ್ಟರು - ವಿಷ ಆಹಾರ

ಸುಮಾರು 10ಕ್ಕೂ ಹೆಚ್ಚು ನಾಯಿಗಳು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ನಾಯಿಗಳು ನಾಪತ್ತೆಯಾಗಿವೆ. ಅಲ್ಲದೆ ವಿಷ ಆಹಾರ ತಿಂದಿರುವ ಕೆಲ ನಾಯಿಗಳು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ರಸ್ತೆಯಲ್ಲೇ ಅವುಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ..

street-dogs-died-from-food-poisoning-by-unknown-people
ಮಾನವೀಯತೆ ಮರೆತ ದುರುಳರು
author img

By

Published : Jul 7, 2021, 3:01 PM IST

ಧಾರವಾಡ : ಧಾರವಾಡದಲ್ಲಿ ಬೀದಿ ನಾಯಿಗಳಿಗೆ ವಿಷ ಉಣಿಸಿ ಕೊಂದಿರುವ ದಾರುಣ ಘಟನೆ ಇಲ್ಲಿನ ನಾರಾಯಣಪುರ ಬಡಾವಣೆಯಲ್ಲಿ ನಡೆದಿದೆ. ಬೀದಿ ನಾಯಿಗಳ ಹಾವಳಿ ತಡೆಯಲಾಗದೆ ದುಷ್ಕರ್ಮಿಗಳು ವಿಷ ಹಾಕಿ ಕೊಂದಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಸುಮಾರು 10ಕ್ಕೂ ಹೆಚ್ಚು ನಾಯಿಗಳು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ನಾಯಿಗಳು ನಾಪತ್ತೆಯಾಗಿವೆ. ಅಲ್ಲದೆ ವಿಷ ಆಹಾರ ತಿಂದಿರುವ ಕೆಲ ನಾಯಿಗಳು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ರಸ್ತೆಯಲ್ಲೇ ಅವುಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ದುಷ್ಕರ್ಮಿಗಳು ಬೆಳಗ್ಗೆ ಚಿಕನ್​​​​​ನಲ್ಲಿ ವಿಷ ಹಾಕಿರುವ ಸಾಧ್ಯತೆ ಇದ್ದು, ಮಾಂಸ ತಿಂದಿರುವ ನಾಯಿಗಳು ಮೃತಪಟ್ಟವೆ. ಜೊತೆಗೆ ಕೆಲ ನಾಯಿಗಳು ಅಸ್ವಸ್ಥಗೊಂಡಿವೆ.

ಧಾರವಾಡ : ಧಾರವಾಡದಲ್ಲಿ ಬೀದಿ ನಾಯಿಗಳಿಗೆ ವಿಷ ಉಣಿಸಿ ಕೊಂದಿರುವ ದಾರುಣ ಘಟನೆ ಇಲ್ಲಿನ ನಾರಾಯಣಪುರ ಬಡಾವಣೆಯಲ್ಲಿ ನಡೆದಿದೆ. ಬೀದಿ ನಾಯಿಗಳ ಹಾವಳಿ ತಡೆಯಲಾಗದೆ ದುಷ್ಕರ್ಮಿಗಳು ವಿಷ ಹಾಕಿ ಕೊಂದಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಸುಮಾರು 10ಕ್ಕೂ ಹೆಚ್ಚು ನಾಯಿಗಳು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ನಾಯಿಗಳು ನಾಪತ್ತೆಯಾಗಿವೆ. ಅಲ್ಲದೆ ವಿಷ ಆಹಾರ ತಿಂದಿರುವ ಕೆಲ ನಾಯಿಗಳು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ರಸ್ತೆಯಲ್ಲೇ ಅವುಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ದುಷ್ಕರ್ಮಿಗಳು ಬೆಳಗ್ಗೆ ಚಿಕನ್​​​​​ನಲ್ಲಿ ವಿಷ ಹಾಕಿರುವ ಸಾಧ್ಯತೆ ಇದ್ದು, ಮಾಂಸ ತಿಂದಿರುವ ನಾಯಿಗಳು ಮೃತಪಟ್ಟವೆ. ಜೊತೆಗೆ ಕೆಲ ನಾಯಿಗಳು ಅಸ್ವಸ್ಥಗೊಂಡಿವೆ.

ಓದಿ: ಗಬ್ಬೂರ ಬೈಪಾಸ್ ಬಳಿ ಅಪಘಾತ: ಏಳು ಜನರಿಗೆ ಗಂಭೀರ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.