ETV Bharat / state

ಕುಮಾರಸ್ವಾಮಿಗೆ ಬುದ್ಧಿ ಭ್ರಮಣೆ ಆಗಿದೆ: ಎಂ.ಪಿ ರೇಣುಕಾಚಾರ್ಯ ವ್ಯಂಗ್ಯ

author img

By

Published : Jan 6, 2020, 3:22 PM IST

ಈ ಹಿಂದೆ ಯಡಿಯೂರಪ್ಪನವರಿಂದಲೇ ಕುಮಾರಸ್ವಾಮಿ 20 ತಿಂಗಳ ಕಾಲ ಸಿಎಂ ಆಗಿ ಅಧಿಕಾರ ಅನುಭವಿಸಿದ್ದರು. ಈಗ ನೀರಿನಲ್ಲಿರುವ ಮೀನನ್ನು ಹೊರಗೆ ಬಿಟ್ಟಂತೆ ಎಚ್​ಡಿಕೆ ಪರಿಸ್ಥಿತಿಯಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.

Renukacharya
ಎಂ.ಪಿ ರೇಣುಕಾಚಾರ್ಯ

ಧಾರವಾಡ: ಈ ಹಿಂದೆ ಯಡಿಯೂರಪ್ಪನವರಿಂದಲೇ ಕುಮಾರಸ್ವಾಮಿ 20 ತಿಂಗಳ ಕಾಲ ಸಿಎಂ ಆಗಿ ಅಧಿಕಾರ ಅನುಭವಿಸಿದ್ದರು. ಈಗ ನೀರಿನಲ್ಲಿರುವ ಮೀನನ್ನು ಹೊರಗೆ ಬಿಟ್ಟಂತೆ ಎಚ್​ಡಿಕೆ ಪರಿಸ್ಥಿತಿಯಾಗಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಟೀಕಿಸಿದ್ದಾರೆ

ಅಮರಗೋಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ

ಧಾರವಾಡ ಜಿಲ್ಲೆಯ ಅಮರಗೋಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಿಟ್ಟು ಬರಲು ಶಾಸಕರು ತಯಾರಿದ್ದಾರೆಂಬ ಎಚ್.ಡಿ‌‌.ಕೆ ಹೇಳಿಕೆಗೆ ಪ್ರತಿಕ್ರಿಯಿಸಿದರು. ಎಚ್​ಡಿಕೆ ಗೆ ಎಲ್ಲೋ ಬುದ್ಧಿ ಭ್ರಮಣೆ ಆಗಿದೆ ಅನಿಸುತ್ತದೆ.‌ ಹಾಗಾಗಿ ಕೀಳು ಮಟ್ಟದ ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿಯ ಶಾಸಕರೆಲ್ಲಾ ಶಿಸ್ತಿನ ಸಿಪಾಯಿಗಳು. ನಾವೆಲ್ಲಾ ಸಿಂಹದ ಮರಿಗಳಿದ್ದಂತೆ, ಜೆಡಿಎಸ್ ಮುಳುಗಿ ಹೋಗ್ತಾ ಇದೆ ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನೇನು ಮಾತನಾಡುವುದಿಲ್ಲ, ಆದರೆ, ಬಿಜೆಪಿಗೆ ಯಾರೆಲ್ಲ ಬಂದಿದ್ದಾರೆಯೋ ಪಕ್ಷ ಅವರನ್ನು ಗೌರವಿಸುತ್ತದೆ ಎಂದರು.

ಡಿಸಿಎಂ ಹುದ್ದೆ ವಿಚಾರಕ್ಕೆ ಮಾತನಾಡಿದ ಅವರು, ರೇಣುಕಾಚಾರ್ಯ ಅಂದ್ರೆ ರೇಣುಕಾಚಾರ್ಯ ಆಗಿಯೇ ಇರುವೆ. ಆನೆ ನಡೆದಿದ್ದೇ ದಾರಿ. ನಮ್ಮ ಕ್ಷೇತ್ರದ ಜನ ಹೀಗೆ ಇರು ಅಂದಿದ್ದಾರೆ, ನಾನು ಹಾಗೆಯೇ ಇರುವೆ. ನಾನು ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುವೆ. ಮಾತನಾಡುವುದರಿಂದ ಪಕ್ಷದ ಮುಖಂಡರಿಗೆ ಮುಜುಗರ ಆಗಬಾರದು. ಹಾಗಂತ ನಾನು ವೀಕ್ ಆಗಿದ್ದೇನೆ ಅಂತಲ್ಲ ಎಂದರು.

ಧಾರವಾಡ: ಈ ಹಿಂದೆ ಯಡಿಯೂರಪ್ಪನವರಿಂದಲೇ ಕುಮಾರಸ್ವಾಮಿ 20 ತಿಂಗಳ ಕಾಲ ಸಿಎಂ ಆಗಿ ಅಧಿಕಾರ ಅನುಭವಿಸಿದ್ದರು. ಈಗ ನೀರಿನಲ್ಲಿರುವ ಮೀನನ್ನು ಹೊರಗೆ ಬಿಟ್ಟಂತೆ ಎಚ್​ಡಿಕೆ ಪರಿಸ್ಥಿತಿಯಾಗಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಟೀಕಿಸಿದ್ದಾರೆ

ಅಮರಗೋಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ

ಧಾರವಾಡ ಜಿಲ್ಲೆಯ ಅಮರಗೋಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಿಟ್ಟು ಬರಲು ಶಾಸಕರು ತಯಾರಿದ್ದಾರೆಂಬ ಎಚ್.ಡಿ‌‌.ಕೆ ಹೇಳಿಕೆಗೆ ಪ್ರತಿಕ್ರಿಯಿಸಿದರು. ಎಚ್​ಡಿಕೆ ಗೆ ಎಲ್ಲೋ ಬುದ್ಧಿ ಭ್ರಮಣೆ ಆಗಿದೆ ಅನಿಸುತ್ತದೆ.‌ ಹಾಗಾಗಿ ಕೀಳು ಮಟ್ಟದ ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿಯ ಶಾಸಕರೆಲ್ಲಾ ಶಿಸ್ತಿನ ಸಿಪಾಯಿಗಳು. ನಾವೆಲ್ಲಾ ಸಿಂಹದ ಮರಿಗಳಿದ್ದಂತೆ, ಜೆಡಿಎಸ್ ಮುಳುಗಿ ಹೋಗ್ತಾ ಇದೆ ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನೇನು ಮಾತನಾಡುವುದಿಲ್ಲ, ಆದರೆ, ಬಿಜೆಪಿಗೆ ಯಾರೆಲ್ಲ ಬಂದಿದ್ದಾರೆಯೋ ಪಕ್ಷ ಅವರನ್ನು ಗೌರವಿಸುತ್ತದೆ ಎಂದರು.

ಡಿಸಿಎಂ ಹುದ್ದೆ ವಿಚಾರಕ್ಕೆ ಮಾತನಾಡಿದ ಅವರು, ರೇಣುಕಾಚಾರ್ಯ ಅಂದ್ರೆ ರೇಣುಕಾಚಾರ್ಯ ಆಗಿಯೇ ಇರುವೆ. ಆನೆ ನಡೆದಿದ್ದೇ ದಾರಿ. ನಮ್ಮ ಕ್ಷೇತ್ರದ ಜನ ಹೀಗೆ ಇರು ಅಂದಿದ್ದಾರೆ, ನಾನು ಹಾಗೆಯೇ ಇರುವೆ. ನಾನು ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುವೆ. ಮಾತನಾಡುವುದರಿಂದ ಪಕ್ಷದ ಮುಖಂಡರಿಗೆ ಮುಜುಗರ ಆಗಬಾರದು. ಹಾಗಂತ ನಾನು ವೀಕ್ ಆಗಿದ್ದೇನೆ ಅಂತಲ್ಲ ಎಂದರು.

Intro:ಧಾರವಾಡ: ಕುಮಾರಸ್ವಾಮಿಗೆ ಸಿಎಂ ಅಧಿಕಾರ ಅನುಭವಿಸಿದ್ದಾರೆ.‌ ಹಿಂದೆ ಯಡಿಯೂರಪ್ಪರಿಂದಲೇ ಕುಮಾರಸ್ವಾಮಿ 20 ತಿಂಗಳ ಅಧಿಕಾರ ಅನುಭವಿಸಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಹೊರಗೆ ಇಡಬೇಕು ಅಂತಾ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ರೂ, ಈಗ ಎಚ್.ಡಿ.ಕೆಗೆ ನೀರಿನಲ್ಲಿನ ಮೀನನ್ನು ಹೊರಗೆ ಬಿಟ್ಟಂತೆ ಆಗಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಧಾರವಾಡ ಜಿಲ್ಲೆ ಅಮರಗೋಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಿಟ್ಟು ಬರಲು ಶಾಸಕರು ತಯಾರಿದ್ದಾರೆಂಬ ಎಚ್.ಡಿ‌‌.ಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ.

ಅವರಿಗೆ ಎಲ್ಲೋ ಬುದ್ಧಿ ಭ್ರಮನೆ ಆಗಿದೆ ಅನಿಸುತ್ತದೆ.‌ ಹಾಗಾಗಿ ಕೀಳು ಮಟ್ಟದ ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿಯ ಶಾಸಕರೆಲ್ಲ ಶಿಸ್ತಿನ ಸಿಪಾಯಿಗಳು ನಾವೆಲ್ಲ ಸಿಂಹದ ಮರಿಗಳಿದ್ದಂತೆ ಜೆಡಿಎಸ್ ಮುಳುಗಿ ಹೋಗತಾ ಇದೆ ಆ ಪಕ್ಷಕ್ಕೆ ಹೋಗ್ತಾರಾ? ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.Body:ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನೇನು ಮಾತನಾಡುವುದಿಲ್ಲ, ಆದರೆ ಬಿಜೆಪಿಗೆ ಯಾರೆಲ್ಲ ಬಂದಿದ್ದಾರೆಯೋ ಪಕ್ಷ ಅವರನ್ನು ಗೌರವಿಸುತ್ತದೆ ಎಂದರು.

ಡಿಸಿಎಂ ಹುದ್ದೆ ಬಗ್ಗೆ ವಿಚಾರಕ್ಕೆ ಮಾತನಾಡಿದ ಅವರು, ರೇಣುಕಾಚಾರ್ಯ ಅಂದ್ರೆ ರೇಣುಕಾಚಾರ್ಯ ಆಗಿಯೇ ಇರುವೆ. ಆನೆ ನಡೆದಿದ್ದೆ ದಾರಿ ನಮ್ಮ ಕ್ಷೇತ್ರದ ಜನ ಹೀಗೆ ಇರು ಅಂದಿದ್ದಾರೆ ನಾನು ಹಾಗೆ ಇರುವೆ. ನಾನು ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುವೆ. ಮಾತನಾಡುವುದರಿಂದ ಪಕ್ಷದ ಮುಖಂಡರಿಗೆ ಮುಜುಗರ ಆಗಬಾರದು. ಹಾಗಂತ ನಾನು ವೀಕ್ ಆಗಿದೇನೆ ಅಂತಲ್ಲ ಎಂದರು....

ಬೈಟ್: ರೇಣುಕಾಚಾರ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.