ಹುಬ್ಬಳ್ಳಿ : ದೇಶದಲ್ಲಿಯೇ ಮೊದಲ ಬಾರಿಗೆ ಸಾರ್ವಜನಿಕ ರಸ್ತೆಗೆ ಇನ್ಸುರೆನ್ಸ್ ಮಾಡಿಸಿ ಎಲ್ಲರ ಗಮನ ಸೆಳೆದಿದ್ದ ಸಾರ್ವಜನಿಕರು ಇಂದು ಅದೇ ರಸ್ತೆಗಾಗಿ ಪ್ರತಿಭಟನೆ ನಡೆಸಿದ್ದಾರೆ.
ಹುಬ್ಬಳ್ಳಿಯ ವಿದ್ಯಾನಗರದ ತಿಮ್ಮಸಾಗರ ನಿವಾಸಿಗಳಾದ ಡಾ. ಮೃತ್ಯುಂಜಯ ಸಿಂಧೂರ ಅವರು 2007ರಲ್ಲಿ ಈ ರಸ್ತೆಗೆ ಇನ್ಸುರೆನ್ಸ್ ಮಾಡಿಸಿ ಪಾಟ್ ಹೋಲ್ ಮುಕ್ತ ರಸ್ತೆಯಾಗಿ ಮಾಡಿಸಿದ್ದರು. ಇನ್ನು ಇದು ದೇಶದ ಮೊದಲ ವಿಮೆ ಮಾಡಿಸಿದ ಸಾರ್ವಜನಿಕ ರಸ್ತೆಯಾಗಿದ್ದು, ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿತ್ತು.
ಆದ್ರೆ ಇಂದು ಈ ರಸ್ತೆಯು ಪಾಲಿಕೆಯ ನಿರ್ಲಕ್ಷ್ಯದಿಂದ ಅಲ್ಲಲ್ಲಿ ಒಳ ಚರಂಡಿ ಹಾಳಾಗಿದೆ. ಪಾಲಿಕೆಯ ಈ ನಿರ್ಲಕ್ಷ್ಯದ ಕಾರಣ ಇಲ್ಲಿನ ಸಾರ್ವಜನಿಕರೂ ಸಹ ವಿಮೆಯ ಕಂತು ಕಟ್ಟುವುದನ್ನು ಸಹ ನಿಲ್ಲಿಸಿದ್ದಾರೆ . ಆದ್ರೆ ಇಂದು ಸಾರ್ವಜನಿಕರು ವ್ಹೀಲ್ ಚೇರ್ ಮೇಲೆ ಮಹಾನಗರ ಪಾಲಿಕೆಯ ಭಿತ್ತಿ ಚಿತ್ರ ಇಟ್ಟು ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ.