ETV Bharat / state

ರೈಲ್ವೆ ಖಾಸಗೀಕರಣ ವಿರೋಧಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ..

author img

By

Published : Sep 20, 2019, 9:47 AM IST

ರೈಲ್ವೆ ಇಲಾಖೆಯ ಉತ್ಪಾದನಾ ಘಟಕಗಳನ್ನು ಯಾವುದೇ ಕಾರಣಕ್ಕೂ ಇಂಡಿಯನ್ ರೈಲ್ವೆ ರೋಲಿಂಗ್ ಸ್ಟಾಕ್​ಗೆ ಕೊಡಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬೃಹತ್ ಪ್ರತಿಭಟನಾ ಮೆರವಣಿಗೆ

ಹುಬ್ಬಳ್ಳಿ: ರೈಲ್ವೆ ಸಚಿವಾಲಯ ಪ್ರಸ್ತಾಪಿಸಿರುವ ರೈಲ್ವೆಯ ಖಾಸಗೀಕರಣವನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೌಥ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಗದಗ ರಸ್ತೆಯಲ್ಲಿರುವ ರೈಲು ಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.

ಬೃಹತ್ ಪ್ರತಿಭಟನಾ ಮೆರವಣಿಗೆ

ಸಾವಿರಾರು ರೈಲ್ವೆ ಕಾರ್ಮಿಕರು ರೈಲ್ವೆ ಸೌಧದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಎಸ್​​ಡಬ್ಲೂಆರ್‌ಎಮ್​ಯುನ ವಲಯ ಪ್ರಧಾನ ಕಾರ್ಯದರ್ಶಿ ಡಾ.ಎ.ಎಂ ಡಿಕ್ರೂಜ್, ರೈಲ್ವೆ ಇಲಾಖೆಯ ಉತ್ಪಾದನಾ ಘಟಕಗಳನ್ನು ಯಾವುದೇ ಕಾರಣಕ್ಕೂ ಇಂಡಿಯನ್ ರೈಲ್ವೆ ರೋಲಿಂಗ್ ಸ್ಟಾಕ್​ಗೆ ಕೊಡಲು ಬಿಡುವುದಿಲ್ಲ ಎಂದರು.

ರೈಲ್ವೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು. ಹೊಸ ಫೆನ್ಷನ್ ಪದ್ಧತಿಯನ್ನು ರದ್ದುಪಡಿಸಿ ಹಳೆಯ ಪದ್ಧತಿಯನ್ನೇ ಮುಂದುವರೆಸಬೇಕು. ನೇರ ನೇಮಕಾತಿಯ ಶೇ.10ರಷ್ಟು ಹುದ್ದೆಗಳನ್ನು ಟ್ರ್ಯಾಕ್ ಮೆಂಟೆನರ್​ಗಳಿಗೆ, ಗ್ರೇಡ್ ಪೇ ಅಡಿಯಲ್ಲಿ ಬರುವ ಕಾರ್ಮಿಕರಿಗೆ ಮೀಸಲಿಡಬೇಕು. ನಿಗದಿತ ಅವಧಿಗಳಲ್ಲಿ ಎಲ್​ಡಿಸಿಇ ಮತ್ತು ಜಿಡಿಸಿಇ ಪರೀಕ್ಷೆಗಳನ್ನು ನಡೆಸಿ,ಎಲ್ಲ ಸಿಬ್ಬಂದಿಗೆ ಕಾಲ ಕಾಲಕ್ಕೆ ಬಡ್ತಿಯನ್ನು ಮಾಡಬೇಕು ಎಂದು ಮನವಿ ಮಾಡಿದರು.

ಹುಬ್ಬಳ್ಳಿ: ರೈಲ್ವೆ ಸಚಿವಾಲಯ ಪ್ರಸ್ತಾಪಿಸಿರುವ ರೈಲ್ವೆಯ ಖಾಸಗೀಕರಣವನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೌಥ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಗದಗ ರಸ್ತೆಯಲ್ಲಿರುವ ರೈಲು ಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.

ಬೃಹತ್ ಪ್ರತಿಭಟನಾ ಮೆರವಣಿಗೆ

ಸಾವಿರಾರು ರೈಲ್ವೆ ಕಾರ್ಮಿಕರು ರೈಲ್ವೆ ಸೌಧದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಎಸ್​​ಡಬ್ಲೂಆರ್‌ಎಮ್​ಯುನ ವಲಯ ಪ್ರಧಾನ ಕಾರ್ಯದರ್ಶಿ ಡಾ.ಎ.ಎಂ ಡಿಕ್ರೂಜ್, ರೈಲ್ವೆ ಇಲಾಖೆಯ ಉತ್ಪಾದನಾ ಘಟಕಗಳನ್ನು ಯಾವುದೇ ಕಾರಣಕ್ಕೂ ಇಂಡಿಯನ್ ರೈಲ್ವೆ ರೋಲಿಂಗ್ ಸ್ಟಾಕ್​ಗೆ ಕೊಡಲು ಬಿಡುವುದಿಲ್ಲ ಎಂದರು.

ರೈಲ್ವೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು. ಹೊಸ ಫೆನ್ಷನ್ ಪದ್ಧತಿಯನ್ನು ರದ್ದುಪಡಿಸಿ ಹಳೆಯ ಪದ್ಧತಿಯನ್ನೇ ಮುಂದುವರೆಸಬೇಕು. ನೇರ ನೇಮಕಾತಿಯ ಶೇ.10ರಷ್ಟು ಹುದ್ದೆಗಳನ್ನು ಟ್ರ್ಯಾಕ್ ಮೆಂಟೆನರ್​ಗಳಿಗೆ, ಗ್ರೇಡ್ ಪೇ ಅಡಿಯಲ್ಲಿ ಬರುವ ಕಾರ್ಮಿಕರಿಗೆ ಮೀಸಲಿಡಬೇಕು. ನಿಗದಿತ ಅವಧಿಗಳಲ್ಲಿ ಎಲ್​ಡಿಸಿಇ ಮತ್ತು ಜಿಡಿಸಿಇ ಪರೀಕ್ಷೆಗಳನ್ನು ನಡೆಸಿ,ಎಲ್ಲ ಸಿಬ್ಬಂದಿಗೆ ಕಾಲ ಕಾಲಕ್ಕೆ ಬಡ್ತಿಯನ್ನು ಮಾಡಬೇಕು ಎಂದು ಮನವಿ ಮಾಡಿದರು.

Intro:ಹುಬ್ಬಳಿBody:ರೈಲ್ವೆ ಖಾಸಗೀಕರಣ ವಿರೋಧಿಸಿ ಸೌಥ್ ವೆಸ್ಟರ್ನ್ ರೈಲ್ವೆ ಮಜ್ದೂರ ಯೂನಿಯನ್ ನಿಂದ ಪ್ರತಿಭಟನೆ.

ಹುಬ್ಬಳ್ಳಿ:- ರೈಲ್ವೆ ಸಚಿವಾಲಯ ಪ್ರಸ್ತಾಪಿಸಿರುವ ರೈಲ್ವೆಯ ಖಾಸಗೀಕರಣವನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೌಥ್ ವೆಸ್ಟರ್ನ್ ರೈಲ್ವೆ ಮಜ್ದೂರ ಯೂನಿಯನ್ ಗದಗ ರಸ್ತೆಯಲ್ಲಿರುವ ರೈಲು ಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆ ಯಲ್ಲಿ ಸಾವಿರಾರು ರೈಲ್ವೆ ಕಾರ್ಮಿಕರು ರೈಲ್ವೆ ಸೌಧದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಎಸ್ ಡಬ್ಲೂ ಆರ್ ಎಮ್ ಯು ನ ವಲಯ ಪ್ರಧಾನ ಕಾರ್ಯದರ್ಶಿ ಡಾ.ಎ.ಎಮ್.ಡಿಕ್ರೂಜ್ ಮಾತನಾಡಿ, ರೈಲ್ವೆ ಇಲಾಖೆಯ ಯಾವುದೇ ಉತ್ಪಾದನಾ ಘಟಕಗಳನ್ನು ಯಾವುದೇ ಕಾರಣಕ್ಕೂ ಇಂಡಿಯನ್ ರೈಲ್ವೆ ರೋಲಿಂಗ್ ಸ್ಟಾಕ್ ಗೆ ಕೊಡಲು ಬಿಡುವುದಿಲ್ಲ. ಅಲ್ಲದೇ ರೈಲ್ವೆಯನ್ನು ಖಾಸಗೀಕರಣ, ನಿಗಮೀಕರಣ ಮಾಡುವುದನ್ನು ತೀವ್ರವಾಗಿ ವಿರೋಧಿಸಲಾಗುವುದು ಎಂದರು. ಅಲ್ಲದೇ, ರೈಲ್ವೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು, ಹೊಸ ಫೆನ್ಷನ್ ಪದ್ದತಿಯನ್ನು ರದ್ದುಪಡಿಸಿ ಹಳೆಯ ಪದ್ದತಿಯನ್ನೇ ಮುಂದುವರೆಸಬೇಕು. ನೇರ ನೇಮಕಾತಿಯ ಶೇ.10 ರಷ್ಟು ಹುದ್ದೆಗಳನ್ನು ಟ್ರ್ಯಾಕ್ ಮೆಂಟೆನರ್ ಗಳಿಗೆ, ಗ್ರೇಡ್ ಪೇ ಅಡಿಯಲ್ಲಿ ಬರುವ ಕಾರ್ಮಿಕರಿಗೆ ಮೀಸಲಿಡಬೇಕು. ನಿಗದಿತ ಅವಧಿಗಳಲ್ಲಿ ಎಲ್ ಡಿಸಿಇ ಮತ್ತು ಜಿಡಿಸಿಇ ಪರೀಕ್ಷೆಗಳನ್ನು ನಡೆಸಿ, ಎಲ್ಲ ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ಬಡ್ತಿಯನ್ನು ಮಾಡಬೇಕು. ಕಾರ್ಮಿಕರ ತಂದೆ -ತಾಯಿಗಳಿಗೆ ವೈದ್ಯಕೀಯ ಹಾಗೂ ಪಾಸಿನ ಸೌಲಭ್ಯಗಳು ಸೇರಿದಂತೆ ಮುಂತಾದ ಬೇಡಿಕೆಗಳನ್ನು ಕೂಡಲೇ ಕೇಂದ್ರ ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಎಸ್ ಡಬ್ಲೂ ಆರ್ ಎಮ್ ಯು ನ ವಲಯ ಅಧ್ಯಕ್ಷ ಆರ್.ಆರ್. ನಾಯಕ, ಖಜಾಂತಿ ಚಾರಖಾನಿ, ಪ್ರಧಾನ ಕಾರ್ಯದರ್ಶಿ ಕೆ. ವೆಂಕಟೇಶ, ಜಯಲಕ್ಷ್ಮಿ ಮಲ್ಲಾಡ, ವಿಭಾಗೀಯ ಕಾರ್ಯದರ್ಶಿ ಆಲ್ಬರ್ಟ್ ಡಿಕ್ರೂಜ್, ಪ್ರವೀಣ ಪಾಟೀಲ ಸೇರಿದಂತೆ ಸಾವಿರಾರು ರೈಲ್ವೆ ಕಾರ್ಮಿಕರು ಇದ್ದರು....

ಬೈಟ್:-ಡಾ.ಎ.ಎಮ್.ಡಿಕ್ರೂಜ್(ಎಸ್ ಡಬ್ಲೂ ಆರ್ ಎಮ್ ಯು ನ ವಲಯ ಪ್ರಧಾನ ಕಾರ್ಯದರ್ಶಿ)


________________________________


ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ ಕುಂದಗೋಳ

Conclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.