ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಅಲ್ಪಸಂಖ್ಯಾತರಲ್ಲಿ ಮೂಡಿರುವ ಗೊಂದಲ ಹೋಗಲಾಡಿಸುವ ದೃಷ್ಟಿಯಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ಅವರು ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದರು.
![Prahlad Joshi and Jagadish Shetter Awareness on CAA](https://etvbharatimages.akamaized.net/etvbharat/prod-images/kn-hbl-01-caa-jagrutu-av-7208089_06012020091753_0601f_1578282473_972.jpg)
ನಗರದ ವೀರಾಪುರ, ಯಲ್ಲಾಪುರ ಓಣಿ ಸೇರಿ ಹಲವು ಕಡೆ ಪೌರತ್ವ ಕಾಯ್ದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ದೇಶಾದ್ಯಂತ ಮುಸ್ಲಿಂ ಸಮುದಾಯ ಕಾಯ್ದೆ ವಿರೋಧ ಮಾಡುತ್ತಿರುವ ಸಂದರ್ಭದಲ್ಲಿ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಜಗದೀಶ್ ಶೆಟ್ಟರ್ ಅವರು ಮುಸ್ಲಿಂ ಸಮಾಜದವರ ಮನೆ ಮನೆಗೆ ತೆರಳಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಿರೋದು ವಿಶೇಷ.
![Prahlad Joshi and Jagadish Shetter Awareness on CAA](https://etvbharatimages.akamaized.net/etvbharat/prod-images/kn-hbl-01-caa-jagrutu-av-7208089_06012020091753_0601f_1578282473_435.jpg)
ಈ ಕಾಯ್ದೆ ಜಾರಿಗೆ ಬಂದಿರುವುದರಿಂದ ನಮ್ಮ ದೇಶದಲ್ಲಿ ವಾಸಿಸುವ ಜನರಿಗೆ ಯಾವುದೇ ತೊಂದರೆ ಇಲ್ಲ. ಒಂದೇ ಜಾತಿ ಗುರಿಯಾಗಿಸಿ ಈ ಕಾಯ್ದೆ ತಂದಿಲ್ಲ ಎಂದರು. ಈ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿದೆ. ಅದನ್ನು ಹೋಗಲಾಡಿಸುವ ದೃಷ್ಟಿಯಿಂದ ಇವತ್ತು ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಉಭಯ ನಾಯಕರು ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡಿದರು.
![Prahlad Joshi and Jagadish Shetter Awareness on CAA](https://etvbharatimages.akamaized.net/etvbharat/prod-images/kn-hbl-01-caa-jagrutu-av-7208089_06012020091753_0601f_1578282473_703.jpg)