ETV Bharat / state

1.38 ಲಕ್ಷ ರೂ. ಆನ್‌ಲೈನ್‌ನಲ್ಲಿ ವಂಚನೆ: ಸೈಬರ್ ಠಾಣೆಯಲ್ಲಿ ದೂರು ದಾಖಲು

author img

By

Published : Mar 30, 2021, 12:09 PM IST

ಆನ್​ಲೈನ್​ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹುಬ್ಬಳ್ಳಿಯಲ್ಲಿ ಇಂತಹುದ್ದೇ ಪ್ರಕರಣ ಬೆಳಕಿಗೆ ಬಂದಿದೆ.

opium consumed two persons Arrested, opium consumed two persons Arrested in Hubli, Hubli crime news, ಅಫೀಮು ಸೇವಿಸಿದ್ದ ಇಬ್ಬರ ಬಂಧನ, ಹುಬ್ಬಳ್ಳಿಯಲ್ಲಿ ಅಫೀಮು ಸೇವಿಸಿದ್ದ ಇಬ್ಬರ ಬಂಧನ, ಹುಬ್ಬಳ್ಳಿ ಅಪರಾಧ ಸುದ್ದಿ,
ಸೈಬರ್ ಠಾಣೆಯಲ್ಲಿ ದೂರು ದಾಖಲು

ಹುಬ್ಬಳ್ಳಿ: ಶಾಪ್​​​‌ಕ್ಲೂವ್​​ ‌ಆ್ಯಪ್ ‌(shopclues app)ನಲ್ಲಿ ಆರ್ಡರ್‌ ಮಾಡಿದ ವಾಚ್‌ ಮತ್ತು ಸ್ಕ್ರೂಡ್ರೈವರ್‌ ಖಚಿತತೆಗೆ 10 ರೂಪಾಯಿ ಕಳುಹಿಸಲು ಹೇಳಿ 1.38 ಲಕ್ಷ ರೂ. ಲಪಾಟಾಯಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಗೋಪಾಲರಾವ್‌ ಶಾಪ್‌ಕ್ಲುಸ್‌ ಆ್ಯಪ್​ನಲ್ಲಿ ವಾಚ್‌ ಮತ್ತು ಸ್ಕ್ರೂಡ್ರೈವರ್‌ ಆರ್ಡರ್‌ ಮಾಡಿದ್ದರು. ಹದಿನೈದು ವಾರವಾದರೂ ಅದು ಬರದೇ ಇದ್ದಾಗ, ವೆಬ್‌ಸೈಟ್‌ ಹುಡುಕಿ ಕಸ್ಟಮರ್‌ ಕೇರ್‌ ಸೆಂಟರ್‌ ನಂಬರ್‌ಗೆ ಕರೆ ಮಾಡಿದ್ದಾರೆ. ನಂತರ ಅವರಿಗೆ ಕರೆ, ಶಾಪ್​​​‌ಕ್ಲೂವ್​​‌ನಿಂದ ಕರೆ ಮಾಡಿರುವುದಾಗಿ ನಂಬಿಸಿದ ವಂಚಕ, ಆರ್ಡರ್‌ ಖಚಿತ ಪಡಿಸಲು 10 ರೂ. ಕಳುಹಿಸಬೇಕು ಎಂದು ಒಂದು ಲಿಂಕ್‌ ಕಳುಹಿಸಿದ್ದಾನೆ. ಲಿಂಕ್‌ ಒಪನ್‌ ಮಾಡಿಸಿ ಬ್ಯಾಂಕ್‌ ಖಾತೆಯ ಯುಪಿಐ ಐಡಿ ಸಬ್‌ಮೀಟ್‌ ಮಾಡಿಸಿಕೊಂಡು ಹಣ ವರ್ಗಾಯಿಸಿಕೊಂಡಿದ್ದಾನೆ.

ಈ ಘಟನೆ ಕುರಿತು ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬಸ್​​​​ನಲ್ಲಿ ಅಫೀಮು ಸೇವಿಸಿದ್ದ ಇಬ್ಬರ ಬಂಧನ
ಮುಂಬೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಸ್‌ಆರ್‌ಎಸ್‌ ಬಸ್‌ನಲ್ಲಿ ಅಫೀಮು ಸೇವನೆ ಮಾಡಿದ ಬೆಂಗಳೂರಿನ ಇಬ್ಬರು ಆರೋಪಿಗಳನ್ನು ಗೋಕುಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಶಿವಾಜಿನಗರದ ನಿವಾಸಿಗಳಾದ ಮಹ್ಮದ್‌ ಶಾಹಿದ್‌ ಅಸ್ಲಂಖಾನ್‌ ಮತ್ತು ಸೈಯದ್‌ ಇಪ್ತಿಕಾರ್‌ ಸೋಹೆಲ್‌ ಬಂಧಿತರು. ಧಾರವಾಡದ ನರೇಂದ್ರ ಟೋಲ್‌ನಾಕಾ ಬಳಿ ಉಪಾಹಾರ ಸೇವನೆಗೆ ಬಸ್‌ ನಿಲ್ಲಿಸಿದಾಗ, ಆರೋಪಿಗಳು ಅಫೀಮು ಸೇವನೆ ಮಾಡಿದ್ದರು. ಬಸ್‌ಲ್ಲಿದ್ದ ಪ್ರಯಾಣಿಕರು ವಿಚಾರಿಸಿದಾಗ ಸಿಗರೇಟ್‌ ಸೇದಿರುವುದಾಗಿ ಹೇಳಿದ್ದರು. ನಂತರ ಆರೋಪಿಗಳನ್ನು ಗೋಕುಲ ಠಾಣೆಗೆ ಕರೆ ತರುವಾಗ, ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅಫೀಮು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಗೋಕುಲ ರೋಡ್ ಪೊಲೀಸ್ ಠಾಣೆಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಹುಬ್ಬಳ್ಳಿ: ಶಾಪ್​​​‌ಕ್ಲೂವ್​​ ‌ಆ್ಯಪ್ ‌(shopclues app)ನಲ್ಲಿ ಆರ್ಡರ್‌ ಮಾಡಿದ ವಾಚ್‌ ಮತ್ತು ಸ್ಕ್ರೂಡ್ರೈವರ್‌ ಖಚಿತತೆಗೆ 10 ರೂಪಾಯಿ ಕಳುಹಿಸಲು ಹೇಳಿ 1.38 ಲಕ್ಷ ರೂ. ಲಪಾಟಾಯಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಗೋಪಾಲರಾವ್‌ ಶಾಪ್‌ಕ್ಲುಸ್‌ ಆ್ಯಪ್​ನಲ್ಲಿ ವಾಚ್‌ ಮತ್ತು ಸ್ಕ್ರೂಡ್ರೈವರ್‌ ಆರ್ಡರ್‌ ಮಾಡಿದ್ದರು. ಹದಿನೈದು ವಾರವಾದರೂ ಅದು ಬರದೇ ಇದ್ದಾಗ, ವೆಬ್‌ಸೈಟ್‌ ಹುಡುಕಿ ಕಸ್ಟಮರ್‌ ಕೇರ್‌ ಸೆಂಟರ್‌ ನಂಬರ್‌ಗೆ ಕರೆ ಮಾಡಿದ್ದಾರೆ. ನಂತರ ಅವರಿಗೆ ಕರೆ, ಶಾಪ್​​​‌ಕ್ಲೂವ್​​‌ನಿಂದ ಕರೆ ಮಾಡಿರುವುದಾಗಿ ನಂಬಿಸಿದ ವಂಚಕ, ಆರ್ಡರ್‌ ಖಚಿತ ಪಡಿಸಲು 10 ರೂ. ಕಳುಹಿಸಬೇಕು ಎಂದು ಒಂದು ಲಿಂಕ್‌ ಕಳುಹಿಸಿದ್ದಾನೆ. ಲಿಂಕ್‌ ಒಪನ್‌ ಮಾಡಿಸಿ ಬ್ಯಾಂಕ್‌ ಖಾತೆಯ ಯುಪಿಐ ಐಡಿ ಸಬ್‌ಮೀಟ್‌ ಮಾಡಿಸಿಕೊಂಡು ಹಣ ವರ್ಗಾಯಿಸಿಕೊಂಡಿದ್ದಾನೆ.

ಈ ಘಟನೆ ಕುರಿತು ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬಸ್​​​​ನಲ್ಲಿ ಅಫೀಮು ಸೇವಿಸಿದ್ದ ಇಬ್ಬರ ಬಂಧನ
ಮುಂಬೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಸ್‌ಆರ್‌ಎಸ್‌ ಬಸ್‌ನಲ್ಲಿ ಅಫೀಮು ಸೇವನೆ ಮಾಡಿದ ಬೆಂಗಳೂರಿನ ಇಬ್ಬರು ಆರೋಪಿಗಳನ್ನು ಗೋಕುಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಶಿವಾಜಿನಗರದ ನಿವಾಸಿಗಳಾದ ಮಹ್ಮದ್‌ ಶಾಹಿದ್‌ ಅಸ್ಲಂಖಾನ್‌ ಮತ್ತು ಸೈಯದ್‌ ಇಪ್ತಿಕಾರ್‌ ಸೋಹೆಲ್‌ ಬಂಧಿತರು. ಧಾರವಾಡದ ನರೇಂದ್ರ ಟೋಲ್‌ನಾಕಾ ಬಳಿ ಉಪಾಹಾರ ಸೇವನೆಗೆ ಬಸ್‌ ನಿಲ್ಲಿಸಿದಾಗ, ಆರೋಪಿಗಳು ಅಫೀಮು ಸೇವನೆ ಮಾಡಿದ್ದರು. ಬಸ್‌ಲ್ಲಿದ್ದ ಪ್ರಯಾಣಿಕರು ವಿಚಾರಿಸಿದಾಗ ಸಿಗರೇಟ್‌ ಸೇದಿರುವುದಾಗಿ ಹೇಳಿದ್ದರು. ನಂತರ ಆರೋಪಿಗಳನ್ನು ಗೋಕುಲ ಠಾಣೆಗೆ ಕರೆ ತರುವಾಗ, ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅಫೀಮು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಗೋಕುಲ ರೋಡ್ ಪೊಲೀಸ್ ಠಾಣೆಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.