ETV Bharat / state

ಈರುಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ.. ರಾಶಿ ಹಾಕಿರುವ ಬೆಳೆ ಕೊಳೆಯುವ ಭೀತಿ

ಧಾರಾಕಾರ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಈರುಳ್ಳಿ ಬೆಳೆದ ರೈತರು ಇದೀಗ ಬೆಲೆ ಕೇಳಿ ಆಕ್ರೋಶ ಹೊರಹಾಕಿದ್ದಾರೆ. ತೀವ್ರ ಮಳೆಯಿಂದ ಹರಸಾಹಸ ಪಟ್ಟು ಉಳಿಸಿಕೊಂಡಿದ್ದ ಅತ್ಯಲ್ಪ ಈರುಳ್ಳಿಗೆ ಈಗ ಸೂಕ್ತ ಬೆಲೆ ಇಲ್ಲದೆ ಪರದಾಡುವಂತಾಗಿದೆ.

author img

By

Published : Oct 23, 2021, 12:23 PM IST

onion-price-crushed-down-in-hubballi-market
ಈರುಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ

ಹುಬ್ಬಳ್ಳಿ: ನಿರಂತರ ಮಳೆ ಸುರಿದ ಪರಿಣಾಮ ಈರುಳ್ಳಿ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ. ಈ ನಡುವೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹುಬ್ಬಳ್ಳಿ ಎಪಿಎಂಸಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಈರುಳ್ಳಿ ಬೆಲೆ ಕುಸಿತ ಕಂಡಿದೆ. ಮಾರುಕಟ್ಟೆಗೆ ಈರುಳ್ಳಿ ಬರಲು ಆರಂಭವಾಗಿತ್ತಿದ್ದಂತೆ ಬೆಲೆಯಲ್ಲಿ ದಿಢೀರ್​​ ಕುಸಿತ ಕಂಡಿದೆ. ಕ್ವಿಂಟಾಲಿಗೆ 5 ಸಾವಿರಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದ ಈರುಳ್ಳಿ ಕನಿಷ್ಠ 400 ರೂಪಾಯಿಯಿಂದ ಗರಿಷ್ಠ 2,000 ರೂಪಾಯಿಗೆ ಆಸುಪಾಸಿಗೆ ಕುಸಿದಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ.

ಈರುಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ..ರಾಶಿ ಹಾಕಿರುವ ಬೆಳೆ ಕೊಳೆಯುವ ಭೀತಿ

400 ರೂಪಾಯಿಗೆ ಕ್ವಿಂಟಾಲ್ ಈರುಳ್ಳಿ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ಆಕ್ರೋಶಗೊಂಡ ರೈತರು ಹೊಲದಲ್ಲಿಯೆ ಈರುಳ್ಳಿ ರಾಶಿ ಹಾಕಿದ್ದು, ಕೊಳೆಯುವ ಭೀತಿ ಎದುರಾಗಿದೆ. ಕಳೆದ ವರ್ಷವು ಬೆಲೆ ಕುಸಿದ ಪರಿಣಾಮ ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸಿದ್ದರು. ಈ ವರ್ಷವು ಮತ್ತೆ ಬೆಲೆ ಕುಸಿತವಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ರೈತರ ಕೈ ಸೇರದ ಪರಿಹಾರ.. ಸರ್ಕಾರದ ವಿರುದ್ಧ ಅಥಣಿ ರೈತರ ಆಕ್ರೋಶ

ಹುಬ್ಬಳ್ಳಿ: ನಿರಂತರ ಮಳೆ ಸುರಿದ ಪರಿಣಾಮ ಈರುಳ್ಳಿ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ. ಈ ನಡುವೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹುಬ್ಬಳ್ಳಿ ಎಪಿಎಂಸಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಈರುಳ್ಳಿ ಬೆಲೆ ಕುಸಿತ ಕಂಡಿದೆ. ಮಾರುಕಟ್ಟೆಗೆ ಈರುಳ್ಳಿ ಬರಲು ಆರಂಭವಾಗಿತ್ತಿದ್ದಂತೆ ಬೆಲೆಯಲ್ಲಿ ದಿಢೀರ್​​ ಕುಸಿತ ಕಂಡಿದೆ. ಕ್ವಿಂಟಾಲಿಗೆ 5 ಸಾವಿರಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದ ಈರುಳ್ಳಿ ಕನಿಷ್ಠ 400 ರೂಪಾಯಿಯಿಂದ ಗರಿಷ್ಠ 2,000 ರೂಪಾಯಿಗೆ ಆಸುಪಾಸಿಗೆ ಕುಸಿದಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ.

ಈರುಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ..ರಾಶಿ ಹಾಕಿರುವ ಬೆಳೆ ಕೊಳೆಯುವ ಭೀತಿ

400 ರೂಪಾಯಿಗೆ ಕ್ವಿಂಟಾಲ್ ಈರುಳ್ಳಿ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ಆಕ್ರೋಶಗೊಂಡ ರೈತರು ಹೊಲದಲ್ಲಿಯೆ ಈರುಳ್ಳಿ ರಾಶಿ ಹಾಕಿದ್ದು, ಕೊಳೆಯುವ ಭೀತಿ ಎದುರಾಗಿದೆ. ಕಳೆದ ವರ್ಷವು ಬೆಲೆ ಕುಸಿದ ಪರಿಣಾಮ ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸಿದ್ದರು. ಈ ವರ್ಷವು ಮತ್ತೆ ಬೆಲೆ ಕುಸಿತವಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ರೈತರ ಕೈ ಸೇರದ ಪರಿಹಾರ.. ಸರ್ಕಾರದ ವಿರುದ್ಧ ಅಥಣಿ ರೈತರ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.