ETV Bharat / state

ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು ಸರಿಯಲ್ಲ: ಎನ್ಎಸ್​​ಯುಐ

author img

By

Published : May 7, 2020, 4:54 PM IST

ಮದ್ಯ ಖರೀದಿಸುವವರು ಯಾವುದೇ ನಿಯಮ ಪಾಲಿಸಿಲ್ಲ. ಅಲ್ಲದೆ ಸಾಮಾಜಿಕ ಅಂತರವನ್ನಂತೂ ಗಾಳಿಗೆ ತೂರಲಾಗಿದೆ. ಹೀಗಾದರೆ ಸೋಂಕು ಹೆಚ್ಚಾಗುವುದು ನಿಶ್ಚಿತ. ಹಾಗಾಗಿ ಮದ್ಯ ಮಾರಾಟಕ್ಕೆ ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಎನ್​ಎಸ್​ಯುಐ ಆಗ್ರಹಿಸಿದೆ.

nsui-protest-against-govt-for-permit-reopen-the-bars-at-hubballi
ಎನ್. ಎಸ್. ಯು. ಐ‌ ಕಾರ್ಯಕರ್ತರು

ಹುಬ್ಬಳ್ಳಿ: ಲಾಕ್​ಡೌನ್​ ಸಮಯದಲ್ಲಿ ಮದ್ಯ ನಿಷೇಧಿಸಿ ಜನರ ಜೀವ ಉಳಿಸಬೇಕಿದ್ದ ರಾಜ್ಯ ಸರ್ಕಾರ, ತನ್ನ ಬೊಕ್ಕಸ ತುಂಬಿಸಿಕೊಳ್ಳಲು
ಮದ್ಯದಂಗಡಿ ಪುನಃ ತೆರೆಯಲು ಅನುಮತಿ ನೀಡಿರುವುದು ಸರಿಯಲ್ಲ ಎಂದು ನಗರದಲ್ಲಿ‌ ಎನ್​ಎಸ್​​ಯುಐ‌ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.

ಎನ್ಎಸ್​​ಯುಐ‌ ಪ್ರತಿಭಟನೆ

ನಗರದ ತಹಶೀಲ್ದಾರ್​​ ‌ಕಚೇರಿ ಎದುರು ‌ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮದ್ಯ ಖರೀದಿಸುವವರು ಯಾವುದೇ ನಿಯಮ ಪಾಲಿಸಿಲ್ಲ. ಅಲ್ಲದೆ ಸಾಮಾಜಿಕ ಅಂತರವನ್ನಂತೂ ಗಾಳಿಗೆ ತೂರಲಾಗಿದೆ. ಹೀಗಾದರೆ ಸೋಂಕು ಹೆಚ್ಚಾಗುವುದು ನಿಶ್ಚಿತ ಎಂದ ಅವರು, ಮದ್ಯ ಮಾರಾಟಕ್ಕೆ ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್​ ಮರಾಠೆ ಹಾಗೂ ಕಾರ್ಯದರ್ಶಿ ರೋಹಿತ್ ನ ಘೋಡಕೆ, ಶ್ರೇಯಾ ಹೀರೆಕೆರೂರ, ರಾಜೇಶ, ಸಮರ್ಥ ಉಪಸ್ಥಿತರಿದ್ದರು.

ಹುಬ್ಬಳ್ಳಿ: ಲಾಕ್​ಡೌನ್​ ಸಮಯದಲ್ಲಿ ಮದ್ಯ ನಿಷೇಧಿಸಿ ಜನರ ಜೀವ ಉಳಿಸಬೇಕಿದ್ದ ರಾಜ್ಯ ಸರ್ಕಾರ, ತನ್ನ ಬೊಕ್ಕಸ ತುಂಬಿಸಿಕೊಳ್ಳಲು
ಮದ್ಯದಂಗಡಿ ಪುನಃ ತೆರೆಯಲು ಅನುಮತಿ ನೀಡಿರುವುದು ಸರಿಯಲ್ಲ ಎಂದು ನಗರದಲ್ಲಿ‌ ಎನ್​ಎಸ್​​ಯುಐ‌ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.

ಎನ್ಎಸ್​​ಯುಐ‌ ಪ್ರತಿಭಟನೆ

ನಗರದ ತಹಶೀಲ್ದಾರ್​​ ‌ಕಚೇರಿ ಎದುರು ‌ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮದ್ಯ ಖರೀದಿಸುವವರು ಯಾವುದೇ ನಿಯಮ ಪಾಲಿಸಿಲ್ಲ. ಅಲ್ಲದೆ ಸಾಮಾಜಿಕ ಅಂತರವನ್ನಂತೂ ಗಾಳಿಗೆ ತೂರಲಾಗಿದೆ. ಹೀಗಾದರೆ ಸೋಂಕು ಹೆಚ್ಚಾಗುವುದು ನಿಶ್ಚಿತ ಎಂದ ಅವರು, ಮದ್ಯ ಮಾರಾಟಕ್ಕೆ ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್​ ಮರಾಠೆ ಹಾಗೂ ಕಾರ್ಯದರ್ಶಿ ರೋಹಿತ್ ನ ಘೋಡಕೆ, ಶ್ರೇಯಾ ಹೀರೆಕೆರೂರ, ರಾಜೇಶ, ಸಮರ್ಥ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.