ETV Bharat / state

ತಾಯಂದಿರ ದಿನವನ್ನು ವಿಭಿನ್ನವಾಗಿ ಆಚರಿಸಿದ ಹುಬ್ಬಳ್ಳಿ ಮಕ್ಕಳು, ಯುವಕರು

author img

By

Published : May 9, 2021, 8:05 PM IST

ಮದರ್ಸ್ ಡೇ ಅಂಗವಾಗಿ ಸುಮಾರು 100ಕ್ಕೂ ಹೆಚ್ಚು ತಾಯಂದಿರ ಕೈಯಲ್ಲಿ ಸಸಿಗಳನ್ನು ನೆಡಿಸುವ ಮೂಲಕ ತಾಯಂದಿರ ದಿನವನ್ನು ಆಚರಣೆ ಮಾಡಿದ್ದು ವಿಶೇಷವಾಗಿದೆ.

mothers day celebration in hubli
ತಾಯಂದಿರ ದಿನವನ್ನು ವಿಭಿನ್ನವಾಗಿ ಆಚರಿಸಿದ ಹುಬ್ಬಳ್ಳಿ ಮಕ್ಕಳು

ಹುಬ್ಬಳ್ಳಿ: ಇಂದು ತಾಯಂದಿರ ದಿನದ ಸಂಭ್ರಮ. ಹೆಚ್ಚಿನವರು ತಮ್ಮ ತಾಯಂದಿರ ಕೈಯಲ್ಲಿ ಕೇಕ್​ ಕತ್ತರಿಸಿ, ಸಿಹಿ ತಿನಿಸೋ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಆದರೆ ಇಲ್ಲೊಂದು ಯುವಕರ ತಂಡದವರು ವಿಭಿನ್ನವಾಗಿ ತಾಯಂದಿರ ದಿನವನ್ನು ಆಚರಣೆ ಮಾಡಿದ್ದಾರೆ.

ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗಿದ್ದು ಆಕ್ಸಿಜನ್ ಸಿಗದೆ ಅದೆಷ್ಟೋ ಜನರು ಸಾವನ್ನಪ್ಪುತ್ತಿದ್ದಾರೆ. ಆದ ಕಾರಣ ಈ ತಂಡ ಮದರ್ಸ್ ಡೇ ಅಂಗವಾಗಿ ಸುಮಾರು 100ಕ್ಕೂ ಹೆಚ್ಚು ತಾಯಂದಿರ ಕೈಯಲ್ಲಿ ಸಸಿಗಳನ್ನು ನೆಡಿಸಿ ತಾಯಂದಿರ ದಿನ ಆಚರಣೆ ಮಾಡಿದ್ದು ವಿಶೇಷವಾಗಿದೆ.

ಮದರ್ಸ್ ಡೇ - ಗಿಡ ಕೊಟ್ಟು ಆಚರಣೆ

ಟೀಂ ಸ್ಮೈಲ್ ಮತ್ತು ಶಂಕರ ಜ್ಯೋತಿ ನಗರದ ಚಿಕ್ಕ ಮಕ್ಕಳು ಸೇರಿಕೊಂಡು ಸುತಗಟ್ಟಿಯ ಶಂಕರಜ್ಯೋತಿ ನಗರದಲ್ಲಿ ಸಮಸ್ತ ಜನತೆ ತಾಯಂದಿರ ದಿನಾಚರಣೆಯಲ್ಲಿ ಭಾಗವಹಿಸಿ ಈ ದಿನಕ್ಕೆ ಮೆರಗು ತಂದಿದ್ದಾರೆ. ಟೀಂ ಸ್ಮೈಲ್ ಯುವಕರು ಎಲ್ಲ ತಾಯಂದಿರಿಗೆ ಉಡುಗೊರೆಯಾಗಿ ಸಸಿಗಳನ್ನು ನೀಡಿ ಅವರಿಂದ ಪ್ರತಿಯೊಬ್ಬರ ಮನೆ ಮುಂದೆ ಮತ್ತು ಗಾರ್ಡನ್​ಗಳಲ್ಲಿ ಗಿಡಗಳನ್ನು ನೆಡಿಸಿರುವುದು ವಿಶೇಷವಾಗಿದೆ.

ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟದ ಕಣಿವೆಗೆ ಉರುಳಿದ ಜೀಪ್.. ಓರ್ವ ಸಾವು, ಹಲವರಿಗೆ ಗಾಯ

ಕೊರೊನಾ ಸೋಂಕಿನಿಂದ ಆಮ್ಲಜನಕ ಸಿಗದೆ ಸಾವು ನೋವು ಹೆಚ್ಚಾಗುತ್ತಿದ್ದು, ಮುಂದೆ ಇಂತಹ ಸಮಸ್ಯೆ ಎದುರಾಗಬಾರದೆಂಬ ನಿಟ್ಟಿನಲ್ಲಿ ಈ ದಿನದ ನಿಮಿತ್ತ ಯುವಕರ ತಂಡ ಸಸಿಗಳನ್ನು ನೀಡಿ ಈ ಮಹತ್ತರ ಕಾರ್ಯ ಮಾಡಿ ಬೇರೆಯವರಿಗೂ ಮಾದರಿಯಾಗಿದ್ದಾರೆ.

ಹುಬ್ಬಳ್ಳಿ: ಇಂದು ತಾಯಂದಿರ ದಿನದ ಸಂಭ್ರಮ. ಹೆಚ್ಚಿನವರು ತಮ್ಮ ತಾಯಂದಿರ ಕೈಯಲ್ಲಿ ಕೇಕ್​ ಕತ್ತರಿಸಿ, ಸಿಹಿ ತಿನಿಸೋ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಆದರೆ ಇಲ್ಲೊಂದು ಯುವಕರ ತಂಡದವರು ವಿಭಿನ್ನವಾಗಿ ತಾಯಂದಿರ ದಿನವನ್ನು ಆಚರಣೆ ಮಾಡಿದ್ದಾರೆ.

ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗಿದ್ದು ಆಕ್ಸಿಜನ್ ಸಿಗದೆ ಅದೆಷ್ಟೋ ಜನರು ಸಾವನ್ನಪ್ಪುತ್ತಿದ್ದಾರೆ. ಆದ ಕಾರಣ ಈ ತಂಡ ಮದರ್ಸ್ ಡೇ ಅಂಗವಾಗಿ ಸುಮಾರು 100ಕ್ಕೂ ಹೆಚ್ಚು ತಾಯಂದಿರ ಕೈಯಲ್ಲಿ ಸಸಿಗಳನ್ನು ನೆಡಿಸಿ ತಾಯಂದಿರ ದಿನ ಆಚರಣೆ ಮಾಡಿದ್ದು ವಿಶೇಷವಾಗಿದೆ.

ಮದರ್ಸ್ ಡೇ - ಗಿಡ ಕೊಟ್ಟು ಆಚರಣೆ

ಟೀಂ ಸ್ಮೈಲ್ ಮತ್ತು ಶಂಕರ ಜ್ಯೋತಿ ನಗರದ ಚಿಕ್ಕ ಮಕ್ಕಳು ಸೇರಿಕೊಂಡು ಸುತಗಟ್ಟಿಯ ಶಂಕರಜ್ಯೋತಿ ನಗರದಲ್ಲಿ ಸಮಸ್ತ ಜನತೆ ತಾಯಂದಿರ ದಿನಾಚರಣೆಯಲ್ಲಿ ಭಾಗವಹಿಸಿ ಈ ದಿನಕ್ಕೆ ಮೆರಗು ತಂದಿದ್ದಾರೆ. ಟೀಂ ಸ್ಮೈಲ್ ಯುವಕರು ಎಲ್ಲ ತಾಯಂದಿರಿಗೆ ಉಡುಗೊರೆಯಾಗಿ ಸಸಿಗಳನ್ನು ನೀಡಿ ಅವರಿಂದ ಪ್ರತಿಯೊಬ್ಬರ ಮನೆ ಮುಂದೆ ಮತ್ತು ಗಾರ್ಡನ್​ಗಳಲ್ಲಿ ಗಿಡಗಳನ್ನು ನೆಡಿಸಿರುವುದು ವಿಶೇಷವಾಗಿದೆ.

ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟದ ಕಣಿವೆಗೆ ಉರುಳಿದ ಜೀಪ್.. ಓರ್ವ ಸಾವು, ಹಲವರಿಗೆ ಗಾಯ

ಕೊರೊನಾ ಸೋಂಕಿನಿಂದ ಆಮ್ಲಜನಕ ಸಿಗದೆ ಸಾವು ನೋವು ಹೆಚ್ಚಾಗುತ್ತಿದ್ದು, ಮುಂದೆ ಇಂತಹ ಸಮಸ್ಯೆ ಎದುರಾಗಬಾರದೆಂಬ ನಿಟ್ಟಿನಲ್ಲಿ ಈ ದಿನದ ನಿಮಿತ್ತ ಯುವಕರ ತಂಡ ಸಸಿಗಳನ್ನು ನೀಡಿ ಈ ಮಹತ್ತರ ಕಾರ್ಯ ಮಾಡಿ ಬೇರೆಯವರಿಗೂ ಮಾದರಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.