ETV Bharat / state

ಧಾರವಾಡದ ಐಷಾರಾಮಿ ಹೊಟೇಲ್​ನಲ್ಲಿ ವಾಸ: ಬಿಲ್​ ಕಟ್ಟದೆ ಪರಾರಿಯಾದ ಆಸಾಮಿ! - ಹೋಟೆಲ್ ಸಿಬ್ಬಂದಿಗೆ ವಂಚನೆ

ಧಾರವಾಡದ ದ್ವಾರವಾಟಾ ಐಷಾರಾಮಿ ಹೋಟೆಲ್​ನಲ್ಲಿ ವ್ಯಕ್ತಿಯೋರ್ವ ನಾಲ್ಕು ದಿನಗಳ ಕಾಲ ವಾಸ ಮಾಡಿ ಬಳಿಕ ಹೊಟೇಲ್​ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.

Dharwad
ಪರಾರಿ
author img

By

Published : Jul 9, 2020, 12:58 PM IST

ಧಾರವಾಡ: ಐಷಾರಾಮಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿ ಹೋಟೆಲ್ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ವ್ಯಕ್ತಿಯೋರ್ವ ಪರಾರಿಯಾದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಬಿಲ್​ ಕಟ್ಟದೆ ಮಜಾ ಮಾಡಿ ಆಸಾಮಿ ಪರಾರಿ

ಕೋಟ್ಯಾಧೀಶ್ವರನ ವೇಷದಲ್ಲಿ ಬಂದು ಹೋಟೆಲ್ ಬಿಲ್ ಕಟ್ಟದೆ ಪರಾರಿಯಾಗಿದ್ದಾನೆ. ಭೀಮ್ಸೆಂಟ್ ಜಾನ್ ಎಂಬ ಹೆಸರಿನ ವ್ಯಕ್ತಿಯೇ ಹೋಟೆಲ್ ಸಿಬ್ಬಂದಿಗೆ ವಂಚಿಸಿ ಪರಾರಿಯಾಗಿರುವ ಆರೋಪಿ. ನಾಲ್ಕು ದಿನಗಳಿಂದ ಧಾರವಾಡದ ದ್ವಾರವಾಟಾ ಐಷಾರಾಮಿ ಹೋಟೆಲ್​ನಲ್ಲಿ ವ್ಯಕ್ತಿ ವಾಸ್ತವ್ಯ ಹೂಡಿದ್ದ. ನಾಲ್ಕು ದಿನ ಬೇಕಾಗಿದ್ದೆಲ್ಲ ತರಿಸಿಕೊಂಡು ಮಜಾ ಮಾಡಿದ್ದ ಆಸಾಮಿ ಏಕಾಏಕಿ ಹೋಟೆಲ್​ನಿಂದ ಕಾಲ್ಕಿತ್ತಿದ್ದಾನೆ.

Dharwad
ಪರಾರಿಯಾದ ಬೀಮ್ಸೆಂಟ್ ಜಾನ್ ಆಧಾರ್​ ಪ್ರತಿ

ವ್ಯಕ್ತಿ ಹೋಟೆಲ್​ನಿಂದ ಹೊರ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೋಟೆಲ್ ಮ್ಯಾನೇಜರ್​ನಿಂದ ಉಪನಗರ ಠಾಣೆಯಲ್ಲಿ ದೂರು ನೀಡಲಾಗಿದೆ. ಇದೇ ರೀತಿ ಈ ವ್ಯಕ್ತಿ ಹಲವು ಕಡೆಗಳಲ್ಲಿ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಧಾರವಾಡ: ಐಷಾರಾಮಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿ ಹೋಟೆಲ್ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ವ್ಯಕ್ತಿಯೋರ್ವ ಪರಾರಿಯಾದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಬಿಲ್​ ಕಟ್ಟದೆ ಮಜಾ ಮಾಡಿ ಆಸಾಮಿ ಪರಾರಿ

ಕೋಟ್ಯಾಧೀಶ್ವರನ ವೇಷದಲ್ಲಿ ಬಂದು ಹೋಟೆಲ್ ಬಿಲ್ ಕಟ್ಟದೆ ಪರಾರಿಯಾಗಿದ್ದಾನೆ. ಭೀಮ್ಸೆಂಟ್ ಜಾನ್ ಎಂಬ ಹೆಸರಿನ ವ್ಯಕ್ತಿಯೇ ಹೋಟೆಲ್ ಸಿಬ್ಬಂದಿಗೆ ವಂಚಿಸಿ ಪರಾರಿಯಾಗಿರುವ ಆರೋಪಿ. ನಾಲ್ಕು ದಿನಗಳಿಂದ ಧಾರವಾಡದ ದ್ವಾರವಾಟಾ ಐಷಾರಾಮಿ ಹೋಟೆಲ್​ನಲ್ಲಿ ವ್ಯಕ್ತಿ ವಾಸ್ತವ್ಯ ಹೂಡಿದ್ದ. ನಾಲ್ಕು ದಿನ ಬೇಕಾಗಿದ್ದೆಲ್ಲ ತರಿಸಿಕೊಂಡು ಮಜಾ ಮಾಡಿದ್ದ ಆಸಾಮಿ ಏಕಾಏಕಿ ಹೋಟೆಲ್​ನಿಂದ ಕಾಲ್ಕಿತ್ತಿದ್ದಾನೆ.

Dharwad
ಪರಾರಿಯಾದ ಬೀಮ್ಸೆಂಟ್ ಜಾನ್ ಆಧಾರ್​ ಪ್ರತಿ

ವ್ಯಕ್ತಿ ಹೋಟೆಲ್​ನಿಂದ ಹೊರ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೋಟೆಲ್ ಮ್ಯಾನೇಜರ್​ನಿಂದ ಉಪನಗರ ಠಾಣೆಯಲ್ಲಿ ದೂರು ನೀಡಲಾಗಿದೆ. ಇದೇ ರೀತಿ ಈ ವ್ಯಕ್ತಿ ಹಲವು ಕಡೆಗಳಲ್ಲಿ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.