ETV Bharat / state

ಲಾಕ್​ಡೌನ್​ ಸಡಿಲಿಕೆಯಾದ್ರೂ ಹೋಟೆಲ್​​ನತ್ತ ಬರದ ಗ್ರಾಹಕರು: ಮಾಲೀಕರು ಕಂಗಾಲು

author img

By

Published : Jun 14, 2020, 3:44 PM IST

ಬರೋಬ್ಬರಿ ಮೂರು ತಿಂಗಳ ಲಾಕ್​ಡೌನ್​ ಸಡಿಲಿಕೆಯ ನಂತರ ಸರ್ಕಾರ ಎಲ್ಲಾ ಹೋಟೆಲ್​ ಮಾಲೀಕರಿಗೆ ವ್ಯಾಪಾರ ಮುಂದುವರೆಸುವಂತೆ ಅನುಮತಿಯನ್ನೇನೋ ನೀಡಿತ್ತು. ಇದೇ ಖುಷಿಯಲ್ಲಿ ಎಲ್ಲಾ ಪೂರ್ವ ತಯಾರಿಗಳನ್ನು ಮಾಡಿಕೊಂಡು ಗ್ರಾಹಕರ ಬರುವಿಕೆಗಾಗಿ ಎದುರು ನೋಡುತ್ತಿದ್ದ ಮಾಲೀಕರ ಮನದಲ್ಲಿ ಇದೀಗ ನಿರಾಸೆ ಮೂಡಿದೆ.

Hotel_
ಹೋಟೆಲ್

ಹುಬ್ಬಳ್ಳಿ: ಲಾಕ್​ಡೌನ್​ ಪ್ರಾರಂಭವಾದಾಗಿನಿಂದ ಉದ್ಯಮದ ಎಲ್ಲಾ ಸ್ತರಗಳಿಗೂ ಒಂದಿಲ್ಲೊಂದು ರೀತಿಯ ಸಮಸ್ಯೆ ಉಲ್ಭಣಗೊಂಡು ವಿವಿಧ ರೀತಿಯಲ್ಲಿ ಕಾಡಿದ್ದಂತೂ ಸುಳ್ಳಲ್ಲಾ. ಅದಕ್ಕೆ ಹೋಟೆಲ್​ ಉದ್ಯಮವೂ ಹೊರತಾಗಿಲ್ಲ. ರಾಜ್ಯದಲ್ಲಿ ಹೋಟೆಲ್​ ಉದ್ಯಮವೂ ಕೂಡಾ ಬಳಲಿ ಬೆಂಡಾಗಿದೆ.

ಇದೀಗ ಸರ್ಕಾರ ಅಗತ್ಯ ಪೂರ್ವಾಪರ ತಯಾರಿಯೊಂದಿಗೆ ಕೆಲವೊಂದು ನಿಯಮವನ್ನು ಪಾಲಿಸಿ ಅಂಗಡಿಯನ್ನ ತೆರೆಯುವಂತೆ ಅನುಮತಿಯನ್ನೇನೋ ನೀಡಿದೆ. ಆದ್ರೆ ಎಲ್ಲಾ ನಿಯಮವನ್ನು ಚಾಚೂ ತಪ್ಪದೆ ಪಾಲಿಸಿ ಗ್ರಾಹಕರಿಗಾಗಿ ಕಾದಿದ್ದ ಹೋಟೆಲ್​ ಮಾಲೀಕರು ಅಕ್ಷರಶಃ ಬೇಸರದಲ್ಲಿದ್ದಾರೆ. ಹಾಗಾದ್ರೆ ಇದಕ್ಕೆಲ್ಲಾ ಕಾರಣವೇನು ಅಂತೀರಾ?...

ಕೋಟ್ಯಂತರ ರೂ. ವಹಿವಾಟು ನಷ್ಟ: ಜಿಲ್ಲೆಯಲ್ಲಿ ನೂರಾರು ದೊಡ್ಡ ಹೋಟೆಲ್​ಗಳಂತೆ ಸಣ್ಣ ಸಣ್ಣ ಗೂಡಂಗಡಿಗಳು, ರಸ್ತೆ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸುವವರು ಸೇರಿ ಸಾವಿರಾರು ಹೋಟೆಲ್​ಗಳಿವೆ. ಇವೆಲ್ಲವುಗಳಿಂದ ಪ್ರತಿದಿನವೂ ಕೋಟ್ಯಂತರ ರೂ. ಗಳ ವಹಿವಾಟು ನಡೆಯುತ್ತಿತ್ತು. ಆದ್ರೀಗ ಸರ್ಕಾರದ ಅನುಮತಿಯ ಹೊರತಾಗಿಯೂ ಗ್ರಾಹಕರು ಹೋಟೆಲ್​​ಗಳತ್ತ ಸುಳಿಯದೇ ವ್ಯಾಪಾರ ಸಂಪೂರ್ಣ ಇಳಿಮುಖವಾಗಿದೆ.

ಹೋಟೆಲ್​ ಉದ್ಯಮಕ್ಕೆ ಭಾರೀ ನಷ್ಟ

ಸಾರ್ವಜನಿಕರಲ್ಲಿ ಬೇರೂರಿರುವ ಭಯ: ದೇಶಾದ್ಯಂತ ದಿನೇ ದಿನೇ ಕೊರೊನಾ ತನ್ನ ಅಟ್ಟಹಾಸವನ್ನು ಹೆಚ್ಚಿಸುತ್ತಿರುವುದನ್ನು ಮಾಧ್ಯಮಗಳಲ್ಲಿ ಗಮನಿಸುತ್ತಿರುವ ಗ್ರಾಹಕರು ಮನೆಯಿಂದ ಹೊರ ಬರಲು ಮುಂದಾಗುತ್ತಿಲ್ಲ. ಒಂದು ವೇಳೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಂದಾದರೂ ಕೂಡಾ ನಗರದಲ್ಲಿನ ಹೋಟೆಲ್​ಗಳಲ್ಲಿ ತಿಂಡಿ ತಿನಿಸುಗಳನ್ನು ತಿನ್ನಲು ಸಂಪೂರ್ಣ ಭಯಬೀಳುತ್ತಿದ್ದಾರೆ.

ವ್ಯಾಪಾರದಲ್ಲಿ ಕೊಂಚ ಏರಿಕೆ: ಇತ್ತೀಚಿಗೆ ಆಶಾ ಕಾರ್ಯಕರ್ತೆಯರು ಕೊರೊನಾದ ಕುರಿತು ಸಕ್ರೀಯರಾಗಿದ್ದು, ಇದರ ಬಗ್ಗೆ ಪ್ರತಿ ಗ್ರಾಮೀಣ ಮಟ್ಟದಲ್ಲೂ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಪರಿಣಾಮ ಒಂದಷ್ಟು ಜನ ನಿಯಮಗಳನ್ನ ಪಾಲಿಸಿ ಹೋಟೆಲ್​ನತ್ತ ಮುಖಮಾಡುತ್ತಿರುವುದರಿಂದಾಗಿ ವ್ಯಾಪಾರ ಕೊಂಚ ಚೇತರಿಕೆ ಕಾಣುತ್ತಿದೆ. ಹೀಗಾಗಿ ಇದೀಗ ಹೋಟೆಲ್ ಮಾಲೀಕರ ಮುಖದಲ್ಲಿ ಅಲ್ಪ ಮಂದಹಾಸ ಮೂಡಿದೆ.

ಗ್ರಾಹಕರಿಂದ ಉತ್ತಮ ಸ್ಪಂದನೆ: ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಪ್ರತಿ ಹೋಟೆಲ್​ನಲ್ಲೂ ಸ್ಯಾನಿಟೈಸರ್​​ ಬಳಕೆ ಹಾಗೂ ಸಾಮಾಜಿಕ ಅಂತರಕ್ಕೆ ಪ್ರತಿ ಟೇಬಲ್​ನಲ್ಲೂ ಇಬ್ಬರಿಗೆ ಮಾತ್ರ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಹೊಟೇಲ್​ಗೆ ಬರುವ ಗ್ರಾಹಕರಿಗೆ ಪ್ರವೇಶಕ್ಕೆ ಮುನ್ನ ಕೈಗೆ ಸ್ಯಾನಿಟೈಸರ್​ ಹಾಕುವುದು ಸೇರಿದಂತೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದೆಲ್ಲದ್ದಕ್ಕೂ ಗ್ರಾಹಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.

ಒಟ್ಟಾರೆಯಾಗಿ ಲಾಕ್​ಡೌನ್​ ಸಂಕಷ್ಟಕ್ಕೆ ತತ್ತರಿಸಿ ಹೋಗಿರುವ ಹೋಟೆಲ್​ ವ್ಯಾಪಾರಿಗಳು ಇವತ್ತು ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ಎಲ್ಲಾ ರೀತಿಯ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದ್ದಾರೆ. ಆದ್ರೂ ಎಲ್ಲೋ ಒಂದೆಡೆ ಭಯ ತುಂಬಿರುವ ಕಣ್ಗಳಲ್ಲಿರುವ ಗ್ರಾಹಕರು ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ. ಎಲ್ಲಿಯವರೆಗೆ ಗ್ರಾಹಕರು ಧೈರ್ಯದಿಂದ ಹೋಟೆಲ್​ನತ್ತ ಬರಲು ಮನಸ್ಸು ಮಾಡುವುದಿಲ್ಲವೋ, ಅಲ್ಲಿಯವರೆಗೆ ಈ ಉದ್ಯಮವನ್ನೇ ನಂಬಿ ಜೀವಿಸುತ್ತಿರುವ ಮಾಲೀಕರು ತಮ್ಮ ಜೀವವನ್ನ ಕೈಯಲ್ಲಿ ಬಿಗಿಯಾಗಿ ಹಿಡಿದಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುವುದಂತೂ ಸುಳ್ಳಲ್ಲಾ.

ಹುಬ್ಬಳ್ಳಿ: ಲಾಕ್​ಡೌನ್​ ಪ್ರಾರಂಭವಾದಾಗಿನಿಂದ ಉದ್ಯಮದ ಎಲ್ಲಾ ಸ್ತರಗಳಿಗೂ ಒಂದಿಲ್ಲೊಂದು ರೀತಿಯ ಸಮಸ್ಯೆ ಉಲ್ಭಣಗೊಂಡು ವಿವಿಧ ರೀತಿಯಲ್ಲಿ ಕಾಡಿದ್ದಂತೂ ಸುಳ್ಳಲ್ಲಾ. ಅದಕ್ಕೆ ಹೋಟೆಲ್​ ಉದ್ಯಮವೂ ಹೊರತಾಗಿಲ್ಲ. ರಾಜ್ಯದಲ್ಲಿ ಹೋಟೆಲ್​ ಉದ್ಯಮವೂ ಕೂಡಾ ಬಳಲಿ ಬೆಂಡಾಗಿದೆ.

ಇದೀಗ ಸರ್ಕಾರ ಅಗತ್ಯ ಪೂರ್ವಾಪರ ತಯಾರಿಯೊಂದಿಗೆ ಕೆಲವೊಂದು ನಿಯಮವನ್ನು ಪಾಲಿಸಿ ಅಂಗಡಿಯನ್ನ ತೆರೆಯುವಂತೆ ಅನುಮತಿಯನ್ನೇನೋ ನೀಡಿದೆ. ಆದ್ರೆ ಎಲ್ಲಾ ನಿಯಮವನ್ನು ಚಾಚೂ ತಪ್ಪದೆ ಪಾಲಿಸಿ ಗ್ರಾಹಕರಿಗಾಗಿ ಕಾದಿದ್ದ ಹೋಟೆಲ್​ ಮಾಲೀಕರು ಅಕ್ಷರಶಃ ಬೇಸರದಲ್ಲಿದ್ದಾರೆ. ಹಾಗಾದ್ರೆ ಇದಕ್ಕೆಲ್ಲಾ ಕಾರಣವೇನು ಅಂತೀರಾ?...

ಕೋಟ್ಯಂತರ ರೂ. ವಹಿವಾಟು ನಷ್ಟ: ಜಿಲ್ಲೆಯಲ್ಲಿ ನೂರಾರು ದೊಡ್ಡ ಹೋಟೆಲ್​ಗಳಂತೆ ಸಣ್ಣ ಸಣ್ಣ ಗೂಡಂಗಡಿಗಳು, ರಸ್ತೆ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸುವವರು ಸೇರಿ ಸಾವಿರಾರು ಹೋಟೆಲ್​ಗಳಿವೆ. ಇವೆಲ್ಲವುಗಳಿಂದ ಪ್ರತಿದಿನವೂ ಕೋಟ್ಯಂತರ ರೂ. ಗಳ ವಹಿವಾಟು ನಡೆಯುತ್ತಿತ್ತು. ಆದ್ರೀಗ ಸರ್ಕಾರದ ಅನುಮತಿಯ ಹೊರತಾಗಿಯೂ ಗ್ರಾಹಕರು ಹೋಟೆಲ್​​ಗಳತ್ತ ಸುಳಿಯದೇ ವ್ಯಾಪಾರ ಸಂಪೂರ್ಣ ಇಳಿಮುಖವಾಗಿದೆ.

ಹೋಟೆಲ್​ ಉದ್ಯಮಕ್ಕೆ ಭಾರೀ ನಷ್ಟ

ಸಾರ್ವಜನಿಕರಲ್ಲಿ ಬೇರೂರಿರುವ ಭಯ: ದೇಶಾದ್ಯಂತ ದಿನೇ ದಿನೇ ಕೊರೊನಾ ತನ್ನ ಅಟ್ಟಹಾಸವನ್ನು ಹೆಚ್ಚಿಸುತ್ತಿರುವುದನ್ನು ಮಾಧ್ಯಮಗಳಲ್ಲಿ ಗಮನಿಸುತ್ತಿರುವ ಗ್ರಾಹಕರು ಮನೆಯಿಂದ ಹೊರ ಬರಲು ಮುಂದಾಗುತ್ತಿಲ್ಲ. ಒಂದು ವೇಳೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಂದಾದರೂ ಕೂಡಾ ನಗರದಲ್ಲಿನ ಹೋಟೆಲ್​ಗಳಲ್ಲಿ ತಿಂಡಿ ತಿನಿಸುಗಳನ್ನು ತಿನ್ನಲು ಸಂಪೂರ್ಣ ಭಯಬೀಳುತ್ತಿದ್ದಾರೆ.

ವ್ಯಾಪಾರದಲ್ಲಿ ಕೊಂಚ ಏರಿಕೆ: ಇತ್ತೀಚಿಗೆ ಆಶಾ ಕಾರ್ಯಕರ್ತೆಯರು ಕೊರೊನಾದ ಕುರಿತು ಸಕ್ರೀಯರಾಗಿದ್ದು, ಇದರ ಬಗ್ಗೆ ಪ್ರತಿ ಗ್ರಾಮೀಣ ಮಟ್ಟದಲ್ಲೂ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಪರಿಣಾಮ ಒಂದಷ್ಟು ಜನ ನಿಯಮಗಳನ್ನ ಪಾಲಿಸಿ ಹೋಟೆಲ್​ನತ್ತ ಮುಖಮಾಡುತ್ತಿರುವುದರಿಂದಾಗಿ ವ್ಯಾಪಾರ ಕೊಂಚ ಚೇತರಿಕೆ ಕಾಣುತ್ತಿದೆ. ಹೀಗಾಗಿ ಇದೀಗ ಹೋಟೆಲ್ ಮಾಲೀಕರ ಮುಖದಲ್ಲಿ ಅಲ್ಪ ಮಂದಹಾಸ ಮೂಡಿದೆ.

ಗ್ರಾಹಕರಿಂದ ಉತ್ತಮ ಸ್ಪಂದನೆ: ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಪ್ರತಿ ಹೋಟೆಲ್​ನಲ್ಲೂ ಸ್ಯಾನಿಟೈಸರ್​​ ಬಳಕೆ ಹಾಗೂ ಸಾಮಾಜಿಕ ಅಂತರಕ್ಕೆ ಪ್ರತಿ ಟೇಬಲ್​ನಲ್ಲೂ ಇಬ್ಬರಿಗೆ ಮಾತ್ರ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಹೊಟೇಲ್​ಗೆ ಬರುವ ಗ್ರಾಹಕರಿಗೆ ಪ್ರವೇಶಕ್ಕೆ ಮುನ್ನ ಕೈಗೆ ಸ್ಯಾನಿಟೈಸರ್​ ಹಾಕುವುದು ಸೇರಿದಂತೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದೆಲ್ಲದ್ದಕ್ಕೂ ಗ್ರಾಹಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.

ಒಟ್ಟಾರೆಯಾಗಿ ಲಾಕ್​ಡೌನ್​ ಸಂಕಷ್ಟಕ್ಕೆ ತತ್ತರಿಸಿ ಹೋಗಿರುವ ಹೋಟೆಲ್​ ವ್ಯಾಪಾರಿಗಳು ಇವತ್ತು ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ಎಲ್ಲಾ ರೀತಿಯ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದ್ದಾರೆ. ಆದ್ರೂ ಎಲ್ಲೋ ಒಂದೆಡೆ ಭಯ ತುಂಬಿರುವ ಕಣ್ಗಳಲ್ಲಿರುವ ಗ್ರಾಹಕರು ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ. ಎಲ್ಲಿಯವರೆಗೆ ಗ್ರಾಹಕರು ಧೈರ್ಯದಿಂದ ಹೋಟೆಲ್​ನತ್ತ ಬರಲು ಮನಸ್ಸು ಮಾಡುವುದಿಲ್ಲವೋ, ಅಲ್ಲಿಯವರೆಗೆ ಈ ಉದ್ಯಮವನ್ನೇ ನಂಬಿ ಜೀವಿಸುತ್ತಿರುವ ಮಾಲೀಕರು ತಮ್ಮ ಜೀವವನ್ನ ಕೈಯಲ್ಲಿ ಬಿಗಿಯಾಗಿ ಹಿಡಿದಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುವುದಂತೂ ಸುಳ್ಳಲ್ಲಾ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.