ಹುಬ್ಬಳ್ಳಿ: ಜಿಪಿಎಸ್ ವ್ಯವಸ್ಥೆ ಕೈ ಬಿಟ್ಟು ನೇರವಾಗಿ ಶೇಂಗಾ ಖರೀದಿಸಿ ಎಂದು ಕುಂದಗೋಳ ಪಟ್ಟಣದ ತಹಶೀಲ್ದಾರ್ ಕಚೇರಿ ಬಾಗಿಲು ಬಂದ್ ಮಾಡಿ, ಜಿಲ್ಲಾ ಕಾಂಗ್ರೆಸ್ ಮುಖಂಡ ಮುತ್ತಣ್ಣ ಶಿವಳ್ಳಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹಶೀಲ್ದಾರರು ರೈತರ ಮನವೂಲಿಸಿ ತಾಲೂಕು ಕಚೇರಿ ಬಾಗಿಲು ತೆರೆಸಿದ್ರು. ನಂತರ ರೈತರ ಸಭೆ ಕರೆದು ಮಾತನಾಡಿ, ನಮ್ಮಲ್ಲಿ ಶೇಂಗಾ ಶೇಖರಿಸಿಡಲು ಗೋಡೌನ್ ಸೌಲಭ್ಯ ಇಲ್ಲ. ಕುಂದಗೋಳದಲ್ಲೇ ಗೋಡೌನ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ರು. ಬೆಳೆ ದರ್ಶಕ ಸರ್ವೆ ಮಾಡಿದ ಅಧಿಕಾರಿ ಮತ್ತು ಕೃಷಿ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿ ಶೀಘ್ರದಲ್ಲೇ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.
ಸರ್ವೇ ಮಾಡುವಾಗ ಸಮಸ್ಯೆ ಆಗಿದ್ದು, ನಿಮ್ಮ ಎಫ್ಐಡಿಯಲ್ಲಿ ಅಧಿಕಾರಿಗಳು ಮಾಡಿದ ಸರ್ವೇ ಅಪ್ಡೇಟ್ ಆಗಿಲ್ಲ. ಈ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆ ಪರಿಶೀಲನೆ ಮಾಡುವೆ ಎಂದರು.