ETV Bharat / bharat

ಪುಟ್ಟ ಮಗುವಿನ ಮೇಲೆ ದಾಳಿ ಮಾಡಿದ ನರಭಕ್ಷಕ ತೋಳ ಕೊಂದು ಹಾಕಿದ ಗ್ರಾಮಸ್ಥರು - Man Eating Wolf

ಉತ್ತರ ಪ್ರದೇಶದ ಬಹ್ರೈಚ್​ನಲ್ಲಿ ನರಭಕ್ಷಕ ತೋಳವನ್ನು ಗ್ರಾಮಸ್ಥರು ಕೊಂದು ಹಾಕಿದ್ದಾರೆ.

author img

By PTI

Published : 2 hours ago

ತೋಳ (ಸಂಗ್ರಹ ಚಿತ್ರ)
ತೋಳ (ಸಂಗ್ರಹ ಚಿತ್ರ) (IANS)

ಬಹ್ರೈಚ್(ಉತ್ತರ ಪ್ರದೇಶ): ರಾಜ್ಯದ ಮಹ್ಸಿ ತಹಸಿಲ್​ನಲ್ಲಿ ಆತಂಕ ಸೃಷ್ಟಿಸಿದ್ದ ಆರು ನರಭಕ್ಷಕ ತೋಳಗಳ ಗುಂಪಿನ ಕೊನೆಯ ತೋಳವನ್ನು ಸ್ಥಳೀಯರು ಜಿಲ್ಲೆಯ ತಮಾಚ್ ಪುರ ಗ್ರಾಮದಲ್ಲಿ ಕೊಂದು ಹಾಕಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ರಾಮ್ ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಕೊಲ್ಲಲ್ಪಟ್ಟ ತೋಳವು ಹೆಣ್ಣು ತೋಳವಾಗಿದ್ದು, ಈ ಹಿಂದೆ ಶಂಕಿಸಿದಂತೆ ಅದು ಕುಂಟ ತೋಳವಲ್ಲ ಎಂದು ಅಧಿಕಾರಿಗಳು ಹೇಳಿದರು. ತೋಳದ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಶನಿವಾರ ತಡರಾತ್ರಿ ಮಹ್ಸಿ ತಹಸಿಲ್​ನ ರಾಮ್ ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ತಮಾಚ್ ಪುರ ಗ್ರಾಮದಲ್ಲಿ ಜನ ತೋಳವನ್ನು ಕೊಂದಿದ್ದಾರೆ ಎಂಬ ಮಾಹಿತಿ ನಮಗೆ ಬಂದಿತ್ತು. ನಾವು ಅಲ್ಲಿಗೆ ತಲುಪಿದಾಗ, ಸತ್ತ ತೋಳ ಮತ್ತು ಮೇಕೆಯ ದೇಹಗಳು ಕಂಡು ಬಂದಿವೆ. ತೋಳದ ದೇಹದ ಮೇಲೆ ಗಾಯದ ಗುರುತುಗಳಿದ್ದು, ರಕ್ತಸ್ರಾವವಾಗುತ್ತಿತ್ತು" ಎಂದು ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ಅಜಿತ್ ಪ್ರತಾಪ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

"ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸತ್ತ ತೋಳವು ವಯಸ್ಕ ಹೆಣ್ಣು ತೋಳವಾಗಿರುವುದು ತಿಳಿದು ಬಂದಿದೆ. ಈ ತೋಳವು ಜನವಸತಿ ಪ್ರದೇಶಕ್ಕೆ ಪ್ರವೇಶಿಸಿ ಮೇಕೆಯೊಂದನ್ನು ಕಚ್ಚಿಕೊಂಡು ಹೋಗುತ್ತಿದ್ದಾಗ ಅದನ್ನು ತಡೆದ ಗ್ರಾಮಸ್ಥರು, ಅದನ್ನು ಸುತ್ತುವರಿದು ಕೊಂದು ಹಾಕಿದ್ದಾರೆ. ಸತ್ತ ತೋಳವನ್ನು ಮರಣೋತ್ತರ ಪರೀಕ್ಷೆಗಾಗಿ ವಲಯ ಕಚೇರಿಗೆ ತರಲಾಗಿದೆ" ಎಂದು ಅವರು ಹೇಳಿದರು.

ಹತ್ಯೆಗೀಡಾದ ಹೆಣ್ಣು ತೋಳ ಕುಂಟವಾಗಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನರಭಕ್ಷಕ ತೋಳಗಳ ಗುಂಪಿನಲ್ಲಿ ಯಾವುದೇ 'ಕುಂಟ ತೋಳ' ಇರಲೇ ಇಲ್ಲ" ಎಂದು ಹೇಳಿದರು.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ತಮಾಚ್ ಪುರ ಗ್ರಾಮಸ್ಥರು, "ಗ್ರಾಮದ ಮನೆಯೊಂದರ ಅಂಗಳದಲ್ಲಿ ತಾಯಿಯ ಪಕ್ಕದಲ್ಲಿ ಮಲಗಿದ್ದ ಚಿಕ್ಕ ಮಗುವಿನ ಮೇಲೆ ತೋಳ ದಾಳಿ ಮಾಡಲು ಪ್ರಯತ್ನಿಸಿತ್ತು. ಆದರೆ ತಾಯಿಯ ಕಿರುಚಾಟವನ್ನು ಕೇಳಿದ ತೋಳ ಓಡಿ ಹೋಗಿ ಮೇಕೆಯ ಮೇಲೆ ದಾಳಿ ಮಾಡಿದೆ. ನಂತರ, ಗ್ರಾಮಸ್ಥರು ತೋಳವನ್ನು ಸುತ್ತುವರಿದು ಹೊಡೆದು ಕೊಂದರು" ಎಂದು ಹೇಳಿದರು.

ಇದಕ್ಕೂ ಮುನ್ನ ಸೆಪ್ಟೆಂಬರ್ 10ರಂದು, ಬಹ್ರೈಚ್​ನ ಮಹ್ಸಿ ತಹಸಿಲ್​ನಲ್ಲಿ 'ಆಪರೇಷನ್ ಭೇಡಿಯಾ' ಕಾರ್ಯಾಚರಣೆ ಭಾಗವಾಗಿ ಐದನೇ ತೋಳವನ್ನು ಸೆರೆಹಿಡಿಯಲಾಯಿತ್ತು. ಜುಲೈ ಮಧ್ಯದಿಂದ ಎಂಟು ಜನರನ್ನು ಕೊಂದು 20ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ಆರು ತೋಳಗಳ ಗುಂಪನ್ನು ಹಿಡಿಯಲು 'ಆಪರೇಷನ್ ಭೇಡಿಯಾ' ಆರಂಭಿಸಲಾಗಿತ್ತು.

ಇದನ್ನೂ ಓದಿ: ಓಪನ್ ಜೀಪ್​ನಲ್ಲಿ ರೀಲ್ಸ್ ವಿಡಿಯೋ: ರಾಜಸ್ಥಾನ ಡಿಸಿಎಂ ಪುತ್ರನಿಗೆ ದಂಡ ಹಾಕಿದ ಸಾರಿಗೆ ಇಲಾಖೆ - DCM Son Fined

ಬಹ್ರೈಚ್(ಉತ್ತರ ಪ್ರದೇಶ): ರಾಜ್ಯದ ಮಹ್ಸಿ ತಹಸಿಲ್​ನಲ್ಲಿ ಆತಂಕ ಸೃಷ್ಟಿಸಿದ್ದ ಆರು ನರಭಕ್ಷಕ ತೋಳಗಳ ಗುಂಪಿನ ಕೊನೆಯ ತೋಳವನ್ನು ಸ್ಥಳೀಯರು ಜಿಲ್ಲೆಯ ತಮಾಚ್ ಪುರ ಗ್ರಾಮದಲ್ಲಿ ಕೊಂದು ಹಾಕಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ರಾಮ್ ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಕೊಲ್ಲಲ್ಪಟ್ಟ ತೋಳವು ಹೆಣ್ಣು ತೋಳವಾಗಿದ್ದು, ಈ ಹಿಂದೆ ಶಂಕಿಸಿದಂತೆ ಅದು ಕುಂಟ ತೋಳವಲ್ಲ ಎಂದು ಅಧಿಕಾರಿಗಳು ಹೇಳಿದರು. ತೋಳದ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಶನಿವಾರ ತಡರಾತ್ರಿ ಮಹ್ಸಿ ತಹಸಿಲ್​ನ ರಾಮ್ ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ತಮಾಚ್ ಪುರ ಗ್ರಾಮದಲ್ಲಿ ಜನ ತೋಳವನ್ನು ಕೊಂದಿದ್ದಾರೆ ಎಂಬ ಮಾಹಿತಿ ನಮಗೆ ಬಂದಿತ್ತು. ನಾವು ಅಲ್ಲಿಗೆ ತಲುಪಿದಾಗ, ಸತ್ತ ತೋಳ ಮತ್ತು ಮೇಕೆಯ ದೇಹಗಳು ಕಂಡು ಬಂದಿವೆ. ತೋಳದ ದೇಹದ ಮೇಲೆ ಗಾಯದ ಗುರುತುಗಳಿದ್ದು, ರಕ್ತಸ್ರಾವವಾಗುತ್ತಿತ್ತು" ಎಂದು ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ಅಜಿತ್ ಪ್ರತಾಪ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

"ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸತ್ತ ತೋಳವು ವಯಸ್ಕ ಹೆಣ್ಣು ತೋಳವಾಗಿರುವುದು ತಿಳಿದು ಬಂದಿದೆ. ಈ ತೋಳವು ಜನವಸತಿ ಪ್ರದೇಶಕ್ಕೆ ಪ್ರವೇಶಿಸಿ ಮೇಕೆಯೊಂದನ್ನು ಕಚ್ಚಿಕೊಂಡು ಹೋಗುತ್ತಿದ್ದಾಗ ಅದನ್ನು ತಡೆದ ಗ್ರಾಮಸ್ಥರು, ಅದನ್ನು ಸುತ್ತುವರಿದು ಕೊಂದು ಹಾಕಿದ್ದಾರೆ. ಸತ್ತ ತೋಳವನ್ನು ಮರಣೋತ್ತರ ಪರೀಕ್ಷೆಗಾಗಿ ವಲಯ ಕಚೇರಿಗೆ ತರಲಾಗಿದೆ" ಎಂದು ಅವರು ಹೇಳಿದರು.

ಹತ್ಯೆಗೀಡಾದ ಹೆಣ್ಣು ತೋಳ ಕುಂಟವಾಗಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನರಭಕ್ಷಕ ತೋಳಗಳ ಗುಂಪಿನಲ್ಲಿ ಯಾವುದೇ 'ಕುಂಟ ತೋಳ' ಇರಲೇ ಇಲ್ಲ" ಎಂದು ಹೇಳಿದರು.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ತಮಾಚ್ ಪುರ ಗ್ರಾಮಸ್ಥರು, "ಗ್ರಾಮದ ಮನೆಯೊಂದರ ಅಂಗಳದಲ್ಲಿ ತಾಯಿಯ ಪಕ್ಕದಲ್ಲಿ ಮಲಗಿದ್ದ ಚಿಕ್ಕ ಮಗುವಿನ ಮೇಲೆ ತೋಳ ದಾಳಿ ಮಾಡಲು ಪ್ರಯತ್ನಿಸಿತ್ತು. ಆದರೆ ತಾಯಿಯ ಕಿರುಚಾಟವನ್ನು ಕೇಳಿದ ತೋಳ ಓಡಿ ಹೋಗಿ ಮೇಕೆಯ ಮೇಲೆ ದಾಳಿ ಮಾಡಿದೆ. ನಂತರ, ಗ್ರಾಮಸ್ಥರು ತೋಳವನ್ನು ಸುತ್ತುವರಿದು ಹೊಡೆದು ಕೊಂದರು" ಎಂದು ಹೇಳಿದರು.

ಇದಕ್ಕೂ ಮುನ್ನ ಸೆಪ್ಟೆಂಬರ್ 10ರಂದು, ಬಹ್ರೈಚ್​ನ ಮಹ್ಸಿ ತಹಸಿಲ್​ನಲ್ಲಿ 'ಆಪರೇಷನ್ ಭೇಡಿಯಾ' ಕಾರ್ಯಾಚರಣೆ ಭಾಗವಾಗಿ ಐದನೇ ತೋಳವನ್ನು ಸೆರೆಹಿಡಿಯಲಾಯಿತ್ತು. ಜುಲೈ ಮಧ್ಯದಿಂದ ಎಂಟು ಜನರನ್ನು ಕೊಂದು 20ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ಆರು ತೋಳಗಳ ಗುಂಪನ್ನು ಹಿಡಿಯಲು 'ಆಪರೇಷನ್ ಭೇಡಿಯಾ' ಆರಂಭಿಸಲಾಗಿತ್ತು.

ಇದನ್ನೂ ಓದಿ: ಓಪನ್ ಜೀಪ್​ನಲ್ಲಿ ರೀಲ್ಸ್ ವಿಡಿಯೋ: ರಾಜಸ್ಥಾನ ಡಿಸಿಎಂ ಪುತ್ರನಿಗೆ ದಂಡ ಹಾಕಿದ ಸಾರಿಗೆ ಇಲಾಖೆ - DCM Son Fined

ETV Bharat Logo

Copyright © 2024 Ushodaya Enterprises Pvt. Ltd., All Rights Reserved.