ಧಾರವಾಡ: ನವಲಗುಂದ ತಾಲೂಕಿನಲ್ಲಿ ಹತ್ತಿ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಮಹದಾಯಿ ಹೋರಾಟಗಾರರು ಜಿಲ್ಲಾ ಉಸ್ತುವಾರಿ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು.
ರೈತ ಹೋರಾಟಗಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಮನವಿ ಸಲ್ಲಿಸಿದರು. ಈಗ ಕಷ್ಟದ ಸಮಯವಿದೆ. ದಯವಿಟ್ಟು ರೈತರ ನೆರವಿಗೆ ಧಾವಿಸಿ ಎಂದು ಕೇಳಿಕೊಂಡಿದ್ದಾರೆ.
ಈಗಾಗಲೇ ಲಾಕ್ಡೌನ್ ಹಿನ್ನೆಲೆ ರೈತರ ಸಾಕಷ್ಟು ಬೆಳೆಗಳು ಹಾಳಾಗಿವೆ. ಅದೇ ರೀತಿ ಹತ್ತಿ ಕೂಡಾ ಹಾಳಾಗುತ್ತಿದೆ. ಇದರಿಂದ ಬೇಗನೆ ಹತ್ತಿ ಖರೀದಿ ಕೇಂದ್ರ ಸ್ಥಾಪನೆ ಮಾಡುವಂತೆ ಒತ್ತಾಯಿಸಿದರು.