ETV Bharat / state

ಜಗದ್ಗುರು ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ದಿಂಗಾಲೇಶ್ವರ ಸ್ವಾಮೀಜಿ

author img

By

Published : Feb 20, 2020, 4:20 PM IST

ಮೂರುಸಾವಿರ ಮಠಕ್ಕೆ ಅನ್ಯಾಯ, ದ್ರೋಹ ಮಾಡಿ ಅದೇನಾದ್ರೂ ಸಾಬೀತಾದ್ರೆ ನಾನು ಕತೃ ಗದ್ದುಗೆ ಪಕ್ಕದಲ್ಲಿ ಪ್ರಾಣ ಬಿಡಲು ತಯಾರಿದ್ದೇನೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

Dingaleshwara Sri
ದಿಂಗಾಲೇಶ್ವರ ಸ್ವಾಮೀಜಿ

ಧಾರವಾಡ: ಜಗದ್ಗುರುಗಳು ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೆಲವು ಜನರು ನನ್ನ ಮತ್ತು ಗುರುಗಳ ಸಂಬಂಧವನ್ನು ಕೆಡಿಸುವ ಹುನ್ನಾರ ನಡೆಸಿದ್ದಾರೆ.‌ ನಾವು ಗುರು-ಶಿಷ್ಯರು, ತಂದೆ ಮಕ್ಕಳಂತೆ ಇದ್ದೇವೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಧಾರವಾಡದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ‌ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ

ಧಾರವಾಡದ ಲಿಂಗಾಯತ ಭವನದಲ್ಲಿ ಭಕ್ತರು ಹಾಗೂ ಮುಖಂಡರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರ ಹಿಂದೆ ರಾಜಕೀಯ ಆಟ ನಡೆಯುತ್ತಿದೆ. ನಾನು ಮಠದಲ್ಲಿ ರಾಜಕೀಯ ಬರುವಂತೆ ಮಾಡಿದವನಲ್ಲ. ನನ್ನ ವಿರೋಧ ಮಾಡುವುದಕ್ಕಾಗಿಯೇ ಇದೆಲ್ಲಾ ನಡೆದಿದೆ. ಅಲ್ಲದೇ 23ನೇ ತಾರೀಖಿನಂದು ಎಲ್ಲದಕ್ಕೂ ಉತ್ತರಿಸುತ್ತೇನೆ ಎಂದರು.

ಬೇರೆಯವರು ಹೇಳುವ ಮಾತಿನ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾರದೇ ಪ್ರಶ್ನೆಗೆ ನಾನು ಉತ್ತರಿಸುವ ಅಗತ್ಯ ಇಲ್ಲ. ನಾನು ಮಠದ ಅಧಿಕಾರ ತೆಗೆದುಕೊಳ್ಳಲು ಬರುತ್ತಿಲ್ಲ. ನಾನು ಬರಬೇಕು ಎನ್ನುವುದು ಮಠದ ಭಕ್ತರ ಆಸೆಗೆ ಎಂದರು.

ಮೂರುಸಾವಿರ ಮಠಕ್ಕೆ ಅನ್ಯಾಯ, ದ್ರೋಹ ಮಾಡಿ ಅದೇನಾದ್ರೂ ಸಾಬೀತಾದ್ರೆ ನಾನು ಕತೃ ಗದ್ದುಗೆ ಪಕ್ಕದಲ್ಲಿ ಪ್ರಾಣ ಬಿಡಲು ತಯಾರಿದ್ದೇನೆ. ಒಂದು ವೇಳೆ ನಾನು ಈ ಮಠದ ಪೀಠಾಧಿಕಾರಿಯಾಗಿ ನೇಮಕವಾದ್ರೆ ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು‌ ಭರವಸೆ ನೀಡಿದರು.

ಧಾರವಾಡ: ಜಗದ್ಗುರುಗಳು ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೆಲವು ಜನರು ನನ್ನ ಮತ್ತು ಗುರುಗಳ ಸಂಬಂಧವನ್ನು ಕೆಡಿಸುವ ಹುನ್ನಾರ ನಡೆಸಿದ್ದಾರೆ.‌ ನಾವು ಗುರು-ಶಿಷ್ಯರು, ತಂದೆ ಮಕ್ಕಳಂತೆ ಇದ್ದೇವೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಧಾರವಾಡದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ‌ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ

ಧಾರವಾಡದ ಲಿಂಗಾಯತ ಭವನದಲ್ಲಿ ಭಕ್ತರು ಹಾಗೂ ಮುಖಂಡರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರ ಹಿಂದೆ ರಾಜಕೀಯ ಆಟ ನಡೆಯುತ್ತಿದೆ. ನಾನು ಮಠದಲ್ಲಿ ರಾಜಕೀಯ ಬರುವಂತೆ ಮಾಡಿದವನಲ್ಲ. ನನ್ನ ವಿರೋಧ ಮಾಡುವುದಕ್ಕಾಗಿಯೇ ಇದೆಲ್ಲಾ ನಡೆದಿದೆ. ಅಲ್ಲದೇ 23ನೇ ತಾರೀಖಿನಂದು ಎಲ್ಲದಕ್ಕೂ ಉತ್ತರಿಸುತ್ತೇನೆ ಎಂದರು.

ಬೇರೆಯವರು ಹೇಳುವ ಮಾತಿನ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾರದೇ ಪ್ರಶ್ನೆಗೆ ನಾನು ಉತ್ತರಿಸುವ ಅಗತ್ಯ ಇಲ್ಲ. ನಾನು ಮಠದ ಅಧಿಕಾರ ತೆಗೆದುಕೊಳ್ಳಲು ಬರುತ್ತಿಲ್ಲ. ನಾನು ಬರಬೇಕು ಎನ್ನುವುದು ಮಠದ ಭಕ್ತರ ಆಸೆಗೆ ಎಂದರು.

ಮೂರುಸಾವಿರ ಮಠಕ್ಕೆ ಅನ್ಯಾಯ, ದ್ರೋಹ ಮಾಡಿ ಅದೇನಾದ್ರೂ ಸಾಬೀತಾದ್ರೆ ನಾನು ಕತೃ ಗದ್ದುಗೆ ಪಕ್ಕದಲ್ಲಿ ಪ್ರಾಣ ಬಿಡಲು ತಯಾರಿದ್ದೇನೆ. ಒಂದು ವೇಳೆ ನಾನು ಈ ಮಠದ ಪೀಠಾಧಿಕಾರಿಯಾಗಿ ನೇಮಕವಾದ್ರೆ ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು‌ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.