ETV Bharat / state

ಪೇಡಾ ಊರಿನ ಸಿಂಗರ್​ ಬಿಗ್​ಬಾಸ್​ಗೆ ಎಂಟ್ರಿ: 'ವಿಶ್ವ' ಗೆಲ್ಲುವಂತೆ ಪೋಷಕರ ಹಾರೈಕೆ

author img

By

Published : Mar 11, 2021, 9:28 AM IST

ಧಾರವಾಡದ ವಿಶ್ವನಾಥ ಹಾವೇರಿ ಈಗ ಬಿಗ್​ಬಾಸ್ ಸ್ಪರ್ಧಿಯಾಗಿ ಜಿಲ್ಲೆಯನ್ನು ಪ್ರತಿನಿಧಿಸಿದ್ದಾನೆ. ಉತ್ತರ ಕರ್ನಾಟಕ ಭಾಗದ ಏಕೈಕ ಹುಡುಗ ಬಿಗ್​ಬಾಸ್ ಸೀಸನ್ ಎಂಟರ ಸ್ಪರ್ಧಿಯಾಗಿದ್ದಾರೆ.

dharwad
ವಿಶ್ವನಾಥ್​ ಕುಟುಂಬ

ಧಾರವಾಡ: ದೊಡ್ಡ ದೊಡ್ಡ ಕನಸು ಹೊಂದಿದ ಹಾಡುಗಾರ ಧಾರವಾಡದ ಯುವ ಗಾಯಕನೊಬ್ಬ ಇದೀಗ ಬಿಗ್​ಬಾಸ್ ಸೀಸನ್ ಎಂಟರ ಸ್ಪರ್ಧಿಯಾಗಿ ಆಯ್ಕೆಗೊಂಡಿರುವುದಕ್ಕೆ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಧಾರವಾಡದ ವಿಶ್ವನಾಥ ಹಾವೇರಿ ಈಗ ಬಿಗ್​ಬಾಸ್ ಸ್ಪರ್ಧಿಯಾಗಿ ಜಿಲ್ಲೆಯನ್ನು ಪ್ರತಿನಿಧಿಸಿದ್ದಾನೆ. ಉತ್ತರ ಕರ್ನಾಟಕ ಭಾಗದ ಏಕೈಕ ಹುಡುಗ ಬಿಗ್​ಬಾಸ್ ಸೀಸನ್ ಎಂಟರ ಸ್ಪರ್ಧಿಯಾಗಿದ್ದಾರೆ. ನಗರದ ಕೊಪ್ಪದಕೇರಿಯ ನಿವಾಸಿ ವಿಶ್ವನಾಥ ಹಾವೇರಿ ಪಾಲಕರು ಸಂತಸ ವ್ಯಕ್ತಪಡಿಸದ್ದಾರೆ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಲಿಯುತ್ತಿರುವ ವಿಶ್ವನಾಥ್​ ಹಾಡುಗಾರಿಕೆಯಲ್ಲಿ ಎತ್ತಿದ ಕೈ. ಸ್ಟಾರ್​ಗಳ ಮಧ್ಯೆ ಸ್ಟಾರ್ ಆಗಿ ಬಿಗ್​ಬಾಸ್ ಆಟದಲ್ಲಿ ಬ್ಯುಸಿ ಆಗಿರುವ ವಿಶ್ವನಾಥ ಹಾವೇರಿ ಕುರಿತು ಅವರ ಮನೆ ಸದಸ್ಯರು ಖುಷಿ ಹಂಚಿಕೊಂಡಿದ್ದಾರೆ.

2012 ಜೀ ಕನ್ನಡ ಸರಿಗಮಪ, ಕನ್ನಡದ ಹಾಡು ಕರ್ನಾಟಕ ಸೇರಿದಂತೆ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. ಟಿವಿ ಸ್ಕ್ರೀನ್ ಮೇಲೆ ಮಗನನ್ನು ನೋಡಿ ಇದೀಗ ತಂದೆ ತಾಯಿ ಖುಷಿಪಡುವಂತಾಗಿದೆ.

ಬಿಗ್​ಬಾಸ್ ಆಟದಲ್ಲಿ ವಿಶ್ವನಾಥ್​ ಚೆನ್ನಾಗಿ ಆಟ ಆಡುತ್ತಾ ಗೆದ್ದು ಬರಲಿ. ಅವನಿಗೆ ಉತ್ತರ ಕರ್ನಾಟಕ ಭಾಗದ ಎಲ್ಲ ಜನ ಕೈ ಹಿಡಿದು ನಡೆಸಬೇಕು ಎಂದು ಅವರ ತಂದೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಧಾರವಾಡ: ದೊಡ್ಡ ದೊಡ್ಡ ಕನಸು ಹೊಂದಿದ ಹಾಡುಗಾರ ಧಾರವಾಡದ ಯುವ ಗಾಯಕನೊಬ್ಬ ಇದೀಗ ಬಿಗ್​ಬಾಸ್ ಸೀಸನ್ ಎಂಟರ ಸ್ಪರ್ಧಿಯಾಗಿ ಆಯ್ಕೆಗೊಂಡಿರುವುದಕ್ಕೆ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಧಾರವಾಡದ ವಿಶ್ವನಾಥ ಹಾವೇರಿ ಈಗ ಬಿಗ್​ಬಾಸ್ ಸ್ಪರ್ಧಿಯಾಗಿ ಜಿಲ್ಲೆಯನ್ನು ಪ್ರತಿನಿಧಿಸಿದ್ದಾನೆ. ಉತ್ತರ ಕರ್ನಾಟಕ ಭಾಗದ ಏಕೈಕ ಹುಡುಗ ಬಿಗ್​ಬಾಸ್ ಸೀಸನ್ ಎಂಟರ ಸ್ಪರ್ಧಿಯಾಗಿದ್ದಾರೆ. ನಗರದ ಕೊಪ್ಪದಕೇರಿಯ ನಿವಾಸಿ ವಿಶ್ವನಾಥ ಹಾವೇರಿ ಪಾಲಕರು ಸಂತಸ ವ್ಯಕ್ತಪಡಿಸದ್ದಾರೆ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಲಿಯುತ್ತಿರುವ ವಿಶ್ವನಾಥ್​ ಹಾಡುಗಾರಿಕೆಯಲ್ಲಿ ಎತ್ತಿದ ಕೈ. ಸ್ಟಾರ್​ಗಳ ಮಧ್ಯೆ ಸ್ಟಾರ್ ಆಗಿ ಬಿಗ್​ಬಾಸ್ ಆಟದಲ್ಲಿ ಬ್ಯುಸಿ ಆಗಿರುವ ವಿಶ್ವನಾಥ ಹಾವೇರಿ ಕುರಿತು ಅವರ ಮನೆ ಸದಸ್ಯರು ಖುಷಿ ಹಂಚಿಕೊಂಡಿದ್ದಾರೆ.

2012 ಜೀ ಕನ್ನಡ ಸರಿಗಮಪ, ಕನ್ನಡದ ಹಾಡು ಕರ್ನಾಟಕ ಸೇರಿದಂತೆ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. ಟಿವಿ ಸ್ಕ್ರೀನ್ ಮೇಲೆ ಮಗನನ್ನು ನೋಡಿ ಇದೀಗ ತಂದೆ ತಾಯಿ ಖುಷಿಪಡುವಂತಾಗಿದೆ.

ಬಿಗ್​ಬಾಸ್ ಆಟದಲ್ಲಿ ವಿಶ್ವನಾಥ್​ ಚೆನ್ನಾಗಿ ಆಟ ಆಡುತ್ತಾ ಗೆದ್ದು ಬರಲಿ. ಅವನಿಗೆ ಉತ್ತರ ಕರ್ನಾಟಕ ಭಾಗದ ಎಲ್ಲ ಜನ ಕೈ ಹಿಡಿದು ನಡೆಸಬೇಕು ಎಂದು ಅವರ ತಂದೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.