ETV Bharat / state

ಮೆಣಸಿನಕಾಯಿಗೆ ಉತ್ತಮ ಬೆಲೆ.. ಕೈ ತುಂಬಾ ಆದಾಯ ಗಳಿಸುತ್ತಿರುವ ಧಾರವಾಡದ ರೈತ ಮಹಿಳೆ

author img

By

Published : Jul 17, 2023, 2:17 PM IST

Updated : Jul 17, 2023, 6:07 PM IST

ಕಮಲಾಪುರದ ಶಕುಂತಲಾ ಬಾಳಗಿ ಎಂಬ ರೈತ ಮಹಿಳೆ ಒಂದು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದು ಕೈ ತುಂಬಾ ಆದಾಯ ಗಳಿಸುತ್ತಿದ್ದಾರೆ.

Dharwad
ಮೆಣಸಿನಕಾಯಿ ಬೆಳೆದು ಆದಾಯ ಗಳಿಸುತ್ತಿರುವ ಧಾರವಾಡದ ರೈತ ಮಹಿಳೆ
ಮೆಣಸಿನಕಾಯಿ ಬೆಳೆದು ಆದಾಯ ಗಳಿಸುತ್ತಿರುವ ಧಾರವಾಡದ ರೈತ ಮಹಿಳೆ

ಧಾರವಾಡ: ಮಳೆ ಕೈಕೊಟ್ಟ ಹಿನ್ನೆಲೆ ಸಂಕಷ್ಟ ಅನುಭವಿಸುತ್ತಿರುವ ರೈತರು ಪರ್ಯಾಯ ಮಾರ್ಗಗಳತ್ತ ಗಮನ ಹರಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎಂಬುದನ್ನು ಈ ಯುವ ರೈತ ಮಹಿಳೆ ಸಾಬೀತುಪಡಿಸಿದ್ದಾರೆ.

ಹೌದು, ಪ್ರಸ್ತುತ ವರ್ಷ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ನೀರಾವರಿ ಮೂಲಕ ಹಸಿ ಮೆಣಸಿನಕಾಯಿ ಬೆಳೆದು ರೈತ ಮಹಿಳೆಯೋರ್ವರು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಗಿಡದ ತುಂಬ ಗೊಂಚಲು ಗೊಂಚಲು ಹಚ್ಚ ಹಸುರಿನ ಮೆಣಸಿನಕಾಯಿ. ಬಿಡುವಿಲ್ಲದೇ ಕಟಾವು ಮಾಡುತ್ತಿರುವ ರೈತ ಮಹಿಳೆಯರು.. ಈ ದೃಶ್ಯಗಳು ಕಂಡು ಬಂದದ್ದು ಧಾರವಾಡದ ಹೊರವಲಯದ ಜಮೀನಿನಲ್ಲಿ.

ಜಿಲ್ಲೆಯ ಕಮಲಾಪುರದ ಶಕುಂತಲಾ ಬಾಳಗಿ ಎಂಬ ರೈತ ಮಹಿಳೆ ಕೇವಲ ಒಂದು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದು ಇದೀಗ ಕೈತುಂಬ ಆದಾಯ ಗಳಿಸುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಟೊಮೆಟೊಗೆ ಚಿನ್ನದ ಬೆಲೆ ಇದೆ. ಇದರ ಬೆನ್ನಲ್ಲೇ ಮೆಣಸಿನಕಾಯಿಗೂ ಉತ್ತಮ ದರ ಸಿಗುತ್ತಿದೆ. ಪ್ರತಿ ಕ್ವಿಂಟಾಲ್ ಹಸಿ ಮೆಣಸಿನಕಾಯಿಗೆ ಇದೀಗ ಮಾರುಕಟ್ಟೆಯಲ್ಲಿ 5 ರಿಂದ 6 ಸಾವಿರ ರೂ. ಬೆಲೆ ಇದೆ. ಮಳೆ ಇಲ್ಲದ ಸಂದರ್ಭದಲ್ಲೂ ನೀರಾವರಿ ಬಳಕೆ ಮಾಡಿ ಈ ರೈತ ಮಹಿಳೆ ಭರಪೂರ ಮೆಣಸಿನಕಾಯಿ ಬೆಳೆ ಬೆಳೆದು ಅಧಿಕ ಲಾಭ ಗಳಿಸಿದ್ದಾರೆ.

ಪ್ರಸಕ್ತ ವರ್ಷ ಮಳೆ ರೈತನಿಗೆ ಮೋಸ ಮಾಡಿದೆ. ಮಳೆ ಇಲ್ಲದೇ ರೈತ ಹೊಲ ಬಿಟ್ಟು ಅಜ್ಞಾತವಾಸ ಅನುಭವಿಸುವಂತಾಗಿದೆ. ಹಾಗಂತ ನೀರಾವರಿ ಜಮೀನು ಇರುವ ರೈತರು ಕೈಕಟ್ಟಿ ಕುಳಿತುಕೊಂಡಿಲ್ಲ. ಮಳೆ ಆದರೂ ಸರಿ, ಆಗದಿದ್ದರೂ ಸರಿ, ಈ ನಾಡಿಗೆ ಅನ್ನ ನೀಡಬೇಕಾದವನು ರೈತ. ಹೀಗಾಗಿ ನೀರಾವರಿ ಜಮೀನು ಇರುವ ರೈತ ಅನೇಕ ಬೆಳೆಗಳನ್ನು ಬೆಳೆದಿದ್ದಾರೆ. ಅದರಲ್ಲೂ ಈ ಕೃಷಿ ಮಹಿಳೆ ಕೇವಲ ಒಂದು ಎಕರೆ ಜಮೀನಿನಲ್ಲಿ ಭರಪೂರ ಮೆಣಸಿನಕಾಯಿ ಬೆಳೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ರೈತ ಮಹಿಳೆ ಶಕುಂತಲಾ ಬಾಳಗಿ "ಒಂದು ಎಕರೆ ಜಮೀನಿನಲ್ಲಿ ಪ್ರತಿ ವರ್ಷ ಮೆಣಸಿನಕಾಯಿ ಬೆಳೆಯುತ್ತೇವೆ. ಆದರೆ ಸೂಕ್ತ ಬೆಲೆ ಸಿಗುತ್ತಿರಲಿಲ್ಲಿ. ಈ ಬಾರಿ ಉತ್ತಮ ದರ ಇರುವುದರಿಂದ ಹೆಚ್ಚು ಆದಾಯ ಗಳಿಸಲು ಸಾಧ್ಯವಾಗಿದೆ. ಈಗ 2ನೇ ಬಾರಿ ಕಟಾವು ಮಾಡುತ್ತಿದ್ದೇವೆ. 12 ರಿಂದ 15 ದಿನಗಳಿಗೊಮ್ಮೆ ಕಟಾವು ಮಾಡುತ್ತೇವೆ. 8 ರಿಂದ 10 ಬಾರಿ ಇಳುವರಿ ಸಿಗುತ್ತದೆ. ಸದ್ಯ ಕ್ವಿಂಟಾಲ್ ಗೆ 6 ರಿಂದ 7 ಸಾವಿರ ಹಣ ಪಡೆಯುತ್ತಿದ್ದು, ಒಂದು ಲಕ್ಷಕ್ಕೂ ಅಧಿಕ ಲಾಭ ಸಿಕ್ಕಿದೆ" ಎಂದು ಸಂತಸ ಹಂಚಿಕೊಂಡರು.

ಹೆಚ್ಚಾಗಿ ಮಳೆಯ ಅವಶ್ಯಕತೆ ಇಲ್ಲದ ಈ ಬೆಳೆಗೆ ನಾಟಿ ಮಾಡುವ ಮೊದಲೇ ಹೊಲವನ್ನು ಹಸಿಯಾಗಿಟ್ಟು ನಾಟಿ ಮಾಡಲಾಗುತ್ತದೆ. ಹೀಗಾಗಿ ಆಗಾಗ ನೀರುಣಿಸಿದರೆ ಸಾಕು. ಉತ್ತಮ ಬೆಳೆ ಬರೋಕೆ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಇದನ್ನು ಓದಿ: ಧಾರವಾಡ: 1 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು ₹3 ಲಕ್ಷ ಆದಾಯ ಗಳಿಸಿದ ರೈತ

ಮೆಣಸಿನಕಾಯಿ ಬೆಳೆದು ಆದಾಯ ಗಳಿಸುತ್ತಿರುವ ಧಾರವಾಡದ ರೈತ ಮಹಿಳೆ

ಧಾರವಾಡ: ಮಳೆ ಕೈಕೊಟ್ಟ ಹಿನ್ನೆಲೆ ಸಂಕಷ್ಟ ಅನುಭವಿಸುತ್ತಿರುವ ರೈತರು ಪರ್ಯಾಯ ಮಾರ್ಗಗಳತ್ತ ಗಮನ ಹರಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎಂಬುದನ್ನು ಈ ಯುವ ರೈತ ಮಹಿಳೆ ಸಾಬೀತುಪಡಿಸಿದ್ದಾರೆ.

ಹೌದು, ಪ್ರಸ್ತುತ ವರ್ಷ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ನೀರಾವರಿ ಮೂಲಕ ಹಸಿ ಮೆಣಸಿನಕಾಯಿ ಬೆಳೆದು ರೈತ ಮಹಿಳೆಯೋರ್ವರು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಗಿಡದ ತುಂಬ ಗೊಂಚಲು ಗೊಂಚಲು ಹಚ್ಚ ಹಸುರಿನ ಮೆಣಸಿನಕಾಯಿ. ಬಿಡುವಿಲ್ಲದೇ ಕಟಾವು ಮಾಡುತ್ತಿರುವ ರೈತ ಮಹಿಳೆಯರು.. ಈ ದೃಶ್ಯಗಳು ಕಂಡು ಬಂದದ್ದು ಧಾರವಾಡದ ಹೊರವಲಯದ ಜಮೀನಿನಲ್ಲಿ.

ಜಿಲ್ಲೆಯ ಕಮಲಾಪುರದ ಶಕುಂತಲಾ ಬಾಳಗಿ ಎಂಬ ರೈತ ಮಹಿಳೆ ಕೇವಲ ಒಂದು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದು ಇದೀಗ ಕೈತುಂಬ ಆದಾಯ ಗಳಿಸುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಟೊಮೆಟೊಗೆ ಚಿನ್ನದ ಬೆಲೆ ಇದೆ. ಇದರ ಬೆನ್ನಲ್ಲೇ ಮೆಣಸಿನಕಾಯಿಗೂ ಉತ್ತಮ ದರ ಸಿಗುತ್ತಿದೆ. ಪ್ರತಿ ಕ್ವಿಂಟಾಲ್ ಹಸಿ ಮೆಣಸಿನಕಾಯಿಗೆ ಇದೀಗ ಮಾರುಕಟ್ಟೆಯಲ್ಲಿ 5 ರಿಂದ 6 ಸಾವಿರ ರೂ. ಬೆಲೆ ಇದೆ. ಮಳೆ ಇಲ್ಲದ ಸಂದರ್ಭದಲ್ಲೂ ನೀರಾವರಿ ಬಳಕೆ ಮಾಡಿ ಈ ರೈತ ಮಹಿಳೆ ಭರಪೂರ ಮೆಣಸಿನಕಾಯಿ ಬೆಳೆ ಬೆಳೆದು ಅಧಿಕ ಲಾಭ ಗಳಿಸಿದ್ದಾರೆ.

ಪ್ರಸಕ್ತ ವರ್ಷ ಮಳೆ ರೈತನಿಗೆ ಮೋಸ ಮಾಡಿದೆ. ಮಳೆ ಇಲ್ಲದೇ ರೈತ ಹೊಲ ಬಿಟ್ಟು ಅಜ್ಞಾತವಾಸ ಅನುಭವಿಸುವಂತಾಗಿದೆ. ಹಾಗಂತ ನೀರಾವರಿ ಜಮೀನು ಇರುವ ರೈತರು ಕೈಕಟ್ಟಿ ಕುಳಿತುಕೊಂಡಿಲ್ಲ. ಮಳೆ ಆದರೂ ಸರಿ, ಆಗದಿದ್ದರೂ ಸರಿ, ಈ ನಾಡಿಗೆ ಅನ್ನ ನೀಡಬೇಕಾದವನು ರೈತ. ಹೀಗಾಗಿ ನೀರಾವರಿ ಜಮೀನು ಇರುವ ರೈತ ಅನೇಕ ಬೆಳೆಗಳನ್ನು ಬೆಳೆದಿದ್ದಾರೆ. ಅದರಲ್ಲೂ ಈ ಕೃಷಿ ಮಹಿಳೆ ಕೇವಲ ಒಂದು ಎಕರೆ ಜಮೀನಿನಲ್ಲಿ ಭರಪೂರ ಮೆಣಸಿನಕಾಯಿ ಬೆಳೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ರೈತ ಮಹಿಳೆ ಶಕುಂತಲಾ ಬಾಳಗಿ "ಒಂದು ಎಕರೆ ಜಮೀನಿನಲ್ಲಿ ಪ್ರತಿ ವರ್ಷ ಮೆಣಸಿನಕಾಯಿ ಬೆಳೆಯುತ್ತೇವೆ. ಆದರೆ ಸೂಕ್ತ ಬೆಲೆ ಸಿಗುತ್ತಿರಲಿಲ್ಲಿ. ಈ ಬಾರಿ ಉತ್ತಮ ದರ ಇರುವುದರಿಂದ ಹೆಚ್ಚು ಆದಾಯ ಗಳಿಸಲು ಸಾಧ್ಯವಾಗಿದೆ. ಈಗ 2ನೇ ಬಾರಿ ಕಟಾವು ಮಾಡುತ್ತಿದ್ದೇವೆ. 12 ರಿಂದ 15 ದಿನಗಳಿಗೊಮ್ಮೆ ಕಟಾವು ಮಾಡುತ್ತೇವೆ. 8 ರಿಂದ 10 ಬಾರಿ ಇಳುವರಿ ಸಿಗುತ್ತದೆ. ಸದ್ಯ ಕ್ವಿಂಟಾಲ್ ಗೆ 6 ರಿಂದ 7 ಸಾವಿರ ಹಣ ಪಡೆಯುತ್ತಿದ್ದು, ಒಂದು ಲಕ್ಷಕ್ಕೂ ಅಧಿಕ ಲಾಭ ಸಿಕ್ಕಿದೆ" ಎಂದು ಸಂತಸ ಹಂಚಿಕೊಂಡರು.

ಹೆಚ್ಚಾಗಿ ಮಳೆಯ ಅವಶ್ಯಕತೆ ಇಲ್ಲದ ಈ ಬೆಳೆಗೆ ನಾಟಿ ಮಾಡುವ ಮೊದಲೇ ಹೊಲವನ್ನು ಹಸಿಯಾಗಿಟ್ಟು ನಾಟಿ ಮಾಡಲಾಗುತ್ತದೆ. ಹೀಗಾಗಿ ಆಗಾಗ ನೀರುಣಿಸಿದರೆ ಸಾಕು. ಉತ್ತಮ ಬೆಳೆ ಬರೋಕೆ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಇದನ್ನು ಓದಿ: ಧಾರವಾಡ: 1 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು ₹3 ಲಕ್ಷ ಆದಾಯ ಗಳಿಸಿದ ರೈತ

Last Updated : Jul 17, 2023, 6:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.