ETV Bharat / state

ಕಿರುಚಿತ್ರದ ಮೂಲಕ ಕೊರೊನಾ ವಾರಿಯರ್ಸ್​​ಗೆ ಕೃತಜ್ಞತೆ: ಪೇಡಾ ನಗರಿ ಹುಡುಗರ ಕಾರ್ಯಕ್ಕೆ ಶ್ಲಾಘನೆ..! - ಕಿರುಚಿತ್ರದ ಕೊರೊನಾ ವಾರಿಯರ್ಸ್​​ಗೆ ಕೃತಜ್ಞತೆ

ಕೊರೊನಾ ವಾರಿಯರ್ಸ್ ಕೆಲಸದ ಚಿತ್ರಣವನ್ನು ಸೆರೆ ಹಿಡಿದಿರುವ ಧಾರವಾಡದ ಹುಡುಗರು, ಕಿರುಚಿತ್ರದ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

corona warriors short film in dharwad
ಕಿರುಚಿತ್ರದ ಮೂಲಕ ಕೊರೊನಾ ವಾರಿಯರ್ಸ್​​ಗೆ ಕೃತಜ್ಞತೆ
author img

By

Published : Jun 11, 2020, 10:02 PM IST

ಧಾರವಾಡ: ಕೊರೊನಾ ವೈರಸ್ ಭೀತಿಯಿಂದ ಲಾಕ್​ಡೌನ್​​​ ಆದ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿ, ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದವರಿಗೆ ಧಾರವಾಡದ ಯುವಕರು ಕಿರುಚಿತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸಿದ ಪೌರ ಕಾರ್ಮಿಕರು, ವೈದ್ಯಕೀಯ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು, ಮಾಧ್ಯಮ ಮತ್ತು ಪತ್ರಿಕಾರಂಗದವರ ಅವಿರತ ಸೇವೆಗೆ ಕಿರುಚಿತ್ರ ಸಮರ್ಪಿಸಿದ್ದಾರೆ.

ಕಿರುಚಿತ್ರದ ಮೂಲಕ ಕೊರೊನಾ ವಾರಿಯರ್ಸ್​​ಗೆ ಕೃತಜ್ಞತೆ

ಧಾರವಾಡದ ವಿಜೇತ ಕುಮಾರ ಹೊಸಮಠ, ಗಣೇಶ ಪಾಟೀಲ್ ಹಾಗೂ ಪ್ರಶಾಂತ ಬಡಿಗೇರ ಎಂಬ ಯುವಕರು ಲಾಕ್​​​​​ಡೌನ್ ಸಮಯದಲ್ಲಿ ಸುಮಾರು 40 ದಿನಗಳ ಕಾಲ ವಿಡಿಯೋ ಚಿತ್ರೀಕರಣ ಸೆರೆ ಹಿಡಿದು ಕೃತಜ್ಞತೆ ಸಲ್ಲಿಸಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿರುವುದನ್ನು ಚಿತ್ರಿಸಿ, ರಾಜ್ಯದ ಖ್ಯಾತ ಚಿತ್ರ ಸಾಹಿತಿ ಯೋಗರಾಜ್ ಭಟ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಗಾಯಕ ವಿಜಯ್ ಪ್ರಕಾಶ್ ಅವರು ರಚಿಸಿದ ಸಾಹಿತ್ಯದ ಸುರುಳಿಯನ್ನು ಬಳಸಿಕೊಂಡು ಈ ವಿಡಿಯೋ ರಚಿಸಿದ್ದಾರೆ.

ಎಸಿಪಿ ಅನುಷಾ. ಜಿ ಅವರು ಈ ಕಿರುಚಿತ್ರವನ್ನು ಬಿಡುಗಡೆಗೊಳಿಸಿದ್ದು, ಈ ಕಿರುಚಿತ್ರ ಯೂಟ್ಯೂಬ್ ಹಾಗೂ ಫೇಸ್​​​​ಬುಕ್​​​ಗಳಲ್ಲಿ 'ಧಾರವಾಡ ಕೊರೊನಾ ಸಾಂಗ್' ಹೆಸರಿನಲ್ಲಿ ಲಭ್ಯವಿದೆ.

ಧಾರವಾಡ: ಕೊರೊನಾ ವೈರಸ್ ಭೀತಿಯಿಂದ ಲಾಕ್​ಡೌನ್​​​ ಆದ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿ, ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದವರಿಗೆ ಧಾರವಾಡದ ಯುವಕರು ಕಿರುಚಿತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸಿದ ಪೌರ ಕಾರ್ಮಿಕರು, ವೈದ್ಯಕೀಯ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು, ಮಾಧ್ಯಮ ಮತ್ತು ಪತ್ರಿಕಾರಂಗದವರ ಅವಿರತ ಸೇವೆಗೆ ಕಿರುಚಿತ್ರ ಸಮರ್ಪಿಸಿದ್ದಾರೆ.

ಕಿರುಚಿತ್ರದ ಮೂಲಕ ಕೊರೊನಾ ವಾರಿಯರ್ಸ್​​ಗೆ ಕೃತಜ್ಞತೆ

ಧಾರವಾಡದ ವಿಜೇತ ಕುಮಾರ ಹೊಸಮಠ, ಗಣೇಶ ಪಾಟೀಲ್ ಹಾಗೂ ಪ್ರಶಾಂತ ಬಡಿಗೇರ ಎಂಬ ಯುವಕರು ಲಾಕ್​​​​​ಡೌನ್ ಸಮಯದಲ್ಲಿ ಸುಮಾರು 40 ದಿನಗಳ ಕಾಲ ವಿಡಿಯೋ ಚಿತ್ರೀಕರಣ ಸೆರೆ ಹಿಡಿದು ಕೃತಜ್ಞತೆ ಸಲ್ಲಿಸಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿರುವುದನ್ನು ಚಿತ್ರಿಸಿ, ರಾಜ್ಯದ ಖ್ಯಾತ ಚಿತ್ರ ಸಾಹಿತಿ ಯೋಗರಾಜ್ ಭಟ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಗಾಯಕ ವಿಜಯ್ ಪ್ರಕಾಶ್ ಅವರು ರಚಿಸಿದ ಸಾಹಿತ್ಯದ ಸುರುಳಿಯನ್ನು ಬಳಸಿಕೊಂಡು ಈ ವಿಡಿಯೋ ರಚಿಸಿದ್ದಾರೆ.

ಎಸಿಪಿ ಅನುಷಾ. ಜಿ ಅವರು ಈ ಕಿರುಚಿತ್ರವನ್ನು ಬಿಡುಗಡೆಗೊಳಿಸಿದ್ದು, ಈ ಕಿರುಚಿತ್ರ ಯೂಟ್ಯೂಬ್ ಹಾಗೂ ಫೇಸ್​​​​ಬುಕ್​​​ಗಳಲ್ಲಿ 'ಧಾರವಾಡ ಕೊರೊನಾ ಸಾಂಗ್' ಹೆಸರಿನಲ್ಲಿ ಲಭ್ಯವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.