ETV Bharat / state

ಬಾಕಿ ಹಣ ವಿಳಂಬ: ಹು-ಧಾ ಪಾಲಿಕೆ ಆಯುಕ್ತರ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ - contractors protest against Commissioner in hubbali

ಗುತ್ತಿಗೆದಾರರ ಬಾಕಿ ಹಣವನ್ನು ಪಾವತಿಸಲು ಹು-ಧಾ ಪಾಲಿಕೆ ಆಯುಕ್ತರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರರು ಪ್ರತಿಭಟನೆ ನಡೆಸಿದರು.

contractors protest against Commissioner in hubbali
ಗುತ್ತಿಗೆದಾರರ ಬಾಕಿ ಹಣ ವಿಳಂಬ
author img

By

Published : Jan 18, 2020, 4:29 AM IST

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಗುತ್ತಿಗೆದಾರರ ಬಾಕಿ ಹಣವನ್ನು ಪಾವತಿಸಲು ಪಾಲಿಕೆ ಆಯುಕ್ತರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರರು, ಪಾಲಿಕೆ ಕಚೇರಿ ಎದುರು ಪೊರಕೆ ಹಿಡಿದು ಪ್ರತಿಭಟಿಸಿದರು.

ಗುತ್ತಿಗೆದಾರರ ಬಾಕಿ ಹಣ ವಿಳಂಬ

ಪಾಲಿಕೆಯು ಸುಮಾರು ವರ್ಷಗಳಿಂದ ಗುತ್ತಿಗೆದಾರರಿಗೆ ನೀಡಬೇಕಿರುವ ಬಾಕಿ ಹಣ ಪಾವತಿಸುತ್ತಿಲ್ಲ ಹಾಗೂ ಗುತ್ತಿಗೆದಾರರ ಮೂಗಿಗೆ ತುಪ್ಪ ಸವರಿ ಕೆಲಸ ಮಾಡಿಕೊಂಡಿದೆ. ಮಹಾನಗರದ ಕಾಮಗಾರಿ ಹಿನ್ನಲೆಯಲ್ಲಿ ಪ್ರತಿ ತಿಂಗಳಿಗೆ ಮೂರು ಕೋಟಿ ಹಣವನ್ನು ನೀಡಬೇಕು. ಆದರೆ, ಮಹಾನಗರ ಪಾಲಿಕೆ ಆಯುಕ್ತರು ಗುತ್ತಿಗೆದಾರರಿಗೆ ನೀಡಬೇಕಾದ ಐವತ್ತು ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಶರದ ದೊಡ್ಡಮನಿ, ಅಶೋಕ ಸುರೇಬಾನ, ಆರ್.ಬಿ.ದಾಸಣ್ಣವರ, ನಾಗೇಶ ಹಂಚಿನಮನಿ, ಪರಶುರಾಮ ಕಾಳೆ, ಮೈಲಾರಿ ಹೊಸಮನಿ, ರವಿ ಹನುಮಸಾಗರ, ಮೋಹನಗೌಡರ ಇದ್ದರು.

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಗುತ್ತಿಗೆದಾರರ ಬಾಕಿ ಹಣವನ್ನು ಪಾವತಿಸಲು ಪಾಲಿಕೆ ಆಯುಕ್ತರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರರು, ಪಾಲಿಕೆ ಕಚೇರಿ ಎದುರು ಪೊರಕೆ ಹಿಡಿದು ಪ್ರತಿಭಟಿಸಿದರು.

ಗುತ್ತಿಗೆದಾರರ ಬಾಕಿ ಹಣ ವಿಳಂಬ

ಪಾಲಿಕೆಯು ಸುಮಾರು ವರ್ಷಗಳಿಂದ ಗುತ್ತಿಗೆದಾರರಿಗೆ ನೀಡಬೇಕಿರುವ ಬಾಕಿ ಹಣ ಪಾವತಿಸುತ್ತಿಲ್ಲ ಹಾಗೂ ಗುತ್ತಿಗೆದಾರರ ಮೂಗಿಗೆ ತುಪ್ಪ ಸವರಿ ಕೆಲಸ ಮಾಡಿಕೊಂಡಿದೆ. ಮಹಾನಗರದ ಕಾಮಗಾರಿ ಹಿನ್ನಲೆಯಲ್ಲಿ ಪ್ರತಿ ತಿಂಗಳಿಗೆ ಮೂರು ಕೋಟಿ ಹಣವನ್ನು ನೀಡಬೇಕು. ಆದರೆ, ಮಹಾನಗರ ಪಾಲಿಕೆ ಆಯುಕ್ತರು ಗುತ್ತಿಗೆದಾರರಿಗೆ ನೀಡಬೇಕಾದ ಐವತ್ತು ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಶರದ ದೊಡ್ಡಮನಿ, ಅಶೋಕ ಸುರೇಬಾನ, ಆರ್.ಬಿ.ದಾಸಣ್ಣವರ, ನಾಗೇಶ ಹಂಚಿನಮನಿ, ಪರಶುರಾಮ ಕಾಳೆ, ಮೈಲಾರಿ ಹೊಸಮನಿ, ರವಿ ಹನುಮಸಾಗರ, ಮೋಹನಗೌಡರ ಇದ್ದರು.

Intro:HubliBody:ಗುತ್ತಿಗೆದಾರರ ಬಾಕಿ ಹಣ ವಿಳಂಬದೊರಣಿ ಖಂಡಿಸಿ ಕೈಯಲ್ಲಿ ಕಸಬರಿಗೆ ಹಿಡಿದು ವಿನೂತನ ಪ್ರತಿಭಟನೆ.

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯು ಗುತ್ತಿಗೆದಾರರ ಬಾಕಿ ಹಣವನ್ನು ಪಾವತಿಸಲು ಹು-ಧಾ ಮಹಾನಗರ ಪಾಲಿಕೆ ಆಯುಕ್ತರು ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಹು-ಧಾ ಮಹಾನಗರ ಪಾಲಿಕೆ ಗುತ್ತಿಗೆದಾರರು ಪಾಲಿಕೆ ಕಚೇರಿ ಎದುರು ಕಸಬರಿಗೆ ಹಿಡಿದು ವಿನೂತನವಾಗಿ ಪ್ರತಿಭಟಿಸಿದರು.
ಪಾಲಿಕೆಯು ಸುಮಾರು ವರ್ಷಗಳಿಂದ ಗುತ್ತಿಗೆದಾರರಿಗೆ ನೀಡಬೇಕಿರುವ ಬಾಕಿ ಹಣ ಪಾವತಿಸುತ್ತಿಲ್ಲ ಹಾಗೂ ಗುತ್ತಿಗೆದಾರರ ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹು-ಧಾ ಮಹಾನಗರದ ಕಾಮಗಾರಿ ಹಿನ್ನಲೆಯಲ್ಲಿ ಪ್ರತಿ ತಿಂಗಳಿಗೆ ಮೂರು ಕೋಟಿ ಹಣವನ್ನು ನೀಡಬೇಕು ಆದರೇ ಮಹಾನಗರ ಪಾಲಿಕೆ ಆಯುಕ್ತರು ಗುತ್ತಿಗೆದಾರರಿಗೆ ನೀಡಬೇಕಾದ ಐವತ್ತು ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದಾರೆ.ಅಲ್ಲದೇ ಈ ಕುರಿತು ಮನವಿ ಸಲ್ಲಿಸಿದರು.ಏನು ಪ್ರಯೋಜನವಿಲ್ಲ ಕೇವಲ ಹಾರಿಕೆ ಉತ್ತರ ನೀಡುತ್ತಾ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಬಾಕಿ ಇರುವ ಹಣವನ್ನು ನಮಗೆ ನೀಡುವಂತೆ ಆಗ್ರಹಿಸಿದರು. ಮಹಾನಗರ ಪಾಲಿಕೆ ಆಯುಕ್ತರ ಯಾವುದೇ ಕಾಳಜಿ ತೋರುತ್ತಿಲ್ಲ ಎಂದು ಪಾಲಿಕೆ ಆಯುಕ್ತರ ವಿರುದ್ಧ ಘೋಷಣೆ ಕೂಗಿ ವಾಗ್ದಾಳಿ ನಡೆಸಿದರು.ಆದ್ದರಿಂದ ಕೂಡಲೇ ಆಯುಕ್ತರು ಬಾಕಿ ಇರುವ ಹಣವನ್ನು ಬಿಡುಗಡೆಗೊಳಿಸಬೇಕು.ಇಲ್ಲವಾದರೇ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಶರದ ದೊಡ್ಡಮನಿ,ಅಶೋಕ ಸುರೇಬಾನ,ಆರ್.ಬಿ.ದಾಸಣ್ಣವರ,ನಾಗೇಶ ಹಂಚಿನಮನಿ,ಪರಶುರಾಮ ಕಾಳೆ,ಮೈಲಾರಿ ಹೊಸಮನಿ,ರವಿ ಹನುಮಸಾಗರ,ಮೋಹನಗೌಡರ ಸೇರಿದಂತೆ ಇತರರು ಇದ್ದರು.

ಬೈಟ್:-ಶರತ್ ದೊಡ್ಡಮನಿ( ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ)Conclusion:Yallappa kundagol

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.