ETV Bharat / state

'ಎಲ್ಲಾ ನಿಮ್‌ ಮುಂದೆ ಹೇಳೋಕಾಗಲ್ಲ, ಯಡಿಯೂರಪ್ಪ ಬದಲಾಯಿಸಲು ಬಿಜೆಪಿಯಲ್ಲಿ ದೊಡ್ಡ ಲಾಬಿ' - ರಾಜ್ಯದ ಸಿಎಂ ಸ್ಥಾನ ಬದಲಾವಣೆ ವಿಚಾರ

ಯಡಿಯೂರಪ್ಪ, ಕುಮಾರಸ್ವಾಮಿ ಯಾವಾಗ ಲವ್ ಮಾಡುತ್ತಾರೋ, ಯಾವಾಗ ಭೇಟಿ ಆಗುತ್ತಾರೋ ಗೊತ್ತಾಗುವುದಿಲ್ಲ. ಮುಂದಿನ ರಾಜಕೀಯ ಬದಲಾವಣೆಗಾಗಿಯೂ ಭೇಟಿ ಮಾಡಿರಬಹುದು. ಸದ್ಯದ ಪರಿಸ್ಥಿತಿ, ರಾಜ್ಯದ ಹಿತದೃಷ್ಠಿಯಿಂದ ಆಕಸ್ಮಿಕವಾಗಿ ಜೆಡಿಎಸ್ ಜತೆ ಸೇರಲೂಬಹುದು..

basavaraj horatti pressmeet in hubli
ಬಸವರಾಜ್ ಹೊರಟ್ಟಿ
author img

By

Published : Sep 12, 2020, 8:06 PM IST

ಹುಬ್ಬಳ್ಳಿ : ರಾಜ್ಯದ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹುಬ್ಬಳ್ಳಿಯಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸಿಎಂ ಬದಲಾವಣೆ ಕುರಿತಂತೆ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯೆ
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಕೆಲವರು ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರಲಿ ಎನ್ನುತ್ತಿದ್ರೆ, ಇನ್ನು ಕೆಲವರು ಮುಖ್ಯಮಂತ್ರಿ ಬದಲಾವಣೆ ಆಗಲಿ ಎನ್ನುತ್ತಿದ್ದಾರೆ. ಈ ಬಗ್ಗೆ ಬಿಜೆಪಿಯಲ್ಲಿ ದೊಡ್ಡ ಲಾಬಿಯೇ ನೆಡೆದಿದೆ ಎಂದು ಬಿಜೆಪಿಯ ದೊಡ್ಡ ರಾಜಕಾರಣಿಯೋರ್ವರು ನನ್ನ ಮುಂದೆ ಸೂಕ್ಷ್ಮವಾಗಿ ಹೇಳಿದ್ದಾರೆ.
ಮುಂದಿನ ಮುಖ್ಯಮಂತ್ರಿ ಬೇರೆ ಆಗಬೇಕು ಅನ್ನೋ ಭಾವನೆಗಳು ಬಿಜೆಪಿಯಲ್ಲಿವೆ. ಆದರೆ, ನಾನು ಆ ರಾಜಕಾರಣಿ ಹೆಸರು ಹಾಗೂ ತೆರೆಮರೆಯಲ್ಲಿ ನಡೆಯುತ್ತಿರೋ ಘಟನೆಗಳ ಬಗ್ಗೆ ಸಂಪೂರ್ಣವಾಗಿ ಹೇಳಲ್ಲ. ಆದರೆ, ಬಿಜೆಪಿಯಲ್ಲಿ ಅಸಮಾಧಾನವಿದೆ. ಅಂತಹ ಬಿಜೆಪಿಯಲ್ಲಿ ಕೆಲ ಘಟನೆಗಳು ನಡೆದಿವೆ ಎನ್ನುವ ಮೂಲಕ ರಾಜ್ಯದ ಸಿಎಂ ಸ್ಥಾನ ಬದಲಾವಣೆ ವಿಚಾರವಾಗಿ ಹೊರಟ್ಟಿ ಹೊಸ ಬಾಂಬ್ ಸಿಡಿಸಿದ್ದಾರೆ.
ಅಷ್ಟೇ ಅಲ್ಲ, ಕುಮಾರಸ್ವಾಮಿ, ಯಡಿಯೂರಪ್ಪ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೊರಟ್ಟಿ, ಯಡಿಯೂರಪ್ಪ, ಕುಮಾರಸ್ವಾಮಿ ಯಾವಾಗ ಲವ್ ಮಾಡುತ್ತಾರೋ, ಯಾವಾಗ ಭೇಟಿ ಆಗುತ್ತಾರೋ ಗೊತ್ತಾಗುವುದಿಲ್ಲ. ಶಾಸಕರ ಅನುದಾನ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿರಬಹುದು. ಮುಂದಿನ ರಾಜಕೀಯ ಬದಲಾವಣೆಗಾಗಿಯೂ ಭೇಟಿ ಮಾಡಿರಬಹುದೆಂದು ನಗೆ ಚಟಾಕಿ ಹಾರಿಸಿದರಲ್ಲದೇ, ಸದ್ಯದ ಪರಿಸ್ಥಿತಿ, ರಾಜ್ಯದ ಹಿತದೃಷ್ಠಿಯಿಂದ ಆಕಸ್ಮಿಕವಾಗಿ ಜೆಡಿಎಸ್ ಜೊತೆ ಸೇರಲೂಬಹುದು.
ಯಡಿಯೂರಪ್ಪ ಅವರು ಹೋರಾಟ ಮಾಡಿಕೊಂಡು ಬಂದವರು. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದವರು. ಇದು ಯಡಿಯೂರಪ್ಪ ಅವರ ಕೊನೆಯ ಅವಧಿ. ಇನ್ಮೇಲೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗೋದಿಲ್ಲ. ಅವರನ್ನು ಸಿಎಂ ಸ್ಥಾನದಿಂದ ಇಳಿಸುವುದು ಸರಿಯಲ್ಲ ಎಂದರು.

ಹುಬ್ಬಳ್ಳಿ : ರಾಜ್ಯದ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹುಬ್ಬಳ್ಳಿಯಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸಿಎಂ ಬದಲಾವಣೆ ಕುರಿತಂತೆ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯೆ
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಕೆಲವರು ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರಲಿ ಎನ್ನುತ್ತಿದ್ರೆ, ಇನ್ನು ಕೆಲವರು ಮುಖ್ಯಮಂತ್ರಿ ಬದಲಾವಣೆ ಆಗಲಿ ಎನ್ನುತ್ತಿದ್ದಾರೆ. ಈ ಬಗ್ಗೆ ಬಿಜೆಪಿಯಲ್ಲಿ ದೊಡ್ಡ ಲಾಬಿಯೇ ನೆಡೆದಿದೆ ಎಂದು ಬಿಜೆಪಿಯ ದೊಡ್ಡ ರಾಜಕಾರಣಿಯೋರ್ವರು ನನ್ನ ಮುಂದೆ ಸೂಕ್ಷ್ಮವಾಗಿ ಹೇಳಿದ್ದಾರೆ.
ಮುಂದಿನ ಮುಖ್ಯಮಂತ್ರಿ ಬೇರೆ ಆಗಬೇಕು ಅನ್ನೋ ಭಾವನೆಗಳು ಬಿಜೆಪಿಯಲ್ಲಿವೆ. ಆದರೆ, ನಾನು ಆ ರಾಜಕಾರಣಿ ಹೆಸರು ಹಾಗೂ ತೆರೆಮರೆಯಲ್ಲಿ ನಡೆಯುತ್ತಿರೋ ಘಟನೆಗಳ ಬಗ್ಗೆ ಸಂಪೂರ್ಣವಾಗಿ ಹೇಳಲ್ಲ. ಆದರೆ, ಬಿಜೆಪಿಯಲ್ಲಿ ಅಸಮಾಧಾನವಿದೆ. ಅಂತಹ ಬಿಜೆಪಿಯಲ್ಲಿ ಕೆಲ ಘಟನೆಗಳು ನಡೆದಿವೆ ಎನ್ನುವ ಮೂಲಕ ರಾಜ್ಯದ ಸಿಎಂ ಸ್ಥಾನ ಬದಲಾವಣೆ ವಿಚಾರವಾಗಿ ಹೊರಟ್ಟಿ ಹೊಸ ಬಾಂಬ್ ಸಿಡಿಸಿದ್ದಾರೆ.
ಅಷ್ಟೇ ಅಲ್ಲ, ಕುಮಾರಸ್ವಾಮಿ, ಯಡಿಯೂರಪ್ಪ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೊರಟ್ಟಿ, ಯಡಿಯೂರಪ್ಪ, ಕುಮಾರಸ್ವಾಮಿ ಯಾವಾಗ ಲವ್ ಮಾಡುತ್ತಾರೋ, ಯಾವಾಗ ಭೇಟಿ ಆಗುತ್ತಾರೋ ಗೊತ್ತಾಗುವುದಿಲ್ಲ. ಶಾಸಕರ ಅನುದಾನ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿರಬಹುದು. ಮುಂದಿನ ರಾಜಕೀಯ ಬದಲಾವಣೆಗಾಗಿಯೂ ಭೇಟಿ ಮಾಡಿರಬಹುದೆಂದು ನಗೆ ಚಟಾಕಿ ಹಾರಿಸಿದರಲ್ಲದೇ, ಸದ್ಯದ ಪರಿಸ್ಥಿತಿ, ರಾಜ್ಯದ ಹಿತದೃಷ್ಠಿಯಿಂದ ಆಕಸ್ಮಿಕವಾಗಿ ಜೆಡಿಎಸ್ ಜೊತೆ ಸೇರಲೂಬಹುದು.
ಯಡಿಯೂರಪ್ಪ ಅವರು ಹೋರಾಟ ಮಾಡಿಕೊಂಡು ಬಂದವರು. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದವರು. ಇದು ಯಡಿಯೂರಪ್ಪ ಅವರ ಕೊನೆಯ ಅವಧಿ. ಇನ್ಮೇಲೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗೋದಿಲ್ಲ. ಅವರನ್ನು ಸಿಎಂ ಸ್ಥಾನದಿಂದ ಇಳಿಸುವುದು ಸರಿಯಲ್ಲ ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.