ETV Bharat / state

ಭತ್ತ ಕಳ್ಳತನ: 36 ವರ್ಷಗಳ ಹಿಂದಿನ ಪ್ರಕರಣದ ಆರೋಪಿ ಅರೆಸ್ಟ್​​..! - ಧಾರವಾಡದಲ್ಲಿ ಭತ್ತದ ಚೀಲ ಕಳುವು ಸುದ್ದಿ

ಭತ್ತದ ಚೀಲಗಳನ್ನು ಕದ್ದು 36 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

arrest
36 ವರ್ಷಗಳ ನಂತರ ಆರೋಪಿ ಅರೆಸ್ಟ್
author img

By

Published : Dec 15, 2019, 1:32 PM IST

ಧಾರವಾಡ: ಭತ್ತದ ಚೀಲಗಳನ್ನು ಕದ್ದು 36 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಂಕ್ರಪ್ಪ ಮಹಾದೇವಪ್ಪ ಜೊಡಗೇರಿ ಬಂಧಿತ ಆರೋಪಿಯಾಗಿದ್ದಾನೆ. ಧಾರವಾಡ ತಾಲೂಕಿನ ಎತ್ತಿನಗುಡ್ಡ ಗ್ರಾಮದ ನಿವಾಸಿಯಾಗಿರುವ ಶಂಕ್ರಪ್ಪ ಅವರನ್ನು ಧಾರವಾಡ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.‌ ಆರೋಪಿ 1983 ರಲ್ಲಿ ಮುತಾಲಿಕ ದೇಸಾಯಿ ಎನ್ನುವವರ 25 ಭತ್ತದ ಚೀಲ ಕಳುವು ಮಾಡಿ ಪರಾರಿಯಾಗಿದ್ದ.

8 ಮಂದಿ ಆರೋಪಿಗಳ ಪೈಕಿ 7 ಮಂದಿ ಬಂಧನವಾದ್ರೆ 8ನೇ ಆರೋಪಿಯಾಗಿದ್ದ ಶಂಕ್ರಪ್ಪ ಮಹಾದೇವಪ್ಪ ಪರಾರಿಯಾಗಿದ್ದ. ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದ ಈತನನ್ನು ಕಡೆಗೂ ಪೊಲೀಸರು ಬಂಧಿಸಿದ್ದು, ಸುಮಾರು 36 ವರ್ಷಗಳ ಹಿಂದಿನ ಈ ಪುರಾತನ ಪ್ರಕರಣ ಅಂತ್ಯಕಂಡಿದೆ.

ಧಾರವಾಡ: ಭತ್ತದ ಚೀಲಗಳನ್ನು ಕದ್ದು 36 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಂಕ್ರಪ್ಪ ಮಹಾದೇವಪ್ಪ ಜೊಡಗೇರಿ ಬಂಧಿತ ಆರೋಪಿಯಾಗಿದ್ದಾನೆ. ಧಾರವಾಡ ತಾಲೂಕಿನ ಎತ್ತಿನಗುಡ್ಡ ಗ್ರಾಮದ ನಿವಾಸಿಯಾಗಿರುವ ಶಂಕ್ರಪ್ಪ ಅವರನ್ನು ಧಾರವಾಡ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.‌ ಆರೋಪಿ 1983 ರಲ್ಲಿ ಮುತಾಲಿಕ ದೇಸಾಯಿ ಎನ್ನುವವರ 25 ಭತ್ತದ ಚೀಲ ಕಳುವು ಮಾಡಿ ಪರಾರಿಯಾಗಿದ್ದ.

8 ಮಂದಿ ಆರೋಪಿಗಳ ಪೈಕಿ 7 ಮಂದಿ ಬಂಧನವಾದ್ರೆ 8ನೇ ಆರೋಪಿಯಾಗಿದ್ದ ಶಂಕ್ರಪ್ಪ ಮಹಾದೇವಪ್ಪ ಪರಾರಿಯಾಗಿದ್ದ. ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದ ಈತನನ್ನು ಕಡೆಗೂ ಪೊಲೀಸರು ಬಂಧಿಸಿದ್ದು, ಸುಮಾರು 36 ವರ್ಷಗಳ ಹಿಂದಿನ ಈ ಪುರಾತನ ಪ್ರಕರಣ ಅಂತ್ಯಕಂಡಿದೆ.

Intro:ಧಾರವಾಡ: ೩೬ ವರ್ಷ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಂಕ್ರಪ್ಪ ಮಹಾದೇವಪ್ಪ ಜೊಡಗೇರಿ ಬಂಧಿತ ಆರೋಪಿಯಾಗಿದ್ದಾನೆ.

ಧಾರವಾಡ ತಾಲೂಕಿನ ಎತ್ತಿನಗುಡ್ಡ ಗ್ರಾಮದ ನಿವಾಸಿಯಾಗಿರುವ ಶಂಕ್ರಪ್ಪ ಅವರನ್ನು ಧಾರವಾಡ ಗ್ರಾಮೀಣ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.‌ ಮುತಾಲೀಕ ದೇಸಾಯಿ ಎನ್ನುವರ ೨೫ ಭತ್ತದ ಚೀಲ ಕಳುವು ಮಾಡಿ ಆರೋಪಿ ಪರಾರಿಯಾಗಿದ್ದ. Body:೮ ಮಂದಿ ಆರೋಪಿಗಳ ಪೈಕಿ ೭ ಮಂದಿ ಬಂಧನವಾದ್ರೆ ೮ನೇ ಆರೋಪಿ ಪರಾರಿಯಾಗಿದ್ದ. ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧಿಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.