ETV Bharat / state

ನಿಜಾಮುದ್ದೀನ್​​​ ಸಭೆಗೆ ದಾವಣಗೆರೆಯ ಇಬ್ಬರು ಹೋಗಿದ್ರು, ಆದ್ರೆ ಇಲ್ಲಿಗೆ ಬಂದಿಲ್ಲ: ಎಸ್ಪಿ

ದೆಹಲಿಯಲ್ಲಿ ನಡೆದ ನಿಜಾಮುದ್ದೀನ್​ ಸಭೆಗೆ ದಾವಣಗೆರೆಯ ಇಬ್ಬರು ತೆರಳಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದ್ದಾರೆ.

author img

By

Published : Apr 1, 2020, 7:25 PM IST

two went to nizamuddin from davanagere
ಎಸ್ಪಿ ಮಾಹಿತಿ

ದಾವಣಗೆರೆ: ದೆಹಲಿಯಲ್ಲಿ ನಡೆದ ನಿಜಾಮುದ್ದೀನ್​ ಸಭೆಯಲ್ಲಿ ಜಿಲ್ಲೆಯ ಇಬ್ಬರು ಭಾಗವಹಿಸಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಇವರು ನಗರಕ್ಕೆ ಬಂದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ಜಿಲ್ಲೆಯಿಂದ ಇಬ್ಬರು ದೆಹಲಿಯ ಜಮಾತ್​​ಗೆ ಹೋಗಿದ್ದರು.‌ ಹರಿಹರದ ವ್ಯಕ್ತಿ ಹಾಗೂ ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯ ವ್ಯಕ್ತಿ ಹೋಗಿದ್ದರು.‌ ಇದೀಗ ಒಬ್ಬರೂ ಆಂಧ್ರದ ಕರ್ನೂಲ್ ಹಾಗೂ ಇನ್ನೊಬ್ಬರು ನೊಯ್ಡಾದಲ್ಲಿ ಇದ್ದಾರೆ.‌ ಇಬ್ಬರೂ ಕ್ವಾರಂಟೈನ್​​ನಲ್ಲಿ ಇದ್ದಾರೆ ಎಂದು ತಿಳಿಸಿದರು.

ಹರಿಹರದ ವ್ಯಕ್ತಿ ದೆಹಲಿಯಿಂದ ನೇರವಾಗಿ ಕರ್ನೂಲ್​ಗೆ ಹೋಗಿದ್ದಾರೆ. ಮತ್ತೋರ್ವ ನೊಯ್ಡಾಗೆ ಹೋಗಿದ್ದು, ಈತ ದಾವಣಗೆರೆಗೆ ಬಂದು ಹೋಗಿರುವ ಕುರಿತಂತೆ ಪರಿಶೀಲಿಸಲಾಗುತ್ತಿದೆ. ಇಬ್ಬರೂ ಆರೋಗ್ಯವಾಗಿದ್ದು, ಕೊರೊನೊಗೆ ಸಂಬಂಧಿಸಿದ ಯಾವುದೇ ಲಕ್ಷಣಗಳಿಲ್ಲ. ಆದರೂ ಕ್ವಾರಂಟೈನ್​ನಲ್ಲಿ ಇಡಲಾಗಿದೆ ಎಂದು ಮಾಹಿತಿ ನೀಡಿದರು.

ದಾವಣಗೆರೆ: ದೆಹಲಿಯಲ್ಲಿ ನಡೆದ ನಿಜಾಮುದ್ದೀನ್​ ಸಭೆಯಲ್ಲಿ ಜಿಲ್ಲೆಯ ಇಬ್ಬರು ಭಾಗವಹಿಸಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಇವರು ನಗರಕ್ಕೆ ಬಂದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ಜಿಲ್ಲೆಯಿಂದ ಇಬ್ಬರು ದೆಹಲಿಯ ಜಮಾತ್​​ಗೆ ಹೋಗಿದ್ದರು.‌ ಹರಿಹರದ ವ್ಯಕ್ತಿ ಹಾಗೂ ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯ ವ್ಯಕ್ತಿ ಹೋಗಿದ್ದರು.‌ ಇದೀಗ ಒಬ್ಬರೂ ಆಂಧ್ರದ ಕರ್ನೂಲ್ ಹಾಗೂ ಇನ್ನೊಬ್ಬರು ನೊಯ್ಡಾದಲ್ಲಿ ಇದ್ದಾರೆ.‌ ಇಬ್ಬರೂ ಕ್ವಾರಂಟೈನ್​​ನಲ್ಲಿ ಇದ್ದಾರೆ ಎಂದು ತಿಳಿಸಿದರು.

ಹರಿಹರದ ವ್ಯಕ್ತಿ ದೆಹಲಿಯಿಂದ ನೇರವಾಗಿ ಕರ್ನೂಲ್​ಗೆ ಹೋಗಿದ್ದಾರೆ. ಮತ್ತೋರ್ವ ನೊಯ್ಡಾಗೆ ಹೋಗಿದ್ದು, ಈತ ದಾವಣಗೆರೆಗೆ ಬಂದು ಹೋಗಿರುವ ಕುರಿತಂತೆ ಪರಿಶೀಲಿಸಲಾಗುತ್ತಿದೆ. ಇಬ್ಬರೂ ಆರೋಗ್ಯವಾಗಿದ್ದು, ಕೊರೊನೊಗೆ ಸಂಬಂಧಿಸಿದ ಯಾವುದೇ ಲಕ್ಷಣಗಳಿಲ್ಲ. ಆದರೂ ಕ್ವಾರಂಟೈನ್​ನಲ್ಲಿ ಇಡಲಾಗಿದೆ ಎಂದು ಮಾಹಿತಿ ನೀಡಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.