ETV Bharat / state

ದಾವಣಗೆರೆಯಲ್ಲಿ ಆಕ್ಸಿಜನ್ ಖಾಲಿ : ಶಾಸಕರ ಸಮಯ ಪ್ರಜ್ಞೆಯಿಂದ ಉಳಿದ 50 ಜೀವ

author img

By

Published : May 18, 2021, 7:46 PM IST

ಆಕ್ಸಿಜನ್ ಖಾಲಿಯಾದ ವಿಚಾರ ತಿಳಿದ ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರು, ಸಿಎಂ ಬಿಎಸ್‌ವೈ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಶಿವಮೊಗ್ಗ ಡಿಸಿಗೆ ಜಂಬೋ‌ ಸಿಲಿಂಡರ್ ಕಳುಹಿಸಲು ಮನವಿ..

Davangere
Davangere

ದಾವಣಗೆರೆ : ವೈದ್ಯರ ನಿರ್ಲಕ್ಷ್ಯದಿಂದ ಆಕ್ಸಿಜನ್ ಖಾಲಿಯಾಗಿದೆ. 50 ಜನ ಕೊರೊನಾ ಸೋಂಕಿತರು ಪರದಾಡಿದ ಘಟನೆ ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ಹರಿಹರ ಪಟ್ಟಣದ ಸದರನ್ ಗ್ಯಾಸ್ ಏಜೆನ್ಸಿಯಿಂದ ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಆಕ್ಸಿಜನ್​ ಪೂರೈಕೆಯಾಗುತ್ತಿತ್ತು. ಆದರೆ, ಇಂದು ಮಾತ್ರ ಆಕ್ಸಿಜನ್ ಪೂರೈಕೆ ಆಗಿರಲಿಲ್ಲ.

ಆಕ್ಸಿಜನ್ ಖಾಲಿಯಾದ ವಿಚಾರ ತಿಳಿದ ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರು, ಸಿಎಂ ಬಿಎಸ್‌ವೈ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಶಿವಮೊಗ್ಗ ಡಿಸಿಗೆ ಜಂಬೋ‌ ಸಿಲಿಂಡರ್ ಕಳುಹಿಸಲು ಮನವಿ ಮಾಡಿದರು.

ಈ ಬಳಿಕ ಶಿವಮೊಗ್ಗದಿಂದ 30, ದಾವಣಗೆರೆಯಿಂದ 10 ಸಿಲಿಂಡರ್​ಗಳು ಚನ್ನಗಿರಿ ಆಸ್ಪತ್ರೆಗೆ ಪೂರೈಕೆಯಾಗಿದ್ದು, ಶಾಸಕರ ಸಮಯ ಪ್ರಜ್ಞೆಯಿಂದ 50ಕ್ಕೂ ಹೆಚ್ಚು ಮಂದಿಯ ಜೀವ ಉಳಿದಿದೆ.

ದಾವಣಗೆರೆ : ವೈದ್ಯರ ನಿರ್ಲಕ್ಷ್ಯದಿಂದ ಆಕ್ಸಿಜನ್ ಖಾಲಿಯಾಗಿದೆ. 50 ಜನ ಕೊರೊನಾ ಸೋಂಕಿತರು ಪರದಾಡಿದ ಘಟನೆ ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ಹರಿಹರ ಪಟ್ಟಣದ ಸದರನ್ ಗ್ಯಾಸ್ ಏಜೆನ್ಸಿಯಿಂದ ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಆಕ್ಸಿಜನ್​ ಪೂರೈಕೆಯಾಗುತ್ತಿತ್ತು. ಆದರೆ, ಇಂದು ಮಾತ್ರ ಆಕ್ಸಿಜನ್ ಪೂರೈಕೆ ಆಗಿರಲಿಲ್ಲ.

ಆಕ್ಸಿಜನ್ ಖಾಲಿಯಾದ ವಿಚಾರ ತಿಳಿದ ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರು, ಸಿಎಂ ಬಿಎಸ್‌ವೈ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಶಿವಮೊಗ್ಗ ಡಿಸಿಗೆ ಜಂಬೋ‌ ಸಿಲಿಂಡರ್ ಕಳುಹಿಸಲು ಮನವಿ ಮಾಡಿದರು.

ಈ ಬಳಿಕ ಶಿವಮೊಗ್ಗದಿಂದ 30, ದಾವಣಗೆರೆಯಿಂದ 10 ಸಿಲಿಂಡರ್​ಗಳು ಚನ್ನಗಿರಿ ಆಸ್ಪತ್ರೆಗೆ ಪೂರೈಕೆಯಾಗಿದ್ದು, ಶಾಸಕರ ಸಮಯ ಪ್ರಜ್ಞೆಯಿಂದ 50ಕ್ಕೂ ಹೆಚ್ಚು ಮಂದಿಯ ಜೀವ ಉಳಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.