ETV Bharat / state

ಹುಸಿಯಾಗಲಿಲ್ಲ ಬೆಣ್ಣೆ ನಗರಿ ಜನರ ನಂಬಿಕೆ... ಸಂತೆಯಾದ ಮೂರೇ ದಿನಗಳಲ್ಲಿ ಫಲಿಸಿತು ಪ್ರಾರ್ಥನೆ!

ದಾವಣಗೆರೆಯ ಜನರು ಮಳೆಗಾಗಿ ಪ್ರಾರ್ಥಿಸಿ ದುಗ್ಗಮ್ಮ ದೇವಿ ಸನ್ನಿಧಿಯಲ್ಲಿ ಸಂತೆ ಮಾಡಿದ್ದರು. ಜನರ ಈ ಪ್ರಾರ್ಥನೆ ಫಲಿಸಿದ್ದು, ಸಂತೆಯಾದ ನಂತರ ಮಳೆರಾಯ ಜಿಲ್ಲೆಯಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾನೆ.

author img

By

Published : Jun 12, 2019, 7:05 PM IST

ದಾವಣಗೆರೆಯಲ್ಲಿ ಮಳೆಯ ಅಬ್ಬರ

ದಾವಣಗೆರೆ: ನಗರ ದೇವತೆ ದುಗ್ಗಮ್ಮ ದೇವಸ್ಥಾನ ಮುಂಭಾಗ ಸಂತೆ ನಡೆಸಿದರೆ ಮಳೆ ಬರುತ್ತದೆ ಎಂಬ ಸಂಪ್ರದಾಯ ಹಾಗೂ ನಂಬಿಕೆ‌ ಹಿನ್ನೆಲೆ ಇಲ್ಲಿನ ಜನರು ಸಂತೆ ನಡೆಸಿದ್ದರು. ಕಾಕತಾಳೀಯವೋ ಅಥವಾ ದೇವಿಯ ಅನುಗ್ರಹವೋ‌ ಗೊತ್ತಿಲ್ಲ. ಸಂತೆ ನಡೆಸಿ ಮೂರೇ ದಿನಕ್ಕೆ ಬೆಣ್ಣೆ ನಗರಿಯಲ್ಲಿ ಉತ್ತಮ‌ ಮಳೆಯಾಗಿದೆ.

ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮಳೆ ಬಾರದ್ದಕ್ಕೆ ವರುಣನ ಆಗಮನಕ್ಕೆ ಪ್ರಾರ್ಥಿಸಿ ದುಗ್ಗಮ್ಮನ ಸನ್ನಿಧಾನದ ಆವರಣದಲ್ಲಿ ದೇವಸ್ಥಾನ ಕಮಿಟಿ ಹಾಗೂ ಮಹಾನಗರ ಪಾಲಿಕೆಯಿಂದ ಸಂತೆ ಹಮ್ಮಿಕೊಳ್ಳಲಾಗಿತ್ತು. ಸಕಾಲಕ್ಕೆ ಮಳೆಯಾಗದೇ ಬರಗಾಲ ಪರಿಸ್ಥಿತಿ ಎದುರಾದಾಗ ಇಲ್ಲಿನ ನಗರ ದೇವತೆ ಶ್ರೀದುರ್ಗಾಂಬಿಕ ದೇವಸ್ಥಾನ ಆವರಣದಲ್ಲಿ ವಾರದ ಸಂತೆ ನಡೆಸುವುದು ಇಲ್ಲಿನ ವಾಡಿಕೆ. ಈ ಹಿನ್ನೆಲೆ ಕಳೆದ ಭಾನುವಾರ ಮೊದಲ ಸಂತೆ ನಡೆಸಲಾಗಿತ್ತು, ಮಳೆ ಬರಲಿ ಎಂದು ದುಗ್ಗಮ್ಮ ದೇವಸ್ಥಾನ ಮುಂಭಾಗ ಸಂತೆ ಹಾಕಿಸಿ ದೇವಿಗೆ ವಿಶೇಷ ಪೂಜೆ ಸಹ ಸಲ್ಲಿಸಲಾಗಿತ್ತು. ಅಂದು ಹಿರಿಯರು ಹೇಳಿದಂತೆ ಮೂರೇ ದಿನಗಳಲ್ಲಿ ದಾವಣಗೆರೆಯಲ್ಲಿ ಉತ್ತಮ ಮಳೆಯಾಗಿದೆ. ಇಂದು ಮಧ್ಯಾಹ್ನ ಸುಮಾರು ಅರ್ಧ ಗಂಟೆಗೆ ಹೆಚ್ಚು ಕಾಲ ಮಳೆ ಸುರಿದಿದ್ದು, ಇದು ದೇವಿಯ ಶಕ್ತಿ ಎಂದು ಇಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ದಾವಣಗೆರೆಯಲ್ಲಿ ಮಳೆಯ ಅಬ್ಬರ

ಒಟ್ಟಾರೆ ದಾವಣಗೆರೆ ದುಗ್ಗಮ್ಮ ಅಂದ್ರೆ ಮಳೆಯ ದೇವತೆ ಎಂದೇ ಖ್ಯಾತಿ ಪಡೆದಿದ್ದಾಳೆ. ಮಳೆ ಬರದಿದ್ದಾಗ ಈ ರೀತಿ ಸಂತೆ ನಡೆಸಿದರೆ ವರುಣ ಕೃಪೆ ತೋರುತ್ತಾನೆ ಎಂಬ ಜನರ ನಂಬಿಕೆ ಮತ್ತಷ್ಟು ಗಟ್ಟಿಗೊಂಡಿದೆ. ಸುಮಾರು 30 ವರ್ಷಕ್ಕೂ ಹಳೇ ಸಂತೆ ಸಂಪ್ರದಾಯ ಹುಸಿಯಾಗದೇ ಮಳೆ ಬಂದಿದ್ದು ರೈತರು, ಜನರ ಮೊಗದಲ್ಲಿ ಮಂದಹಾಸ ಮೂಡಿದೆ.

ದಾವಣಗೆರೆ: ನಗರ ದೇವತೆ ದುಗ್ಗಮ್ಮ ದೇವಸ್ಥಾನ ಮುಂಭಾಗ ಸಂತೆ ನಡೆಸಿದರೆ ಮಳೆ ಬರುತ್ತದೆ ಎಂಬ ಸಂಪ್ರದಾಯ ಹಾಗೂ ನಂಬಿಕೆ‌ ಹಿನ್ನೆಲೆ ಇಲ್ಲಿನ ಜನರು ಸಂತೆ ನಡೆಸಿದ್ದರು. ಕಾಕತಾಳೀಯವೋ ಅಥವಾ ದೇವಿಯ ಅನುಗ್ರಹವೋ‌ ಗೊತ್ತಿಲ್ಲ. ಸಂತೆ ನಡೆಸಿ ಮೂರೇ ದಿನಕ್ಕೆ ಬೆಣ್ಣೆ ನಗರಿಯಲ್ಲಿ ಉತ್ತಮ‌ ಮಳೆಯಾಗಿದೆ.

ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮಳೆ ಬಾರದ್ದಕ್ಕೆ ವರುಣನ ಆಗಮನಕ್ಕೆ ಪ್ರಾರ್ಥಿಸಿ ದುಗ್ಗಮ್ಮನ ಸನ್ನಿಧಾನದ ಆವರಣದಲ್ಲಿ ದೇವಸ್ಥಾನ ಕಮಿಟಿ ಹಾಗೂ ಮಹಾನಗರ ಪಾಲಿಕೆಯಿಂದ ಸಂತೆ ಹಮ್ಮಿಕೊಳ್ಳಲಾಗಿತ್ತು. ಸಕಾಲಕ್ಕೆ ಮಳೆಯಾಗದೇ ಬರಗಾಲ ಪರಿಸ್ಥಿತಿ ಎದುರಾದಾಗ ಇಲ್ಲಿನ ನಗರ ದೇವತೆ ಶ್ರೀದುರ್ಗಾಂಬಿಕ ದೇವಸ್ಥಾನ ಆವರಣದಲ್ಲಿ ವಾರದ ಸಂತೆ ನಡೆಸುವುದು ಇಲ್ಲಿನ ವಾಡಿಕೆ. ಈ ಹಿನ್ನೆಲೆ ಕಳೆದ ಭಾನುವಾರ ಮೊದಲ ಸಂತೆ ನಡೆಸಲಾಗಿತ್ತು, ಮಳೆ ಬರಲಿ ಎಂದು ದುಗ್ಗಮ್ಮ ದೇವಸ್ಥಾನ ಮುಂಭಾಗ ಸಂತೆ ಹಾಕಿಸಿ ದೇವಿಗೆ ವಿಶೇಷ ಪೂಜೆ ಸಹ ಸಲ್ಲಿಸಲಾಗಿತ್ತು. ಅಂದು ಹಿರಿಯರು ಹೇಳಿದಂತೆ ಮೂರೇ ದಿನಗಳಲ್ಲಿ ದಾವಣಗೆರೆಯಲ್ಲಿ ಉತ್ತಮ ಮಳೆಯಾಗಿದೆ. ಇಂದು ಮಧ್ಯಾಹ್ನ ಸುಮಾರು ಅರ್ಧ ಗಂಟೆಗೆ ಹೆಚ್ಚು ಕಾಲ ಮಳೆ ಸುರಿದಿದ್ದು, ಇದು ದೇವಿಯ ಶಕ್ತಿ ಎಂದು ಇಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ದಾವಣಗೆರೆಯಲ್ಲಿ ಮಳೆಯ ಅಬ್ಬರ

ಒಟ್ಟಾರೆ ದಾವಣಗೆರೆ ದುಗ್ಗಮ್ಮ ಅಂದ್ರೆ ಮಳೆಯ ದೇವತೆ ಎಂದೇ ಖ್ಯಾತಿ ಪಡೆದಿದ್ದಾಳೆ. ಮಳೆ ಬರದಿದ್ದಾಗ ಈ ರೀತಿ ಸಂತೆ ನಡೆಸಿದರೆ ವರುಣ ಕೃಪೆ ತೋರುತ್ತಾನೆ ಎಂಬ ಜನರ ನಂಬಿಕೆ ಮತ್ತಷ್ಟು ಗಟ್ಟಿಗೊಂಡಿದೆ. ಸುಮಾರು 30 ವರ್ಷಕ್ಕೂ ಹಳೇ ಸಂತೆ ಸಂಪ್ರದಾಯ ಹುಸಿಯಾಗದೇ ಮಳೆ ಬಂದಿದ್ದು ರೈತರು, ಜನರ ಮೊಗದಲ್ಲಿ ಮಂದಹಾಸ ಮೂಡಿದೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ) ದಾವಣಗೆರೆ; ನಗರ ದೇವತೆ ದುಗ್ಗಮ್ಮ ದೇವಸ್ಥಾನ ಮುಂಭಾಗ ಸಂತೆ ನಡೆಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ‌ ಇಲ್ಲಿನ ಜನರದ್ದು, ಕಾಕತಾಳೀಯವೋ ಅಥವಾ ದೇವಿಯ ಅನುಗ್ರಹವೋ‌ ಗೊತ್ತಿಲ್ಲ ಸಂತೆ ನಡೆಸಿ ಮೂರೇ ದಿನಕ್ಕೆ ದಾವಣಗೆರೆಯಲ್ಲಿ ಉತ್ತಮ‌ ಮಳೆಯಾಗಿದ್ದು ಸಂತೆ ಸಂಪ್ರದಾಯ ಮತ್ತಷ್ಟು ಗಟ್ಟಿಯಾಗಿಸಿದೆ.. ಹೌದು.. ಇಲ್ಲಿನ ಶಕ್ತಿ ದೇವತೆ ದಾವಣಗೆರೆ ದುಗ್ಗಮ್ಮ, ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮಳೆ ಬಾರದಕ್ಕೆ ಮಳೆಗಾಗಿ ಪ್ರಾರ್ಥಿಸಿ ದುಗ್ಗಮ್ಮನ ಸನ್ನಿಧಾನದ ಆವರಣದಲ್ಲಿ ದೇವಸ್ಥಾನ ಕಮಿಟಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಸಂತೆ ನಡೆಸಲಾಗಿತ್ತು.. ಈ ಒಂದು ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ, ಸಕಾಲಕ್ಕೆ ಮಳೆಯಾಗದೇ ಬರಗಾಲ ಪರಿಸ್ಥಿತಿ ಎದುರಾದಾಗ ಇಲ್ಲಿನ ನಗರ ದೇವತೆ ಶ್ರೀದುರ್ಗಾಂಬಿಕ ದೇವಸ್ಥಾನ ಆವರಣದಲ್ಲಿ ವಾರದ ಸಂತೆ ನಡೆಸಲಾಗುತ್ತೆ, ದಾವಣಗೆರೆ ನಗರ ಮತ್ತು ಸುತ್ತಮುತ್ತಲು ಮಳೆಯ ದರ್ಶನವೇ ಆಗಿರಲಿಲ್ಲ, ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿತ್ತು, ಕೊಳವೆ ಬಾವಿಯಲ್ಲೂ ನೀರಿಲ್ಲದಂತಾಗಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಹಂತಕ್ಕೆ ತಲುಪಿತ್ತು. ಒಂದೇ ಭಾರಿಯೂ ಗಟ್ಟಿ, ಹಸಿ ಮಳೆಯೂ ಆಗಿಲ್ಲ, ಹೀಗಾಗಿಯೇ ಸತತ ಐದು ಭಾನುವಾರದಂದು ದೇವಸ್ಥಾನ ಮುಂಭಾಗ ಸಂತೆ ಆಯೋಜಿಸಿದರೆ ಅಮ್ಮನ ಕೃಪೆಗೆ ಪಾತ್ರರಾಗಿ ತಪ್ಪದೇ ಮಳೆ ಬರುತ್ತದೆ ಎಂದು ಇಲ್ಲಿನ ಜನರ ನಂಬಿಕೆಯಾಗಿತ್ತು.. ತಪ್ಪದೇ ಮಳೆ ಬಂತು.. ಹೌದು.. ಕಳೆದ ಎರಡು ದಿನದ ಹಿಂದೆ ಅಂದರೆ ಭಾನುವಾರ ಮೊದಲ ಸಂತೆ ನಡೆಸಲಾಗಿತ್ತು, ಮಳೆ ಬರಲಿ ಎಂದು ದುಗ್ಗಮ್ಮ ದೇವಸ್ಥಾನ ಮುಂಭಾಗ ಸಂತೆ ಹಾಕಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಅಂದು ಹಿರಿಯರು ಹೇಳಿದಂತೆ ಮೂರೇ ದಿನಕ್ಕೆ ದಾವಣಗೆರೆಯಲ್ಲಿ ಉತ್ತಮ ಮಳೆಯಾಗಿದೆ.. ಇಂದು ಮಧ್ಯಾಹ್ನ ಸುಮಾರು ಅರ್ಧ ಗಂಟೆಗೆ ಹೆಚ್ಚು ಸಮಯ ಮಳೆ ಬಂದಿದ್ದು, ಇದು ದೇವಿಯ ಶಕ್ತಿ ಎಂದು ಇಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ... ಒಟ್ಟಾರೆ ದಾವಣಗೆರೆ ದುಗ್ಗಮ್ಮ ಎಂದರೆ ಮಳೆಯ ದೇವತೆ ಎಂದೇ ಖ್ಯಾತಿ, ಮಳೆ ಬರದಿದ್ದಾಗ ಈ ರೀತಿ ಸಂತೆ ನಡೆಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇಂದು ಮತ್ತಷ್ಟು ಗಟ್ಟಿಯಾಗಿದ್ದು ಸುಮಾರು ಮೂವತ್ತು ವರ್ಷಕ್ಕೂ ಹಳೇ ಸಂತೆ ಸಂಪ್ರದಾಯ ಹುಸಿಯಾಗದೇ ಮಳೆ ಬಂದಿದ್ದು ರೈತರಿಗೆ, ಜನರಿಗೆ ಜೀವಕಳೆ ಬಂದತಾಗಿದೆ.. ಪ್ಲೊ...


Body:(ಸ್ಟ್ರಿಂಜರ್; ಮಧುದಾವಣಗೆರೆ) ದಾವಣಗೆರೆ; ನಗರ ದೇವತೆ ದುಗ್ಗಮ್ಮ ದೇವಸ್ಥಾನ ಮುಂಭಾಗ ಸಂತೆ ನಡೆಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ‌ ಇಲ್ಲಿನ ಜನರದ್ದು, ಕಾಕತಾಳೀಯವೋ ಅಥವಾ ದೇವಿಯ ಅನುಗ್ರಹವೋ‌ ಗೊತ್ತಿಲ್ಲ ಸಂತೆ ನಡೆಸಿ ಮೂರೇ ದಿನಕ್ಕೆ ದಾವಣಗೆರೆಯಲ್ಲಿ ಉತ್ತಮ‌ ಮಳೆಯಾಗಿದ್ದು ಸಂತೆ ಸಂಪ್ರದಾಯ ಮತ್ತಷ್ಟು ಗಟ್ಟಿಯಾಗಿಸಿದೆ.. ಹೌದು.. ಇಲ್ಲಿನ ಶಕ್ತಿ ದೇವತೆ ದಾವಣಗೆರೆ ದುಗ್ಗಮ್ಮ, ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮಳೆ ಬಾರದಕ್ಕೆ ಮಳೆಗಾಗಿ ಪ್ರಾರ್ಥಿಸಿ ದುಗ್ಗಮ್ಮನ ಸನ್ನಿಧಾನದ ಆವರಣದಲ್ಲಿ ದೇವಸ್ಥಾನ ಕಮಿಟಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಸಂತೆ ನಡೆಸಲಾಗಿತ್ತು.. ಈ ಒಂದು ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ, ಸಕಾಲಕ್ಕೆ ಮಳೆಯಾಗದೇ ಬರಗಾಲ ಪರಿಸ್ಥಿತಿ ಎದುರಾದಾಗ ಇಲ್ಲಿನ ನಗರ ದೇವತೆ ಶ್ರೀದುರ್ಗಾಂಬಿಕ ದೇವಸ್ಥಾನ ಆವರಣದಲ್ಲಿ ವಾರದ ಸಂತೆ ನಡೆಸಲಾಗುತ್ತೆ, ದಾವಣಗೆರೆ ನಗರ ಮತ್ತು ಸುತ್ತಮುತ್ತಲು ಮಳೆಯ ದರ್ಶನವೇ ಆಗಿರಲಿಲ್ಲ, ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿತ್ತು, ಕೊಳವೆ ಬಾವಿಯಲ್ಲೂ ನೀರಿಲ್ಲದಂತಾಗಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಹಂತಕ್ಕೆ ತಲುಪಿತ್ತು. ಒಂದೇ ಭಾರಿಯೂ ಗಟ್ಟಿ, ಹಸಿ ಮಳೆಯೂ ಆಗಿಲ್ಲ, ಹೀಗಾಗಿಯೇ ಸತತ ಐದು ಭಾನುವಾರದಂದು ದೇವಸ್ಥಾನ ಮುಂಭಾಗ ಸಂತೆ ಆಯೋಜಿಸಿದರೆ ಅಮ್ಮನ ಕೃಪೆಗೆ ಪಾತ್ರರಾಗಿ ತಪ್ಪದೇ ಮಳೆ ಬರುತ್ತದೆ ಎಂದು ಇಲ್ಲಿನ ಜನರ ನಂಬಿಕೆಯಾಗಿತ್ತು.. ತಪ್ಪದೇ ಮಳೆ ಬಂತು.. ಹೌದು.. ಕಳೆದ ಎರಡು ದಿನದ ಹಿಂದೆ ಅಂದರೆ ಭಾನುವಾರ ಮೊದಲ ಸಂತೆ ನಡೆಸಲಾಗಿತ್ತು, ಮಳೆ ಬರಲಿ ಎಂದು ದುಗ್ಗಮ್ಮ ದೇವಸ್ಥಾನ ಮುಂಭಾಗ ಸಂತೆ ಹಾಕಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಅಂದು ಹಿರಿಯರು ಹೇಳಿದಂತೆ ಮೂರೇ ದಿನಕ್ಕೆ ದಾವಣಗೆರೆಯಲ್ಲಿ ಉತ್ತಮ ಮಳೆಯಾಗಿದೆ.. ಇಂದು ಮಧ್ಯಾಹ್ನ ಸುಮಾರು ಅರ್ಧ ಗಂಟೆಗೆ ಹೆಚ್ಚು ಸಮಯ ಮಳೆ ಬಂದಿದ್ದು, ಇದು ದೇವಿಯ ಶಕ್ತಿ ಎಂದು ಇಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ... ಒಟ್ಟಾರೆ ದಾವಣಗೆರೆ ದುಗ್ಗಮ್ಮ ಎಂದರೆ ಮಳೆಯ ದೇವತೆ ಎಂದೇ ಖ್ಯಾತಿ, ಮಳೆ ಬರದಿದ್ದಾಗ ಈ ರೀತಿ ಸಂತೆ ನಡೆಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇಂದು ಮತ್ತಷ್ಟು ಗಟ್ಟಿಯಾಗಿದ್ದು ಸುಮಾರು ಮೂವತ್ತು ವರ್ಷಕ್ಕೂ ಹಳೇ ಸಂತೆ ಸಂಪ್ರದಾಯ ಹುಸಿಯಾಗದೇ ಮಳೆ ಬಂದಿದ್ದು ರೈತರಿಗೆ, ಜನರಿಗೆ ಜೀವಕಳೆ ಬಂದತಾಗಿದೆ.. ಪ್ಲೊ...


Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.