ETV Bharat / state

ರಾಜಸ್ಥಾನದಲ್ಲಿ ನಡೆದ ಟೈಲರ್ ಹತ್ಯೆ‌ ಖಂಡಿಸಿ ಟೈಲರ್ ಗಳ ಪ್ರತಿಭಟನೆ - Protest of tailors in davangere

ರಾಜಸ್ಥಾನದ ಟೈಲರ್​ ಶಿರಚ್ಛೇದ- ಬೀದಿಗಿಳಿದ ಹೊಲಿಗೆ ಕ್ಷೇಮಾಭಿವೃದ್ಧಿ ಸಂಘಟನೆ - ನರಹಂತಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

protest-of-tailors-condemning-the-killing-of-person-in-rajasthan
ರಾಜಸ್ಥಾನದಲ್ಲಿ ನಡೆದ ಟೈಲರ್ ಹತ್ಯೆ‌ ಖಂಡಿಸಿ ಟೈಲರ್ ಗಳ ಪ್ರತಿಭಟನೆ
author img

By

Published : Jun 30, 2022, 7:33 PM IST

ದಾವಣಗೆರೆ : ರಾಜಸ್ಥಾನದ ಉದಯಪುರದಲ್ಲಿ ನಡೆದ ಬಡ ಟೈಲರ್ ಶಿರಚ್ಛೇದ ಪ್ರಕರಣವನ್ನು ಖಂಡಿಸಿ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಟೈಲರನ್ನು ಹತ್ಯೆ ಮಾಡಿದ ನರಹಂತಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಜಸ್ಥಾನದಲ್ಲಿ ನಡೆದ ಟೈಲರ್ ಹತ್ಯೆ‌ ಖಂಡಿಸಿ ಟೈಲರ್ ಗಳ ಪ್ರತಿಭಟನೆ

ನಗರದ ಜಯದೇವ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಾಕಷ್ಟು ಜನ ಟೈಲರ್ ಗಳು ಭಾಗಿಯಾಗಿದ್ದರು. ಜೊತೆಗೆ ಕೆಲ ಮುಸ್ಲಿಂ ಟೈಲರ್ ಗಳೂ ಹತ್ಯೆಯನ್ನು ಖಂಡಿಸಿ ನರಹಂತಕರನ್ನು ಗಲ್ಲಿಗೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಈ ವೇಳೆ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಕೆ. ಜಿ ಯಲ್ಲಪ್ಪ ಮಾತನಾಡಿ, ಈ ಹತ್ಯೆಯಿಂದ ಇಡೀ ದೇಶದ ಜನರು ದಿಗ್ಭ್ರಮೆಗೊಂಡಿದ್ದಾರೆ. ಅಮಾನುಷವಾಗಿ ಬಡ ಟೈಲರ್ ಹತ್ಯೆ ಮಾಡಲಾಗಿದ್ದು, ಇದು ಖಂಡನೀಯ ಎಂದರು.

ಬಡ ಟೈಲರ್ ಕನ್ಹಯ್ಯ ಲಾಲ್ ನ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. ಅವರ ಮಕ್ಕಳಿಗೆ ಉಚಿತ‌ ಶಿಕ್ಷಣವನ್ನು ಒದಗಿಸಬೇಕು. ಇದಲ್ಲದೆ ದೇಶದ ಪ್ರತಿಯೊಂದು ರಾಜ್ಯದಲ್ಲಿರುವ ಬಡ ಟೈಲರ್ ಗಳಿಗೆ ಆಯಾ ಸರ್ಕಾರಗಳು ರಕ್ಷಣೆ ನೀಡಬೇಕೆಂದು ಇದೇ ವೇಳೆ ಮನವಿ ಮಾಡಿದರು.

ಓದಿ : ಮದರಸಾದಿಂದ ವಾಪಸ್​ ಆಗುತ್ತಿದ್ದವನ ಮೇಲೆ ಹಲ್ಲೆ ಕೇಸ್​ಗೆ ಟ್ವಿಸ್ಟ್​: ಬಾಲಕನ ಕಿತಾಪತಿ ಏನ್​ ಗೊತ್ತಾ!?

ದಾವಣಗೆರೆ : ರಾಜಸ್ಥಾನದ ಉದಯಪುರದಲ್ಲಿ ನಡೆದ ಬಡ ಟೈಲರ್ ಶಿರಚ್ಛೇದ ಪ್ರಕರಣವನ್ನು ಖಂಡಿಸಿ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಟೈಲರನ್ನು ಹತ್ಯೆ ಮಾಡಿದ ನರಹಂತಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಜಸ್ಥಾನದಲ್ಲಿ ನಡೆದ ಟೈಲರ್ ಹತ್ಯೆ‌ ಖಂಡಿಸಿ ಟೈಲರ್ ಗಳ ಪ್ರತಿಭಟನೆ

ನಗರದ ಜಯದೇವ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಾಕಷ್ಟು ಜನ ಟೈಲರ್ ಗಳು ಭಾಗಿಯಾಗಿದ್ದರು. ಜೊತೆಗೆ ಕೆಲ ಮುಸ್ಲಿಂ ಟೈಲರ್ ಗಳೂ ಹತ್ಯೆಯನ್ನು ಖಂಡಿಸಿ ನರಹಂತಕರನ್ನು ಗಲ್ಲಿಗೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಈ ವೇಳೆ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಕೆ. ಜಿ ಯಲ್ಲಪ್ಪ ಮಾತನಾಡಿ, ಈ ಹತ್ಯೆಯಿಂದ ಇಡೀ ದೇಶದ ಜನರು ದಿಗ್ಭ್ರಮೆಗೊಂಡಿದ್ದಾರೆ. ಅಮಾನುಷವಾಗಿ ಬಡ ಟೈಲರ್ ಹತ್ಯೆ ಮಾಡಲಾಗಿದ್ದು, ಇದು ಖಂಡನೀಯ ಎಂದರು.

ಬಡ ಟೈಲರ್ ಕನ್ಹಯ್ಯ ಲಾಲ್ ನ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. ಅವರ ಮಕ್ಕಳಿಗೆ ಉಚಿತ‌ ಶಿಕ್ಷಣವನ್ನು ಒದಗಿಸಬೇಕು. ಇದಲ್ಲದೆ ದೇಶದ ಪ್ರತಿಯೊಂದು ರಾಜ್ಯದಲ್ಲಿರುವ ಬಡ ಟೈಲರ್ ಗಳಿಗೆ ಆಯಾ ಸರ್ಕಾರಗಳು ರಕ್ಷಣೆ ನೀಡಬೇಕೆಂದು ಇದೇ ವೇಳೆ ಮನವಿ ಮಾಡಿದರು.

ಓದಿ : ಮದರಸಾದಿಂದ ವಾಪಸ್​ ಆಗುತ್ತಿದ್ದವನ ಮೇಲೆ ಹಲ್ಲೆ ಕೇಸ್​ಗೆ ಟ್ವಿಸ್ಟ್​: ಬಾಲಕನ ಕಿತಾಪತಿ ಏನ್​ ಗೊತ್ತಾ!?

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.