ETV Bharat / state

ವಿದ್ಯುತ್​ ಬಿಲ್ ದುಪ್ಪಟ್ಟು: ಜೆಡಿಎಸ್ ನಾಯಕತ್ವದಲ್ಲಿ ಪ್ರತಿಭಟನೆ

author img

By

Published : Jun 13, 2020, 10:25 PM IST

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿ ತಿಂಗಳು ಬರುತ್ತಿದ್ದ ವಿದ್ಯುತ್​​ ಬಿಲ್​​ಗಿಂತ ಹೆಚ್ಚಿನ ದರ ಬರುತ್ತಿದೆ. ಇದಕ್ಕೆ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.

Protest in Davanagere
ಕರೆಂಟ್ ಬಿಲ್ ದುಪ್ಪಟ್ಟು: ಜೆಡಿಎಸ್ ನಾಯಕತ್ವದಲ್ಲಿ ಪ್ರತಿಭಟನೆ

ದಾವಣಗೆರೆ: ವಿದ್ಯುತ್​​ ಬಿಲ್ ದುಪ್ಪಟ್ಟು ಬಂದಿರುವುದನ್ನು ವಿರೋಧಿಸಿ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಇಂದು ಸ್ಥಳೀಯರು ಪ್ರತಿಭಟನೆ ನಡೆಸಿದರು.

Protest in Davanagere
ಕರೆಂಟ್ ಬಿಲ್ ದುಪ್ಪಟ್ಟು: ಜೆಡಿಎಸ್ ನಾಯಕತ್ವದಲ್ಲಿ ಪ್ರತಿಭಟನೆ

ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜನರುಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿ ತಿಂಗಳು ಬರುತ್ತಿದ್ದ ಬಿಲ್​ಗಿಂತ ಹೆಚ್ಚಿನ ದರ ಬರುತ್ತಿದೆ. ಇದಕ್ಕೆ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.‌ ಕಳೆದ ಮೂರು ತಿಂಗಳಲ್ಲಿ ಕೊರೊನಾ ಹಿನ್ನೆಲೆ ಕೆಲ ಪ್ರದೇಶಗಳನ್ನು ಕಂಟೈನ್​ಮೆಂಟ್ ಝೋನ್ ಹಾಗೂ ಸೀಲ್​ಡೌನ್ ಮಾಡಲಾಗಿದೆ. ಕೆಲಸವಿಲ್ಲದೆ, ‌ಕೈಯಲ್ಲಿ ಹಣ ಇಲ್ಲದೆ ಪರದಾಡುತ್ತಿದ್ದೇವೆ. ಹೆಚ್ಚಿನ ಬಿಲ್ ಬಂದರೆ ಪಾವತಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಮೊದಲು ಕೇವಲ 150 ರೂಪಾಯಿ ಬಿಲ್ ಬರುತಿತ್ತು. ಆದ್ರೆ ಈಗ 8 ರಿಂದ 10 ಸಾವಿರ ರೂಪಾಯಿ ಬರುತ್ತಿದೆ. ಇಂತಹ ಎಡವಟ್ಟು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈಗ ನೀಡಿರುವ ಬಿಲ್ ಅನ್ನು ವಾಪಾಸ್ ಪಡೆದು ಹಳೆಯ ಬಿಲ್ ಬರುತ್ತಿದ್ದ ರೀತಿಯಲ್ಲಿ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ದಾವಣಗೆರೆ: ವಿದ್ಯುತ್​​ ಬಿಲ್ ದುಪ್ಪಟ್ಟು ಬಂದಿರುವುದನ್ನು ವಿರೋಧಿಸಿ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಇಂದು ಸ್ಥಳೀಯರು ಪ್ರತಿಭಟನೆ ನಡೆಸಿದರು.

Protest in Davanagere
ಕರೆಂಟ್ ಬಿಲ್ ದುಪ್ಪಟ್ಟು: ಜೆಡಿಎಸ್ ನಾಯಕತ್ವದಲ್ಲಿ ಪ್ರತಿಭಟನೆ

ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜನರುಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿ ತಿಂಗಳು ಬರುತ್ತಿದ್ದ ಬಿಲ್​ಗಿಂತ ಹೆಚ್ಚಿನ ದರ ಬರುತ್ತಿದೆ. ಇದಕ್ಕೆ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.‌ ಕಳೆದ ಮೂರು ತಿಂಗಳಲ್ಲಿ ಕೊರೊನಾ ಹಿನ್ನೆಲೆ ಕೆಲ ಪ್ರದೇಶಗಳನ್ನು ಕಂಟೈನ್​ಮೆಂಟ್ ಝೋನ್ ಹಾಗೂ ಸೀಲ್​ಡೌನ್ ಮಾಡಲಾಗಿದೆ. ಕೆಲಸವಿಲ್ಲದೆ, ‌ಕೈಯಲ್ಲಿ ಹಣ ಇಲ್ಲದೆ ಪರದಾಡುತ್ತಿದ್ದೇವೆ. ಹೆಚ್ಚಿನ ಬಿಲ್ ಬಂದರೆ ಪಾವತಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಮೊದಲು ಕೇವಲ 150 ರೂಪಾಯಿ ಬಿಲ್ ಬರುತಿತ್ತು. ಆದ್ರೆ ಈಗ 8 ರಿಂದ 10 ಸಾವಿರ ರೂಪಾಯಿ ಬರುತ್ತಿದೆ. ಇಂತಹ ಎಡವಟ್ಟು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈಗ ನೀಡಿರುವ ಬಿಲ್ ಅನ್ನು ವಾಪಾಸ್ ಪಡೆದು ಹಳೆಯ ಬಿಲ್ ಬರುತ್ತಿದ್ದ ರೀತಿಯಲ್ಲಿ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.