ETV Bharat / state

ದಾವಣಗೆರೆಯಲ್ಲಿ ಫೆಬ್ರವರಿ ತಿಂಗಳಲ್ಲಿ ಪಂಚಮಸಾಲಿ ಸಮಾವೇಶ: ಬಸವ ಜಯಮೃತ್ಯುಂಜಯ ಶ್ರೀ

ಪಂಚಮಸಾಲಿ ಲಿಂಗಾಯತ ಸಮಾಜವನ್ನು 2ಎ ಗೆ ಸೇರ್ಪಡೆ ಮಾಡುವ ಕುರಿತು ರಾಜ್ಯ ಸರ್ಕಾರ ಮಾತು ಕೊಟ್ಟಿತ್ತು. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

author img

By ETV Bharat Karnataka Team

Published : Dec 30, 2023, 10:42 PM IST

Updated : Dec 30, 2023, 11:02 PM IST

Basava Jayamrityunjaya Swamiji spoke at the press conference.
ಬಸವ ಜಯಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಸವ ಜಯಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದಾವಣಗೆರೆ: ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಫೆಬ್ರವರಿ ತಿಂಗಳಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯದ ಸಮಾವೇಶ ಮಾಡುತ್ತೇವೆ. ಅಷ್ಟರೊಳಗೆ ಸರ್ಕಾರ ಕೊಟ್ಟ ಮಾತಿನಂತೆ ಪಂಚಮಸಾಲಿ ಲಿಂಗಾಯತ ಸಮುದಾಯ 2ಎ ಸೇರ್ಪಡೆ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜವನ್ನು 2ಎ ಸೇರ್ಪಡೆ ಮಾಡುವ ಕುರಿತು ರಾಜ್ಯ ಸರ್ಕಾರ ಮಾತು ಕೊಟ್ಟಿತ್ತು. ಅದ್ರೆ ಇದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಇದುವರೆಗೂ ಚರ್ಚೆ ಆಗಿಲ್ಲ. ಸರ್ಕಾರ ಕೂಡಲೇ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಾಗಿದೆ. ಇಲ್ಲವಾದರೆ ಮತ್ತೆ ನಾವು ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಶ್ರೀಗಳು ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ರವಾನಿಸಿದ್ದಾರೆ.‌

ಇನ್ನು ಸಮಾವೇಶದ ಸಂಬಂಧ ಜನವರಿ 15 ರಂದು ಕೂಡಲ ಸಂಗಮ ಮಠದಲ್ಲಿ ಸಮುದಾಯದ ಸಭೆ ಕರೆದಿದ್ದೇವೆ. ಫೆಬ್ರವರಿ ತಿಂಗಳಲ್ಲಿ ಮಧ್ಯಕರ್ನಾಟಕ ದಾವಣಗೆರೆಯಲ್ಲಿ ಮತ್ತೆ ಸಮುದಾಯದ ಸಮಾವೇಶ ಮಾಡುತ್ತೇವೆ. ಅಷ್ಟರೊಳಗೆ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂಬ ಒತ್ತಾಯಿಸಿದರು.

ಅಧಿವೇಶನದ ಬಗ್ಗೆ ಶ್ರೀಗಳು ಹೇಳಿದ್ದಿಷ್ಟು; ಇತ್ತೀಚೆಗೆ ನಗರದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ತೆಗೆದುಕೊಂಡ ಹಲವು ನಿರ್ಣಯಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ತೆಗೆದುಕೊಂಡಿರುವ ಕೆಲವು ನಿರ್ಣಯಗಳನ್ನು ಒಕ್ಕೋರಲಿನಿಂದ ನಾವು ಸ್ವಾಗತ ಮಾಡುತ್ತೇವೆ. ಅದರೆ ಜಾತಿ ಗಣತಿಯಲ್ಲಿ ಉಪಜಾತಿಗಳ ಹೆಸರು ಬರೆಸುವ ಬದಲು ವೀರಶೈವ ಲಿಂಗಾಯತ ಎಂದು ಬರೆಸಬೇಕೆಂಬುದು ಸಮುದಾಯದ ಜನರಲ್ಲಿ ಗೊಂದಲ ಉಂಟು ಮಾಡುತ್ತಿದೆ.

ಲಿಂಗಾಯತರ ಕೆಲ ಉಪಜಾತಿಗಳು 2ಎ ಗೆ ಸೇರಿದ್ದು, ನಾವು ಕೂಡ 2ಎ ಮೀಸಲಾತಿ ಪಡೆಯುವ ಉದ್ದೇಶ ಇದೆ. ಇದಲ್ಲದೇ ಕೆಲವೇ ದಿನಗಳಲ್ಲಿ ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡಗಳ ರಾಜ್ಯಾಧ್ಯಕ್ಷರ ಸಭೆ ಕರೆಯುತ್ತೇವೆ. ಲಿಂಗಾಯತ ಎಲ್ಲ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ಜಯಮೃತ್ಯುಂಜಯ ಸ್ವಾಮೀಜಿ ವ್ಯಂಗ್ಯ: ವೀರಶೈವ ಮಹಾಸಭಾ ಅಧಿವೇಶನಕ್ಕೆ ಜಯಮೃತ್ಯುಂಜಯ ತಮಗೆ ಆಹ್ವಾನ ನೀಡದ ವಿಚಾರಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿ, ನಮಗೆ ಈ ಅಧಿವೇಶನದ ಬಗ್ಗೆ ಮಾಹಿತಿ ಇರಲಿಲ್ಲ, ಇದಲ್ಲದೆ ಈ ಕಾರ್ಯಕ್ರಮದ ಬಗ್ಗೆ ನಮ್ಮ ಭಾಗದಲ್ಲಿ ಯಾರಿಗೂ ಗೊತ್ತೇ ಇಲ್ಲ. ನಮ್ಮ ಕಡೆ ಈ ರೀತಿ ಕಾರ್ಯಕ್ರಮಗಳು ಪ್ರತಿದಿನವು ನಡೆಯುತ್ತಿರುತ್ತವೆ ಎಂದು 24ನೇ ಮಹಾ ಅಧಿವೇಶನ ಬಗ್ಗೆ ಜಯಮೃತ್ಯುಂಜಯ ಸ್ವಾಮೀಜಿ ವ್ಯಂಗ್ಯವಾಗಿ ನುಡಿದರು.

ತಮ್ಮನ್ನು ವೈಭವೀಕರಿಸಿಕೊಳ್ಳಲು ಅಧಿವೇಶನ: ನಾವು ವೀರಶೈವ ಲಿಂಗಾಯತರು ಎನ್ನುವುದು ಅವರಿಗೆ ಗೊತ್ತಿರಲಿಲ್ಲ ಅನ್ಸುತ್ತೆ. ಅದಕ್ಕೆ ನಮಗೆ ಅಹ್ವಾನ ನೀಡಿಲ್ಲ. ಯಾರೂ ಕರೆದಿಲ್ಲ, ಕೆಲವರು ವೈಭವೀಕರಿಸಿಕೊಳ್ಳಲು ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದ ಸಮಾವೇಶ ಮಾಡಲಾಗಿದೆ. ಎಂದು ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಮಹಾಸಭಾ 24 ನೇ ಅಧಿವೇಶನ ಯಶಸ್ಸು ಕಂಡಿಲ್ಲ, ಅದನ್ನು ಮಾಡಿದವರೇ ಹೇಳುತ್ತಿದ್ದಾರೆ. ಮಹಾಸಭಾ ಈ ಅಧಿವೇಶನ ಕರೆದರೆ, ಕನಿಷ್ಠ 25 ಲಕ್ಷ ಜನ ಸೇರಬೇಕಿತ್ತು.‌ ಅದ್ರೇ ಅದು ಅಗಿಲ್ಲ, ಈ ಸಮಾವೇಶ ಮಾಡಿ ನಮ್ಮ‌ ಸಮಾಜದ ಶಕ್ತಿ ಇಲ್ಲದಂತೆ ಮಾಡಿದ್ದಾರೆಂದು ಜನ ಆಡಿಕೊಳ್ಳುತ್ತಿದ್ದಾರೆ ಎಂದರು.

ಕೆಲವು ಸ್ವಾಮೀಜಿಗಳಿಗೆ ಸೀಮಿತ: ಈ ಅಧಿವೇಶನ ಕೇವಲ ದಾವಣಗೆರೆ ಕೆಲ ಬೀದಿಗಳಿಗೆ ಫ್ಲೆಕ್ಸ್ ಮಾತ್ರ ಸೀಮಿತವಾಗಿತ್ತು. ವೀರಶೈವ ಲಿಂಗಾಯತ ಮಹಾಸಭಾ ಕೆಲವೇ ಕೆಲವು ಸ್ವಾಮೀಜಿಗಳಿಗೆ ಸೀಮಿತವಾಗಿಲ್ಲ. ಸಾವಿರಾರು ಸ್ವಾಮೀಜಿಗಳು ರಾಜ್ಯದಲ್ಲಿದ್ದರೂ, ಎಲ್ಲರನ್ನೂ ಅಹ್ವಾನ ಮಾಡ್ಬೇಕಿತ್ತು. ಅದನ್ನು ಅವರು ಮಾಡಿಲ್ಲ, ಮಹಾಸಭಾ ಒಂದು ಪಂಗಡವಲ್ಲ, ಎಲ್ಲ ಪಂಗಡಗಳು ಸೇರಿದ್ರೇ ಮಹಾಸಭಾ, ಅದ್ರೇ ಇದು ಕೆಲಸಕ್ಕೆ ಬಾರದ ಪ್ರದರ್ಶನ ಆಗಿಹೋಗಿದೆ. ಮೂರು ಸಾವಿರ ಮಠಾಧೀಶರನ್ನು ಅಹ್ವಾನಿಸಿದ್ದರೆ ಈ ಸಮಾವೇಶದ ಘನತೆ ಹಚ್ಚುತ್ತಿತ್ತು ಎಂದು ಹೇಳಿದರು.

ಇದನ್ನೂ ಓದಿ:ಲೋಕಸಭೆ ಚುನಾವಣೆ ಹಿನ್ನೆಲೆ ರಾಮ ಮಂದಿರ ಉದ್ಘಾಟನೆ : ಸಚಿವ ಡಿ ಸುಧಾಕರ್

ಬಸವ ಜಯಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದಾವಣಗೆರೆ: ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಫೆಬ್ರವರಿ ತಿಂಗಳಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯದ ಸಮಾವೇಶ ಮಾಡುತ್ತೇವೆ. ಅಷ್ಟರೊಳಗೆ ಸರ್ಕಾರ ಕೊಟ್ಟ ಮಾತಿನಂತೆ ಪಂಚಮಸಾಲಿ ಲಿಂಗಾಯತ ಸಮುದಾಯ 2ಎ ಸೇರ್ಪಡೆ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜವನ್ನು 2ಎ ಸೇರ್ಪಡೆ ಮಾಡುವ ಕುರಿತು ರಾಜ್ಯ ಸರ್ಕಾರ ಮಾತು ಕೊಟ್ಟಿತ್ತು. ಅದ್ರೆ ಇದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಇದುವರೆಗೂ ಚರ್ಚೆ ಆಗಿಲ್ಲ. ಸರ್ಕಾರ ಕೂಡಲೇ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಾಗಿದೆ. ಇಲ್ಲವಾದರೆ ಮತ್ತೆ ನಾವು ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಶ್ರೀಗಳು ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ರವಾನಿಸಿದ್ದಾರೆ.‌

ಇನ್ನು ಸಮಾವೇಶದ ಸಂಬಂಧ ಜನವರಿ 15 ರಂದು ಕೂಡಲ ಸಂಗಮ ಮಠದಲ್ಲಿ ಸಮುದಾಯದ ಸಭೆ ಕರೆದಿದ್ದೇವೆ. ಫೆಬ್ರವರಿ ತಿಂಗಳಲ್ಲಿ ಮಧ್ಯಕರ್ನಾಟಕ ದಾವಣಗೆರೆಯಲ್ಲಿ ಮತ್ತೆ ಸಮುದಾಯದ ಸಮಾವೇಶ ಮಾಡುತ್ತೇವೆ. ಅಷ್ಟರೊಳಗೆ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂಬ ಒತ್ತಾಯಿಸಿದರು.

ಅಧಿವೇಶನದ ಬಗ್ಗೆ ಶ್ರೀಗಳು ಹೇಳಿದ್ದಿಷ್ಟು; ಇತ್ತೀಚೆಗೆ ನಗರದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ತೆಗೆದುಕೊಂಡ ಹಲವು ನಿರ್ಣಯಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ತೆಗೆದುಕೊಂಡಿರುವ ಕೆಲವು ನಿರ್ಣಯಗಳನ್ನು ಒಕ್ಕೋರಲಿನಿಂದ ನಾವು ಸ್ವಾಗತ ಮಾಡುತ್ತೇವೆ. ಅದರೆ ಜಾತಿ ಗಣತಿಯಲ್ಲಿ ಉಪಜಾತಿಗಳ ಹೆಸರು ಬರೆಸುವ ಬದಲು ವೀರಶೈವ ಲಿಂಗಾಯತ ಎಂದು ಬರೆಸಬೇಕೆಂಬುದು ಸಮುದಾಯದ ಜನರಲ್ಲಿ ಗೊಂದಲ ಉಂಟು ಮಾಡುತ್ತಿದೆ.

ಲಿಂಗಾಯತರ ಕೆಲ ಉಪಜಾತಿಗಳು 2ಎ ಗೆ ಸೇರಿದ್ದು, ನಾವು ಕೂಡ 2ಎ ಮೀಸಲಾತಿ ಪಡೆಯುವ ಉದ್ದೇಶ ಇದೆ. ಇದಲ್ಲದೇ ಕೆಲವೇ ದಿನಗಳಲ್ಲಿ ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡಗಳ ರಾಜ್ಯಾಧ್ಯಕ್ಷರ ಸಭೆ ಕರೆಯುತ್ತೇವೆ. ಲಿಂಗಾಯತ ಎಲ್ಲ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ಜಯಮೃತ್ಯುಂಜಯ ಸ್ವಾಮೀಜಿ ವ್ಯಂಗ್ಯ: ವೀರಶೈವ ಮಹಾಸಭಾ ಅಧಿವೇಶನಕ್ಕೆ ಜಯಮೃತ್ಯುಂಜಯ ತಮಗೆ ಆಹ್ವಾನ ನೀಡದ ವಿಚಾರಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿ, ನಮಗೆ ಈ ಅಧಿವೇಶನದ ಬಗ್ಗೆ ಮಾಹಿತಿ ಇರಲಿಲ್ಲ, ಇದಲ್ಲದೆ ಈ ಕಾರ್ಯಕ್ರಮದ ಬಗ್ಗೆ ನಮ್ಮ ಭಾಗದಲ್ಲಿ ಯಾರಿಗೂ ಗೊತ್ತೇ ಇಲ್ಲ. ನಮ್ಮ ಕಡೆ ಈ ರೀತಿ ಕಾರ್ಯಕ್ರಮಗಳು ಪ್ರತಿದಿನವು ನಡೆಯುತ್ತಿರುತ್ತವೆ ಎಂದು 24ನೇ ಮಹಾ ಅಧಿವೇಶನ ಬಗ್ಗೆ ಜಯಮೃತ್ಯುಂಜಯ ಸ್ವಾಮೀಜಿ ವ್ಯಂಗ್ಯವಾಗಿ ನುಡಿದರು.

ತಮ್ಮನ್ನು ವೈಭವೀಕರಿಸಿಕೊಳ್ಳಲು ಅಧಿವೇಶನ: ನಾವು ವೀರಶೈವ ಲಿಂಗಾಯತರು ಎನ್ನುವುದು ಅವರಿಗೆ ಗೊತ್ತಿರಲಿಲ್ಲ ಅನ್ಸುತ್ತೆ. ಅದಕ್ಕೆ ನಮಗೆ ಅಹ್ವಾನ ನೀಡಿಲ್ಲ. ಯಾರೂ ಕರೆದಿಲ್ಲ, ಕೆಲವರು ವೈಭವೀಕರಿಸಿಕೊಳ್ಳಲು ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದ ಸಮಾವೇಶ ಮಾಡಲಾಗಿದೆ. ಎಂದು ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಮಹಾಸಭಾ 24 ನೇ ಅಧಿವೇಶನ ಯಶಸ್ಸು ಕಂಡಿಲ್ಲ, ಅದನ್ನು ಮಾಡಿದವರೇ ಹೇಳುತ್ತಿದ್ದಾರೆ. ಮಹಾಸಭಾ ಈ ಅಧಿವೇಶನ ಕರೆದರೆ, ಕನಿಷ್ಠ 25 ಲಕ್ಷ ಜನ ಸೇರಬೇಕಿತ್ತು.‌ ಅದ್ರೇ ಅದು ಅಗಿಲ್ಲ, ಈ ಸಮಾವೇಶ ಮಾಡಿ ನಮ್ಮ‌ ಸಮಾಜದ ಶಕ್ತಿ ಇಲ್ಲದಂತೆ ಮಾಡಿದ್ದಾರೆಂದು ಜನ ಆಡಿಕೊಳ್ಳುತ್ತಿದ್ದಾರೆ ಎಂದರು.

ಕೆಲವು ಸ್ವಾಮೀಜಿಗಳಿಗೆ ಸೀಮಿತ: ಈ ಅಧಿವೇಶನ ಕೇವಲ ದಾವಣಗೆರೆ ಕೆಲ ಬೀದಿಗಳಿಗೆ ಫ್ಲೆಕ್ಸ್ ಮಾತ್ರ ಸೀಮಿತವಾಗಿತ್ತು. ವೀರಶೈವ ಲಿಂಗಾಯತ ಮಹಾಸಭಾ ಕೆಲವೇ ಕೆಲವು ಸ್ವಾಮೀಜಿಗಳಿಗೆ ಸೀಮಿತವಾಗಿಲ್ಲ. ಸಾವಿರಾರು ಸ್ವಾಮೀಜಿಗಳು ರಾಜ್ಯದಲ್ಲಿದ್ದರೂ, ಎಲ್ಲರನ್ನೂ ಅಹ್ವಾನ ಮಾಡ್ಬೇಕಿತ್ತು. ಅದನ್ನು ಅವರು ಮಾಡಿಲ್ಲ, ಮಹಾಸಭಾ ಒಂದು ಪಂಗಡವಲ್ಲ, ಎಲ್ಲ ಪಂಗಡಗಳು ಸೇರಿದ್ರೇ ಮಹಾಸಭಾ, ಅದ್ರೇ ಇದು ಕೆಲಸಕ್ಕೆ ಬಾರದ ಪ್ರದರ್ಶನ ಆಗಿಹೋಗಿದೆ. ಮೂರು ಸಾವಿರ ಮಠಾಧೀಶರನ್ನು ಅಹ್ವಾನಿಸಿದ್ದರೆ ಈ ಸಮಾವೇಶದ ಘನತೆ ಹಚ್ಚುತ್ತಿತ್ತು ಎಂದು ಹೇಳಿದರು.

ಇದನ್ನೂ ಓದಿ:ಲೋಕಸಭೆ ಚುನಾವಣೆ ಹಿನ್ನೆಲೆ ರಾಮ ಮಂದಿರ ಉದ್ಘಾಟನೆ : ಸಚಿವ ಡಿ ಸುಧಾಕರ್

Last Updated : Dec 30, 2023, 11:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.