ETV Bharat / state

ರಾಮ ಮಂದಿರ ನಿರ್ಮಾಣಕ್ಕೆ ದಾವಣಗೆರೆ ಜಿಲ್ಲೆಯಲ್ಲೇ ಪ್ರಥಮ ದೇಣಿಗೆ ನೀಡಿದ ಮುಸ್ಲಿಂ ಮುಖಂಡ

author img

By

Published : Jan 16, 2021, 2:11 PM IST

ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂ ಮುಖಂಡನೋರ್ವ ದೇಣಿಗೆ ನೀಡಿ ಸಾಮರಸ್ಯ ಮೆರೆದಿದ್ದಾರೆ. ಇದು ದಾವಣಗೆರೆ ಜಿಲ್ಲೆಯಲ್ಲೇ ಮುಸ್ಲಿಂ ವ್ಯಕ್ತಿ ನೀಡಿದ ಮೊದಲ ದೇಣಿಗೆ.

Muslim leader donated money
ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಮುಸ್ಲಿಂ ಮುಖಂಡ

ದಾವಣಗೆರೆ: ರಾಮ ಮಂದಿರ ನಿರ್ಮಾಣ ಮಾಡಲು ಸಂಬಂಧಪಟ್ಟ ಹಿಂದೂಪರ ಸಂಘಟನೆಗಳು ದೇಣಿಗೆ ಎತ್ತುತ್ತಿವೆ. ಈ ನಡುವೆ ಜಿಲ್ಲೆಯಲ್ಲಿ ಮೊದಲಿಗರಾಗಿ ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂ ಮುಖಂಡನೋರ್ವ ದೇಣಿಗೆ ನೀಡಿ ಸಾಮಾಜಿಕ ಸಾಮರಸ್ಯ ಮೆರೆದಿದ್ದಾರೆ.

ಮೂಲತಃ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ‌ ಗ್ರಾ.ಪಂ ಮಾಜಿ ಸದಸ್ಯ ಮುಸ್ತಫೀಜ್‌ ಉಲ್ಲಾ ರಾಮ ಮಂದಿರ ನಿರ್ಮಾಣ ಮಾಡಲು ದೇಣಿಗೆ ನೀಡಿದ್ದಾರೆ. ಸದ್ಯ ಎಷ್ಟು ಹಣವನ್ನು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಇವರು ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಮಹಮದ್ ಶಬ್ಬೀರ್ ಪುತ್ರ.

ಆರ್‌ಎಸ್‌ಎಸ್ ಸ್ವಯಂ ಸೇವಕರಿಗೆ ದೇಣಿಗೆ ನೀಡಿದ ಮುಸ್ತಫೀಜ್‌ಉಲ್ಲಾರವರು ಶ್ರೀರಾಮ ಭಾವೈಕ್ಯತೆ ಸಂಕೇತ ಎಂದು ಸಂದೇಶ ರವಾನಿಸಿದ್ದಾರೆ.

ದಾವಣಗೆರೆ: ರಾಮ ಮಂದಿರ ನಿರ್ಮಾಣ ಮಾಡಲು ಸಂಬಂಧಪಟ್ಟ ಹಿಂದೂಪರ ಸಂಘಟನೆಗಳು ದೇಣಿಗೆ ಎತ್ತುತ್ತಿವೆ. ಈ ನಡುವೆ ಜಿಲ್ಲೆಯಲ್ಲಿ ಮೊದಲಿಗರಾಗಿ ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂ ಮುಖಂಡನೋರ್ವ ದೇಣಿಗೆ ನೀಡಿ ಸಾಮಾಜಿಕ ಸಾಮರಸ್ಯ ಮೆರೆದಿದ್ದಾರೆ.

ಮೂಲತಃ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ‌ ಗ್ರಾ.ಪಂ ಮಾಜಿ ಸದಸ್ಯ ಮುಸ್ತಫೀಜ್‌ ಉಲ್ಲಾ ರಾಮ ಮಂದಿರ ನಿರ್ಮಾಣ ಮಾಡಲು ದೇಣಿಗೆ ನೀಡಿದ್ದಾರೆ. ಸದ್ಯ ಎಷ್ಟು ಹಣವನ್ನು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಇವರು ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಮಹಮದ್ ಶಬ್ಬೀರ್ ಪುತ್ರ.

ಆರ್‌ಎಸ್‌ಎಸ್ ಸ್ವಯಂ ಸೇವಕರಿಗೆ ದೇಣಿಗೆ ನೀಡಿದ ಮುಸ್ತಫೀಜ್‌ಉಲ್ಲಾರವರು ಶ್ರೀರಾಮ ಭಾವೈಕ್ಯತೆ ಸಂಕೇತ ಎಂದು ಸಂದೇಶ ರವಾನಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.