ETV Bharat / state

ಪ್ರವಾಹ ಪೀಡಿತ ಪ್ರದೇಶಗಳಿಗೆ ಈಶ್ವರಪ್ಪ ಭೇಟಿ: ಅಜ್ಜಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಸಚಿವ - Ishwarappa visit to flood areas in Davanagere,

ಸಚಿವ ಕೆ.ಎಸ್ ಈಶ್ವರಪ್ಪ ಅವರು ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ವೇಳೆ ವೃದ್ಧೆ ಕಾಲಿಗೆರಗಿ ನಮಸ್ಕರಿಸಿದರು. ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಹಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದ ವೃದ್ಧೆವೋರ್ವರ ಆಶೀರ್ವಾದವನ್ನು ಸಚಿವರು ಪಡೆದರು.

ಅಜ್ಜಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಸಚಿವ
author img

By

Published : Oct 24, 2019, 7:45 PM IST

ದಾವಣಗೆರೆ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಸಚಿವರು ವೃದ್ಧೆ ಕಾಲಿಗೆರಗಿ ನಮಸ್ಕರಿಸುವ ಮೂಲಕ ಗಮನ ಸೆಳೆದರು.

ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ಶಂಕರ್ ವಿಹಾರ ಬಡಾವಣೆಯಲ್ಲಿ ನೀರು ಬಂದು ಜನರು ಸಂಕಷ್ಟಕ್ಕೀಡಾಗಿದ್ದರು. ಈ ಸ್ಥಳದ ಪರಿಶೀಲನೆಗೆ ಡಿಸಿ ಮಹಾಂತೇಶ್ ಬೀಳಗಿ ನೇತೃತ್ವದ ಅಧಿಕಾರಿಗಳ ತಂಡದ ಜೊತೆ ಈಶ್ವರಪ್ಪ ಆಗಮಿಸಿದ್ದರು.

ಅಜ್ಜಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಸಚಿವ

ವೃದ್ಧೆ ಸುಶೀಲಮ್ಮ ಎಂಬುವರ ಮನೆಯ ಪರಿಸ್ಥಿತಿ ನೋಡಿದ ಈಶ್ವರಪ್ಪ, ಅಜ್ಜಿಗೆ ಸಾಂತ್ವನ ಹೇಳಿದರು. ಅಲ್ಲದೆ ಕೈಮುಗಿದು ನಮಸ್ಕರಿಸಿದರು. ಈ ವೇಳೆ ಅಜ್ಜಿ ಸುಶೀಲಮ್ಮ ತಾವು ಅನುಭವಿಸಿದ ಕಷ್ಟವನ್ನು ಸಚಿವರೆದುರು ತೋಡಿಕೊಂಡ್ರು.

ಸಾಹೆಬ್ರೆ ನಮ್ಮ ಕಷ್ಟ ಹೇಳತೀರದ್ದಾಗಿದೆ. ಇನ್ನು ಯಾವ ಸಹಾಯನೂ ಆಗಿಲ್ಲ.‌ ನಮ್ ಕಡೀನೂ ನೋಡ್ರಿ ಅಂತಾ ವೃದ್ಧೆ ಸುಶೀಲಮ್ಮ ಮನವಿ ಮಾಡಿದರು. ಆಗ ಈಶ್ವರಪ್ಪ ಹೆದರಬೇಡಿ, ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇವೆ. ಆತಂಕಕ್ಕೆ ಒಳಗಾಗಬೇಡಿ ಎಂದು ಈಶ್ವರಪ್ಪ ಭರವಸೆ ನೀಡಿದರು. ಆಗ ಸ್ಥಳದಲ್ಲಿಯೇ ಇದ್ದ ಜಿಲ್ಲಾಧಿಕಾರಿ ಅವರಿಗೆ ಆದಷ್ಟು ಬೇಗ ಪರಿಹಾರ ನೀಡುವಂತೆ ಸೂಚಿಸಿದರು. ಬಳಿಕ ಈಶ್ವರಪ್ಪ ಅಜ್ಜಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ದಾವಣಗೆರೆ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಸಚಿವರು ವೃದ್ಧೆ ಕಾಲಿಗೆರಗಿ ನಮಸ್ಕರಿಸುವ ಮೂಲಕ ಗಮನ ಸೆಳೆದರು.

ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ಶಂಕರ್ ವಿಹಾರ ಬಡಾವಣೆಯಲ್ಲಿ ನೀರು ಬಂದು ಜನರು ಸಂಕಷ್ಟಕ್ಕೀಡಾಗಿದ್ದರು. ಈ ಸ್ಥಳದ ಪರಿಶೀಲನೆಗೆ ಡಿಸಿ ಮಹಾಂತೇಶ್ ಬೀಳಗಿ ನೇತೃತ್ವದ ಅಧಿಕಾರಿಗಳ ತಂಡದ ಜೊತೆ ಈಶ್ವರಪ್ಪ ಆಗಮಿಸಿದ್ದರು.

ಅಜ್ಜಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಸಚಿವ

ವೃದ್ಧೆ ಸುಶೀಲಮ್ಮ ಎಂಬುವರ ಮನೆಯ ಪರಿಸ್ಥಿತಿ ನೋಡಿದ ಈಶ್ವರಪ್ಪ, ಅಜ್ಜಿಗೆ ಸಾಂತ್ವನ ಹೇಳಿದರು. ಅಲ್ಲದೆ ಕೈಮುಗಿದು ನಮಸ್ಕರಿಸಿದರು. ಈ ವೇಳೆ ಅಜ್ಜಿ ಸುಶೀಲಮ್ಮ ತಾವು ಅನುಭವಿಸಿದ ಕಷ್ಟವನ್ನು ಸಚಿವರೆದುರು ತೋಡಿಕೊಂಡ್ರು.

ಸಾಹೆಬ್ರೆ ನಮ್ಮ ಕಷ್ಟ ಹೇಳತೀರದ್ದಾಗಿದೆ. ಇನ್ನು ಯಾವ ಸಹಾಯನೂ ಆಗಿಲ್ಲ.‌ ನಮ್ ಕಡೀನೂ ನೋಡ್ರಿ ಅಂತಾ ವೃದ್ಧೆ ಸುಶೀಲಮ್ಮ ಮನವಿ ಮಾಡಿದರು. ಆಗ ಈಶ್ವರಪ್ಪ ಹೆದರಬೇಡಿ, ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇವೆ. ಆತಂಕಕ್ಕೆ ಒಳಗಾಗಬೇಡಿ ಎಂದು ಈಶ್ವರಪ್ಪ ಭರವಸೆ ನೀಡಿದರು. ಆಗ ಸ್ಥಳದಲ್ಲಿಯೇ ಇದ್ದ ಜಿಲ್ಲಾಧಿಕಾರಿ ಅವರಿಗೆ ಆದಷ್ಟು ಬೇಗ ಪರಿಹಾರ ನೀಡುವಂತೆ ಸೂಚಿಸಿದರು. ಬಳಿಕ ಈಶ್ವರಪ್ಪ ಅಜ್ಜಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

Intro:ರಿಪೋರ್ಟರ್: ಯೋಗರಾಜ್

ವೃದ್ಧೆ ಕಾಲಿಗೆ ಸಚಿವ ಈಶ್ವರಪ್ಪ ಬಿದ್ದಿದ್ದಾದರೂ ಯಾಕೆ...? ಆ ತಾಯಿ ಆಶೀರ್ವಾದ ಪಡೆದಿದ್ಯಾಕೆ...?

ದಾವಣಗೆರೆ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಪ್ರವಾಹಪೀಡಿತ ಪ್ರದೇಶಗಳ ವೀಕ್ಷಣೆ ವೇಳೆ ವೃದ್ಧೆ ಕಾಲಿಗೆರಗಿ ನಮಸ್ಕರಿಸಿದ ಘಟನೆ ನಗರದಲ್ಲಿ ನಡೆಯಿತು.

ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ಶಂಕರ್ ವಿಹಾರ ಬಡಾವಣೆಯಲ್ಲಿ ನೀರು ಬಂದು ಜನರು ಸಂಕಷ್ಟಕ್ಕೀಡಾಗಿದ್ದರು. ಇಲ್ಲಿಗೆ ಪರಿಶೀಲನೆಗೆ ಡಿಸಿ ಮಹಾಂತೇಶ್ ಬೀಳಗಿ ನೇತೃತ್ವದ ಅಧಿಕಾರಿಗಳ ತಂಡದ ಜೊತೆ ಈಶ್ವರಪ್ಪ ಆಗಮಿಸಿದ್ದರು. ಈ ವೇಳೆ ಮನೆಯೊಳಗೆ ವೃದ್ಧೆ ಸುಶೀಲಮ್ಮ ಕುಳಿತಿದ್ದರು.

ಮನೆಯ ಪರಿಸ್ಥಿತಿ ನೋಡಿದ ಈಶ್ವರಪ್ಪ, ಅಜ್ಜಿಗೆ ಸಾಂತ್ವನ ಹೇಳಿದರು. ಕೈಮುಗಿದು ನಮಸ್ಕರಿಸಿದರು. ಆಗ ವೃದ್ಧೆ ಸಾಹೇಬ್ರೆ ನಮ್ಮ ಕಷ್ಟ ಹೇಳತೀರದ್ದಾಗಿದೆ. ಇನ್ನು ಯಾವ ಸಹಾಯನೂ ಆಗಿಲ್ಲ.‌ ನಮ್ ಕಡೀನೂ ನೋಡ್ರಿ ಅಂತಾ ಭಿನ್ನವಿಸಿಕೊಂಡರು. ಆಗ ಈಶ್ವರಪ್ಪ ಹೆದರಬೇಡಿ, ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇವೆ. ಆತಂಕಕ್ಕೆ ಒಳಗಾಗಬೇಡಿ ಎಂದು ಈಶ್ವರಪ್ಪ ಭರವಸೆ ನೀಡಿದರು. ಸ್ಥಳದಲ್ಲಿಯೇ ಇದ್ದ ಜಿಲ್ಲಾಧಿಕಾರಿ ಅವರಿಗೆ ಆದಷ್ಟು ಬೇಗ ಪರಿಹಾರ ನೀಡುವಂತೆ ಸೂಚಿಸಿದರು.


Body:ರಿಪೋರ್ಟರ್: ಯೋಗರಾಜ್

ವೃದ್ಧೆ ಕಾಲಿಗೆ ಸಚಿವ ಈಶ್ವರಪ್ಪ ಬಿದ್ದಿದ್ದಾದರೂ ಯಾಕೆ...? ಆ ತಾಯಿ ಆಶೀರ್ವಾದ ಪಡೆದಿದ್ಯಾಕೆ...?

ದಾವಣಗೆರೆ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಪ್ರವಾಹಪೀಡಿತ ಪ್ರದೇಶಗಳ ವೀಕ್ಷಣೆ ವೇಳೆ ವೃದ್ಧೆ ಕಾಲಿಗೆರಗಿ ನಮಸ್ಕರಿಸಿದ ಘಟನೆ ನಗರದಲ್ಲಿ ನಡೆಯಿತು.

ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ಶಂಕರ್ ವಿಹಾರ ಬಡಾವಣೆಯಲ್ಲಿ ನೀರು ಬಂದು ಜನರು ಸಂಕಷ್ಟಕ್ಕೀಡಾಗಿದ್ದರು. ಇಲ್ಲಿಗೆ ಪರಿಶೀಲನೆಗೆ ಡಿಸಿ ಮಹಾಂತೇಶ್ ಬೀಳಗಿ ನೇತೃತ್ವದ ಅಧಿಕಾರಿಗಳ ತಂಡದ ಜೊತೆ ಈಶ್ವರಪ್ಪ ಆಗಮಿಸಿದ್ದರು. ಈ ವೇಳೆ ಮನೆಯೊಳಗೆ ವೃದ್ಧೆ ಸುಶೀಲಮ್ಮ ಕುಳಿತಿದ್ದರು.

ಮನೆಯ ಪರಿಸ್ಥಿತಿ ನೋಡಿದ ಈಶ್ವರಪ್ಪ, ಅಜ್ಜಿಗೆ ಸಾಂತ್ವನ ಹೇಳಿದರು. ಕೈಮುಗಿದು ನಮಸ್ಕರಿಸಿದರು. ಆಗ ವೃದ್ಧೆ ಸಾಹೇಬ್ರೆ ನಮ್ಮ ಕಷ್ಟ ಹೇಳತೀರದ್ದಾಗಿದೆ. ಇನ್ನು ಯಾವ ಸಹಾಯನೂ ಆಗಿಲ್ಲ.‌ ನಮ್ ಕಡೀನೂ ನೋಡ್ರಿ ಅಂತಾ ಭಿನ್ನವಿಸಿಕೊಂಡರು. ಆಗ ಈಶ್ವರಪ್ಪ ಹೆದರಬೇಡಿ, ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇವೆ. ಆತಂಕಕ್ಕೆ ಒಳಗಾಗಬೇಡಿ ಎಂದು ಈಶ್ವರಪ್ಪ ಭರವಸೆ ನೀಡಿದರು. ಸ್ಥಳದಲ್ಲಿಯೇ ಇದ್ದ ಜಿಲ್ಲಾಧಿಕಾರಿ ಅವರಿಗೆ ಆದಷ್ಟು ಬೇಗ ಪರಿಹಾರ ನೀಡುವಂತೆ ಸೂಚಿಸಿದರು.


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.