ETV Bharat / state

ಫಲಿತಾಂಶದ ಮುನ್ನವೇ ಪಾಲಿಕೆ ಮುಂದೆ ಬಿಜೆಪಿ ಗೆಲುವಿನ ಸಂಭ್ರಮಾಚರಣೆ

author img

By

Published : Feb 24, 2021, 1:08 PM IST

ದಾವಣಗೆರೆ ಪಾಲಿಕೆ ಮೇಯರ್- ಉಪಮೇಯರ್ ಚುನಾವಣೆ ಹಿನ್ನೆಲೆ ಫಲಿತಾಂಶದ ಮುನ್ನವೇ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.

Mayor election in Davanagere
ದಾವಣಗೆರೆ ಪಾಲಿಕೆ ಮೇಯರ್ ಚುನಾವಣೆ

ದಾವಣಗೆರೆ: ಫಲಿತಾಂಶದ ಮುನ್ನವೇ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ. ದಾವಣಗೆರೆ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ಮುಂಭಾಗ ಬಿಜೆಪಿ ಮುಖಂಡರು ಸಂಭ್ರಮಾಚರಣೆ ಮಾಡಿದರು. ಗೆಲುವಿನ ವಿಕ್ಟರಿ ಗುರುತು ತೋರಿಸುವ ಮೂಲಕ ಸಂತಸ ವ್ಯಕ್ತಪಡಿಸಿದರು.

ಮತದಾನ ಆರಂಭಕ್ಕೂ ಮುನ್ನ ಮತದಾನಕ್ಕೆ ಆಗಮಿಸಿದ ಕಾಂಗ್ರೆಸ್, ಬಿಜೆಪಿ ಪಕ್ಷದ ಶಾಸಕರು, ಸಂಸದ, ಎಂಎಲ್​​​​ಸಿ​ಗಳು ಹಾಗೂ ಪಾಲಿಕೆ ಸದಸ್ಯರು ಆಗಮಿಸಿದ ಬಳಿಕ ಚುನಾವಣಾ ಉಸ್ತುವಾರಿ ನವೀನ್ ರಾಜ್ ಸಿಂಗ್ ಅವರು ಆಗಮಿಸಿ ಚುನಾವಣೆ ಪ್ರಕ್ರಿಯೆ ಆರಂಭಿಸಿದರು.

ಕಾಂಗ್ರೆಸ್ ಎಂಎಲ್​ಸಿಗಳಾದ ರಘು ಆಚಾರ್, ಶಾಸಕ ಶಾಮನೂರು ಶಿವಶಂಕರಪ್ಪ ಸೇರಿ ಎಲ್ಲರೂ ಗೈರಾಗಿದ್ದರು. ಇತ್ತ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಎಸ್.ಎ.ರವೀಂದ್ರನಾಥ್, ಸಚಿವ ಆರ್.ಶಂಕರ್, ಎಂಎಲ್​ಸಿ ತೇಜಸ್ವಿನಿ ಗೌಡ, ಎಂಎಲ್​ಸಿ ಚಿದಾನಂದ ಗೌಡ ಕೂಡ ಮತದಾನದಲ್ಲಿ ಭಾಗಿಯಾಗಿದ್ದರು.‌

ದಾವಣಗೆರೆ: ಫಲಿತಾಂಶದ ಮುನ್ನವೇ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ. ದಾವಣಗೆರೆ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ಮುಂಭಾಗ ಬಿಜೆಪಿ ಮುಖಂಡರು ಸಂಭ್ರಮಾಚರಣೆ ಮಾಡಿದರು. ಗೆಲುವಿನ ವಿಕ್ಟರಿ ಗುರುತು ತೋರಿಸುವ ಮೂಲಕ ಸಂತಸ ವ್ಯಕ್ತಪಡಿಸಿದರು.

ಮತದಾನ ಆರಂಭಕ್ಕೂ ಮುನ್ನ ಮತದಾನಕ್ಕೆ ಆಗಮಿಸಿದ ಕಾಂಗ್ರೆಸ್, ಬಿಜೆಪಿ ಪಕ್ಷದ ಶಾಸಕರು, ಸಂಸದ, ಎಂಎಲ್​​​​ಸಿ​ಗಳು ಹಾಗೂ ಪಾಲಿಕೆ ಸದಸ್ಯರು ಆಗಮಿಸಿದ ಬಳಿಕ ಚುನಾವಣಾ ಉಸ್ತುವಾರಿ ನವೀನ್ ರಾಜ್ ಸಿಂಗ್ ಅವರು ಆಗಮಿಸಿ ಚುನಾವಣೆ ಪ್ರಕ್ರಿಯೆ ಆರಂಭಿಸಿದರು.

ಕಾಂಗ್ರೆಸ್ ಎಂಎಲ್​ಸಿಗಳಾದ ರಘು ಆಚಾರ್, ಶಾಸಕ ಶಾಮನೂರು ಶಿವಶಂಕರಪ್ಪ ಸೇರಿ ಎಲ್ಲರೂ ಗೈರಾಗಿದ್ದರು. ಇತ್ತ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಎಸ್.ಎ.ರವೀಂದ್ರನಾಥ್, ಸಚಿವ ಆರ್.ಶಂಕರ್, ಎಂಎಲ್​ಸಿ ತೇಜಸ್ವಿನಿ ಗೌಡ, ಎಂಎಲ್​ಸಿ ಚಿದಾನಂದ ಗೌಡ ಕೂಡ ಮತದಾನದಲ್ಲಿ ಭಾಗಿಯಾಗಿದ್ದರು.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.