ETV Bharat / state

ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳನ್ನು ಒಬಿಸಿಗೆ ಸೇರಿಸಲು ನನ್ನ ಬೆಂಬಲ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್

''ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳನ್ನು ಒಬಿಸಿಗೆ ಸೇರಿಸಲು ನನ್ನ ಬೆಂಬಲವಿದೆ'' ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.

author img

By

Published : Jul 10, 2023, 10:43 PM IST

Minister S S Mallikarjun
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿದರು

ದಾವಣಗೆರೆ: ''ವೀರಶೈವ ಲಿಂಗಾಯತ ಸಮುದಾಯದಲ್ಲಿ ಬರುವ ಒಳಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎನ್ನುವ ಕುರಿತು ಸ್ವಾಮೀಜಿಗಳು ಸಭೆ ಮಾಡಿರುವುದು ನನಗೆ ಗೊತ್ತಿಲ್ಲ. ವೀರಶೈವ ಲಿಂಗಾಯತ ಸಮಾಜದ ಶ್ರೀಗಳು ಯಾವುದೇ ನಿರ್ಣಯ ತೆಗೆದುಕೊಂಡರೂ ಅದಕ್ಕೆ ನನ್ನ ಬೆಂಬಲವಿದೆ'' ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್​.ಎಸ್. ಮಲ್ಲಿಕಾರ್ಜುನ್ ಹೇಳಿದರು.

ನಗರದ ಅವರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಸಭೆ ಬಗ್ಗೆ ನನಗೂ ಅಷ್ಟು ಐಡಿಯಾ ಇಲ್ಲ. ಏನು ಆಗುತ್ತೋ ನೋಡೊಣ. ಈ ಬಗ್ಗೆ ತಿಳಿದುಕೊಂಡು ಮಾತನಾಡುವೆ'' ಎಂದ ಅವರು, ''ಇಂದು ಸೋಮವಾರ ಅನ್ನಭಾಗ್ಯ ಯೋಜನೆ ಚಾಲನೆ ನೀಡಲಾಗಿದೆ. ಐದು ಗ್ಯಾರಂಟಿಗಳನ್ನು ಈಡೇರಿಸಬೇಕಿದೆ'' ಎಂದರು.

ಯಶವಂತ್ ರಾವ್ ಜಾಧವ್​​ಗೆ ತಿರುಗೇಟು: ಚಿತ್ರದುರ್ಗ ತಾಲೂಕಿನ ಭೀಮಸಮುದ್ರದಲ್ಲಿ ನಡೆಯುತ್ತಿರುವ ಮೈನಿಂಗ್ ಪಾಯಿಂಟ್​​ನಲ್ಲಿ ಲಾರಿ ಸಂಚಾರ ಸ್ಥಗಿತವಾಗಿದ್ದು, ಇದರ‌ ಹಿಂದೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕೈವಾಡವಿದೆ ಎಂದು ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್ ಆರೋಪ ಮಾಡಿದ್ದರು. ಅದಕ್ಕೆ ಉತ್ತರಿಸಿದ ಸಚಿವರು, ''ಭೀಮಸಮುದ್ರ ಗಣಿಗಾರಿಕೆಯಲ್ಲಿ ಯಾರು ಎಷ್ಟು ಕಮಿಷನ್ ಹೊಡೆದಿದ್ದಾರೆ? ಯಾರು ಎಷ್ಟು ತಿಂದಿದ್ದಾರೆ? ಮೈನಿಂಗ್ ಪ್ರಕರಣದ ಕುರಿತು ಒಂದೊಂದೇ ಹೊರಗೆ ಬರುತ್ತೆ ತಡೆದುಕೊಳ್ಳಿ'' ಎಂದು ಯಶವಂತ್ ರಾವ್ ಜಾಧವ್​​ಗೆ ತಿರುಗೇಟು ನೀಡಿದರು.

ಬೇಲೇಕೇರಿ ಮೈನಿಂಗ್ ಪ್ರಕರಣದ ಕುರಿತು ಸಚಿವ ಮಲ್ಲಿಕಾರ್ಜುನ್ ಮಾತನಾಡಿ, ''ಬೇಲೇಕೇರಿ ಮೈನಿಂಗ್ ಪ್ರಕರಣದಲ್ಲಿ ಇವರ ಅಜ್ಜ ಹೋಗಿದ್ನೋ, ಇವರ ತಮ್ಮ ಹೋಗಿದ್ನೋ, 1994ರಲ್ಲಿ ಇವರ ಆಸ್ತಿ ಎಷ್ಟಿತ್ತು? ಇವಾಗ 2023 ಹೊತ್ತಿಗೆ ಎಷ್ಟಿದೆ? ಅಷ್ಟೊಂದು ಆಸ್ತಿ ಹಣ ಎಲ್ಲಿಂದ ಬಂತು? ಇವರು ಐದುನೂರು ಕಮಿಷನ್​ ಬಗ್ಗೆ ಮಾತನಾಡುತ್ತಾರೆ. ಮೊದಲು ಮ್ಯಾಂಗನೀಸ್​​ ಐರನ್​​ ಅಂದ್ರೇನು ಎಂದು ತಿಳಿದುಕೊಂಡು ಮಾತನಾಡಲು ಹೇಳಿ. ನಾಲಿಗೆ ಇದೆ ಎಂದು ಹೇಗೆ ಬೇಕಾದರೂ ಹಾಗೆ ಮಾತನಾಡುವುದು ಸರಿಯಲ್ಲ ಎಂದು ಹರಿಹಾಯ್ದರು.

''ಯಾರ ಬಗ್ಗೆ ಮಾತನಾಡಬೇಕಾದ್ರೆ, ತಿಳಿದುಕೊಂಡು, ಪ್ರಜ್ಙೆ ಇಟ್ಕೊಂಡು ಮಾತ್ನಾಡಬೇಕು. ಎಲುಬು ಇಲ್ಲದ ನಾಲಿಗೆ ಇದೆ ಎಂದು ಮಾತ್ನಾಡುವುದಲ್ಲ. ಅವರ ಸಂಸದರನ್ನು ಕೇಳಲು ಹೇಳಿ, ಎಷ್ಟು ಕಮಿಷನ್ ತಿಂದಿದ್ದಾರೆ. ಮೈನಿಂಗ್ ಲಾರಿಯಲ್ಲಿ ಎಷ್ಟು ಕಮಿಷನ್ ಇದೆ ಅಂತ? ಬೇಲೇಕೇರಿ ಮೈನಿಂಗ್​​ನಲ್ಲಿ ಏನ್ ಬದಲಾವಣೆ ಮಾಡಿದ್ದಾರೆ? ಜನರಿಗೆ ಎಷ್ಟು ದಿನ ಮೋಸ ಮಾಡ್ತಾರೆ ಇವರು? ಭೀಮಸಮುದ್ರದಲ್ಲಿ ಮೈನಿಂಗ್ ನಡಿಯುತ್ತಿದ್ದರೂ ಲಾರಿಗಳ ಸಂಚಾರ ಸ್ಥಗಿತಗೊಂಡರೆ, ಇವರಿಗೇಕೆ ಅದರಲ್ಲಿ ಅಷ್ಟು ಆಸಕ್ತಿ? ಅಲ್ಲಿ ಇವರ ಲಾರಿಗಳಿದ್ದಾವಾ? ಇವರೇನು ಸಾಚಾನಾ'' ಎಂದು ತೀವ್ರ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Annabhagya scheme: ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಗೆ ಸಿಎಂ ಚಾಲನೆ.. ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿದರು

ದಾವಣಗೆರೆ: ''ವೀರಶೈವ ಲಿಂಗಾಯತ ಸಮುದಾಯದಲ್ಲಿ ಬರುವ ಒಳಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎನ್ನುವ ಕುರಿತು ಸ್ವಾಮೀಜಿಗಳು ಸಭೆ ಮಾಡಿರುವುದು ನನಗೆ ಗೊತ್ತಿಲ್ಲ. ವೀರಶೈವ ಲಿಂಗಾಯತ ಸಮಾಜದ ಶ್ರೀಗಳು ಯಾವುದೇ ನಿರ್ಣಯ ತೆಗೆದುಕೊಂಡರೂ ಅದಕ್ಕೆ ನನ್ನ ಬೆಂಬಲವಿದೆ'' ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್​.ಎಸ್. ಮಲ್ಲಿಕಾರ್ಜುನ್ ಹೇಳಿದರು.

ನಗರದ ಅವರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಸಭೆ ಬಗ್ಗೆ ನನಗೂ ಅಷ್ಟು ಐಡಿಯಾ ಇಲ್ಲ. ಏನು ಆಗುತ್ತೋ ನೋಡೊಣ. ಈ ಬಗ್ಗೆ ತಿಳಿದುಕೊಂಡು ಮಾತನಾಡುವೆ'' ಎಂದ ಅವರು, ''ಇಂದು ಸೋಮವಾರ ಅನ್ನಭಾಗ್ಯ ಯೋಜನೆ ಚಾಲನೆ ನೀಡಲಾಗಿದೆ. ಐದು ಗ್ಯಾರಂಟಿಗಳನ್ನು ಈಡೇರಿಸಬೇಕಿದೆ'' ಎಂದರು.

ಯಶವಂತ್ ರಾವ್ ಜಾಧವ್​​ಗೆ ತಿರುಗೇಟು: ಚಿತ್ರದುರ್ಗ ತಾಲೂಕಿನ ಭೀಮಸಮುದ್ರದಲ್ಲಿ ನಡೆಯುತ್ತಿರುವ ಮೈನಿಂಗ್ ಪಾಯಿಂಟ್​​ನಲ್ಲಿ ಲಾರಿ ಸಂಚಾರ ಸ್ಥಗಿತವಾಗಿದ್ದು, ಇದರ‌ ಹಿಂದೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕೈವಾಡವಿದೆ ಎಂದು ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್ ಆರೋಪ ಮಾಡಿದ್ದರು. ಅದಕ್ಕೆ ಉತ್ತರಿಸಿದ ಸಚಿವರು, ''ಭೀಮಸಮುದ್ರ ಗಣಿಗಾರಿಕೆಯಲ್ಲಿ ಯಾರು ಎಷ್ಟು ಕಮಿಷನ್ ಹೊಡೆದಿದ್ದಾರೆ? ಯಾರು ಎಷ್ಟು ತಿಂದಿದ್ದಾರೆ? ಮೈನಿಂಗ್ ಪ್ರಕರಣದ ಕುರಿತು ಒಂದೊಂದೇ ಹೊರಗೆ ಬರುತ್ತೆ ತಡೆದುಕೊಳ್ಳಿ'' ಎಂದು ಯಶವಂತ್ ರಾವ್ ಜಾಧವ್​​ಗೆ ತಿರುಗೇಟು ನೀಡಿದರು.

ಬೇಲೇಕೇರಿ ಮೈನಿಂಗ್ ಪ್ರಕರಣದ ಕುರಿತು ಸಚಿವ ಮಲ್ಲಿಕಾರ್ಜುನ್ ಮಾತನಾಡಿ, ''ಬೇಲೇಕೇರಿ ಮೈನಿಂಗ್ ಪ್ರಕರಣದಲ್ಲಿ ಇವರ ಅಜ್ಜ ಹೋಗಿದ್ನೋ, ಇವರ ತಮ್ಮ ಹೋಗಿದ್ನೋ, 1994ರಲ್ಲಿ ಇವರ ಆಸ್ತಿ ಎಷ್ಟಿತ್ತು? ಇವಾಗ 2023 ಹೊತ್ತಿಗೆ ಎಷ್ಟಿದೆ? ಅಷ್ಟೊಂದು ಆಸ್ತಿ ಹಣ ಎಲ್ಲಿಂದ ಬಂತು? ಇವರು ಐದುನೂರು ಕಮಿಷನ್​ ಬಗ್ಗೆ ಮಾತನಾಡುತ್ತಾರೆ. ಮೊದಲು ಮ್ಯಾಂಗನೀಸ್​​ ಐರನ್​​ ಅಂದ್ರೇನು ಎಂದು ತಿಳಿದುಕೊಂಡು ಮಾತನಾಡಲು ಹೇಳಿ. ನಾಲಿಗೆ ಇದೆ ಎಂದು ಹೇಗೆ ಬೇಕಾದರೂ ಹಾಗೆ ಮಾತನಾಡುವುದು ಸರಿಯಲ್ಲ ಎಂದು ಹರಿಹಾಯ್ದರು.

''ಯಾರ ಬಗ್ಗೆ ಮಾತನಾಡಬೇಕಾದ್ರೆ, ತಿಳಿದುಕೊಂಡು, ಪ್ರಜ್ಙೆ ಇಟ್ಕೊಂಡು ಮಾತ್ನಾಡಬೇಕು. ಎಲುಬು ಇಲ್ಲದ ನಾಲಿಗೆ ಇದೆ ಎಂದು ಮಾತ್ನಾಡುವುದಲ್ಲ. ಅವರ ಸಂಸದರನ್ನು ಕೇಳಲು ಹೇಳಿ, ಎಷ್ಟು ಕಮಿಷನ್ ತಿಂದಿದ್ದಾರೆ. ಮೈನಿಂಗ್ ಲಾರಿಯಲ್ಲಿ ಎಷ್ಟು ಕಮಿಷನ್ ಇದೆ ಅಂತ? ಬೇಲೇಕೇರಿ ಮೈನಿಂಗ್​​ನಲ್ಲಿ ಏನ್ ಬದಲಾವಣೆ ಮಾಡಿದ್ದಾರೆ? ಜನರಿಗೆ ಎಷ್ಟು ದಿನ ಮೋಸ ಮಾಡ್ತಾರೆ ಇವರು? ಭೀಮಸಮುದ್ರದಲ್ಲಿ ಮೈನಿಂಗ್ ನಡಿಯುತ್ತಿದ್ದರೂ ಲಾರಿಗಳ ಸಂಚಾರ ಸ್ಥಗಿತಗೊಂಡರೆ, ಇವರಿಗೇಕೆ ಅದರಲ್ಲಿ ಅಷ್ಟು ಆಸಕ್ತಿ? ಅಲ್ಲಿ ಇವರ ಲಾರಿಗಳಿದ್ದಾವಾ? ಇವರೇನು ಸಾಚಾನಾ'' ಎಂದು ತೀವ್ರ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Annabhagya scheme: ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಗೆ ಸಿಎಂ ಚಾಲನೆ.. ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.