ETV Bharat / state

ಯುವ ಪೀಳಿಗೆಗೆ ಮಹಾತ್ಮನ ಜೀವನಾದರ್ಶ ಸಾರಲು ಗಾಂಧಿ ಭವನ ನಿರ್ಮಾಣ

author img

By

Published : Mar 13, 2021, 8:45 AM IST

ದಾವಣಗೆರೆಯಲ್ಲಿ ಮಹಾತ್ಮ ಗಾಂಧೀಜಿಯವರ ಜೀವನಾದರ್ಶ, ಮೌಲ್ಯಗಳು ಹಾಗೂ ಅವರ ಜೀವನ ಚರಿತ್ರೆ ಕುರಿತು ಯುವಪೀಳಿಗೆಗೆ ಸಾರುವ ಉದ್ದೇಶದಿಂದ ಗಾಂಧಿಭವನವನ್ನು ನಿರ್ಮಿಸಲಾಗಿದೆ.

gandibhavan built in davanagare
ಗಾಂಧಿಭವನ

ದಾವಣಗೆರೆ: ಯುವ ಪೀಳಿಗೆಗೆ ಗಾಂಧೀಜಿಯವರ ಜೀವನಾದರ್ಶನಗಳನ್ನು ಸಾರಲು ಬೆಣ್ಣೆನಗರಿಯಲ್ಲೊಂದು ಗಾಂಧಿಭವನ ನಿರ್ಮಾಣವಾಗಿದೆ.

ಈ ಭವನದಲ್ಲಿ ಬಾಪು ಅವರ ಜೀವನಾದರ್ಶಗಳು, ಅವರ ತತ್ವಗಳು, ಹೋರಾಟಗಳನ್ನು ಅನಾವರಣ ಮಾಡಲಾಗಿದೆ. ಇದಲ್ಲದೆ ಮಹಾತ್ಮನ ಸುಂದರ ಕಲಾಕೃತಿಗಳು ತಲೆ ಎತ್ತಿದ್ದು, ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದಿದ್ದ ಹೋರಾಟಗಾರರ ಕಲಾಕೃತಿಗಳು ಜನರ ಗಮನ ಸೆಳೆಯುತ್ತಿವೆ.

ಗಾಂಧಿಭವನ ನಿರ್ಮಾಣ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಈ ಗಾಂಧಿ ಭವನ ನಿರ್ಮಿಸಲಾಗಿದೆ. ನಗರದ ಎಸ್ಎಸ್ ಹೈಟೆಕ್ ಆಸ್ಪತ್ರೆ ಸಮೀಪದ ರಾಮನಗರದಲ್ಲಿರುವ ಮೂರು ಕೋಟಿ ವೆಚ್ಚದ ಗಾಂಧಿಭವನ ಒಂದು ಎಕರೆಯಲ್ಲಿ ಸುಂದರ ಕಲಾಕೃತಿಗಳಿಂದ ಕಂಗೊಳಿಸುತ್ತಿವೆ.
ಗಾಂಧೀಜಿಯವರ ಜೀವನಚರಿತ್ರೆ ತಿಳಿದುಕೊಳ್ಳಬಯಸುವವರಿಗಾಗಿ ಸುಂದರ ಗ್ರಂಥಾಲಯ, ಮ್ಯೂಸಿಯಂ ಸಹ ನಿರ್ಮಿಸಲಾಗಿದೆ. ಮಹಾತ್ಮ ಗಾಂಧೀಜಿಯವರು ನಡೆಸಿದ ದಂಡಿಯಾತ್ರೆಯ ಕಲಾಕೃತಿ, ಮಕ್ಕಳನ್ನು ಓದಿಸುತ್ತಿರುವುದು, ರಾಷ್ಟ್ರದ ನೇತಾರರನ್ನು ಪುಟಾಣಿಯೋರ್ವ‌ ಮುನ್ನಡೆಸುವುದು, ಸಹಾಯಕಿಯರೊಂದಿಗೆ ಗಾಂಧೀಜಿಯವರು ನಡೆದು ಸಾಗುತ್ತಿರುವುದು, ಗಾಂಧೀಜಿ ತಮ್ಮ ಮಡದಿ ಕಸ್ತೂರಿ ಬಾ ರವರ ಜೊತೆ ಕೂತಿರುವುದು, ಗಾಂಧೀಜಿ ಚರಕ ತಿರುಗಿಸುತ್ತಿರುವ ಕಲಾಕೃತಿಗಳಿವೆ.

ಇನ್ನು ಭವನದ ಒಳಭಾಗದಲ್ಲಿ 22 ಲಕ್ಷ ಮೌಲ್ಯದ ಗ್ರಾನೈಟ್ ಕಲ್ಲಿನ ಭವ್ಯ ಪ್ರತಿಮೆ ಹಾಗೂ ಸತ್ಯ ಮೇವ ಜಯತೆ ಎಂಬ ಬರಹಗಳು ಪ್ರತಿಯೊಬ್ಬರನ್ನು ಸ್ವಾಗತಿಸುತ್ತಿದ್ದು, ಈ ಕಲಾಕೃತಿಗಳನ್ನು ಶಿವಮೊಗ್ಗ ಮೂಲದ ಕಲಾವಿದರಾದ ಪರಶುರಾಮ ಹಾಗೂ ಹೊನ್ನಮ್ಮನವರ್ ಸೇರಿದಂತೆ ಅವರ ಸಹಾಯಕರು ನಿರ್ಮಿಸಿದ್ದಾರೆ.

ದಾವಣಗೆರೆ: ಯುವ ಪೀಳಿಗೆಗೆ ಗಾಂಧೀಜಿಯವರ ಜೀವನಾದರ್ಶನಗಳನ್ನು ಸಾರಲು ಬೆಣ್ಣೆನಗರಿಯಲ್ಲೊಂದು ಗಾಂಧಿಭವನ ನಿರ್ಮಾಣವಾಗಿದೆ.

ಈ ಭವನದಲ್ಲಿ ಬಾಪು ಅವರ ಜೀವನಾದರ್ಶಗಳು, ಅವರ ತತ್ವಗಳು, ಹೋರಾಟಗಳನ್ನು ಅನಾವರಣ ಮಾಡಲಾಗಿದೆ. ಇದಲ್ಲದೆ ಮಹಾತ್ಮನ ಸುಂದರ ಕಲಾಕೃತಿಗಳು ತಲೆ ಎತ್ತಿದ್ದು, ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದಿದ್ದ ಹೋರಾಟಗಾರರ ಕಲಾಕೃತಿಗಳು ಜನರ ಗಮನ ಸೆಳೆಯುತ್ತಿವೆ.

ಗಾಂಧಿಭವನ ನಿರ್ಮಾಣ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಈ ಗಾಂಧಿ ಭವನ ನಿರ್ಮಿಸಲಾಗಿದೆ. ನಗರದ ಎಸ್ಎಸ್ ಹೈಟೆಕ್ ಆಸ್ಪತ್ರೆ ಸಮೀಪದ ರಾಮನಗರದಲ್ಲಿರುವ ಮೂರು ಕೋಟಿ ವೆಚ್ಚದ ಗಾಂಧಿಭವನ ಒಂದು ಎಕರೆಯಲ್ಲಿ ಸುಂದರ ಕಲಾಕೃತಿಗಳಿಂದ ಕಂಗೊಳಿಸುತ್ತಿವೆ.
ಗಾಂಧೀಜಿಯವರ ಜೀವನಚರಿತ್ರೆ ತಿಳಿದುಕೊಳ್ಳಬಯಸುವವರಿಗಾಗಿ ಸುಂದರ ಗ್ರಂಥಾಲಯ, ಮ್ಯೂಸಿಯಂ ಸಹ ನಿರ್ಮಿಸಲಾಗಿದೆ. ಮಹಾತ್ಮ ಗಾಂಧೀಜಿಯವರು ನಡೆಸಿದ ದಂಡಿಯಾತ್ರೆಯ ಕಲಾಕೃತಿ, ಮಕ್ಕಳನ್ನು ಓದಿಸುತ್ತಿರುವುದು, ರಾಷ್ಟ್ರದ ನೇತಾರರನ್ನು ಪುಟಾಣಿಯೋರ್ವ‌ ಮುನ್ನಡೆಸುವುದು, ಸಹಾಯಕಿಯರೊಂದಿಗೆ ಗಾಂಧೀಜಿಯವರು ನಡೆದು ಸಾಗುತ್ತಿರುವುದು, ಗಾಂಧೀಜಿ ತಮ್ಮ ಮಡದಿ ಕಸ್ತೂರಿ ಬಾ ರವರ ಜೊತೆ ಕೂತಿರುವುದು, ಗಾಂಧೀಜಿ ಚರಕ ತಿರುಗಿಸುತ್ತಿರುವ ಕಲಾಕೃತಿಗಳಿವೆ.

ಇನ್ನು ಭವನದ ಒಳಭಾಗದಲ್ಲಿ 22 ಲಕ್ಷ ಮೌಲ್ಯದ ಗ್ರಾನೈಟ್ ಕಲ್ಲಿನ ಭವ್ಯ ಪ್ರತಿಮೆ ಹಾಗೂ ಸತ್ಯ ಮೇವ ಜಯತೆ ಎಂಬ ಬರಹಗಳು ಪ್ರತಿಯೊಬ್ಬರನ್ನು ಸ್ವಾಗತಿಸುತ್ತಿದ್ದು, ಈ ಕಲಾಕೃತಿಗಳನ್ನು ಶಿವಮೊಗ್ಗ ಮೂಲದ ಕಲಾವಿದರಾದ ಪರಶುರಾಮ ಹಾಗೂ ಹೊನ್ನಮ್ಮನವರ್ ಸೇರಿದಂತೆ ಅವರ ಸಹಾಯಕರು ನಿರ್ಮಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.