ETV Bharat / state

ಗಿರ್​ ತಳಿಯ ಹಸು ಸಾಕಿ ಯಶಸ್ವಿಯಾದ ದಾವಣಗೆರೆ ರೈತ.. ತಿಂಗಳಿಗೆ ಲಕ್ಷಕ್ಕೂ ಅಧಿಕ ಸಂಪಾದನೆ

ಈ ತಳಿಯ ಎರಡು ಹಸುಗಳನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಖರೀದಿಸಿ ತಮ್ಮ ಮನೆಯಲ್ಲಿಯೇ ಸಾಕುತ್ತಿದ್ದಾರಂತೆ.

author img

By

Published : Dec 3, 2022, 3:45 PM IST

Etv Bharat
ಗೀರ್ ತಳಿಯ ಹಸು ಸಾಕಿ ಯಶಸ್ವಿಯಾದ ದಾವಣಗೆರೆ ರೈತ....ತಿಂಗಳಿಗೆ ಲಕ್ಷಕ್ಕೂ ಅಧಿಕ ಸಂಪಾದನೆ

ದಾವಣಗೆರೆ: ಕೃಷಿಗೂ ಸೈ..ಹೈನೋದ್ಯಮಕ್ಕೂ ಜೈ ಎಂಬಂತೆ ರೈತರೊಬ್ಬರು ಗುಜರಾತ್ ಮೂಲದ 13 ಗಿರ್​ ತಳಿಯ ಹಸುಗಳನ್ನು ಸಾಕಾಣಿಕೆ ಮಾಡಿ ಯಶಸ್ವಿಯಾಗಿದ್ದಾರೆ. ಒಂದು ಹೊತ್ತಿಗೆ ಒಂದು ಹಸು ಐದರಿಂದ ಏಳು ಲೀಟರ್ ಹಾಲು ಕೊಡುತ್ತಿದ್ದು, ದಿನಕ್ಕೆ ನಲವತ್ತರಿಂದ ಐವತ್ತು ಲೀಟರ್ ಹಾಲು ಸಿಗುತ್ತಿದೆಯಂತೆ. ಆದರೆ, ಈ ರೈತ ಹಾಲನ್ನು ಮಾರಾಟ ಮಾಡುವುದಿಲ್ಲ. ಬದಲಾಗಿ ಬೆಣ್ಣೆ, ತುಪ್ಪ, ಮಜ್ಜಿಗೆ ತಯಾರಿಸಿ ಮಾರಾಟ ಮಾಡುತ್ತಾರೆ.

ದಾವಣಗೆರೆಯ ಹೆಚ್ ಕಲಪನಹಳ್ಳಿಯ ಹೊನ್ನೂರು ಗ್ರಾಮದ ಶ್ರೀಪಾದರಾಜು ಎಂಬವರಿಗೆ ಮೊದಲಿನಿಂದಲೂ ಹೈನೋದ್ಯಮದಲ್ಲಿ ಬಹಳಷ್ಟು ಆಸಕ್ತಿಯಿತ್ತು. ಹೀಗಾಗಿಯೇ ಗೀರ್ ತಳಿಯ ಹಸುಗಳನ್ನು ಸಾಕುವ ಪ್ರಯತ್ನವು ಫಲ ನೀಡಿದೆ. ಬೆಂಗಳೂರಿನ ಬ್ರೋಕರ್ ಒಬ್ಬರನ್ನು ಸಂಪರ್ಕಿಸಿದ ಶ್ರೀಪಾದರಾಜು ಅವರು ಗುಜರಾತ್​ಗೆ ತೆರಳಿ ಒಂದು ಗಿರ್​​ ಹಸುವಿಗೆ ಒಂದೂವರೆ ಲಕ್ಷ ರೂಪಾಯಿ ಕೊಟ್ಟು ಖರೀದಿಸಿ ಹೊನ್ನೂರಿಗೆ ತಂದಿದ್ದಾರೆ. ಇದೀಗ ಹಸುಗಳ ಸಂಖ್ಯೆ ಹದಿಮೂರಕ್ಕೇರಿದ್ದು, ಲಕ್ಷ ಲಕ್ಷ ಲಾಭ ಗಳಿಸುತ್ತಿದ್ದಾರೆ.

ಗಿರ್​ ತಳಿಯ ಹಸು ಸಾಕಿ ಯಶಸ್ವಿಯಾದ ದಾವಣಗೆರೆ ರೈತ....ತಿಂಗಳಿಗೆ ಲಕ್ಷಕ್ಕೂ ಅಧಿಕ ಸಂಪಾದನೆ

ಗಿರ್​ ಹಸುಗಳು ರಾಜ್ಯಪಾಲರಿಗೂ ಅಚ್ಚುಮೆಚ್ಚು: ಈ ತಳಿಯ ಹಸುಗಳಿಗೆ ಮೇವಿನಲ್ಲಿ ಬೆಳ್ಳುಳ್ಳಿ, ಮೆಂತ್ಯ, ಹತ್ತು ಗ್ರಾಂ ಶುಂಠಿ ಬಳಸುವುದರಿಂದ ಹಾಲಿನಲ್ಲಿ ಪೋಷಕಾಂಶ ಹೆಚ್ಚು ಇರುತ್ತದೆ. ಅಲ್ಲದೇ ಈ ಹಾಲು ಮನುಷ್ಯರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಬೊಜ್ಜು ಬರುವುದಿಲ್ಲ. ಈ ತಳಿಯ ಎರಡು ಹಸುಗಳನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕೂಡ ಖರೀದಿಸಿ ತಮ್ಮ ಮನೆಯಲ್ಲಿಯೇ ಸಾಕುತ್ತಿದ್ದಾರಂತೆ.

ತಿಂಗಳಿಗೆ ಲಕ್ಷ ಸಂಪಾದನೆ: ತಿಂಗಳಿಗೆ ಬೆಣ್ಣೆ, ತುಪ್ಪ ಮಾರಾಟದಿಂದ ಸುಮಾರು 1,12,000 ರೂಪಾಯಿ ಸಂಪಾದನೆ ಆಗುತ್ತದೆ. ಹಸುಗಳಿಗೆ ಇಂತಿಷ್ಟು ಖರ್ಚು ಆಗಿ 30 ರಿಂದ 40,000 ರೂಪಾಯಿ ಲಾಭ ಬರುತ್ತದೆ. ಇದರ ಜೀವಿತಾವಧಿ 20 ವರ್ಷವಿದ್ದು, ಎಲ್ಲ ರೀತಿಯ ವಾಯುಗುಣಕ್ಕೂ ಹೊಂದಿಕೊಳ್ಳುತ್ತದೆ.

ಅಲ್ಲದೇ ಗಿರ್ ಹಸುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚು ಇರುವುದರಿಂದ, ಕರುಳಿಗೆ ಸಂಬಂಧಿಸಿದ ರೋಗ ಮತ್ತು ಉಷ್ಣವಲಯದ ರೋಗ ಬಾಧೆ ತೀರಾ ಕಡಿಮೆ. ಕೆಚ್ಚಲು ಬಾವು, ಕಾಲು ಬಾಯಿ ರೋಗ, ವೈರಾಣು ವ್ಯಾಧಿಗಳು ಕೂಡ ಕಡಿಮೆಯೇ ಎಂದು ಶ್ರೀ ಪಾದರಾಜು ಹೇಳುತ್ತಾರೆ.

ಗಿರ್ ಹಸುವಿನ ಆಹಾರ ಪದ್ದತಿ ಏನು?: ಶ್ರೀಪಾದರಾಜು ಅವರು ಹಸುಗಳಿಗೆ ಆಹಾರವಾಗಿ ಉದ್ದು ಮತ್ತು ಗೋದಿ ಬೂಸಾ, ಜೋಳದ ಹುಡಿ, ಪಶು ಆಹಾರ ಸೇರಿದಂತೆ ದಿನಕ್ಕೆ ಒಟ್ಟು ಐದು ಕಿಲೋ ಆಹಾರ ಕೊಡುತ್ತಾರೆ. ಬೇಸಿಗೆಯಲ್ಲಿ ಅಡಕೆ ಮರದ ಹಾಳೆ, ಹಸಿರೆಲೆ, ತೋಟದ ಹುಲ್ಲು, ಭತ್ತದ ಒಣಹುಲ್ಲು ನೀಡುತ್ತಾರೆ. ಗಿರ್​ ತಳಿ ಹಸುವಿನ ಮೊಸರಿನಲ್ಲಿ ಶೇ.50ರಷ್ಟು ಬೆಣ್ಣೆ ಇರುತ್ತದೆ.

ಹಾಲು ವಿಶಿಷ್ಟ ಪರಿಮಳ, ರುಚಿಯಿಂದ ಕೂಡಿದ್ದು, ತುಪ್ಪವೂ ಚೆನ್ನಾಗಿ ಇರುತ್ತಂತೆ. ಇನ್ನೂ ಮಜ್ಜಿಗೆಯನ್ನು ಲೀಟರ್​ಗೆ ಹತ್ತು ರೂಪಾಯಿ ಮತ್ತು ಗಂಜಲವನ್ನು ಲೀಟರ್​ಗೆ ಹತ್ತು ರೂಪಾಯಿಯಂತೆ ಮಾರಾಟ ಮಾಡುತ್ತಾರೆ.‌ ತಿಂಗಳಿಗೆ ಐನೂರು ಲೀಟರ್ ಗಂಜಲ, ಐದು ಸಾವಿರ ಲೀಟರ್ ಮಜ್ಜಿಗೆ ಮಾರಾಟ ಮಾಡುತ್ತಾರಂತೆ. ಇವರ ಹೈನುಗಾರಿಕೆಯತ್ತ ಇರುವ ಒಲವು ಎಲ್ಲರಿಗೂ ಮಾದರಿ.

ಇದನ್ನೂ ಓದಿ: ಹಾವೇರಿ: ಬಟನ್​ ರೋಜ್​​ ಬೆಳೆದು ತಿಂಗಳಿಗೆ ಲಕ್ಷಾಂತರ ರೂ ಲಾಭ ಗಳಿಸುತ್ತಿರುವ ಮಾದರಿ ರೈತ

ದಾವಣಗೆರೆ: ಕೃಷಿಗೂ ಸೈ..ಹೈನೋದ್ಯಮಕ್ಕೂ ಜೈ ಎಂಬಂತೆ ರೈತರೊಬ್ಬರು ಗುಜರಾತ್ ಮೂಲದ 13 ಗಿರ್​ ತಳಿಯ ಹಸುಗಳನ್ನು ಸಾಕಾಣಿಕೆ ಮಾಡಿ ಯಶಸ್ವಿಯಾಗಿದ್ದಾರೆ. ಒಂದು ಹೊತ್ತಿಗೆ ಒಂದು ಹಸು ಐದರಿಂದ ಏಳು ಲೀಟರ್ ಹಾಲು ಕೊಡುತ್ತಿದ್ದು, ದಿನಕ್ಕೆ ನಲವತ್ತರಿಂದ ಐವತ್ತು ಲೀಟರ್ ಹಾಲು ಸಿಗುತ್ತಿದೆಯಂತೆ. ಆದರೆ, ಈ ರೈತ ಹಾಲನ್ನು ಮಾರಾಟ ಮಾಡುವುದಿಲ್ಲ. ಬದಲಾಗಿ ಬೆಣ್ಣೆ, ತುಪ್ಪ, ಮಜ್ಜಿಗೆ ತಯಾರಿಸಿ ಮಾರಾಟ ಮಾಡುತ್ತಾರೆ.

ದಾವಣಗೆರೆಯ ಹೆಚ್ ಕಲಪನಹಳ್ಳಿಯ ಹೊನ್ನೂರು ಗ್ರಾಮದ ಶ್ರೀಪಾದರಾಜು ಎಂಬವರಿಗೆ ಮೊದಲಿನಿಂದಲೂ ಹೈನೋದ್ಯಮದಲ್ಲಿ ಬಹಳಷ್ಟು ಆಸಕ್ತಿಯಿತ್ತು. ಹೀಗಾಗಿಯೇ ಗೀರ್ ತಳಿಯ ಹಸುಗಳನ್ನು ಸಾಕುವ ಪ್ರಯತ್ನವು ಫಲ ನೀಡಿದೆ. ಬೆಂಗಳೂರಿನ ಬ್ರೋಕರ್ ಒಬ್ಬರನ್ನು ಸಂಪರ್ಕಿಸಿದ ಶ್ರೀಪಾದರಾಜು ಅವರು ಗುಜರಾತ್​ಗೆ ತೆರಳಿ ಒಂದು ಗಿರ್​​ ಹಸುವಿಗೆ ಒಂದೂವರೆ ಲಕ್ಷ ರೂಪಾಯಿ ಕೊಟ್ಟು ಖರೀದಿಸಿ ಹೊನ್ನೂರಿಗೆ ತಂದಿದ್ದಾರೆ. ಇದೀಗ ಹಸುಗಳ ಸಂಖ್ಯೆ ಹದಿಮೂರಕ್ಕೇರಿದ್ದು, ಲಕ್ಷ ಲಕ್ಷ ಲಾಭ ಗಳಿಸುತ್ತಿದ್ದಾರೆ.

ಗಿರ್​ ತಳಿಯ ಹಸು ಸಾಕಿ ಯಶಸ್ವಿಯಾದ ದಾವಣಗೆರೆ ರೈತ....ತಿಂಗಳಿಗೆ ಲಕ್ಷಕ್ಕೂ ಅಧಿಕ ಸಂಪಾದನೆ

ಗಿರ್​ ಹಸುಗಳು ರಾಜ್ಯಪಾಲರಿಗೂ ಅಚ್ಚುಮೆಚ್ಚು: ಈ ತಳಿಯ ಹಸುಗಳಿಗೆ ಮೇವಿನಲ್ಲಿ ಬೆಳ್ಳುಳ್ಳಿ, ಮೆಂತ್ಯ, ಹತ್ತು ಗ್ರಾಂ ಶುಂಠಿ ಬಳಸುವುದರಿಂದ ಹಾಲಿನಲ್ಲಿ ಪೋಷಕಾಂಶ ಹೆಚ್ಚು ಇರುತ್ತದೆ. ಅಲ್ಲದೇ ಈ ಹಾಲು ಮನುಷ್ಯರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಬೊಜ್ಜು ಬರುವುದಿಲ್ಲ. ಈ ತಳಿಯ ಎರಡು ಹಸುಗಳನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕೂಡ ಖರೀದಿಸಿ ತಮ್ಮ ಮನೆಯಲ್ಲಿಯೇ ಸಾಕುತ್ತಿದ್ದಾರಂತೆ.

ತಿಂಗಳಿಗೆ ಲಕ್ಷ ಸಂಪಾದನೆ: ತಿಂಗಳಿಗೆ ಬೆಣ್ಣೆ, ತುಪ್ಪ ಮಾರಾಟದಿಂದ ಸುಮಾರು 1,12,000 ರೂಪಾಯಿ ಸಂಪಾದನೆ ಆಗುತ್ತದೆ. ಹಸುಗಳಿಗೆ ಇಂತಿಷ್ಟು ಖರ್ಚು ಆಗಿ 30 ರಿಂದ 40,000 ರೂಪಾಯಿ ಲಾಭ ಬರುತ್ತದೆ. ಇದರ ಜೀವಿತಾವಧಿ 20 ವರ್ಷವಿದ್ದು, ಎಲ್ಲ ರೀತಿಯ ವಾಯುಗುಣಕ್ಕೂ ಹೊಂದಿಕೊಳ್ಳುತ್ತದೆ.

ಅಲ್ಲದೇ ಗಿರ್ ಹಸುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚು ಇರುವುದರಿಂದ, ಕರುಳಿಗೆ ಸಂಬಂಧಿಸಿದ ರೋಗ ಮತ್ತು ಉಷ್ಣವಲಯದ ರೋಗ ಬಾಧೆ ತೀರಾ ಕಡಿಮೆ. ಕೆಚ್ಚಲು ಬಾವು, ಕಾಲು ಬಾಯಿ ರೋಗ, ವೈರಾಣು ವ್ಯಾಧಿಗಳು ಕೂಡ ಕಡಿಮೆಯೇ ಎಂದು ಶ್ರೀ ಪಾದರಾಜು ಹೇಳುತ್ತಾರೆ.

ಗಿರ್ ಹಸುವಿನ ಆಹಾರ ಪದ್ದತಿ ಏನು?: ಶ್ರೀಪಾದರಾಜು ಅವರು ಹಸುಗಳಿಗೆ ಆಹಾರವಾಗಿ ಉದ್ದು ಮತ್ತು ಗೋದಿ ಬೂಸಾ, ಜೋಳದ ಹುಡಿ, ಪಶು ಆಹಾರ ಸೇರಿದಂತೆ ದಿನಕ್ಕೆ ಒಟ್ಟು ಐದು ಕಿಲೋ ಆಹಾರ ಕೊಡುತ್ತಾರೆ. ಬೇಸಿಗೆಯಲ್ಲಿ ಅಡಕೆ ಮರದ ಹಾಳೆ, ಹಸಿರೆಲೆ, ತೋಟದ ಹುಲ್ಲು, ಭತ್ತದ ಒಣಹುಲ್ಲು ನೀಡುತ್ತಾರೆ. ಗಿರ್​ ತಳಿ ಹಸುವಿನ ಮೊಸರಿನಲ್ಲಿ ಶೇ.50ರಷ್ಟು ಬೆಣ್ಣೆ ಇರುತ್ತದೆ.

ಹಾಲು ವಿಶಿಷ್ಟ ಪರಿಮಳ, ರುಚಿಯಿಂದ ಕೂಡಿದ್ದು, ತುಪ್ಪವೂ ಚೆನ್ನಾಗಿ ಇರುತ್ತಂತೆ. ಇನ್ನೂ ಮಜ್ಜಿಗೆಯನ್ನು ಲೀಟರ್​ಗೆ ಹತ್ತು ರೂಪಾಯಿ ಮತ್ತು ಗಂಜಲವನ್ನು ಲೀಟರ್​ಗೆ ಹತ್ತು ರೂಪಾಯಿಯಂತೆ ಮಾರಾಟ ಮಾಡುತ್ತಾರೆ.‌ ತಿಂಗಳಿಗೆ ಐನೂರು ಲೀಟರ್ ಗಂಜಲ, ಐದು ಸಾವಿರ ಲೀಟರ್ ಮಜ್ಜಿಗೆ ಮಾರಾಟ ಮಾಡುತ್ತಾರಂತೆ. ಇವರ ಹೈನುಗಾರಿಕೆಯತ್ತ ಇರುವ ಒಲವು ಎಲ್ಲರಿಗೂ ಮಾದರಿ.

ಇದನ್ನೂ ಓದಿ: ಹಾವೇರಿ: ಬಟನ್​ ರೋಜ್​​ ಬೆಳೆದು ತಿಂಗಳಿಗೆ ಲಕ್ಷಾಂತರ ರೂ ಲಾಭ ಗಳಿಸುತ್ತಿರುವ ಮಾದರಿ ರೈತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.