ETV Bharat / state

ಸಿಲಿಂಡರ್ ಸ್ಫೋಟಗೊಂಡು ಮನೆಗೆ ಹಾನಿ: ಕುಟುಂಬಸ್ಥರಿಗೆ ರೇಣುಕಾಚಾರ್ಯ ನೆರವು

author img

By

Published : Feb 23, 2020, 3:25 PM IST

Updated : Feb 23, 2020, 3:37 PM IST

ಮೂರು ದಿನಗಳ ಹಿಂದೆ ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮನೆ, ಸಾಮಾನುಗಳು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ನಡೆದಿತ್ತು.

ylinder blast lead to house destruction: Renukacharya help family
ಸಿಲಿಂಡರ್​ ಸ್ಪೋಟಗೊಂಡ ಸ್ಥಳಕ್ಕೆ ರೇಣುಕಾಚಾರ್ಯ ಭೇಟಿ, ನೆರವು

ದಾವಣಗೆರೆ: ಮೂರು ದಿನಗಳ ಹಿಂದೆ ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆ, ಸಾಮಾನುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಇಂದು ಸ್ಥಳಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.‌ ಪಿ. ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿಲಿಂಡರ್​ ಸ್ಪೋಟಗೊಂಡ ಸ್ಥಳಕ್ಕೆ ರೇಣುಕಾಚಾರ್ಯ ಭೇಟಿ, ನೆರವು

ಸುಂಕದಕಟ್ಟೆ ಗ್ರಾಮದ ಸಿದ್ದಲಿಂಗಪ್ಪ ರಾಜಪ್ಪರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಘಟನಾ ವೇಳೆ ಸಿದ್ದಲಿಂಗಪ್ಪ ಹಾಲು ಹಾಕಲು ಹೊರ ಹೋಗಿದ್ದರು. ಅವರ ಪತ್ನಿ ಸ್ಟೌವ್ ಮೇಲೆ‌ ನೀರಿಟ್ಟು ಮನೆಯಿಂದ ಹೊರ ಬಂದಿದ್ದರು. ಇನ್ನೂ ಈ ದಂಪತಿ ಪುತ್ರಿ ಮನೆಯ ಮುಂದೆ ಆಟ ಆಡುತ್ತಿದ್ದಳು. ಈ ವೇಳೆ ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣ ಭಸ್ಮವಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.

ಇನ್ನೂ ಇಂದು ಮನೆ ಸುಟ್ಟುಕರಕಲಾಗಿದ್ದ ಸ್ಥಳಕ್ಕೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ, ತಹಶೀಲ್ದಾರರು, ಇತರೆ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ವೈಯಕ್ತಿಕವಾಗಿ 15,000 ರೂಪಾಯಿ, ಬಟ್ಟೆ ಸೇರಿದಂತೆ ಇತರೆ‌ ಸಾಮಗ್ರಿಗಳನ್ನು ವಿತರಿಸಿದರು. ಜೊತೆಗೆ ಕುಟುಂಬಸ್ಥರಿಗೆ ಸರ್ಕಾರದ ವತಿಯಿಂದ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು.

ದಾವಣಗೆರೆ: ಮೂರು ದಿನಗಳ ಹಿಂದೆ ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆ, ಸಾಮಾನುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಇಂದು ಸ್ಥಳಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.‌ ಪಿ. ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿಲಿಂಡರ್​ ಸ್ಪೋಟಗೊಂಡ ಸ್ಥಳಕ್ಕೆ ರೇಣುಕಾಚಾರ್ಯ ಭೇಟಿ, ನೆರವು

ಸುಂಕದಕಟ್ಟೆ ಗ್ರಾಮದ ಸಿದ್ದಲಿಂಗಪ್ಪ ರಾಜಪ್ಪರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಘಟನಾ ವೇಳೆ ಸಿದ್ದಲಿಂಗಪ್ಪ ಹಾಲು ಹಾಕಲು ಹೊರ ಹೋಗಿದ್ದರು. ಅವರ ಪತ್ನಿ ಸ್ಟೌವ್ ಮೇಲೆ‌ ನೀರಿಟ್ಟು ಮನೆಯಿಂದ ಹೊರ ಬಂದಿದ್ದರು. ಇನ್ನೂ ಈ ದಂಪತಿ ಪುತ್ರಿ ಮನೆಯ ಮುಂದೆ ಆಟ ಆಡುತ್ತಿದ್ದಳು. ಈ ವೇಳೆ ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣ ಭಸ್ಮವಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.

ಇನ್ನೂ ಇಂದು ಮನೆ ಸುಟ್ಟುಕರಕಲಾಗಿದ್ದ ಸ್ಥಳಕ್ಕೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ, ತಹಶೀಲ್ದಾರರು, ಇತರೆ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ವೈಯಕ್ತಿಕವಾಗಿ 15,000 ರೂಪಾಯಿ, ಬಟ್ಟೆ ಸೇರಿದಂತೆ ಇತರೆ‌ ಸಾಮಗ್ರಿಗಳನ್ನು ವಿತರಿಸಿದರು. ಜೊತೆಗೆ ಕುಟುಂಬಸ್ಥರಿಗೆ ಸರ್ಕಾರದ ವತಿಯಿಂದ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು.

Last Updated : Feb 23, 2020, 3:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.