ETV Bharat / state

ಶಾಸಕ ಶಾಮನೂರು ಚದುರಂಗದಾಟಕ್ಕೆ ಬಿಜೆಪಿ ಮಂಕು; ಮೇಯರ್ ಗಾದಿ ಹಿಡಿದ ಕಾಂಗ್ರೆಸ್

author img

By

Published : Mar 5, 2023, 8:28 AM IST

Updated : Mar 5, 2023, 9:16 AM IST

ದಾವಣಗೆರೆ ಮೇಯರ್​​ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ರಾಜಕೀಯ ತಂತ್ರಗಾರಿಕೆ ಮೇಲುಗೈ ಸಾಧಿಸಿದೆ.

Mayor
ಮೇಯರ್

ದಾವಣಗೆರೆ : ಕಾಂಗ್ರೆಸ್​ ಪಕ್ಷದ ಪ್ರಭಾವಿ ನಾಯಕ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ಅವರ ರಾಜಕೀಯ ಚದುರಂಗದಾಟದಿಂದ ಕೊನೆಗೂ ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷ ಮೇಯರ್ ಗಾದಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನಡೆದ ಹೈಡ್ರಾಮದಲ್ಲಿ ಅಂತಿಮವಾಗಿ ಕಾಂಗ್ರೆಸ್ ಚಿಹ್ನೆಯಿಂದ ಗೆದ್ದ 7ನೇ ವಾರ್ಡ್‌ನ ಪಾಲಿಕೆ ಸದಸ್ಯ ವಿನಾಯಕ ಪೈಲ್ವಾನ್ ಅವಿರೋಧವಾಗಿ ಆಯ್ಕೆಯಾದರು. 27ನೇ‌ ವಾರ್ಡ್‌ನ ಪಾಲಿಕೆ ಸದಸ್ಯೆ ಯಶೋಧ ಯಗ್ಗಪ್ಪಾ ಉಪಮೇಯರ್ ಆದರು.

ಪಾಲಿಕೆ ಮೇಯರ್ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್​ ಮುಖಂಡರು ಶುಕ್ರವಾರ ರಾತ್ರಿ ಸಭೆ ನಡೆಸಿದ್ದರು. ಈ ನಡುವೆ ತಂತ್ರ ಹೂಡಿದ್ದ ಶಾಮನೂರು ಶಿವಶಂಕರಪ್ಪ ಅವರು ಸವಿತಾ ಹುಲ್ಲುಮನಿ ಹಾಗೂ ವಿನಾಯಕ್ ಪೈಲ್ವಾನ್ ಎಂಬಿಬ್ಬರ ಹೆಸರನ್ನು ಆಯ್ಕೆ ಮಾಡಿದ್ದರು. ಸವಿತಾ ಹುಲ್ಮನಿ ಕ್ಯಾಂಡಿಡೇಟ್ ಎಂದು ಎಲ್ಲೆಡೆ ಸುದ್ದಿ ಹರಡುವಂತೆ ಮಾಡಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಬಿಜೆಪಿ ವಿನಾಯಕ ಪೈಲ್ವಾನ್‌ಗೆ ಗಾಳ ಹಾಕಲು ಮುಂದಾಯಿತು.

ಮೇಯರ್ ಪಟ್ಟ ಗೆಲ್ಲಲು ವಿನಾಯಕ ಪೈಲ್ವಾನ್‌ ಅವರನ್ನು ತನ್ನತ್ತ ತೆಳೆಯಲು ಮುಂದಾಗ ಬಿಜೆಪಿ ಅವರನ್ನು ಪಾಲಿಕೆಗೆ ಕರೆತಂದು, ವಿಪ್ ಜಾರಿ ಮಾಡಿದ್ದು. ಆದರೆ ವಿನಾಯಕ ಪೈಲ್ವಾನ್ ವಿಪ್‌ಗೆ ಸಹಿ ಹಾಕಲಿಲ್ಲ. ಅವರು ನೇರವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರಿಗೆ ಪಕ್ಷೇತರರು ಸೂಚಕರಾಗಿದ್ದರು. ಸವಿತಾ ಹುಲ್ಲುಮನಿ ನಾಮಪತ್ರ ಸಲ್ಲಿಸಿದ ಬಳಿಕ ವಾಪಸ್ ತೆಗೆದುಕೊಂಡರು. ಇಷ್ಟೆಲ್ಲಾ ಹೈಡ್ರಾಮ ಆದ ಬಳಿಕ ಬಿಜೆಪಿಯಲ್ಲಿ ಕ್ಯಾಂಡಿಡೇಟ್ ಇಲ್ಲದ ಕಾರಣ ಪಕ್ಷದಿಂದ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಅಷ್ಟೊತ್ತಿಗೆ ವಿನಾಯಕ್ ಪೈಲ್ವಾನ್ ನಮ್ಮ ಪಕ್ಷದ ಅಭ್ಯರ್ಥಿ ಎಂದು ಬಿಜೆಪಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು.

ಬಿಜೆಪಿಯಲ್ಲಿ ಅಭ್ಯರ್ಥಿ ಇಲ್ಲದ ಹಿನ್ನೆಲೆಯಲ್ಲಿ ಅವಿರೋಧವಾಗಿ ವಿನಾಯಕ ಪೈಲ್ವಾನ್ ಆಯ್ಕೆಯಾದರು. ಮೇಯರ್ ಆಯ್ಕೆಯಾದ ಬಳಿಕ ಮಾತನಾಡಿದ ವಿನಾಯಕ ಪೈಲ್ವಾನ್, "ನಾನು ಶಾಮನೂರು ಶಿವಶಂಕರಪ್ಪ ಆಶೀರ್ವಾದದಿಂದ ಮೇಯರ್ ಆಗಿ ಆಯ್ಕೆಯಾಗಿದ್ದೇನೆ" ಎಂದು ಘೋಷಿಸಿ ಕಾಂಗ್ರೆಸ್ ಮೇಯರ್ ಎಂದು ಹೇಳಿಕೊಂಡರು. ಇದು ಬಿಜೆಪಿಗೆ ಮುಖಭಂಗ ಉಂಟುಮಾಡಿತು. ಒಟ್ಟಿನಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.

ಟಿಕೆಟ್​ಗಾಗಿ ಪೈಪೋಟಿ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಅಲ್ಲದೇ ಇಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು ಪ್ರಾಬಲ್ಯ ಹೊಂದಿದೆ. ಹೀಗಾಗಿ, ಈ ಸಲದ ಕಾಂಗ್ರೆಸ್ ಟಿಕೆಟ್​ ಅನ್ನು ಶಾಮನೂರು ಬದಲಿಗೆ ಅಲ್ಪಸಂಖ್ಯಾತರಿಗೆ ಕೊಡಬೇಕೆಂಬ ಕೂಗು ಕೇಳಿ ಬಂದಿದೆ.

ಈ ಕುರಿತು ಇತ್ತೀಚೆಗೆ ಮಾತನಾಡಿದ್ದ ಕಾಂಗ್ರೆಸ್​ ಕಾರ್ಯಕರ್ತ ಮೆಹಬೂಬ್ ಅಸಮಾಧಾನ ಹೊರಹಾಕಿದ್ದರು. ಕ್ಷೇತ್ರದಲ್ಲಿ 83 ಸಾವಿರ ಮುಸ್ಲಿಂ ಮತದಾರರಿದ್ದು ಅವರೇ ನಿರ್ಣಾಯಕರಾಗಿದ್ದಾರೆ. ಜಿಲ್ಲೆಯ ಯಾವುದೇ ಕ್ಷೇತ್ರದಲ್ಲೂ ಇಷ್ಟೊಂದು ಮುಸ್ಲಿಂ ಮತದಾರರಿಲ್ಲ. ಹೀಗಿದ್ದರೂ ಈವರೆಗೂ ಒಮ್ಮೆಯೂ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್​ ನೀಡಿಲ್ಲ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: ದಾವಣಗೆರೆ ದಕ್ಷಿಣ: ಶಾಮನೂರು ಬದಲು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲು ಒತ್ತಾಯ

ದಾವಣಗೆರೆ : ಕಾಂಗ್ರೆಸ್​ ಪಕ್ಷದ ಪ್ರಭಾವಿ ನಾಯಕ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ಅವರ ರಾಜಕೀಯ ಚದುರಂಗದಾಟದಿಂದ ಕೊನೆಗೂ ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷ ಮೇಯರ್ ಗಾದಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನಡೆದ ಹೈಡ್ರಾಮದಲ್ಲಿ ಅಂತಿಮವಾಗಿ ಕಾಂಗ್ರೆಸ್ ಚಿಹ್ನೆಯಿಂದ ಗೆದ್ದ 7ನೇ ವಾರ್ಡ್‌ನ ಪಾಲಿಕೆ ಸದಸ್ಯ ವಿನಾಯಕ ಪೈಲ್ವಾನ್ ಅವಿರೋಧವಾಗಿ ಆಯ್ಕೆಯಾದರು. 27ನೇ‌ ವಾರ್ಡ್‌ನ ಪಾಲಿಕೆ ಸದಸ್ಯೆ ಯಶೋಧ ಯಗ್ಗಪ್ಪಾ ಉಪಮೇಯರ್ ಆದರು.

ಪಾಲಿಕೆ ಮೇಯರ್ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್​ ಮುಖಂಡರು ಶುಕ್ರವಾರ ರಾತ್ರಿ ಸಭೆ ನಡೆಸಿದ್ದರು. ಈ ನಡುವೆ ತಂತ್ರ ಹೂಡಿದ್ದ ಶಾಮನೂರು ಶಿವಶಂಕರಪ್ಪ ಅವರು ಸವಿತಾ ಹುಲ್ಲುಮನಿ ಹಾಗೂ ವಿನಾಯಕ್ ಪೈಲ್ವಾನ್ ಎಂಬಿಬ್ಬರ ಹೆಸರನ್ನು ಆಯ್ಕೆ ಮಾಡಿದ್ದರು. ಸವಿತಾ ಹುಲ್ಮನಿ ಕ್ಯಾಂಡಿಡೇಟ್ ಎಂದು ಎಲ್ಲೆಡೆ ಸುದ್ದಿ ಹರಡುವಂತೆ ಮಾಡಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಬಿಜೆಪಿ ವಿನಾಯಕ ಪೈಲ್ವಾನ್‌ಗೆ ಗಾಳ ಹಾಕಲು ಮುಂದಾಯಿತು.

ಮೇಯರ್ ಪಟ್ಟ ಗೆಲ್ಲಲು ವಿನಾಯಕ ಪೈಲ್ವಾನ್‌ ಅವರನ್ನು ತನ್ನತ್ತ ತೆಳೆಯಲು ಮುಂದಾಗ ಬಿಜೆಪಿ ಅವರನ್ನು ಪಾಲಿಕೆಗೆ ಕರೆತಂದು, ವಿಪ್ ಜಾರಿ ಮಾಡಿದ್ದು. ಆದರೆ ವಿನಾಯಕ ಪೈಲ್ವಾನ್ ವಿಪ್‌ಗೆ ಸಹಿ ಹಾಕಲಿಲ್ಲ. ಅವರು ನೇರವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರಿಗೆ ಪಕ್ಷೇತರರು ಸೂಚಕರಾಗಿದ್ದರು. ಸವಿತಾ ಹುಲ್ಲುಮನಿ ನಾಮಪತ್ರ ಸಲ್ಲಿಸಿದ ಬಳಿಕ ವಾಪಸ್ ತೆಗೆದುಕೊಂಡರು. ಇಷ್ಟೆಲ್ಲಾ ಹೈಡ್ರಾಮ ಆದ ಬಳಿಕ ಬಿಜೆಪಿಯಲ್ಲಿ ಕ್ಯಾಂಡಿಡೇಟ್ ಇಲ್ಲದ ಕಾರಣ ಪಕ್ಷದಿಂದ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಅಷ್ಟೊತ್ತಿಗೆ ವಿನಾಯಕ್ ಪೈಲ್ವಾನ್ ನಮ್ಮ ಪಕ್ಷದ ಅಭ್ಯರ್ಥಿ ಎಂದು ಬಿಜೆಪಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು.

ಬಿಜೆಪಿಯಲ್ಲಿ ಅಭ್ಯರ್ಥಿ ಇಲ್ಲದ ಹಿನ್ನೆಲೆಯಲ್ಲಿ ಅವಿರೋಧವಾಗಿ ವಿನಾಯಕ ಪೈಲ್ವಾನ್ ಆಯ್ಕೆಯಾದರು. ಮೇಯರ್ ಆಯ್ಕೆಯಾದ ಬಳಿಕ ಮಾತನಾಡಿದ ವಿನಾಯಕ ಪೈಲ್ವಾನ್, "ನಾನು ಶಾಮನೂರು ಶಿವಶಂಕರಪ್ಪ ಆಶೀರ್ವಾದದಿಂದ ಮೇಯರ್ ಆಗಿ ಆಯ್ಕೆಯಾಗಿದ್ದೇನೆ" ಎಂದು ಘೋಷಿಸಿ ಕಾಂಗ್ರೆಸ್ ಮೇಯರ್ ಎಂದು ಹೇಳಿಕೊಂಡರು. ಇದು ಬಿಜೆಪಿಗೆ ಮುಖಭಂಗ ಉಂಟುಮಾಡಿತು. ಒಟ್ಟಿನಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.

ಟಿಕೆಟ್​ಗಾಗಿ ಪೈಪೋಟಿ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಅಲ್ಲದೇ ಇಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು ಪ್ರಾಬಲ್ಯ ಹೊಂದಿದೆ. ಹೀಗಾಗಿ, ಈ ಸಲದ ಕಾಂಗ್ರೆಸ್ ಟಿಕೆಟ್​ ಅನ್ನು ಶಾಮನೂರು ಬದಲಿಗೆ ಅಲ್ಪಸಂಖ್ಯಾತರಿಗೆ ಕೊಡಬೇಕೆಂಬ ಕೂಗು ಕೇಳಿ ಬಂದಿದೆ.

ಈ ಕುರಿತು ಇತ್ತೀಚೆಗೆ ಮಾತನಾಡಿದ್ದ ಕಾಂಗ್ರೆಸ್​ ಕಾರ್ಯಕರ್ತ ಮೆಹಬೂಬ್ ಅಸಮಾಧಾನ ಹೊರಹಾಕಿದ್ದರು. ಕ್ಷೇತ್ರದಲ್ಲಿ 83 ಸಾವಿರ ಮುಸ್ಲಿಂ ಮತದಾರರಿದ್ದು ಅವರೇ ನಿರ್ಣಾಯಕರಾಗಿದ್ದಾರೆ. ಜಿಲ್ಲೆಯ ಯಾವುದೇ ಕ್ಷೇತ್ರದಲ್ಲೂ ಇಷ್ಟೊಂದು ಮುಸ್ಲಿಂ ಮತದಾರರಿಲ್ಲ. ಹೀಗಿದ್ದರೂ ಈವರೆಗೂ ಒಮ್ಮೆಯೂ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್​ ನೀಡಿಲ್ಲ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: ದಾವಣಗೆರೆ ದಕ್ಷಿಣ: ಶಾಮನೂರು ಬದಲು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲು ಒತ್ತಾಯ

Last Updated : Mar 5, 2023, 9:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.