ETV Bharat / state

40 ವರ್ಷಗಳ ನಂತರ ಕೋಡಿ ಬಿದ್ದ ಅಣಜಿ ಕೆರೆ.. ಜಮೀನುಗಳಿಗೆ ನುಗ್ಗಿದ ನೀರು - 900 ಎಕರೆಯಷ್ಟು ವಿಶಾಲವಾದ ಅಣಜಿ ಕೆರೆ

900 ಎಕರೆಯಷ್ಟು ವಿಶಾಲವಾದ ಅಣಜಿ ಕೆರೆ ಕೋಡಿ ಬಿದ್ದಿದೆ. ಪರಿಣಾಮ ಸುತ್ತಮುತ್ತಲಿನ ಅಡಕೆ, ಮೆಕ್ಕೆಜೋಳಕ್ಕೆ ಬೆಳೆ ಬೆಳೆದಿದ್ದ ರೈತರ ಜಮೀನುಗಳಿಗೆ ಕೆರೆ ನೀರು ನುಗ್ಗಿದೆ. ಇದರಿಂದ ಕೆರೆ ಕೆಳಭಾಗದ ರೈತರು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.

anaji-lake-overflowed-after-40-years
40 ವರ್ಷಗಳ ನಂತರ ಕೋಡಿ ಬಿದ್ದ ಅಣಜಿ ಕೆರೆ
author img

By

Published : Sep 12, 2022, 4:31 PM IST

Updated : Sep 12, 2022, 5:09 PM IST

ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿರುವ ಬೆನ್ನಲ್ಲೇ ಜಿಲ್ಲೆಯ ಬಹತೇಕ ಎಲ್ಲ ಕೆರೆಗಳು ಭರ್ತಿಯಾಗಿವೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ, ಇನ್ನು ಕೆಲ ರೈತರ ಜಮೀನಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿರುವುದು ಆತಂಕ ಸೃಷ್ಟಿ ಮಾಡಿದೆ.

ದಾವಣಗೆರೆ ತಾಲೂಕಿ‌ನ ಅಣಜಿ ಕೆರೆ 40 ವರ್ಷಗಳ ನಂತರ ಕೋಡಿ ಬಿದ್ದಿದ್ದು, ರೈತರ ಜಮೀನುಗಳಿಗೆ ಆಸರೆಯಾಗಿದೆ. 900 ಎಕರೆಯಷ್ಟು ವಿಶಾಲವಾದ ಅಣಜಿ ಕೆರೆಯ ಸುತ್ತಮುತ್ತಲಿನ ಅಡಕೆ, ಮೆಕ್ಕೆಜೋಳ ಬೆಳೆ ಬೆಳೆದಿದ್ದ ರೈತರ ಜಮೀನುಗಳಿಗೆ ಕೆರೆ ನೀರು ನುಗ್ಗಿದ್ದರಿಂದ ರೈತರು ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣ ಆಗಿದೆ.

40 ವರ್ಷಗಳ ನಂತರ ಕೋಡಿ ಬಿದ್ದ ಅಣಜಿ ಕೆರೆ

ಅಣಜಿ ಕೆರೆ ಕೋಡಿ ಬಿದ್ದಿದ್ದರಿಂದ ಕೋಡಿ ನೋಡಲು ಜನ ಮುಗಿ ಬಿದ್ದಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚು ಜನ ಕೆರೆ ಬಳಿ ಆಗಮಿಸುತ್ತಿರುವ ಬೆನ್ನಲ್ಲೇ ಕೋಡಿ ಬಿದ್ದ ಸ್ಥಳದಲ್ಲಿ ತಂತಿ ಜಾಲರಿ ಅಳವಡಿಸಿ ಬಂದ್ ಮಾಡಲಾಗಿದೆ. ಕೋಡಿ ಬಿದ್ದ ಸ್ಥಳದಲ್ಲಿ ಜನ ಸಾಮಾನ್ಯರು ಇಳಿಯದಂತೆ ಮೀನುಗಳು ಕೂಡ ಕೊಚ್ಚಿ ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ.

ಇದನ್ನೂ ಓದಿ: ಬರದನಾಡಿಗೆ ಜೀವಕಳೆ ತುಂಬಿದ ವಿವಿ ಸಾಗರ ಡ್ಯಾಂ, ಮೈದುಂಬಿ ಹರಿಯುವ ವೇದಾವತಿ

ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿರುವ ಬೆನ್ನಲ್ಲೇ ಜಿಲ್ಲೆಯ ಬಹತೇಕ ಎಲ್ಲ ಕೆರೆಗಳು ಭರ್ತಿಯಾಗಿವೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ, ಇನ್ನು ಕೆಲ ರೈತರ ಜಮೀನಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿರುವುದು ಆತಂಕ ಸೃಷ್ಟಿ ಮಾಡಿದೆ.

ದಾವಣಗೆರೆ ತಾಲೂಕಿ‌ನ ಅಣಜಿ ಕೆರೆ 40 ವರ್ಷಗಳ ನಂತರ ಕೋಡಿ ಬಿದ್ದಿದ್ದು, ರೈತರ ಜಮೀನುಗಳಿಗೆ ಆಸರೆಯಾಗಿದೆ. 900 ಎಕರೆಯಷ್ಟು ವಿಶಾಲವಾದ ಅಣಜಿ ಕೆರೆಯ ಸುತ್ತಮುತ್ತಲಿನ ಅಡಕೆ, ಮೆಕ್ಕೆಜೋಳ ಬೆಳೆ ಬೆಳೆದಿದ್ದ ರೈತರ ಜಮೀನುಗಳಿಗೆ ಕೆರೆ ನೀರು ನುಗ್ಗಿದ್ದರಿಂದ ರೈತರು ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣ ಆಗಿದೆ.

40 ವರ್ಷಗಳ ನಂತರ ಕೋಡಿ ಬಿದ್ದ ಅಣಜಿ ಕೆರೆ

ಅಣಜಿ ಕೆರೆ ಕೋಡಿ ಬಿದ್ದಿದ್ದರಿಂದ ಕೋಡಿ ನೋಡಲು ಜನ ಮುಗಿ ಬಿದ್ದಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚು ಜನ ಕೆರೆ ಬಳಿ ಆಗಮಿಸುತ್ತಿರುವ ಬೆನ್ನಲ್ಲೇ ಕೋಡಿ ಬಿದ್ದ ಸ್ಥಳದಲ್ಲಿ ತಂತಿ ಜಾಲರಿ ಅಳವಡಿಸಿ ಬಂದ್ ಮಾಡಲಾಗಿದೆ. ಕೋಡಿ ಬಿದ್ದ ಸ್ಥಳದಲ್ಲಿ ಜನ ಸಾಮಾನ್ಯರು ಇಳಿಯದಂತೆ ಮೀನುಗಳು ಕೂಡ ಕೊಚ್ಚಿ ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ.

ಇದನ್ನೂ ಓದಿ: ಬರದನಾಡಿಗೆ ಜೀವಕಳೆ ತುಂಬಿದ ವಿವಿ ಸಾಗರ ಡ್ಯಾಂ, ಮೈದುಂಬಿ ಹರಿಯುವ ವೇದಾವತಿ

Last Updated : Sep 12, 2022, 5:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.