ETV Bharat / state

ಶೀಲ ಶಂಕಿಸಿ ಹೆಂಡತಿ, ಮಗು ಕೊಲೆ: ಆರೋಪಿಗೆ ಜೀವತಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

author img

By

Published : May 30, 2023, 4:35 PM IST

ಹೆಂಡತಿ ಮತ್ತು ಮಗುವನ್ನು ಕೊಲೆ ಮಾಡಿದ ಆರೋಪಿಗೆ ದಾವಣಗೆರೆ ಜಿಲ್ಲಾ ಸತ್ರ ನ್ಯಾಯಾಲಯವು ಜೀವತಾವಧಿ ಶಿಕ್ಷೆ ವಿಧಿಸಿದೆ.

accused-of-murdering-wife-child-court-sentenced-accused-to-life-imprisonment
ಶೀಲ ಶಂಕಿಸಿ ಹೆಂಡತಿ, ಮಗು ಕೊಲೆ: ಆರೋಪಿಗೆ ಜೀವತಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ದಾವಣಗೆರೆ: ಶೀಲ ಶಂಕಿಸಿ ಹೆಂಡತಿ ಮತ್ತು ಮಗುವನ್ನು ಕೊಲೆ ಮಾಡಿದ್ದ ಆರೋಪಿಗೆ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವತಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಮಾಯಕೊಂಡ ಗ್ರಾಮದ ಆರೋಪಿ ನಾಗರಾಜ್ ಶಿಕ್ಷೆಗೊಳಗಾದ ಆರೋಪಿ.

ಘಟನೆಯ ವಿವರ: ಘಟನೆ ನಡೆಯುವ ಮೂರು ವರ್ಷಗಳ ಹಿಂದೆ ಮೃತ ಶಿಲ್ಪಾ ಹಾಗೂ ನಾಗರಾಜ್ ಮದುವೆಯಾಗಿದ್ದರು. ಇವರಿಗೆ 2 ವರ್ಷದ ಹೆಣ್ಣು ಮಗು ಕೂಡ ಇತ್ತು. ಆದರೆ, ನಾಗರಾಜನು ತನ್ನ ಹೆಂಡತಿಯ ಶೀಲ ಶಂಕಿಸಿ ಮನೆಯಲ್ಲಿ ಪ್ರತಿ ದಿನ ಗಲಾಟೆ ಮಾಡುತ್ತಿರುವುದನ್ನು, 2018ರ ಏಪ್ರಿಲ್​ 19ರ ಬೆಳಗಿನ ಜಾವ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾಗರಾಜ್ ಪತ್ನಿ ಶಿಲ್ಪಾಳೊಂದಿಗೆ ಜಗಳವಾಡಿದ್ದಾನೆ. ನಂತರ ಅವರ ಮೇಲೆ ಹಲ್ಲೆ ನಡೆಸಿ, ಬಳಿಕ ಹಗ್ಗದಿಂದ ಕುತ್ತಿಗೆಗೆ ಜೋರಾಗಿ ಬಿಗಿದು ಸಾಯಿಸಿ ನೇಣು ಹಾಕಿದ್ದನು. ನಂತರ 2 ವರ್ಷದ ಮಗುವಿನ ಪೋಷಣೆ ಜವಾಬ್ದಾರಿ ತನ್ನ ಮೇಲೆ ಬೀಳುತ್ತದೆ ಎಂದು ಯೋಚಿಸಿ ಪುಟ್ಟ ಕಂದಮ್ಮಳನ್ನು ಕೂಡ ನೇಣು ಹಾಕಿ ಕೊಲೆ ಮಾಡಿದ್ದನು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಯಕೊಂಡ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾದ ಗುರುಬಸವರಾಜ್ ಅವರು ಪ್ರಕರಣದ ತನಿಖೆ ಮಾಡಿ ಆರೋಪಿ ನಾಗರಾಜ್​ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರವೀಣ್ ಕುಮಾರ್ ಆರ್​ಎನ್ ಅವರು ಆರೋಪಿತನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಿತಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಭಿಯೋಜಕರಾದ ಜಯಪ್ಪ ಕೆಜಿ ಸರ್ಕಾರದ ಪರವಾಗಿ ವಾದ ಮಾಡಿದ್ದಾರೆ.

ಬಾಲಕಿ ಅತ್ಯಾಚಾರ, ಆರೋಪಿಗೆ 20 ವರ್ಷ ಕಠಿಣ ಕಾರಗೃಹ ಶಿಕ್ಷೆ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅರ್ಬಾಜ್ ದಸ್ತಗೀರ ಎಂಬ ಆರೋಪಿಗೆ ಹಾವೇರಿಯ ವಿಶೇಷ ಸತ್ರ ನ್ಯಾಯಾಲಯವು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 2.80 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಶೀಘ್ರಗತಿ ನ್ಯಾಯಾಲಯ- 1 ರ ನ್ಯಾಯಾಧೀಶರಾದ ನಿಂಗನಗೌಡ ಪಾಟೀಲ್​ ಅವರು ಸೋಮವಾರ ಆದೇಶ ಪ್ರಕಟಿಸಿದರು.

ಬೆಂಗಳೂರು ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದ 20 ವರ್ಷದ ಅರ್ಬಾಜ್ ದಸ್ತಗೀರ ಆರೋಪಿ. ಬಾಲಕಿಗೆ ಮೊಬೈಲ್ ಮೂಲಕ ಸಂದೇಶ ಕಳುಹಿಸಿ ಮನೆಯಿಂದ ಹೊರ ಕರೆಯಿಸಿ ಅಪಹರಣ ಮಾಡಿ ನಂತರ ರಾಣೇಬೆನ್ನೂರ ಹೋಟೆಲ್​ನ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದನು. ಬಳಿಕ ಬಾಲಕಿಗೆ ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದೆಲ್ಲ ಸುಳ್ಳು ಭರವಸೆ ನೀಡಿ ಬಲವಂತವಾಗಿ ಅತ್ಯಾಚಾರ ಎಸಗಿದ್ದನು. ಈ ಕುರಿತು ರಾಣೇಬೆನ್ನೂರ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಇದನ್ನೂ ಓದಿ: ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಸಾವು​: ಪೊಲೀಸ್ ಸಿಬ್ಬಂದಿ ಸಸ್ಪೆಂಡ್, ಪ್ರಕರಣ ಸಿಐಡಿಗೆ

ದಾವಣಗೆರೆ: ಶೀಲ ಶಂಕಿಸಿ ಹೆಂಡತಿ ಮತ್ತು ಮಗುವನ್ನು ಕೊಲೆ ಮಾಡಿದ್ದ ಆರೋಪಿಗೆ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವತಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಮಾಯಕೊಂಡ ಗ್ರಾಮದ ಆರೋಪಿ ನಾಗರಾಜ್ ಶಿಕ್ಷೆಗೊಳಗಾದ ಆರೋಪಿ.

ಘಟನೆಯ ವಿವರ: ಘಟನೆ ನಡೆಯುವ ಮೂರು ವರ್ಷಗಳ ಹಿಂದೆ ಮೃತ ಶಿಲ್ಪಾ ಹಾಗೂ ನಾಗರಾಜ್ ಮದುವೆಯಾಗಿದ್ದರು. ಇವರಿಗೆ 2 ವರ್ಷದ ಹೆಣ್ಣು ಮಗು ಕೂಡ ಇತ್ತು. ಆದರೆ, ನಾಗರಾಜನು ತನ್ನ ಹೆಂಡತಿಯ ಶೀಲ ಶಂಕಿಸಿ ಮನೆಯಲ್ಲಿ ಪ್ರತಿ ದಿನ ಗಲಾಟೆ ಮಾಡುತ್ತಿರುವುದನ್ನು, 2018ರ ಏಪ್ರಿಲ್​ 19ರ ಬೆಳಗಿನ ಜಾವ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾಗರಾಜ್ ಪತ್ನಿ ಶಿಲ್ಪಾಳೊಂದಿಗೆ ಜಗಳವಾಡಿದ್ದಾನೆ. ನಂತರ ಅವರ ಮೇಲೆ ಹಲ್ಲೆ ನಡೆಸಿ, ಬಳಿಕ ಹಗ್ಗದಿಂದ ಕುತ್ತಿಗೆಗೆ ಜೋರಾಗಿ ಬಿಗಿದು ಸಾಯಿಸಿ ನೇಣು ಹಾಕಿದ್ದನು. ನಂತರ 2 ವರ್ಷದ ಮಗುವಿನ ಪೋಷಣೆ ಜವಾಬ್ದಾರಿ ತನ್ನ ಮೇಲೆ ಬೀಳುತ್ತದೆ ಎಂದು ಯೋಚಿಸಿ ಪುಟ್ಟ ಕಂದಮ್ಮಳನ್ನು ಕೂಡ ನೇಣು ಹಾಕಿ ಕೊಲೆ ಮಾಡಿದ್ದನು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಯಕೊಂಡ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾದ ಗುರುಬಸವರಾಜ್ ಅವರು ಪ್ರಕರಣದ ತನಿಖೆ ಮಾಡಿ ಆರೋಪಿ ನಾಗರಾಜ್​ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರವೀಣ್ ಕುಮಾರ್ ಆರ್​ಎನ್ ಅವರು ಆರೋಪಿತನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಿತಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಭಿಯೋಜಕರಾದ ಜಯಪ್ಪ ಕೆಜಿ ಸರ್ಕಾರದ ಪರವಾಗಿ ವಾದ ಮಾಡಿದ್ದಾರೆ.

ಬಾಲಕಿ ಅತ್ಯಾಚಾರ, ಆರೋಪಿಗೆ 20 ವರ್ಷ ಕಠಿಣ ಕಾರಗೃಹ ಶಿಕ್ಷೆ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅರ್ಬಾಜ್ ದಸ್ತಗೀರ ಎಂಬ ಆರೋಪಿಗೆ ಹಾವೇರಿಯ ವಿಶೇಷ ಸತ್ರ ನ್ಯಾಯಾಲಯವು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 2.80 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಶೀಘ್ರಗತಿ ನ್ಯಾಯಾಲಯ- 1 ರ ನ್ಯಾಯಾಧೀಶರಾದ ನಿಂಗನಗೌಡ ಪಾಟೀಲ್​ ಅವರು ಸೋಮವಾರ ಆದೇಶ ಪ್ರಕಟಿಸಿದರು.

ಬೆಂಗಳೂರು ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದ 20 ವರ್ಷದ ಅರ್ಬಾಜ್ ದಸ್ತಗೀರ ಆರೋಪಿ. ಬಾಲಕಿಗೆ ಮೊಬೈಲ್ ಮೂಲಕ ಸಂದೇಶ ಕಳುಹಿಸಿ ಮನೆಯಿಂದ ಹೊರ ಕರೆಯಿಸಿ ಅಪಹರಣ ಮಾಡಿ ನಂತರ ರಾಣೇಬೆನ್ನೂರ ಹೋಟೆಲ್​ನ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದನು. ಬಳಿಕ ಬಾಲಕಿಗೆ ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದೆಲ್ಲ ಸುಳ್ಳು ಭರವಸೆ ನೀಡಿ ಬಲವಂತವಾಗಿ ಅತ್ಯಾಚಾರ ಎಸಗಿದ್ದನು. ಈ ಕುರಿತು ರಾಣೇಬೆನ್ನೂರ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಇದನ್ನೂ ಓದಿ: ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಸಾವು​: ಪೊಲೀಸ್ ಸಿಬ್ಬಂದಿ ಸಸ್ಪೆಂಡ್, ಪ್ರಕರಣ ಸಿಐಡಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.