ETV Bharat / state

ವಿಶೇಷ ಚೇತನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ: ಇವರ ಕ್ರಿಕೆಟ್​ ಆಟಕ್ಕೆ ಎಲ್ಲರೂ ಫಿದಾ! - Wheelchair Cricket Competition at Mangalore

ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೈಂಟ್ ಅಲೋಶಿಯಸ್ ಮತ್ತು ಸಹ್ಯಾದ್ರಿ ಕಾಲೇಜ್ ಸಹಯೋಗದೊಂದಿಗೆ ರಾಜ್ಯ ಮಟ್ಟದ ವೀಲ್ ಚೇರ್ ಕ್ರಿಕೆಟ್ ಸ್ಪರ್ಧೆ ಏರ್ಪಡಿಸಲಾಗಿತ್ತು.

Wheelchair Cricket Competition at Mangalore
ನೋಡುಗರ ಕಣ್ಣಿಗೆ ಹಬ್ಬವಾದ ವಿಕಲಚೇತನರ ವಿಶೇಷ ಕ್ರಿಕೆಟ್...!
author img

By

Published : Dec 9, 2019, 2:08 AM IST

ಮಂಗಳೂರು: ನಗರದ ಹೊರವಲಯದಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ವೀಲ್ ಚೇರ್ ಕ್ರಿಕೆಟ್ ಸ್ಪರ್ಧೆ ನೋಡುಗರ ಮೈ ರೋಮಾಂಚನಗೊಳಿಸುವಂತಿತ್ತು.

ನೋಡುಗರ ಕಣ್ಣಿಗೆ ಹಬ್ಬವಾದ ವಿಕಲಚೇತನರ ವಿಶೇಷ ಕ್ರಿಕೆಟ್...!

ಹೌದು, ಸೈಂಟ್ ಅಲೋಶಿಯಸ್ ಮತ್ತು ಸಹ್ಯಾದ್ರಿ ಕಾಲೇಜ್ ಜಂಟಿಯಾಗಿ ಆಯೋಜಿಸಿರುವ ರಾಜ್ಯ ಮಟ್ಟದ ವೀಲ್ ಚೇರ್ ಕ್ರಿಕೆಟ್ ಸ್ಪರ್ಧೆ ಎಲ್ಲರನ್ನೂ ಮೈ ರೋಮಾಂಚನಗೊಳಿಸುವಂತೆ ಮಾಡಿತು. ವಿಕಲಚೇತನ ಕ್ರೀಡಾಪಟುಗಳನ್ನು ಉತ್ತೇಜಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ನಡೆದ ರಾಜ್ಯ ಮಟ್ಟದ ಈ ಪಂದ್ಯಾವಳಿಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ತಂಡಗಳಿಗಾಗಿ 20 ಓವರ್​ನ ಒಂದು ದಿನದ ಪಂದ್ಯಾವಳಿ ಆಯೋಜಿಸಲಾಗಿತ್ತು.

ಮುಂದಿನ ಬಾರಿ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹೀಗೆ ದಕ್ಷಿಣ ಭಾರತದ ವಿಕಲ ಚೇತನರ ತಂಡಗಳನ್ನೂ ಕರೆದು ಆಡಿಸುವ ಯೋಚನೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.

ಮಂಗಳೂರು: ನಗರದ ಹೊರವಲಯದಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ವೀಲ್ ಚೇರ್ ಕ್ರಿಕೆಟ್ ಸ್ಪರ್ಧೆ ನೋಡುಗರ ಮೈ ರೋಮಾಂಚನಗೊಳಿಸುವಂತಿತ್ತು.

ನೋಡುಗರ ಕಣ್ಣಿಗೆ ಹಬ್ಬವಾದ ವಿಕಲಚೇತನರ ವಿಶೇಷ ಕ್ರಿಕೆಟ್...!

ಹೌದು, ಸೈಂಟ್ ಅಲೋಶಿಯಸ್ ಮತ್ತು ಸಹ್ಯಾದ್ರಿ ಕಾಲೇಜ್ ಜಂಟಿಯಾಗಿ ಆಯೋಜಿಸಿರುವ ರಾಜ್ಯ ಮಟ್ಟದ ವೀಲ್ ಚೇರ್ ಕ್ರಿಕೆಟ್ ಸ್ಪರ್ಧೆ ಎಲ್ಲರನ್ನೂ ಮೈ ರೋಮಾಂಚನಗೊಳಿಸುವಂತೆ ಮಾಡಿತು. ವಿಕಲಚೇತನ ಕ್ರೀಡಾಪಟುಗಳನ್ನು ಉತ್ತೇಜಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ನಡೆದ ರಾಜ್ಯ ಮಟ್ಟದ ಈ ಪಂದ್ಯಾವಳಿಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ತಂಡಗಳಿಗಾಗಿ 20 ಓವರ್​ನ ಒಂದು ದಿನದ ಪಂದ್ಯಾವಳಿ ಆಯೋಜಿಸಲಾಗಿತ್ತು.

ಮುಂದಿನ ಬಾರಿ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹೀಗೆ ದಕ್ಷಿಣ ಭಾರತದ ವಿಕಲ ಚೇತನರ ತಂಡಗಳನ್ನೂ ಕರೆದು ಆಡಿಸುವ ಯೋಚನೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.

Intro:ಅಲ್ಲಿ ನಡೆಯುತ್ತಿರೋದು ಕ್ರಿಕೆಟ್ ಪಂದ್ಯಾಟ... ಆದರೆ ಎಲ್ಲಾ ವ್ಹೀಲ್ ಚೇರ್ ನಲ್ಲಿಯೇ ಕುಳಿತು ಆಟ ಆಡುತ್ತಿದ್ದರು. ಅರೇ ಇದೇನು ವ್ಹೀಲ್ ಚೇರ್ ನಲ್ಲಿ ಕುಳಿತು ಯಾವ ರೀತಿ ಕ್ರಿಕೇಟ್ ಆಡುವುದು ಎಂದು ಯಾರಾದರೂ ಪ್ರಶ್ನಿಸಬಹುದು. ಅದೆಲ್ಲದಕ್ಕೂ ಉತ್ತರ ಇಲ್ಲಿದೆ...

ಇಲ್ಲಿ ಆಡುವ ಕೆಲವರಿಗೆ ಕೈ ಸರಿಯಿಲ್ಲ, ಕೆಲವರಿಗೆ ಕಾಲಿಲ್ಲ ಮತ್ತೆ ಕೆಲವರಿಗೆ ಕೈ ಸರಿಯಾಗಿ ತಿರುಗಲ್ಲ. ಒಬ್ಬನದು ಗೂನು ಬೆನ್ನು ಮತ್ತೊಬ್ಬನಿಗೆ ಕೈ ಕಾಲು ಎರಡೂ ಇಲ್ಲ.. ಆದರೂ ಕೈಕಾಲು ಸರಿ ಇದ್ದವರೂ ನಾಚುವಂತೆ ಕ್ರಿಕೆಟ್ ಆಡಿ ಎಲ್ಲರೂ ಹುಬ್ಬೇರುವಂತೆ ಮಾಡಿದರು.

Body:ಇಂತಹ ಪಂದ್ಯಾವಳಿ ನಡೆದಿದ್ದು
ಮಂಗಳೂರು ನಗರದ ಹೊರವಲಯದಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ. ಸೈಂಟ್ ಅಲೋಶಿಯಸ್ ಮತ್ತು ಸಹ್ಯಾದ್ರಿ ಕಾಲೇಜ್ ಜಂಟಿಯಾಗಿ ಆಯೋಜಿಸಿರುವ ರಾಜ್ಯ ಮಟ್ಟದ ವೀಲ್ ಚೇರ್ ಕ್ರಿಕೆಟ್ ಸ್ಪರ್ಧೆ ಎಲ್ಲರನ್ನೂ ಮೈರೋಮಾಂಚನಗೊಳಿಸುವಂತೆ ಮಾಡಿತು. ವಿಕಲಚೇತನ ಕ್ರೀಡಾಪಟುಗಳನ್ನು ಉತ್ತೇಜಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ನಡೆದ ರಾಜ್ಯ ಮಟ್ಟದ ಈ ಪಂದ್ಯಾವಳಿಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ತಂಡಗಳಿಗಾಗಿ 20 ಓವರ್ ನ ಒಂದು ದಿನದ ಪಂದ್ಯಾವಳಿ ಆಯೋಜಿಸಲಾಗಿತ್ತು. ಮುಂದಿನ ಬಾರಿ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹೀಗೆ ದಕ್ಷಿಣ ಭಾರತದ ವಿಕಲ ಚೇತನರ ತಂಡಗಳನ್ನೂ ಕರೆದು ಆಡಿಸುವ ಯೋಚನೆ ಆಯೋಜಕರಿಗೆ ಇದೆಯಂತೆ.

ಒಟ್ಟಿನಲ್ಲಿ ಈ ವಿಕಲಚೇತನರ ಕ್ರಿಕೆಟ್ ಪಂದ್ಯಾವಳಿ ಪ್ರೇಕ್ಷಕರಿಗೆ ಹೊಸ ಹುರುಪನ್ನು‌ ನೀಡಿತು. ಈ ರೀತಿಯ ಪ್ರದರ್ಶನ ನೀಡಿದ ಸ್ಪರ್ಧಿಗಳಿಗೆ ನಿಜವಾಗಲೂ ಹ್ಯಾಟ್ಸಾಪ್ ಹೇಳಲೇ ಬೇಕು.

Reporter_Vishwanath PanjimogaruConclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.