ಮಂಗಳೂರು: ಭಾನುವಾರದ ಲಾಕ್ಡೌನ್ ಪರಿಕಲ್ಪನೆಯೇ ನನಗೆ ಅರ್ಥ ಆಗುತ್ತಿಲ್ಲ. ದಿನಸಿ ಅಂಗಡಿ, ಮಾರುಕಟ್ಟೆ, ಹಾಲು, ತರಕಾರಿ ಲಭ್ಯವಿದೆ ಎಂದು ಜನರನ್ನು ಓಡಾಡಬೇಡಿ ಎಂದು ಹೇಳಿದರೆ ಹೇಗೆ ಎಂದು ರಾಜ್ಯ ಸರ್ಕಾರದ ಕ್ರಮಕ್ಕೆ ಶಾಸಕ ಯು.ಟಿ. ಖಾದರ್ ಟ್ವೀಟ್ ಮೂಲಕ ಲೇವಡಿ ಮಾಡಿದ್ದಾರೆ.

ಕರ್ಫ್ಯೂ ಜಾರಿಯಲ್ಲಿದೆ, 144 ಸೆಕ್ಷನ್ ಕೂಡಾ ಜಾರಿಯಲ್ಲಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಹಾಗಾಗಿ ಭಾನುವಾರದ ಲಾಕ್ಡೌನ್ ವೈಜ್ಞಾನಿಕತೆಯೇ ಅರ್ಥವಾಗುತ್ತಿಲ್ಲ. ಸಿಂಪಲ್ ಆಗಿ ಹೇಳಬೇಕೆಂದರೆ ಇದೊಂದು ಬೇಕಾಬಿಟ್ಟಿ ಲಾಕ್ಡೌನ್. ಈ ಬಗ್ಗೆ ಸರ್ಕಾರ ತಜ್ಞರ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದು ಒಳಿತು ಎಂದು ಸರಣಿ ಟ್ವೀಟ್ ಮಾಡಿದ್ದಾರೆ.