ETV Bharat / state

ಸದ್ದಿಲ್ಲದೆ ಹಸಿದವರ ಪಾಲಿಗೆ ಅನ್ನದಾತರಾದ ಪೊಲೀಸ್ ಜೋಡಿ: ನಿತ್ಯ 150 ಮಂದಿಗೆ ಊಟ! - police officers Distributes Meals

ಮಂಗಳೂರಿನ ಪಾಂಡೇಶ್ವರ ಇಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಹಾಗೂ ಕ್ರೈಂ ಪೊಲೀಸ್ ಠಾಣೆಯ ಹೆಡ್ ಕಾನ್​ಸ್ಟೇಬಲ್ ಶಿವಕುಮಾರ್ ರಾವ್ ಹಾಗೂ ಸುರತ್ಕಲ್ ಪೊಲೀಸ್ ಠಾಣೆಯ ಹೆಡ್​ಕಾನ್ಸ್ ಸ್ಟೇಬಲ್ ಸುನಿಲ್ ಕುಮಾರ್ ಈ ಮಾನವೀಯ ಕಾರ್ಯದಲ್ಲಿ ನಿರತರಾದವರು‌.‌ ಕಳೆದ ಒಂಬತ್ತು ದಿನಗಳಿಂದ ಇವರು ನಿತ್ಯವೂ ಬೀದಿಯಲ್ಲಿ ಬಿದ್ದವರ ಹೊಟ್ಟೆ ತಣಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

Distributes Meals
Distributes Meals
author img

By

Published : May 11, 2021, 4:09 AM IST

ಮಂಗಳೂರು: ಕೋವಿಡ್ ಸೋಂಕಿನ ಈ ಸಂಕಷ್ಟ ಕಾಲದಲ್ಲಿ ಕರ್ತವ್ಯದ ಜೊತೆ- ಜೊತೆಗೆ ನಿತ್ಯ ಭಿಕ್ಷಕರು, ನಿರಾಶ್ರಿತರ ಹೊಟ್ಟೆ ತುಂಬಿಸುವ ಕಾರ್ಯವನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸರಿಬ್ಬರು ಮಾಡುತ್ತಿದ್ದಾರೆ.

ಮಂಗಳೂರಿನ ಪಾಂಡೇಶ್ವರ ಇಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಹಾಗೂ ಕ್ರೈಂ ಪೊಲೀಸ್ ಠಾಣೆಯ ಹೆಡ್ ಕಾನ್​ಸ್ಟೇಬಲ್ ಶಿವಕುಮಾರ್ ರಾವ್ ಹಾಗೂ ಸುರತ್ಕಲ್ ಪೊಲೀಸ್ ಠಾಣೆಯ ಹೆಡ್​ಕಾನ್ಸ್ ಸ್ಟೇಬಲ್ ಸುನಿಲ್ ಕುಮಾರ್ ಈ ಮಾನವೀಯ ಕಾರ್ಯದಲ್ಲಿ ನಿರತರಾದವರು‌.‌ ಕಳೆದ ಒಂಬತ್ತು ದಿನಗಳಿಂದ ಇವರು ನಿತ್ಯವೂ ಬೀದಿಯಲ್ಲಿ ಬಿದ್ದವರ ಹೊಟ್ಟೆ ತಣಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಆಹಾರ ವಿತರಣೆ
ಆಹಾರ ವಿತರಣೆ

ಕೋವಿಡ್ ಕರ್ಫ್ಯೂನಿಂದ ಎಲ್ಲವೂ ಸ್ತಬ್ಧವಾಗಿದೆ. ಆದರೆ ಭಿಕ್ಷಕರು, ನಿರಾಶ್ರಿತರು, ಬೀದಿಪಾಲಾದವರ ಬಗ್ಗೆ ಕನಿಕರದಿಂದ ಈ ಮಾನವೀಯ ಕಾರ್ಯದಲ್ಲಿ ತೊಡಗಿರುವ ಈ ಪೊಲೀಸರಿಬ್ಬರು ಉರ್ವಸ್ಟೋರ್, ಹಳೆಯ ಬಸ್ ನಿಲ್ದಾಣ, ಕಂಕನಾಡಿ, ಪಂಪ್ ವೆಲ್​ಗಳಲ್ಲಿ ಇರುವ ಹಲವು ಮಂದಿ ಭಿಕ್ಷುಕರು, ನಿರಾಶ್ರಿತರಿಗೆ ಊಟ ಒದಗಿಸುತ್ತಿದ್ದಾರೆ.

ಅನ್ನ, ಪಲ್ಯ, ಕೋಳಿ ಮಾಂಸದ ಸಾರು ಸೇರಿ ನಿತ್ಯವೂ 150 ಮಂದಿಗೆ ಈ ಪೊಲೀಸ್ ಜೋಡಿ ಊಟ ಒದಗಿಸುತ್ತಿದೆ. ಜೊತೆಗೆ ಕುಡಿಯುವ ನೀರು ಮಾಸ್ಕ್​ಗಳನ್ನು ನೀಡಲಾಗುತ್ತದೆ. ಶಿವಕುಮಾರ್ ರಾವ್ ಹಾಗೂ ಸುನಿಲ್ ಕುಮಾರ್ ಇಬ್ಬರೂ ಕೋವಿಡ್ ವಾರಿಯರ್ಸ್​ಗಳಾಗಿ ಕರ್ತವ್ಯದಲ್ಲಿ ಇರುವುದರಿಂದ ರಾಮಭವನ್ ಹೊಟೇಲ್​ನ ತಮ್ಮ ಸ್ನೇಹಿತನಿಗೆ ಅಕ್ಕಿ, ದಿನಸಿ ಸಾಮಾಗ್ರಿಗಳನ್ನು ನೀಡಿ ಊಟಕ್ಕೆ ಸಿದ್ಧಪಡಿಸುತ್ತಾರೆ. ಆ ಸ್ನೇಹಿತ ಉಚಿತವಾಗಿ ಊಟ ಸಿದ್ಧ ಪಡಿಸುತ್ತಾರಂತೆ.

ಆಹಾರ ವಿತರಣೆ
ಆಹಾರ ವಿತರಣೆ

ಊಟ ವಿತರಿಸುವ ಕಾರ್ಯವನ್ನು ಮಹಾಕಾಳಿ ಪಡ್ಪುವಿನ ಆದಿ ಮಹೇಶ್ವರಿ ಕ್ರಿಕೇಟರ್ಸ್​ನ ಯುವಕರಿಗೆ ವಹಿಸಲಾಗಿದೆ. ಈ ಮೂಲಕ ಈ ಪೊಲೀಸ್ ಜೋಡಿ ಸದ್ದು, ಸುದ್ದಿಯಿಲ್ಲದೆ ನೂರಾರು ಮಂದಿಯ ಹೊಟ್ಟೆ ತಣಿಸುವ ಕಾರ್ಯದಲ್ಲಿ ತೊಡಗಿದೆ. ಇಂತಹ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಮನಸ್ಸನ್ನು ಹೊಂದಿರುವ ಈ ಪೊಲೀಸ್ ಜೋಡಿಯಿಂದ ಇನ್ನಷ್ಟು ಮಂದಿಯ ಹೊಟ್ಟೆ ತಣಿಸುವ ಕಾರ್ಯ ಆಗಲಿ ಎಂಬುದೇ ಈಟಿವಿ ಭಾರತದ ಆಶಯ.

ಮಂಗಳೂರು: ಕೋವಿಡ್ ಸೋಂಕಿನ ಈ ಸಂಕಷ್ಟ ಕಾಲದಲ್ಲಿ ಕರ್ತವ್ಯದ ಜೊತೆ- ಜೊತೆಗೆ ನಿತ್ಯ ಭಿಕ್ಷಕರು, ನಿರಾಶ್ರಿತರ ಹೊಟ್ಟೆ ತುಂಬಿಸುವ ಕಾರ್ಯವನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸರಿಬ್ಬರು ಮಾಡುತ್ತಿದ್ದಾರೆ.

ಮಂಗಳೂರಿನ ಪಾಂಡೇಶ್ವರ ಇಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಹಾಗೂ ಕ್ರೈಂ ಪೊಲೀಸ್ ಠಾಣೆಯ ಹೆಡ್ ಕಾನ್​ಸ್ಟೇಬಲ್ ಶಿವಕುಮಾರ್ ರಾವ್ ಹಾಗೂ ಸುರತ್ಕಲ್ ಪೊಲೀಸ್ ಠಾಣೆಯ ಹೆಡ್​ಕಾನ್ಸ್ ಸ್ಟೇಬಲ್ ಸುನಿಲ್ ಕುಮಾರ್ ಈ ಮಾನವೀಯ ಕಾರ್ಯದಲ್ಲಿ ನಿರತರಾದವರು‌.‌ ಕಳೆದ ಒಂಬತ್ತು ದಿನಗಳಿಂದ ಇವರು ನಿತ್ಯವೂ ಬೀದಿಯಲ್ಲಿ ಬಿದ್ದವರ ಹೊಟ್ಟೆ ತಣಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಆಹಾರ ವಿತರಣೆ
ಆಹಾರ ವಿತರಣೆ

ಕೋವಿಡ್ ಕರ್ಫ್ಯೂನಿಂದ ಎಲ್ಲವೂ ಸ್ತಬ್ಧವಾಗಿದೆ. ಆದರೆ ಭಿಕ್ಷಕರು, ನಿರಾಶ್ರಿತರು, ಬೀದಿಪಾಲಾದವರ ಬಗ್ಗೆ ಕನಿಕರದಿಂದ ಈ ಮಾನವೀಯ ಕಾರ್ಯದಲ್ಲಿ ತೊಡಗಿರುವ ಈ ಪೊಲೀಸರಿಬ್ಬರು ಉರ್ವಸ್ಟೋರ್, ಹಳೆಯ ಬಸ್ ನಿಲ್ದಾಣ, ಕಂಕನಾಡಿ, ಪಂಪ್ ವೆಲ್​ಗಳಲ್ಲಿ ಇರುವ ಹಲವು ಮಂದಿ ಭಿಕ್ಷುಕರು, ನಿರಾಶ್ರಿತರಿಗೆ ಊಟ ಒದಗಿಸುತ್ತಿದ್ದಾರೆ.

ಅನ್ನ, ಪಲ್ಯ, ಕೋಳಿ ಮಾಂಸದ ಸಾರು ಸೇರಿ ನಿತ್ಯವೂ 150 ಮಂದಿಗೆ ಈ ಪೊಲೀಸ್ ಜೋಡಿ ಊಟ ಒದಗಿಸುತ್ತಿದೆ. ಜೊತೆಗೆ ಕುಡಿಯುವ ನೀರು ಮಾಸ್ಕ್​ಗಳನ್ನು ನೀಡಲಾಗುತ್ತದೆ. ಶಿವಕುಮಾರ್ ರಾವ್ ಹಾಗೂ ಸುನಿಲ್ ಕುಮಾರ್ ಇಬ್ಬರೂ ಕೋವಿಡ್ ವಾರಿಯರ್ಸ್​ಗಳಾಗಿ ಕರ್ತವ್ಯದಲ್ಲಿ ಇರುವುದರಿಂದ ರಾಮಭವನ್ ಹೊಟೇಲ್​ನ ತಮ್ಮ ಸ್ನೇಹಿತನಿಗೆ ಅಕ್ಕಿ, ದಿನಸಿ ಸಾಮಾಗ್ರಿಗಳನ್ನು ನೀಡಿ ಊಟಕ್ಕೆ ಸಿದ್ಧಪಡಿಸುತ್ತಾರೆ. ಆ ಸ್ನೇಹಿತ ಉಚಿತವಾಗಿ ಊಟ ಸಿದ್ಧ ಪಡಿಸುತ್ತಾರಂತೆ.

ಆಹಾರ ವಿತರಣೆ
ಆಹಾರ ವಿತರಣೆ

ಊಟ ವಿತರಿಸುವ ಕಾರ್ಯವನ್ನು ಮಹಾಕಾಳಿ ಪಡ್ಪುವಿನ ಆದಿ ಮಹೇಶ್ವರಿ ಕ್ರಿಕೇಟರ್ಸ್​ನ ಯುವಕರಿಗೆ ವಹಿಸಲಾಗಿದೆ. ಈ ಮೂಲಕ ಈ ಪೊಲೀಸ್ ಜೋಡಿ ಸದ್ದು, ಸುದ್ದಿಯಿಲ್ಲದೆ ನೂರಾರು ಮಂದಿಯ ಹೊಟ್ಟೆ ತಣಿಸುವ ಕಾರ್ಯದಲ್ಲಿ ತೊಡಗಿದೆ. ಇಂತಹ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಮನಸ್ಸನ್ನು ಹೊಂದಿರುವ ಈ ಪೊಲೀಸ್ ಜೋಡಿಯಿಂದ ಇನ್ನಷ್ಟು ಮಂದಿಯ ಹೊಟ್ಟೆ ತಣಿಸುವ ಕಾರ್ಯ ಆಗಲಿ ಎಂಬುದೇ ಈಟಿವಿ ಭಾರತದ ಆಶಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.