ಪುತ್ತೂರು: ಚಲಿಸುತಿದ್ದ ಲಾರಿಯ ಆಕ್ಸಲ್ ತುಂಡಾಗಿ ಭೀಕರ ಅಪಘಾತ ಸಂಭವಿಸಿರುವ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಕಾವು ಪೇಟೆಯಲ್ಲಿ ಜರುಗಿದೆ.
ಅಪಘಾತದಲ್ಲಿ ಎರಡು ಕಾರುಗಳು ನುಜ್ಜುಗುಜ್ಜಾಗಿವೆ. ಬ್ರೀಜಾ ಕಾರಿನಲ್ಲಿದ್ದ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಲೋಡ್ ತುಂಬಿದ್ದ ಲಾರಿ ಸುಳ್ಯ ಕಡೆಗೆ ತೆರಳಿತ್ತು. ಇಲ್ಲಿನ ಕ್ಯಾಂಪ್ಕೋ ನೂತನ ಬಿಲ್ಡಿಂಗ್ ಸಮೀಪದ ತಿರುವಿನಲ್ಲಿ ಲಾರಿ ಆಕ್ಸಲ್ ತುಂಡಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ ಬ್ರೀಜಾ ಮತ್ತು ಎರ್ಟಿಗಾ ಕಾರುಗಳು ಜಖಂಗೊಂಡಿವೆ.
ಪುತ್ತೂರು ಗ್ರಾಮಾಂತರ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.