ETV Bharat / state

ವಿದ್ಯಾರ್ಥಿಗಳ ಪ್ರಥಮ ತುಳು ಸಮ್ಮೇಳನಕ್ಕೆ ಚಾಲನೆ... ಕರಾವಳಿಯಲ್ಲಿ ತುಳು ವಿವಿ ಸ್ಥಾಪನೆಗೆ ಒತ್ತಾಯ - ಮಂಗಳೂರು ವಿವಿಯ ತುಳು ಪರಿಷತ್

ಮಂಗಳೂರು ವಿವಿಯ ತುಳು ಪರಿಷತ್ ವತಿಯಿಂದ ವಿದ್ಯಾರ್ಥಿಗಳ ಪ್ರಥಮ ತುಳು ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.

ಸಮ್ಮೇಳನಕ್ಕೆ ಚಾಲನೆ
ಸಮ್ಮೇಳನಕ್ಕೆ ಚಾಲನೆ
author img

By

Published : Jan 16, 2020, 5:35 PM IST

ಮಂಗಳೂರು: ಮಂಗಳೂರು ವಿವಿಯ ತುಳು ಪರಿಷತ್ ವತಿಯಿಂದ ನಗರದ ಪುರಭವನದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರಥಮ ತುಳು ಸಮ್ಮೇಳನಕ್ಕೆ, ಅಧ್ಯಕ್ಷೆ ಅನನ್ಯಾ ಜೀವನ್ ಉಳ್ಳಾಲ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಹೆಸರಿಗೆ ಬೇರೆಬೇರೆ ಜಾತಿ, ಮತ, ಸಮುದಾಯಗಳಿದ್ದರೂ ತುಳುವಿನ ವಿಚಾರ ಬಂದಾಗ ಎಲ್ಲರೂ ಗಟ್ಟಿ ಸ್ವರದಲ್ಲಿ ನಾವೆಲ್ಲಾ ತುಳುವರು ಎಂದು ಹೇಳುತ್ತಾರೆ. ಹಿಂದೂ, ಮುಸ್ಲಿಂ, ಜೈನ, ಕ್ರೈಸ್ತ ಎಂದು ಹಲವಾರು ಜಾತಿ ಮತಗಳಿದ್ದರೂ, ಎಲ್ಲರೂ ಒಂದಾಗಿ ಸೌಹಾರ್ದತೆಯಿಂದ ಯಾವ ರೀತಿ ಬದುಕಬಹುದು ಎಂದು ಜಗತ್ತಿಗೆ ಸಾರುವ ಹಲವಾರು ಕ್ಷೇತ್ರಗಳಿವೆ ಎಂದು ಅನನ್ಯಾ ಜೀವನ್ ಉಳ್ಳಾಲ್ ಹೇಳಿದರು.

ಪ್ರಥಮ ತುಳು ಸಮ್ಮೇಳನಕ್ಕೆ ಚಾಲನೆ ನೀಡಿದ ವಿದ್ಯಾರ್ಥಿಗಳು

ದೂರದ ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿವಿಯಲ್ಲಿ ತುಳು ವಿಶ್ವವಿದ್ಯಾಲಯ ಇರುವಾಗ, ನಮ್ಮದೇ ಕರಾವಳಿಯಲ್ಲಿಯೂ ಪ್ರತ್ಯೇಕ ತುಳು ವಿಶ್ವವಿದ್ಯಾಲಯದ ಅಗತ್ಯವಿದೆ ಎಂದರು.

ಮಂಗಳೂರು: ಮಂಗಳೂರು ವಿವಿಯ ತುಳು ಪರಿಷತ್ ವತಿಯಿಂದ ನಗರದ ಪುರಭವನದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರಥಮ ತುಳು ಸಮ್ಮೇಳನಕ್ಕೆ, ಅಧ್ಯಕ್ಷೆ ಅನನ್ಯಾ ಜೀವನ್ ಉಳ್ಳಾಲ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಹೆಸರಿಗೆ ಬೇರೆಬೇರೆ ಜಾತಿ, ಮತ, ಸಮುದಾಯಗಳಿದ್ದರೂ ತುಳುವಿನ ವಿಚಾರ ಬಂದಾಗ ಎಲ್ಲರೂ ಗಟ್ಟಿ ಸ್ವರದಲ್ಲಿ ನಾವೆಲ್ಲಾ ತುಳುವರು ಎಂದು ಹೇಳುತ್ತಾರೆ. ಹಿಂದೂ, ಮುಸ್ಲಿಂ, ಜೈನ, ಕ್ರೈಸ್ತ ಎಂದು ಹಲವಾರು ಜಾತಿ ಮತಗಳಿದ್ದರೂ, ಎಲ್ಲರೂ ಒಂದಾಗಿ ಸೌಹಾರ್ದತೆಯಿಂದ ಯಾವ ರೀತಿ ಬದುಕಬಹುದು ಎಂದು ಜಗತ್ತಿಗೆ ಸಾರುವ ಹಲವಾರು ಕ್ಷೇತ್ರಗಳಿವೆ ಎಂದು ಅನನ್ಯಾ ಜೀವನ್ ಉಳ್ಳಾಲ್ ಹೇಳಿದರು.

ಪ್ರಥಮ ತುಳು ಸಮ್ಮೇಳನಕ್ಕೆ ಚಾಲನೆ ನೀಡಿದ ವಿದ್ಯಾರ್ಥಿಗಳು

ದೂರದ ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿವಿಯಲ್ಲಿ ತುಳು ವಿಶ್ವವಿದ್ಯಾಲಯ ಇರುವಾಗ, ನಮ್ಮದೇ ಕರಾವಳಿಯಲ್ಲಿಯೂ ಪ್ರತ್ಯೇಕ ತುಳು ವಿಶ್ವವಿದ್ಯಾಲಯದ ಅಗತ್ಯವಿದೆ ಎಂದರು.

Intro:ಮಂಗಳೂರು: ಭಾಷೆಯೊಂದು ಬೆಳೆಯಬೇಕಾದರೆ ಆ ಭಾಷೆ ಕಲಿಕೆಯ ಭಾಷೆಯಾಗಬೇಕು. ಇಂದು ತುಳು ಭಾಷೆಯು ಪಠ್ಯವಾಗಿ ಪದವಿ, ಸ್ನಾತಕೋತ್ತರ ತರಗತಿಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ದೂರದ ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿವಿಯಲ್ಲಿ ತುಳು ವಿಶ್ವವಿದ್ಯಾಲಯ ಇರುವಾಗ ನಮ್ಮದೇ ಕರಾವಳಿಯಲ್ಲಿಯೂ ಪ್ರತ್ಯೇಕ ತುಳು ವಿಶ್ವವಿದ್ಯಾಲಯದ ಅಗತ್ಯವಿದೆ ಎಂದು ಸಮ್ಮೇಳನದ ಅಧ್ಯಕ್ಷೆ, ವಿದ್ಯಾರ್ಥಿನಿ ಅನನ್ಯಾ ಜೀವನ್ ಉಳ್ಳಾಲ್ ಹೇಳಿದರು.

ಮಂಗಳೂರು ವಿವಿಯ ತುಳು ಪರಿಷತ್ ವತಿಯಿಂದ ನಗರದ ಪುರಭವನದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರಥಮ ತುಳು ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರಾವಳಿಯಲ್ಲಿ ಹೆಸರಿಗೆ ಬೇರೆಬೇರೆ ಜಾತಿ, ಮತ, ಸಮುದಾಯಗಳಿದ್ದರೂ ತುಳುವಿನ ವಿಚಾರ ಬಂದಾಗ ಎಲ್ಲರೂ ಗಟ್ಟಿ ಸ್ವರದಲ್ಲಿ ನಾವೆಲ್ಲಾ ತುಳುವರು ಎಂದು ಹೇಳುತ್ತಾರೆ.


Body:ಹಿಂದೂ, ಮುಸ್ಲಿಂ, ಜೈನ, ಕ್ರೈಸ್ತ ಎಂದು ಹಲವಾರು ಜಾತಿ ಮತಗಳಿದ್ದರೂ, ಎಲ್ಲರೂ ಒಂದಾಗಿ ಒಟ್ಟಾಗಿ ಸೌಹಾರ್ದತೆಯಿಂದ ಯಾವ ರೀತಿ ಬದುಕಬಹುದು ಎಂದು ಜಗತ್ತಿಗೆ ಸಾರುವ ಹಲವಾರು ಕ್ಷೇತ್ರಗಳಿವೆ ಎಂದು ಅನನ್ಯಾ ಜೀವನ್ ಉಳ್ಳಾಲ್ ಹೇಳಿದರು.

ಸಮ್ಮೇಳನವನ್ನು ಉದ್ಘಾಟಿಸಿದ ವಿದ್ಯಾರ್ಥಿ ಹರ್ಷಿತ್ ಕೆ. ಮಾತನಾಡಿ, ತುಳುನಾಡು ಇಂದು ಕಾಸರಗೋಡು, ದ.ಕ. ಹಾಗೂ ಉಡುಪಿ ಎಂದು ವಿಭಜನೆಗೊಂಡರೂ, ತುಳವ ಭಾಷೆ, ಸಂಸ್ಕೃತಿ ನಾವೆಲ್ಲಾ ಒಂದೇ ಎಂಬ ಭಾವನೆ ಬಂದಿದೆ. ತುಳ ಭಾಷೆಯ ವಿಸ್ತಾರ ಸಣ್ಣದಾದರೂ, ಈ ಭಾಷೆಯನ್ನು ಮಾತನಾಡುವವರು ಪ್ರಪಂಚದ ಮೂಲೆ ಮೂಲೆಯಲ್ಲಿಯೂ ಇದ್ದಾರೆ.ಅಲ್ಲದೆ ತುಳುವರು ಎಲ್ಲೇ ಹೋದರೂ ತುಳು ಸಂಸ್ಕೃತಿ ಯಲ್ಲಿ ಅಲ್ಲಲ್ಲಿ ಪಸರಿಸುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ, ಕರ್ನಾಟಕ ಜಾನಪದ ವಿವಿ ವಿಶ್ರಾಂತ ಕುಲಪತಿ ಡಾ.ಚಿನ್ನಪ್ಪ ಗೌಡ, ಸಾಹಿತಿ ಡಾ.ಪ್ರಭಾಕರ ನೀರುಮಾರ್ಗ, ತಾರನಾಥ ಗಟ್ಟಿ ಕಾಪಿಕಾಡು ಮತ್ತಿತರರು ಉಪಸ್ಥಿತರಿದ್ದರು.

Vishwanath Panjimogaru


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.