ETV Bharat / state

ಔಷಧಿ ಸಸ್ಯಗಳ ಉಳಿವಿಗೆ ಪಣತೊಟ್ಟ ನಿವೃತ್ತ ಶಿಕ್ಷಕ.. ಅಳಿವಿನಂಚಿನ ಸಸ್ಯಗಳ ವೈಜ್ಞಾನಿಕ ದಾಖಲಾತಿ

author img

By

Published : Sep 12, 2021, 1:24 PM IST

Updated : Sep 12, 2021, 5:36 PM IST

ಅಳವಿನಂಚಿಗೆ ತಲುಪಿರುವ ಸಸ್ಯವರ್ಗಗಳ ರಕ್ಷಣೆಗೆ ಮುಂದಾಗಿರುವ ನಿವೃತ್ತ ಶಿಕ್ಷಕರು ಗ್ರಾಮದಲ್ಲಿನ ವಿವಿಧ ಸಸ್ಯ ಮಾದರಿಗಳ ದಾಖಲಾತಿಗೆ ಮುಂದಾಗಿದ್ದಾರೆ. ಜೊತೆಗೆ ಹಲವು ಸಸ್ಯಗಳ ಕುರಿತು ಜನರಲ್ಲಿ ಮಾಹಿತಿ ನೀಡಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

Scientific documentation of endangered plants by a retired school mater
ಮುಂಡಾಜೆ ಸಮೀಪದ ಕಡಂಬಳ್ಳಿ

ಬೆಳ್ತಂಗಡಿ (ಮಂಗಳೂರು): ನಮ್ಮ ಸುತ್ತಲಿನ ಅರಣ್ಯದಲ್ಲಿಯೇ ನೂರಾರು ಔಷಧಿ ಗಿಡಗಳಿದ್ದರೂ ಅದನ್ನ ನಾವು ಗುರುತುಹಿಡಿದು ಅದರ ಬಳಸುವುದು ಬಹಳ ಕಡಿಮೆ. ಆದರೆ ಇಲ್ಲೊಬ್ಬರು ಇಂತಹ ಗಿಡಗಳ ಬಗ್ಗೆ ತಿಳಿಯಲು ಒಂದು ತಂಡ ರಚಿಸಿ ಅವುಗಳ ದಾಖಲಾತಿಗೆ ಮುಂದಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸಮೀಪದ ಕಡಂಬಳ್ಳಿ ನಿವಾಸಿ ನಿವೃತ್ತ ಸೈನಿಕ ಮತ್ತು ನಿವೃತ್ತ ವಿಜ್ಞಾನ ಶಿಕ್ಷಕರಾದ ಗಜಾನನ ವಝೆ ಎಂಬ ಹಿರಿಯ ಪರಿಸರ ಪ್ರೇಮಿ ಕಳೆದ ಒಂದು ವರ್ಷದಿಂದ ಪರಿಸರದಲ್ಲಿ ಇರುವ ಗಿಡಗಳ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅದರ ದಾಖಲೀಕರಣವನ್ನು ಮಾಡಿಕೊಳ್ಳುತ್ತಿದ್ದಾರೆ.

ಔಷಧಿ ಸಸ್ಯಗಳ ಉಳಿವಿಗೆ ಪಣತೊಟ್ಟ ನಿವೃತ್ತ ಶಿಕ್ಷಕ

ಗ್ರಾಮದ ಕಾಡು, ನದಿ ತೀರ, ತೋಟಗಳ ಸುತ್ತಮುತ್ತಲು ಇರುವ ಔಷಧಿ ಗುಣವುಳ್ಳ ಸಸ್ಯಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಜನರಿಗೆ ಈಗ ಪೌಷ್ಟಿಕ‌ ಆಹಾರದ ಕಲ್ಪನೆ ಇಲ್ಲದಾಗಿದೆ. ಹೊಟೆಲ್​​ಗಳಲ್ಲಿ ಸಿಗುವ ಆಹಾರಗಳಿಗೆ ಜಾಸ್ತಿ ಒತ್ತು ನೀಡುತ್ತಿದ್ದಾರೆ. ಇವರ ಕಲ್ಪನೆಯಂತೆ ಮುಂಡಾಜೆ ಗ್ರಾಮದಲ್ಲಿ ಇರುವ ಸಸ್ಯ ಪ್ರಭೇದಗಳನ್ನು ಯಾವುದಕ್ಕಾದರೂ ಉಪಯೋಗಿಸಬಹುದು ಎಂದು ವೈಜ್ಞಾನಿಕ ದಾಖಲೆಗಳಿವೆ.

ಗೆಳೆಯರ ಜೊತೆ ಚರ್ಚಿಸಿ ಈಗಾಗಲೇ ಐದು ಕಡೆ ಸಸ್ಯ ಪ್ರಭೇದಗಳ ದಾಖಲಾತಿ ನಡೆಸಲು ಆರಂಭಿಸಿದ್ದಾರೆ. ಗ್ರಾಮದಲ್ಲಿ ಕೆಲವು ಸಸ್ಯ ವರ್ಗಗಳು ಅಳಿವಿನಂಚಿಗೆ ಹೋಗಿದೆ ಮತ್ತು ಕೆಲವು ಸಸ್ಯ ವರ್ಗಗಳು ಹೊರಗಿನಿಂದ ಬಂದಿವೆ. ಈಗಾಗಲೇ ಅಳಿವಿನಂಚಿಗೆ ತಲುಪಿದ ಸಸ್ಯಗಳ ಉಳಿಸುವ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

40 ವರ್ಷಗಳ ಹಿಂದೆ ಇದ್ದಂತಹ ಸಸ್ಯಗಳು ಈಗಾಗಲೇ ನಾಮಾವಶೇಷಕ್ಕೆ ತಲುಪಿರುವುದು ದುರದೃಷ್ಟಕರ. ಈಗ ಪ್ರಸ್ತುತ ಗ್ರಾಮದಲ್ಲಿ ಯಾವೆಲ್ಲಾ ಸಸ್ಯಗಳು ಇದೆ ಮತ್ತು ಇದರ ಸಮಗ್ರ ವೈಜ್ಞಾನಿಕ ಮಾಹಿತಿ ಫೋಟೋ ಸಹಿತ ದಾಖಲಿಸಿದ್ದಾರೆ.

ಓದಿ: ನೇತ್ರಾವತಿ ನದಿಯಲ್ಲಿ ತೇಲಿ ಬಂತು ಯುವತಿ ಶವ : ಸಮುದ್ರ ಸೇರುವುದನ್ನು ತಪ್ಪಿಸಿದ ಮೀನುಗಾರರು

ಬೆಳ್ತಂಗಡಿ (ಮಂಗಳೂರು): ನಮ್ಮ ಸುತ್ತಲಿನ ಅರಣ್ಯದಲ್ಲಿಯೇ ನೂರಾರು ಔಷಧಿ ಗಿಡಗಳಿದ್ದರೂ ಅದನ್ನ ನಾವು ಗುರುತುಹಿಡಿದು ಅದರ ಬಳಸುವುದು ಬಹಳ ಕಡಿಮೆ. ಆದರೆ ಇಲ್ಲೊಬ್ಬರು ಇಂತಹ ಗಿಡಗಳ ಬಗ್ಗೆ ತಿಳಿಯಲು ಒಂದು ತಂಡ ರಚಿಸಿ ಅವುಗಳ ದಾಖಲಾತಿಗೆ ಮುಂದಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸಮೀಪದ ಕಡಂಬಳ್ಳಿ ನಿವಾಸಿ ನಿವೃತ್ತ ಸೈನಿಕ ಮತ್ತು ನಿವೃತ್ತ ವಿಜ್ಞಾನ ಶಿಕ್ಷಕರಾದ ಗಜಾನನ ವಝೆ ಎಂಬ ಹಿರಿಯ ಪರಿಸರ ಪ್ರೇಮಿ ಕಳೆದ ಒಂದು ವರ್ಷದಿಂದ ಪರಿಸರದಲ್ಲಿ ಇರುವ ಗಿಡಗಳ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅದರ ದಾಖಲೀಕರಣವನ್ನು ಮಾಡಿಕೊಳ್ಳುತ್ತಿದ್ದಾರೆ.

ಔಷಧಿ ಸಸ್ಯಗಳ ಉಳಿವಿಗೆ ಪಣತೊಟ್ಟ ನಿವೃತ್ತ ಶಿಕ್ಷಕ

ಗ್ರಾಮದ ಕಾಡು, ನದಿ ತೀರ, ತೋಟಗಳ ಸುತ್ತಮುತ್ತಲು ಇರುವ ಔಷಧಿ ಗುಣವುಳ್ಳ ಸಸ್ಯಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಜನರಿಗೆ ಈಗ ಪೌಷ್ಟಿಕ‌ ಆಹಾರದ ಕಲ್ಪನೆ ಇಲ್ಲದಾಗಿದೆ. ಹೊಟೆಲ್​​ಗಳಲ್ಲಿ ಸಿಗುವ ಆಹಾರಗಳಿಗೆ ಜಾಸ್ತಿ ಒತ್ತು ನೀಡುತ್ತಿದ್ದಾರೆ. ಇವರ ಕಲ್ಪನೆಯಂತೆ ಮುಂಡಾಜೆ ಗ್ರಾಮದಲ್ಲಿ ಇರುವ ಸಸ್ಯ ಪ್ರಭೇದಗಳನ್ನು ಯಾವುದಕ್ಕಾದರೂ ಉಪಯೋಗಿಸಬಹುದು ಎಂದು ವೈಜ್ಞಾನಿಕ ದಾಖಲೆಗಳಿವೆ.

ಗೆಳೆಯರ ಜೊತೆ ಚರ್ಚಿಸಿ ಈಗಾಗಲೇ ಐದು ಕಡೆ ಸಸ್ಯ ಪ್ರಭೇದಗಳ ದಾಖಲಾತಿ ನಡೆಸಲು ಆರಂಭಿಸಿದ್ದಾರೆ. ಗ್ರಾಮದಲ್ಲಿ ಕೆಲವು ಸಸ್ಯ ವರ್ಗಗಳು ಅಳಿವಿನಂಚಿಗೆ ಹೋಗಿದೆ ಮತ್ತು ಕೆಲವು ಸಸ್ಯ ವರ್ಗಗಳು ಹೊರಗಿನಿಂದ ಬಂದಿವೆ. ಈಗಾಗಲೇ ಅಳಿವಿನಂಚಿಗೆ ತಲುಪಿದ ಸಸ್ಯಗಳ ಉಳಿಸುವ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

40 ವರ್ಷಗಳ ಹಿಂದೆ ಇದ್ದಂತಹ ಸಸ್ಯಗಳು ಈಗಾಗಲೇ ನಾಮಾವಶೇಷಕ್ಕೆ ತಲುಪಿರುವುದು ದುರದೃಷ್ಟಕರ. ಈಗ ಪ್ರಸ್ತುತ ಗ್ರಾಮದಲ್ಲಿ ಯಾವೆಲ್ಲಾ ಸಸ್ಯಗಳು ಇದೆ ಮತ್ತು ಇದರ ಸಮಗ್ರ ವೈಜ್ಞಾನಿಕ ಮಾಹಿತಿ ಫೋಟೋ ಸಹಿತ ದಾಖಲಿಸಿದ್ದಾರೆ.

ಓದಿ: ನೇತ್ರಾವತಿ ನದಿಯಲ್ಲಿ ತೇಲಿ ಬಂತು ಯುವತಿ ಶವ : ಸಮುದ್ರ ಸೇರುವುದನ್ನು ತಪ್ಪಿಸಿದ ಮೀನುಗಾರರು

Last Updated : Sep 12, 2021, 5:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.