ETV Bharat / state

ಮೋದಿಗಾಗಿ ಸರಿಪಡಿಸಿದ ರಸ್ತೆಯಲ್ಲಿ ಹತ್ತೇ ದಿನದಲ್ಲಿ ಹೊಂಡ: ಇದೆಂಥಾ ಕಾಮಗಾರಿ!

author img

By

Published : Sep 13, 2022, 3:15 PM IST

ಪ್ರಧಾನಮಂತ್ರಿ ನರೇಂದ್ರ‌ ಮೋದಿ ಅವರು ಮಂಗಳೂರಿಗೆ ಬರುವ ಕಾರಣಕ್ಕೆ ಸರಿಪಡಿಸಲಾಗಿದ್ದ ರಸ್ತೆ ಹತ್ತು ದಿನದಲ್ಲಿ ಹೊಂಡ ಬಿದ್ದ ಘಟನೆ ನಡೆದಿದೆ.

ರಸ್ತೆಯಲ್ಲಿ ಹೊಂಡ
ರಸ್ತೆಯಲ್ಲಿ ಹೊಂಡ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ‌ಮೋದಿ ಅವರು ಬರುವ ಕಾರಣಕ್ಕೆ ಸರಿಪಡಿಸಲಾಗಿದ್ದ ರಸ್ತೆಯಲ್ಲಿ ಹತ್ತೇ ದಿನದಲ್ಲಿ ಹೊಂಡ ಬಿದ್ದ ಘಟನೆ ನಡೆದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆ. 2 ರಂದು ಎನ್​ಪಿಎ ಮತ್ತು ಎಂಆರ್​ಪಿಎಲ್​ನ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸಕ್ಕೆ ಮಂಗಳೂರಿಗೆ ಬಂದಿದ್ದರು. ಅವರು ಬರುವ ಮುನ್ನ ಅವಸರವಸರವಾಗಿ ಅವರು ಸಾಗುವ ಮಂಗಳೂರಿನ ರಸ್ತೆಗಳನ್ನು ಸರಿಪಡಿಸಲಾಗಿತ್ತು. ಮಂಗಳೂರಿನ ಕೂಳೂರು ಬ್ರಿಡ್ಜ್​ನಲ್ಲಿ ಡಾಂಬರ್​ ಹೋಗಿ ಹಲವು ಹೊಂಡಗಳು ಸೃಷ್ಟಿಯಾಗಿ ವಾಹನ ಸವಾರರಿಗೆ ಸಂಕಷ್ಟ ಎದುರಾಗಿತ್ತು.

ಮೋದಿ ಬರುವ ಕಾರಣಕ್ಕಾಗಿ ಈ ರಸ್ತೆಗೆ ಡಾಂಬರ್​ ಹಾಕಲಾಗಿತ್ತು. ಇದೀಗ ಪ್ರಧಾನಿ ಬಂದು ಹೋದ ಹತ್ತೇ ದಿನಗಳಲ್ಲಿ ಹೊಸದಾಗಿ ಹಾಕಲಾದ ಡಾಂಬಾರ್​ ಎದ್ದು ಹೋಗಿ ರಸ್ತೆಯಲ್ಲಿ ಮತ್ತೆ ಗುಂಡಿ ಸೃಷ್ಟಿಯಾಗಿದೆ. ಕೆಲವೇ ದಿನಗಳಲ್ಲಿ ಡಾಂಬರ್​ ಕಿತ್ತು ಹೋಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆದ ಬಳಿಕ ಅದನ್ನು ಸರಿಪಡಿಸಲಾಗಿದೆ.

ಓದಿ: ಮುಂದಿನ 24 ಗಂಟೆಯಲ್ಲಿ ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ.. ಉತ್ತರ ಕರ್ನಾಟಕಕ್ಕೂ ಮುನ್ಸೂಚನೆ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ‌ಮೋದಿ ಅವರು ಬರುವ ಕಾರಣಕ್ಕೆ ಸರಿಪಡಿಸಲಾಗಿದ್ದ ರಸ್ತೆಯಲ್ಲಿ ಹತ್ತೇ ದಿನದಲ್ಲಿ ಹೊಂಡ ಬಿದ್ದ ಘಟನೆ ನಡೆದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆ. 2 ರಂದು ಎನ್​ಪಿಎ ಮತ್ತು ಎಂಆರ್​ಪಿಎಲ್​ನ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸಕ್ಕೆ ಮಂಗಳೂರಿಗೆ ಬಂದಿದ್ದರು. ಅವರು ಬರುವ ಮುನ್ನ ಅವಸರವಸರವಾಗಿ ಅವರು ಸಾಗುವ ಮಂಗಳೂರಿನ ರಸ್ತೆಗಳನ್ನು ಸರಿಪಡಿಸಲಾಗಿತ್ತು. ಮಂಗಳೂರಿನ ಕೂಳೂರು ಬ್ರಿಡ್ಜ್​ನಲ್ಲಿ ಡಾಂಬರ್​ ಹೋಗಿ ಹಲವು ಹೊಂಡಗಳು ಸೃಷ್ಟಿಯಾಗಿ ವಾಹನ ಸವಾರರಿಗೆ ಸಂಕಷ್ಟ ಎದುರಾಗಿತ್ತು.

ಮೋದಿ ಬರುವ ಕಾರಣಕ್ಕಾಗಿ ಈ ರಸ್ತೆಗೆ ಡಾಂಬರ್​ ಹಾಕಲಾಗಿತ್ತು. ಇದೀಗ ಪ್ರಧಾನಿ ಬಂದು ಹೋದ ಹತ್ತೇ ದಿನಗಳಲ್ಲಿ ಹೊಸದಾಗಿ ಹಾಕಲಾದ ಡಾಂಬಾರ್​ ಎದ್ದು ಹೋಗಿ ರಸ್ತೆಯಲ್ಲಿ ಮತ್ತೆ ಗುಂಡಿ ಸೃಷ್ಟಿಯಾಗಿದೆ. ಕೆಲವೇ ದಿನಗಳಲ್ಲಿ ಡಾಂಬರ್​ ಕಿತ್ತು ಹೋಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆದ ಬಳಿಕ ಅದನ್ನು ಸರಿಪಡಿಸಲಾಗಿದೆ.

ಓದಿ: ಮುಂದಿನ 24 ಗಂಟೆಯಲ್ಲಿ ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ.. ಉತ್ತರ ಕರ್ನಾಟಕಕ್ಕೂ ಮುನ್ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.