ETV Bharat / bharat

ಇದು ಜನತಾ ಜನಾರ್ದನ ಬಜೆಟ್​ ಎಂದ ಪ್ರಧಾನಿ ನರೇಂದ್ರ ಮೋದಿ - PM MODI HAILS UNION BUDGET

ಬಜೆಟ್​​ ಜನರ ಜೇಬು ಭರ್ತಿ ಮಾಡುವ, ಆದಾಯ ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಇದೊಂದು ಜನಪರ ಬಜೆಟ್ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು

pm-modi-hails-union-budget-says-this-budget-fulfils-dreams-of-every-indian
ಕೇಂದ್ರ ಬಜಟ್​ (ಈಟಿವಿ ಭಾರತ್​​)
author img

By PTI

Published : Feb 1, 2025, 3:41 PM IST

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ಬಳಿಕ ಮೊದಲ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇದು ಜನರ ಬಜೆಟ್​ ಆಗಿದ್ದು, ಪ್ರತಿ ಭಾರತೀಯರ ಕನಸನ್ನು ಪೂರ್ಣಗೊಳಿಸುತ್ತದೆ. ಇದು 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಬಣ್ಣಿಸಿದ್ದಾರೆ.

ಸಾಮಾನ್ಯವಾಗಿ ಖಜಾನೆಯನ್ನು ತುಂಬಿಕೊಳ್ಳುವ ಗುರಿಯನ್ನು ಬಜೆಟ್​ ಹೊಂದಿರುತ್ತದೆ. ಆದರೆ, ಈ ಬಜೆಟ್​​ ಜನರ ಜೇಬು ಭರ್ತಿ ಮಾಡುವ, ಆದಾಯ ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಇದೊಂದು ಜನಪರ ಬಜೆಟ್​ ಮಂಡನೆಯಾಗಿದ್ದು, ಈ ಬಜೆಟ್​ ಮಂಡಿಸಿದ್ದಕ್ಕೆ ಕೇಂದ್ರ ವಿತ್ತ ಸಚಿವರು ಮತ್ತು ಅವರ ತಂಡಕ್ಕೆ ಧನ್ಯವಾದಗಳು ಎಂದಿದ್ದಾರೆ.

ವಿಕಸಿತ್​ ಭಾರತ್​​ ಬಜೆಟ್​ 2025 ಸರ್ಕಾರ 140 ಕೋಟಿ ಜನರ ಆಕಾಂಕ್ಷೆಯನ್ನು ಪೂರೈಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸಾಮಾನ್ಯ ಜನರು ವಿಕಸಿತ ಭಾರತದ ಚಾಲಕರಾಗಲಿದ್ದಾರೆ. ಬಜೆಟ್​ನಲ್ಲಿ ಗಿಗ್​ ವರ್ಕರಗಳ ಕಲ್ಯಾಣಕ್ಕೆ ಕ್ರಮ ಕೈಗೊಳ್ಳುವ ಕಾರ್ಮಿಕರ ಗೌರವ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ನಿರ್ಮಲಾ ಸೀತಾರಾಮನ್​ ಬಜೆಟ್​​ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಪ್ರಧಾನಿ, ಜನರ ಈ ಬಜೆಟ್​ ಜನರ ಉಳಿತಾಯ ಮತ್ತು ಹೂಡಿಕೆಯನ್ನು ಉತ್ತೇಜಿಸುತ್ತದೆ, ಯುವ ಜನರಿಗೆ ಅನೇಕ ವಲಯಗಳನ್ನು ಮುಕ್ತವಾಗಿಸಿದೆ. ಈ ಬಜೆಟ್​​ ಬಲ ದ್ವಿಗುಣಗೊಂಡಿದ್ದು, ಉಳಿತಾಮ ಹೂಡಿಕೆ, ಬಳಕೆ ಮತ್ತು ಬೆಳವಣಿಗೆ ತ್ವರಿತಗತಿಯಲ್ಲಿ ಸಾಗಲಿದೆ. ಈ ಬಜೆಟ್​​ನಲ್ಲಿ ಜನರ ಜೀವನಮಟ್ಟದ ಸುಧಾರಣೆ ಇದೆ. ನ್ಯೂಕ್ಲಿಯರ್​ ಎನರ್ಜಿಯಲ್ಲಿ ಖಾಸಗಿ ಸಂಸ್ಥೆಗಳ ಭಾಗಿತ್ವ ಸೇರಿಸಲಾಗಿದೆ.

ಉತ್ಪಾದನಾ ವಲಯದಲ್ಲಿನ ಬಜೆಟ್​ ಕ್ರಮಗಳು ಭಾರತದ ಉತ್ಪಾದನೆಯನ್ನು ದೇಶದ ಮಟ್ಟದಲ್ಲಿ ಮಿಂಚುವಂತೆ ಮಾಡುತ್ತದೆ. ರೈತರಿಗಾಗಿ ಬಜೆಟ್‌ನ ಘೋಷಣೆಗಳು ಕೃಷಿ ವಲಯ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಮೋದಿ 3.0 ಬಜೆಟ್​: ಯಾವ್ಯಾವ ಇಲಾಖೆಗೆ ಎಷ್ಟು ಅನುದಾನ ಇಲ್ಲಿದೆ ಮಾಹಿತಿ!

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ಬಳಿಕ ಮೊದಲ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇದು ಜನರ ಬಜೆಟ್​ ಆಗಿದ್ದು, ಪ್ರತಿ ಭಾರತೀಯರ ಕನಸನ್ನು ಪೂರ್ಣಗೊಳಿಸುತ್ತದೆ. ಇದು 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಬಣ್ಣಿಸಿದ್ದಾರೆ.

ಸಾಮಾನ್ಯವಾಗಿ ಖಜಾನೆಯನ್ನು ತುಂಬಿಕೊಳ್ಳುವ ಗುರಿಯನ್ನು ಬಜೆಟ್​ ಹೊಂದಿರುತ್ತದೆ. ಆದರೆ, ಈ ಬಜೆಟ್​​ ಜನರ ಜೇಬು ಭರ್ತಿ ಮಾಡುವ, ಆದಾಯ ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಇದೊಂದು ಜನಪರ ಬಜೆಟ್​ ಮಂಡನೆಯಾಗಿದ್ದು, ಈ ಬಜೆಟ್​ ಮಂಡಿಸಿದ್ದಕ್ಕೆ ಕೇಂದ್ರ ವಿತ್ತ ಸಚಿವರು ಮತ್ತು ಅವರ ತಂಡಕ್ಕೆ ಧನ್ಯವಾದಗಳು ಎಂದಿದ್ದಾರೆ.

ವಿಕಸಿತ್​ ಭಾರತ್​​ ಬಜೆಟ್​ 2025 ಸರ್ಕಾರ 140 ಕೋಟಿ ಜನರ ಆಕಾಂಕ್ಷೆಯನ್ನು ಪೂರೈಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸಾಮಾನ್ಯ ಜನರು ವಿಕಸಿತ ಭಾರತದ ಚಾಲಕರಾಗಲಿದ್ದಾರೆ. ಬಜೆಟ್​ನಲ್ಲಿ ಗಿಗ್​ ವರ್ಕರಗಳ ಕಲ್ಯಾಣಕ್ಕೆ ಕ್ರಮ ಕೈಗೊಳ್ಳುವ ಕಾರ್ಮಿಕರ ಗೌರವ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ನಿರ್ಮಲಾ ಸೀತಾರಾಮನ್​ ಬಜೆಟ್​​ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಪ್ರಧಾನಿ, ಜನರ ಈ ಬಜೆಟ್​ ಜನರ ಉಳಿತಾಯ ಮತ್ತು ಹೂಡಿಕೆಯನ್ನು ಉತ್ತೇಜಿಸುತ್ತದೆ, ಯುವ ಜನರಿಗೆ ಅನೇಕ ವಲಯಗಳನ್ನು ಮುಕ್ತವಾಗಿಸಿದೆ. ಈ ಬಜೆಟ್​​ ಬಲ ದ್ವಿಗುಣಗೊಂಡಿದ್ದು, ಉಳಿತಾಮ ಹೂಡಿಕೆ, ಬಳಕೆ ಮತ್ತು ಬೆಳವಣಿಗೆ ತ್ವರಿತಗತಿಯಲ್ಲಿ ಸಾಗಲಿದೆ. ಈ ಬಜೆಟ್​​ನಲ್ಲಿ ಜನರ ಜೀವನಮಟ್ಟದ ಸುಧಾರಣೆ ಇದೆ. ನ್ಯೂಕ್ಲಿಯರ್​ ಎನರ್ಜಿಯಲ್ಲಿ ಖಾಸಗಿ ಸಂಸ್ಥೆಗಳ ಭಾಗಿತ್ವ ಸೇರಿಸಲಾಗಿದೆ.

ಉತ್ಪಾದನಾ ವಲಯದಲ್ಲಿನ ಬಜೆಟ್​ ಕ್ರಮಗಳು ಭಾರತದ ಉತ್ಪಾದನೆಯನ್ನು ದೇಶದ ಮಟ್ಟದಲ್ಲಿ ಮಿಂಚುವಂತೆ ಮಾಡುತ್ತದೆ. ರೈತರಿಗಾಗಿ ಬಜೆಟ್‌ನ ಘೋಷಣೆಗಳು ಕೃಷಿ ವಲಯ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಮೋದಿ 3.0 ಬಜೆಟ್​: ಯಾವ್ಯಾವ ಇಲಾಖೆಗೆ ಎಷ್ಟು ಅನುದಾನ ಇಲ್ಲಿದೆ ಮಾಹಿತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.