ಬಂಟ್ವಾಳ: ಸುಮಾರು 6 ಸಾವಿರಕ್ಕೂ ಅಧಿಕ ಜನಸಂಖ್ಯೆಗೆ ಸಹಕಾರಿಯಾಗುವ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ 2 ಸಾವಿರ ಎಕರೆ ಕೃಷಿ ಭೂಮಿಗೆ ನೀರುಣಿಸುವ 45 ಕೋಟಿ ರೂ.ಗಳ ಏತ ನೀರಾವರಿ ಯೋಜನೆಗೆ ಮಂಜೂರಾತಿ ದೊರಕಿಸುವಂತೆ ಡಾ. ಕಲ್ಲಡ್ಕ ಪ್ರಭಾಕರ ಭಟ್ ನೇತೃತ್ವದ ನಿಯೋಗ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.
ನೇತ್ರಾವತಿ ನದಿಗೆ ಸಮೀಪವಿರುವ ಬಾಳ್ತಿಲ ಗ್ರಾಮ 3,942 ಎಕರೆ ವಿಸ್ತೀರ್ಣ ಹೊಂದಿದ್ದು, 6,272 ಜನಸಂಖ್ಯೆ, 1300 ಕುಟುಂಬಗಳನ್ನು ಹೊಂದಿದೆ. ಏತ ನೀರಾವರಿ ಯೋಜನೆಯಿಂದ ಗ್ರಾಮದ ರೈತರಿಗೆ ನೆರವಾಗುವುದಲ್ಲದೆ, ಅಂತರ್ಜಲ ವೃದ್ಧಿಯಾಗುತ್ತದೆ ಎಂದು ಸಿಎಂಗೆ ನಿಯೋಗ ಮನವರಿಕೆ ಮಾಡಿಕೊಟ್ಟಿತು.
ಈ ವೇಳೆ ಶಾಸಕ ರಾಜೇಶ್ ನಾಯ್ಕ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಗ್ರಾಮಸ್ಥರಾದ ಗೋಪಾಲ ಶೆಣೈ ಸೇರಿದಂತೆ ಮತ್ತಿತರರು ಇದ್ದರು.